Skip to main content

Posts

Showing posts from May, 2019

#ಸುವಣ೯ ತ್ರಿಭುಜ ಬೋಟಿನ ಪ್ರಕರಣದ ತನಿಖಾಧಿಕಾರಿ ಖ್ಯಾತ ಪೋಲಿಸ್ ಅಧಿಕಾರಿ ಮಂಜುನಾಥ್#

#ನನ್ನ ಇವತ್ತಿನ ಅತಿಥಿ ಸುವಣ೯ ತ್ರಿಭುಜ ಬೋಟಿನ ನಾಪತ್ತೆಯ ಪ್ರಕರಣದ ತನಿಖಾಧಿಕಾರಿ ಉಡುಪಿ ಸಕ೯ಲ್ ಇನ್ಸ್ಪೆಕ್ಟರ್ ಮಂಜುನಾಥ್#   ಒಂದು ಕಾಲದ ಶಿವಮೊಗ್ಗ ದೊಡ್ಡ ಪೇಟೆ ಠಾಣೆಯ ಪ್ರಖ್ಯಾತ ಟಪ್ ಕಾಪ್ ಎಂದೇ ಪ್ರಖ್ಯಾತರಾಗಿದ್ದ ಮಂಜುನಾಥ್ ನಂತರ ಮಂಗಳೂರು ಟವನ್ನಲ್ಲಿ ಕೆಲಸ ನಿವ೯ಹಿಸಿ ಈಗ ಉಡುಪಿಯಲ್ಲಿದ್ದಾರೆ. ಉಡುಪಿ ಮತ್ತು ಮಲ್ಪೆ ಬಂದರು ಪ್ರದೇಶ ಇವರ ವ್ಯಾಪ್ತಿ (ಉಡುಪಿ ಟ್ರಾಪಿಕ್ ಸೇರಿ).   2018ರ ಡಿಸೆಂಬರ್ 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವಣ೯ ತ್ರಿಭುಜ ಬೋಟ್ ಮತ್ತು ಅದರಲ್ಲಿದ್ದ 7 ಜನ ನಾಪತ್ತೆ ಪ್ರಕರಣದ ತನಿಖಾಧಿಕಾರಿಗಳು ಇವರೇ.   ಇವರ ತನಿಖಾ ವರದಿ ವಸ್ತುನಿಷ್ಟ ಮತ್ತು ಪ್ರಶಂಸನೀಯ ಕೂಡ ಆಗಿದೆ, ಈ ಘಟನೆ ಇಡೀ ದೇಶದ ಗಮನ ಸೆಳೆದಿದೆ.   ಮಂಜುನಾಥ ನಿತ್ಯ ಶಟಲ್ ಬ್ಯಾಡ್ಮಿOಟನ್ ಆಡುತ್ತಾರೆ ಈಗ ಉಡುಪಿಯಲ್ಲಿ ತಮ್ಮ ಪಿಟ್ನೆಸ್ ಗೆ ಟೆನ್ನಿಸ್ ಆಡುತ್ತಾರಂತೆ, ಉಡುಪಿಯ ಮಾಜಿ ಮಂತ್ರಿ ಪ್ರಮೋದ್ ಮದ್ವರಾಜ್ ಒಳ್ಳೆಯ ಟೆನ್ನಿಸ್ ಒಳಾಂಗಣ ಕ್ರೀಡಾOಗಣ ಮಾಡಿದ್ದಾರಂತೆ.   ಇವರು ನಮ್ಮ ಸಾಗರ ತಾಲ್ಲೂಕಿನ ಅಳಿಯ, ತ್ಯಾಗತಿ೯ ಸಮೀಪದ ನನ್ನ ಗೆಳೆಯ ಸಹಕಾರಿ ಬಂಧು ಮೈಲಾರಿಕೊಪ್ಪದ ಹೊಳೆಯಪ್ಪರ ಅಳಿಯ. ಇವತ್ತು ಇವರ ಮಾವನ ಹೊಸ ಮನೆ ಗೃಹ ಪ್ರವೇಶ ಮತ್ತು ಮಗಳ ಹುಟ್ಟು ಹಬ್ಬದ ಕಾಯ೯ಕ್ರಮಕ್ಕೆ ಬರುವಾಗ ನನಗೆ ಫೋನಾಯಿಸಿದರು ಮತ್ತು ಬಂದರು , ಇವರ ಸ್ವ೦ತ ಊ ರು ತೀ ಥ ೯ಹಳ್

