Skip to main content

Posts

Showing posts from March, 2024

Blog number 2037. ನಿತ್ಯ ಒಂದು ಗಂಟೆ ನಡಿಗೆ ಏಳು ಸಾವಿರ ಹೆಜ್ಜೆ ನಿರಂತರ ಅಭ್ಯಾಸದಿಂದ ಅನೇಕರು ನಿರೋಗಿಗಳಾಗಿ ವೃದ್ದಾಪ್ಯದಲ್ಲೂ ಲವಲವಿಕೆಯಿಂದ ಇದ್ದಾರೆ ಇದಕ್ಕೆ ವೈಜ್ಞಾನಿಕ ಕಾರಣಗಳೂ ಇಲ್ಲಿವೆ ಓದಿ

#ಜ್ಞಾನ_ಯಾವ_ಮೂಲದಿಂದ_ಬಂದರೂ_ಸ್ವೀಕರಿಸ_ಬೇಕು #ಸಾಮಾಜಿಕ_ಜಾಲತಾಣದಲ್ಲಿ_ನಿತ್ಯದ_ವಾಕಿಂಗ್_ಬಗ್ಗೆ_ಬಂದಿರುವ #ಈ_ಮಾಹಿತಿ_ಉಪಯುಕ್ತಕಾರಿ #ನಿತ್ಯ_ನಡಿಗೆಯೆ_ನಮ್ಮ_ಆರೋಗ್ಯ 🚶‍♀️ 🚶🏻‍♂️ 🏃‍♀️ 🏃‍♂️ 🚶‍♀️ 🚶🏻‍♂️ *ವಯಸ್ಸಾಗುವುದು ಪಾದದಿಂದ ಆರಂಭವಾಗುತ್ತದೆ !*  ಇದು ವೈಜ್ಞಾನಿಕ ಸತ್ಯ.....  *ನಿಮ್ಮ ಕಾಲುಗಳನ್ನು ಸಕ್ರಿಯವಾಗಿ ಮತ್ತು ಬಲವಾಗಿರಿಸಿಕೊಳ್ಳಿ !!*  ನಾವು ಪ್ರತಿದಿನ ವಯಸ್ಸಾದಂತೆ ನಮ್ಮ ಕಾಲುಗಳು ಯಾವಾಗಲೂ ಸಕ್ರಿಯವಾಗಿ ಮತ್ತು ಬಲವಾಗಿರಬೇಕು.ನಮಗೆ ವಯಸ್ಸಾಗುತ್ತಿದ್ದಂತೆ, ಬಿಳಿ ಕೂದಲು (ಅಥವಾ) ಸಡಿಲವಾದ ಚರ್ಮ (ಅಥವಾ) ಮುಖದ ಸುಕ್ಕುಗಳಿಗೆ ಹೆದರಬೇಕಾಗಿಲ್ಲ. ಪ್ರಖ್ಯಾತ ಅಮೇರಿಕನ್ ನಿಯತಕಾಲಿಕೆ "ಪ್ರಿವೆನ್ಷನ್" ಆರೋಗ್ಯಕರ ಜೀವನಕ್ಕೆ ಅತ್ಯಂತ ಮುಖ್ಯವಾದ ಮತ್ತು ಅತ್ಯಗತ್ಯವಾದ ಪ್ರಬಲವಾದ ಕಾಲಿನ ಸ್ನಾಯುಗಳನ್ನು ಪಟ್ಟಿ ಮಾಡಿದೆ. *ಪ್ರತಿದಿನ ನಡೆಯಿರಿ ನಡೆಯಿರಿ* 🚶‍♂️🏃‍♂️🚶‍♂️🚶‍♂️ 🚶🚶🚶 ನೀವು ಎರಡು ವಾರಗಳ ಕಾಲ ನಿಮ್ಮ ಕಾಲುಗಳನ್ನು ಚಲಿಸದಿದ್ದರೆ, ನಿಮ್ಮ ನಿಜವಾದ ಕಾಲಿನ ಬಲವು 10 ವರ್ಷಗಳಷ್ಟು ಕಡಿಮೆಯಾಗುತ್ತದೆ. ಕಾರಣ *ನಡೆಯಿರಿ, ನಡೆಯಿರಿ,   ನಡೆಯಿರಿ*  🚶‍♂️🚶‍♂️🏃‍♂️🏃‍♂️🚶‍♂️🚶‍♂️🚶 ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್ ವಿಶ್ವ ವಿದ್ಯಾನಿಲಯದ ಅಧ್ಯಯನವು ವೃದ್ಧರು ಮತ್ತು ಯುವಕರು ಎರಡು ವಾರಗಳವರೆಗೆ ನಿಷ್ಕ್ರಿಯವಾಗಿದ್ದರೆ ಅವರ ಕಾಲು ಸ್ನಾಯುಗಳ ಮೂರನೇ ಒಂದು ಭಾಗವ