ಮಲೆನಾಡಿನಲ್ಲಿ ನೀರಿನ ಬರ

ಸ್ವಲ್ಪ ಕಾಯಿರಿ ನಿರಾಸೆ ಬೇಡ, ಬಿದಿರು ಬೆಳೆದಂತೆ ಮಲೆನಾಡಿನಲ್ಲಿ ನೀರು ಒರತೆ ಜಾಸ್ತಿ ಆಗುತ್ತಂತೆ. ಬಿದಿರು 30 ವಷ೯ಕ್ಕೆ ಒಮ್ಮೆ ಬಿದಿರಕ್ಕಿ ನೀಡಿ ಸಾಯುತ್ತದೆ ಆಗ ಬರಗಾಲ ಬರುತ್ತದೆ ಎಂದು ಹಿರಿಯರು ಹೇಳುತ್ತಾರೆಂದರೆ ಪ್ರತಿ 3o ವಷ೯ಕ್ಕೆ ಭೂಮಿ ಒಳಗೆ ನೀರಿನ ಸೆಲೆಗಳು ಬತ್ತುವುದಕ್ಕೆ ಏನೋ ಒಂದು ಪರಿಸರ ಚಕ್ರದ ಚಲನೆ ಇರಬೇಕು ಆಗಲೇ ಬಿದಿರು ವಂಶಾಭಿವೃದ್ಧಿ ಕಾಲ ಆಗುತ್ತದೆ ಪುನಃ ನಾಶವಾದ ಬಿದಿರು ಸಮೃದ್ಧವಾಗುವಾಗ ಮಳೆ ಬೆಳೆ ಕೂಡ ಸರಿ ಆಗುವ ಉದಾಹರಣೆ ಇದೆ.   50-100 ವಷ೯ದ ಹಿಂದೆ ಅರಣ್ಯ ನಾಶವಾಗದಿದ್ದಾಗಲೂ, ಡಿಸೇಲ್ ಪೆಟ್ರೋಲ್ ವಾಹನ ಬಳಕೆ ಕಡಿಮೆ ಇದ್ದಾಗಲೂ, ಕಾಬ೯ನ್ ಎಮಿಷನ್ ಇಷ್ಟಿಲ್ಲದಿದ್ದಾಗಲೂ ಈ ರೀತಿಯ ಬಿದಿರು ಅಕ್ಕಿ, ಬಿದಿರು ನಾಶ, ಬರಗಾಲದ ಚಕ್ರ ನಿರಂತರವಾಗಿದೆ. ಈಗಿನ ಗ್ಲೋಬಲ್ ವಾಮಿ೯೦ಗ್, ಎಲ್ ನೀನೋ ಇತ್ಯಾದಿ ವಿದೇಶಿ ಸಂಶೋದನೆಯ ಬಗ್ಗೆಯೇ ಎಲ್ಲರೂ ಕೇಂದ್ರಿಕೃತರಾಗಿ ಚಚಿ೯ಸುತ್ತಿರುವುದರಿಂದ ನಮ್ಮ ಪ್ರಾಚೀನ ಅನುಭವಗಳ ಕಡೆಗಾಣಿಸಿದ್ದರಿಂದ ಈ ರೀತಿ ತಲ್ಲಣ ಗಾಭರಿ ಸಹಜ. ಭೂಮಿಗೆ ಎಲ್ಲಾ ರೀತಿಯ ಸಮಸ್ಯೆಯ ದಾರಣೆ ಶಕ್ತಿ ಇದೆ, ಮಿತಿ ಮೀರಿದರೆ ಲಯಗೊಳಿಸಿ ಹೊಸ ಚಿಗುರು ಹೊರಡಿಸುವ ನಾವರಿಯದ ಜ್ಞಾನವೂ ಇದೆ. ಈ ಬಗ್ಗೆ ಹೆಚ್ಚು ಸಂಶೋದನೆ ಚಚೆ೯ ಆಗಲಿ.

ಈ ವ್ಯವಸ್ಥೆ ಎಷ್ಟು ಕೆಟ್ಟಿದೆ!?

ಈ ವ್ಯವಸ್ಥೆ ಎಷ್ಟು ಕೆಟ್ಟದ್ದೆ೦ದರೆ ಮುಗ್ದರಿಗೆ ಪ್ರಾಮಾಣಿಕರಿಗೆ ಸತ್ಯವಂತರಿಗೆ ಬದುಕಲು ಬಿಡದ ಕಪಿ ಮುಷ್ಟಿ ಅದರದ್ದು ಅದನ್ನ ಬೇದಿಸಿ ಚೇದಿಸಿ ಬದುಕಲು ನಾವು ಕನಿಷ್ಟ 64 ವಿದ್ಯೆಯ ಕೆಲ ಅಂಶ ಬಳಸಲು ಕಲಿಯಲೇ ಬೇಕಾಗಿದೆ.   ಈ ವ್ಯವಸ್ಥೆಯನ್ನ ಕನಿಷ್ಟ ಬದಲಾಯಿಸಲೂ ಪ್ರಯತ್ನ ಮಾಡದ ಎಲ್ಲರೂ ಅಪರಾಧಿಗಳೆ.   ನಿಮ್ಮ ಆ ದಿನದ ಪರಿಸ್ಥಿತಿ ನನ್ನ ತಾಯಿ ನನಗೆ 10 ವಷ೯ ಇದ್ದಾಗ ಶಿವಮೊಗ್ಗದಲ್ಲಿನ ಮೆಗಾನ್ ಆಸ್ಪತ್ರೆಯಲ್ಲಿ ಗಭ೯ಕೋಶದ ಗೆಡ್ಡೆ  ಆಪರೇಷನ್ ಗೆ  ಆಪರೇಷನ್ ಥಿಯೇಟರ್ ಗೆ ಹೋಗುವಾಗ ನನ್ನ ಅಪ್ಪಿಕೊಂಡು ಅಳುತ್ತಾ ಹೋದವಳು ಅಲ್ಲಿ ವೈದ್ಯರ ನಿಲ೯ಕ್ಷದಿಂದ ಅನೇಸ್ತಿಯಾ ಇಂಜಕ್ಷ್ ನ್ ನ ರಿಯಾಕ್ಷನ್ ನಿಂದ ನಮ್ಮನ್ನೆಲ್ಲ ಬಿಟ್ಟು ಬಾರದ ಲೋಕಕ್ಕೆ ಹೋದ ಘಟನೆ ನೆನಪಾಯಿತು.

ದಿ ಎಕಾನಮಿಕ್ ಟೈಮ್ಸ್ ಹಿರಿಯ ಸಂಪಾದಕರೊಂದಿಗೆ

# ದಿ ಎಕಾನಮಿಕ್ ಟೈಮ್ಸ್ ನ ಹಿರಿಯ ಸಂಪಾದಕ ಕೆ.ಆರ್. ಬಾಲಸುಬ್ರಮಣ್ಯಂ ನನ್ನ ಕಚೇರಿಯಲ್ಲಿ  #   ಟೈಮ್ಸ್ ಗುಂಪಿನ ಹಿರಿಯ ಸಂಪಾದಕರಾದ ಕೆ.ಆರ್. ಬಾಲಸುಬ್ರಮಣ್ಯOರದ್ದು ದೊಡ್ಡ ಹೆಸರು, ಲೋಕಸಭಾ ಚುನಾವಣಾ ಪೂವ೯ ಮುಖ್ಯಮಂತ್ರಿ ಕುಮಾರ ಸ್ವಾಮಿಯವರೊಡನೆಯ ಸಂದಶ೯ನ, ಇತ್ತೀಚಿಗೆ ವಯನಾಡಿನಲ್ಲಿನ ರಾಹುಲ್ ಗಾಂದಿ ಚುನಾವಣಾ ಪ್ರಚಾರದ ಸುದ್ದಿಗಳು ನನಗೆ ಇಷ್ಟ ಆದದ್ದು.   ಮೊನ್ನೆ ನಮ್ಮಲ್ಲಿಗೆ ಬಂದವರು ನನ್ನ ತಾತ್ಕಾಲಿಕ ಆಪೀಸ್ ನೋಡಿ ತುಂಬಾ ಸಂತೋಷ ಪಟ್ಟರು, ಇದಕಾದ ವೆಚ್ಚ ಇತ್ಯಾದಿ ಮಾಹಿತಿ ಪಡೆದರು.   ನಮ್ಮ ಮಲ್ಲಿಕಾ ವೆಜ್ ನ ಪಿಲ್ಟರ್ ಕಾಫಿ ಅವರಿಗೆ ಇಷ್ಟ ಪಟ್ಟರು.   ಹೆಸರಾ೦ತ ಪತ್ರಕತ೯ರ ಪರಿಚಯವಾದದ್ದು ಸಂತೋಷ ಆಯಿತು.

ಸಜ್ಜನ ರಾಜಕಾರಣಿ S.ಸುರೇಶ್ ಕುಮಾರ್ ನನ್ನ ಇವತ್ತಿನ ಅತಿಥಿ

# ನನ್ನ ಇವತ್ತಿನ ವಿಶೇಷ ಅತಿಥಿ ಮಾಜಿ ಕಾನೂನು ಸಚಿವ ಹಾಲಿ ರಾಜಾಜಿ ನಗರದ ಶಾಸಕರಾದ ಶ್ರೀ ಸುರೇಶ್ ಕುಮಾರ್#   ಕನಾ೯ಟಕ ರಾಜ್ಯದಲ್ಲಿ ಸಜ್ಜನ ರಾಜಕಾರಣಿ ಅಂತ ಎಲ್ಲಾ ಪಕ್ಷದವರಿಂದ ಕರೆಸಿಕೊಳ್ಳುವ S. ಸುರೇಶ್ ಕುಮಾರ್ ಗೆ ರಾಜ್ಯದಾದ್ಯಂತ ಅಭಿಮಾನಿಗಳಿದ್ದಾರೆ.   ನಾನು ಅವರ ಅಭಿಮಾನಿ, ಪೇಸ್ ಬುಕ್ ನಲ್ಲಿ ಅವರನ್ನ ಹಿಂಬಾಲಿಸುತ್ತೇನೆ, ಅವರ ಯಾವುದೇ ಹೇಳಿಕೆ ಇದ್ದರೂ ತಪ್ಪದೇ ಓದುತ್ತೇನೆ.   ಸರಳ ಜೀವನ, ಆಹಾರ ಉಡುಪುಗಳ ಸುರೇಶ್ ಕುಮಾರ್ ಕೊಡಗಿನ ಹಿಂದಿನ ಚುನಾವಣೆಯಲ್ಲಿ ಸಣ್ಣ ಪಾರಂ ಹೌಸ್ ನ ಕೊಟ್ಟಿಗೆಯಲ್ಲಿ ವಾಸ್ತವ್ಯ ಹೂಡಿದ್ದರು ಅದರ ನಿತ್ಯ posting ನೋಡುತ್ತಿದ್ದೆ, ಇವತ್ತಿನ ರಾಜಕಾರಣಿಗಳು  ಕಾರು ಬಾರು, ವಿದೇಶ ಪ್ರಯಾಣ, ಪಂಚತಾರ ಸೇವೆ ಬಯಸುವಾಗ ಇವರು ಸರಳ ಮಾಗ೯ದಲ್ಲಿ ಜೀವನ ಮಾಡುವುದು ಇವತ್ತಿನ ಅಪರೂಪದಲ್ಲಿ ಅಪರೂಪ.   ಇವರಿಗೆ ಡಾಕ್ಟರೇಟ್ ಕೊಡುವುದಾಗಿ ಯಾರೋ ಸಂಪಕಿ೯ಸಿದರು, ಬೇರೆಯವರಾದರೆ ಹಿಂದೆ ಮುಂದೆ ನೋಡದೆ ಹೆಸರಿನ ಮುಂದೆ ಡಾಕ್ಟರ್ ಅಂತ ಹಾಕಿ ಕೊಳ್ಳಲು ಓಡುತ್ತಿದ್ದರು ಆದರೆ ಇವರು ಅದನ್ನ ನಿರಾಕರಿಸಿದ್ದಲ್ಲದೆ ನಕಲಿ ಡಾಕ್ಟರೇಟ್ ನೀಡುವ ಆ ಸಂಸ್ಥೆಯ ಅಸಲಿಯತ್ತು ಬಯಲಿಗೆಳೆದರು.   ಸದನದಲ್ಲಿ ಇವರ ಪಕ್ಷದವರೇ ಬ್ಲೂಪಿಲಂ ವೀಕ್ಷಿಸಿ ಸುದ್ದಿ ಆದಾಗ ಇವರ ಕೋಪ ನೋಡಬೇಕಿತ್ತು, ಅಯೋಗ್ಯ ಕೆಲಸ ಮಾಡಿದ ಮಂತ್ರಿಗಳನ್ನ ಲೆಪ್ಟ್ ರೈಟ್ ಮಾಡಿದ್ದರು, ಜೀವನದಲ್ಲಿ ನಡೆ ನುಡಿ ಮತ್ತು ಆಚರಣೆಯಲ್ಲಿ ಈ ರೀತ