Blog number 2036. ಬಾರದ ಲೋಕಕ್ಕೆ ಶಾಲಾ ಸಹಪಾಠಿ -ನಟ -ಪರಿಸರ ಹೋರಾಟಗಾರ ಹೆಗ್ಗೋಡು ಏಸು ಪ್ರಕಾಶ್ ಪಯಣ.

#ಬಾರದ_ಲೋಕಕ್ಕೆ_ತೆರಳಿದ_ಗೆಳೆಯ_ಏಸುಪ್ರಕಾಶ್ #ಪ್ರೌಡಶಾಲಾ_ಸಹಪಾಠಿ #ಹೆಗ್ಗೋಡು_ನೀನಾಸಂ_ರಂಗ_ಕಲಾವಿದ #ಚಲನಚಿತ್ರ_ದಾರಾವಾಹಿ_ನಟ #ಪರಿಸರ_ಹೋರಾಟಗಾರ #ತಾಯಿಗೆ_ತಕ್ಕ_ಮಗನಾಗಿದ್ದವರು  ನಿನ್ನೆ ರಾತ್ರಿ 8.41 ಕ್ಕೆ #ಏಸುಪ್ರಕಾಶ್ ಗೆ ಪೋನ್ ಮಾಡಿದ್ದೆ ಕೆಲವು ಬಾರಿ ಪ್ರಯತ್ನಿಸಿದೆ ರಿಂಗ್ ಆಗುತ್ತಿತ್ತು ಆದರೆ ರಿಸೀವ್ ಮಾಡಲಿಲ್ಲ...   #ಡಿಜಿಟಲ್_ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳು ನೀನಾಸಂ - ಕೆ.ವಿ.ಸುಬ್ಬಣ್ಣ ಬಗ್ಗೆ ಕೆಲವು ಎಪಿಸೋಡು ಮಾಡುವ ಉದ್ದೇಶ ಹೊಂದಿದ್ದರಿಂದ ಏಸು ಪ್ರಕಾಶರಿಗೆ ಈ ದಂಪತಿಗಳಿಗೆ ಸಹಕರಿಸಲು ವಿನಂತಿಸಲು ಪೋನ್ ಮಾಡಿದ್ದೆ.   ಏಸು ಪ್ರಕಾಶ್ ಫೋನಿಗೆ ಸಿಗಲಿಲ್ಲ ಅಂದಾಗ #ನೀನಾಸಂ_ಪ್ರಾಂಶುಪಾಲರಾದ_ಗಣೇಶರಿಗೆ ಪೋನ್ ಮಾಡಿದೆ ಅವರೂ ರಿಸೀವ್ ಮಾಡಲಿಲ್ಲ.  ಕೆಲ ಸಮಯದ ನಂತರ ಪ್ರಾಂಶುಪಾಲರೆ ವಾಪಾಸು ಕರೆ ಮಾಡಿದಾಗ ಗೊತ್ತಾಗಿದ್ದು ಏಸು ಪ್ರಕಾಶ್ ಇನ್ನಿಲ್ಲ ಅಂತ.   ಲಿವರ್ ಕ್ಯಾನ್ಸರ್ ಸ್ಟೇಜ್ 4 ಕ್ಕೆ ತಲುಪಿ ದೇಹದ ಅಂಗಾಂಗ ವೈಫಲ್ಯದಿಂದ ನಿನ್ನೆ ಕರಾವಳಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.   ಬೆನ್ನು ನೋವಿದೆ ಅನ್ನುತ್ತಾ ತಮಗೆ ಬಂದ ಕ್ಯಾನ್ಸರ್ ಕಾಯಿಲೆ ಎಲ್ಲರಿಂದ ಮರೆ ಮಾಚಿದ್ದಾರೆ...   ಈ ವಿಚಾರ ಇವರಿಗೆ ಮತ್ತು ಇವರ ದೊಡ್ಡ ಮಗಳಿಗೆ ಬಿಟ್ಟು ಯಾರಿಗೂ ಗೊತ್ತಿರಲಿಲ್ಲ.   ಎರಡು ತಿಂಗಳ ಹಿಂದೆ ಅವರು ಪೋನ್ ಮಾಡಿದ್ದರು ನಮ್ಮ ಕಲ್ಯಾಣ ಮಂಟಪದಲ್ಲಿ ಅವರ ಗೆಳೆಯರಿಗೆ ನಿರ್ದಿಷ್ಟ ದಿನಾಂಕದಂದು ಹಾಲ್ ಬೇಕು ಅ

Blog number 2035.ಕೊರಾನಾ ನೆನಪುಗಳ ಡೈರಿ - 12. ಲಾಕ್ ಡೌನ್ ಜನಸ್ಥಬ್ದತೆ, ನಿಶ್ಯಬ್ದಗಳು ಕಾಗೆಗಳಿಗೆ ಅಪಾಯ ಅನ್ನಿಸಿ ಕೆಲ ದಿನ ಊರುಗಳಿಂದ ದೂರವೇ ಉಳಿದಿದ್ದವು

#ಕೊರಾನ_ನೆನಪುಗಳ_ಡೈರಿ_12. #ಜನವಸತಿ_ಪ್ರದೇಶದ_ಸಂಚಾರ_ಸ್ಥಬ್ದವಾಗಿದ್ದು_ಅವುಗಳಿಗೆ_ಅಪಾಯ_ಅನ್ನಿಸಿರಬೇಕು #ಲಾಕ್_ಡೌನ್_ಪರಿಸರ_ಕಾಗೆಗಳನ್ನ_ಭಯಪಡಿಸಿತ್ತಾ ... #ಲಾಕ್_ಡೌನ್_ಮರುದಿನದಿಂದ_ಕಾಗೆಗಳು_ಊರಲ್ಲಿ_ಕಾಣಿಸಿಕೊಳ್ಳಲೇ_ಇಲ್ಲ #ಕೆಲವು_ದಿನಗಳ_ನಂತರ_ಯಥಾಸ್ಥಿತಿಗೆ #ಇದನ್ನು_28_ಮಾರ್ಚ್_2020ರಂದು_ದಾಖಲಿಸಿದ್ದೆ   ಮೊನ್ನೆಯಿ೦ದ ಲಾಕ್ ಡೌನ್ ಆದಾ೦ಗಿ೦ದ ಶಬ್ದಮಾಲಿನ್ಯ ಕಡಿಮೆ ಆಯಿತು ಮನೆಯ ಗಡಿಯಾರದ ಮುಳ್ಳಿನ ಟಿಕ್.. ಟಿಕ್..ಶಬ್ದದ ಚಲನೆ ದಶಕದ ಮೇಲೆ ಕೇಳಿತು! ದೂರದ ಚಚಿ೯ನ ಗOಟೆ ಕೇಳುತ್ತಲೇ ಇರಲಿಲ್ಲ ಈಗ ಕೇಳುತ್ತಿದೆ    ಪರಿಸರದ ಹಕ್ಕಿಗಳ ಕಲರವ ಊರಿ೦ದ ದೂರದ ಜಮೀನಿನಲ್ಲಿ ಮಾತ್ರ ಕೇಳುವುದು ಈಗ ಮನೇಯಲ್ಲೇ ಕೇಳುವಂತಾಯಿತು.     ರಾತ್ರಿ 12 ಆದರೂ ಊರ ರಸ್ತೆ ಗಿಜಿಗಿಜಿ ಆಗಿರುತ್ತಿತ್ತು, ನಮ್ಮ ಮನೆ ನಾಲ್ಕು ರಸ್ತೆ ಸೇರುವ ಯಡೇಹಳ್ಳಿವೃತ್ತದಲ್ಲಿ ಇದೆ, NH 206 ಮತ್ತು ರಾಣಿ ಬೆನ್ನೂರು To ಬೈoದೂರು ರಾ.ಹೆದ್ದಾರಿ 766 C ಹಾಗೂ ತೀಥ೯ಹಳ್ಳಿ ಸಂಪಕ೯ ರಸ್ತೆ ಜಿಲ್ಲಾ ಮುಖ್ಯ ರಸ್ತೆ ರಾತ್ರಿ ಹಗಲು ಸಂಚರಿಸುವ ವಾಹನಗಳಿ೦ದ ತುಂಬಿರುತ್ತಿತ್ತು.   ಈಗ ಸೂಯ೯ ಅಸ್ತ ನಿದಾನ ಸಂಜೆ 7 ರ ನಂತರ, ಊರು ಮತ್ತು ರಸ್ತೆಗಳು ಬಿಕೋ ಅನ್ನುತ್ತಿದೆ, ರಾತ್ರಿ ಎಲ್ಲಾ ಸಂಚರಿಸುವವರನ್ನ ಅನುಮಾನದಿಂದ ಎಚ್ಚರಿಸುತ್ತಿದ್ದ ಸಾಕು ನಾಯಿ ಮತ್ತು ಬೀದಿ ನಾಯಿಗಳು ಯಾರದ್ದು ಸಂಚಾರ ಇಲ್ಲದ್ದು ನೋಡಿ ಊಳಿಡುವುದಕ್ಕೆ ವಿರಾಮ ಕೊಟ್ಟಿದೆ.   ಇದರ ಮಧ್ಯೆ

Blog number 2034. ಕಳೆದ 2019 ರ ಲೋಕಸಭಾ ಚುನಾವಣೆಯಲ್ಲಿ ಮುನ್ನೋಲೆಗೆ ಬಂದಿದ್ದ ಅಪಶಕುನದ ಸುದ್ದಿ...

#ಕಳೆದ_ಲೋಕಸಭಾ_ಚುನಾವಣೆಯಲ್ಲಿ_ಹೆಚ್ಚು_ಪ್ರಚಾರವಾಗಿದ್ದ #ಅಪಶಕುನದ_ಸುದ್ದಿಗಳು #ಇದರಿಂದ_ಬಿಜೆಪಿ_ಅಭ್ಯರ್ಥಿ_ಸೋಲುತ್ತಾರೆಂಬ_ಸುದ್ದಿ #ಪಲಿತಾಂಶ_ಬಂದಾಗ_ಬಿಜೆಪಿ_ಎರೆಡು_ಲಕ್ಷ_ಅಧಿಕ_ಮತಗಳಿಂದ_ವಿಜಯ_ಗಳಿಸಿತ್ತು.    2019ರ ಲೋಕ ಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯಥಿ೯ ಸಂಸದ ರಾಘವೇಂದ್ರ ದಿನಾಂಕ 28- ಮಾರ್ಚ್-2019 ರಂದು ನಾಮ ಪತ್ರ ಸಲ್ಲಿಸಿದ್ದರು.  ಕಾಲಕ್ಕೆ ತಕ್ಕ೦ತೆ ಬಾರೀ ಜನಸ್ತೋಮ ಸೇರಿಸಿದ್ದರು ಆದರೆ ಅವರ ತಂದೆ ಯಡೂರಪ್ಪನವರು, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಮತ್ತು ಶ್ರೀನಿವಾಸರು ಬರಬೇಕಾಗಿದ್ದ ಹೆಲಿಕಾಪ್ಟರ್ ತಾಂತ್ರಿಕ ದೋಷದಿಂದ ಬೆಂಗಳೂರಿಂದ ಹಾರಲಿಲ್ಲ.    ಇದೇ ಸಂದರ್ಭದಲ್ಲಿ ರಾಘವೇಂದ್ರರ ನಾಮಪತ್ರದ  ಅಜಿ೯ ಪಾರಂ ದೇವರ ಪೀಠದಿಂದ ಕೆಳಕ್ಕೆ ಉರುಳಿತು ಎಂಬ ವಿಚಾರ ವಿರೋದಿ ಪಾಳ್ಯವಾದ ಜೆಡಿಎಸ್ ಮತ್ತು ಕಾಂಗ್ರೇಸ್ ಪಕ್ಷದಲ್ಲಿ ಹೆಚ್ಚು ಸುದ್ದಿ ಮಾಡಿತ್ತು.   ಈ ವಿಚಾರ ಪೇಟೆ ಪ್ರದೇಶಕ್ಕಿಂತ ಹಳ್ಳಿಗಳಲ್ಲಿ ಹೆಚ್ಚು ಚಚೆ೯ ಆಗಿತ್ತು ಇದರ ಸಾರಾಂಶವಿಷ್ಟೆ ಬಿಜೆಪಿ ಅಭ್ಯರ್ಥಿ ರಾಘವೇಂದ್ರರಿಗೆ ಈ ಘಟನೆಗಳು ಶುಭ ಶಕುನವಾಗಿಲ್ಲ... ಇದು ಅಪಶಕುನ ಈ ಬಾರಿ ಬಿಜೆಪಿ ಗೆಲ್ಲುವುದಿಲ್ಲ ಎಂಬ ಸುದ್ದಿ ಜನರ ಮಧ್ಯ ಹಬ್ಬಿತ್ತು.     ಇದು ಸ್ಪರ್ದಿಗಳಿಗೆ ತಿಳಿದಿತ್ತೋ ಇಲ್ಲವೊ ಗೊತ್ತಿಲ್ಲ ಆದರೆ ಚುನಾವಣಾ ಪಲಿತಾಂಶ ಬಂದಾಗ ರಾಘವೇಂದ್ರ ಅವರು ಜೆಡಿಎಸ್ ಪಕ್ಷದ ಅಭ್

Blog number 2033. ನಮ್ಮ ಊರಿನ ಕ್ರೈಸ್ತ ಬಾಂದವರ ನೂತನ ಪ್ರಾರ್ಥನ ಮಂದಿರ ಸಂತ ಜೂದರ ದೇವಾಲಯ ದಿನಾಂಕ 11 - ಏಪ್ರಿಲ್- 2024ರ ಗುರುವಾರ ಬೆಳಿಗ್ಗೆ 10ಕ್ಕೆ ಲೋಕಾರ್ಪಣೆಗೊಳ್ಳಲಿದೆ.

#ನಮ್ಮೂರ_ನೂತನ_ಚರ್ಚ್_ಲೋಕರ್ಪಣೆಯ_ಆಹ್ವಾನ_ಪತ್ರಿಕೆ  #ಕರಾವಳಿ_ತೀರದಿಂದ_1930ರಲ್ಲಿ_ಬಂದು_ನೆಲಿಸಿದ_11_ಕ್ರೈಸ್ತ_ಕುಟುಂಬಗಳ_55_ಸದಸ್ಯರು #ಆಗ_ಭಾನುವಾರದ_ಪ್ರಾರ್ಥನೆ_ಈಗಿನ_ಪ್ರವಾಸಿ_ಮಂದಿರದಲ್ಲಿ #ನಂತರ_1962ರಲ್ಲಿ_ಚಿಕ್ಕ_ಚರ್ಚ್_ನಿರ್ಮಾಣವಾಯಿತು #ದೊಡ್ಡ_ಚರ್ಚ್_ಸಂತ_ಜೂದರ_ತದೆಯಸರ_ಚರ್ಚ್_1974ರಲ್ಲಿ_ನಿಮಾ೯ಣವಾಗಿ_1999ರಲ್ಲಿ_ನವೀಕರಣ_ಆಗಿತ್ತು. #ಇದೇ_ಜಾಗದಲ್ಲಿ_ನೂತನ_ಬೃಹತ್_ಕ್ರೈಸ್ತ_ದೇವಾಲಯ_ನಿರ್ಮಾಣವಾಗಿ_ಲೋಕರ್ಪಣೆ_ಆಗಲಿದೆ.    ನಮ್ಮ ಆನಂದಪುರಂನ ಯಡೇಹಳ್ಳಿಯ ಹೊಸನಗರ ರಸ್ತೆಯ ರೈಲ್ವೆ ಗೇಟ್ ಸಮೀಪದ ಕ್ರೈಸ್ತ ಬಾಂದವರ ಸಂತ ಜೂದರ ನೂತನ ದೇವಾಲಯ ದಿನಾಂಕ 11 ಏಪ್ರಿಲ್ 2024 ರಂದು ಉದ್ಘಾಟನೆಗೊಳ್ಳಲಿದೆ.   1974 ರಲ್ಲಿ ನಿರ್ಮಿಸಿ 1999ರಲ್ಲಿ ನವೀಕರಣಗೊಂಡಿದ್ದ ಹಳೆಯ ಚರ್ಚ್ ಶಿಥಿಲಗೊಂಡಿದ್ದರಿಂದ ಅದನ್ನು ತೆಗೆದು ದೊಡ್ಡದಾದ ಹೊಸ ಚರ್ಚ್ ನಿರ್ಮಿಸುವ ಸಂಕಲ್ಪ ಮಾಡಿ ಅದನ್ನು ಯಶಸ್ವಿಯಾಗಿ ಅವರ ಸಂಸ್ಥೆಯ,ಸ್ಥಳಿಯ ಕ್ರೈಸ್ತ ಬಾಂದವರ ಮತ್ತು ದಾನಿಗಳ  ನೆರವಿನಿಂದ ಅನೂಷ್ಟಾನ ಮಾಡಿದವರು ಈಗಿನ  ಪಾದರ್ ಮಿನಿನ್ ಆಲ್ಮೇಡಾ ಅವರನ್ನು ಸ್ಮರಿಸಲೇ ಬೇಕು.   ಶಿವಮೊಗ್ಗದ ದರ್ಮಾದ್ಯಕ್ಷರಾದ ಪರಮಪೂಜ್ಯ ಪ್ರಾನ್ಸಿಸ್ ಸೆರಾವೋ ಮತ್ತು ಕಾರವಾರದ ದರ್ಮಾದ್ಯಕ್ಷರಾದ ಪರಮ ಪೂಜ್ಯ ಡುಮಿಂಗ್ ಡಯಾಸ್ ನೂತನ ದೇವಾಲಯದ ಉದ್ಘಾಟನೆ - ಆಶೀರ್ವಚನ - ಮತ್ತು ಅಭಿಷೇಕೋತ್ಸವ ನೆರವೇರಿಸಲಿದ್ದಾರೆಂಬ ನಮ್ಮ ಊರಿನ ಚರ್ಚ್ ಪಾದರ್ ಮಿನಿನ್ ಆಲ್ಮೇಡಾ

Blog number 2032. ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಬಂಗಾರಪುರ ನಾಮಕರಣಕ್ಕೆ ಕಾರಣವಾದ ಗುಡ್ನಾಪುರದ ದೊಡ್ಡ ಕೆರೆಯ ಬಂಗಾರೇಶ್ವರ ದೇವರು

#ನಮ್ಮ_ರಾಜ್ಯದ_ಜನಪ್ರಿಯ_ಮುಖ್ಯಮಂತ್ರಿ_ಬಂಗಾರಪ್ಪರ_ನಾಮಕರಣಕ್ಕೆ_ಕಾರಣ | #ಬನವಾಸಿ_ಸಮೀಪದ_ಗುಡ್ನಾಪುರದ_ಇತಿಹಾಸ #ಈ_ದೇವರ_ಹರಕೆಯಿಂದ_ಜನಿಸಿದವರಿಗೆ_ಬಂಗಾರಪ್ಪ_ಬಂಗಾರಮ್ಮ_ಹೆಸರಿಡುತ್ತಾರೆ #ರಾಜ್ಯದ_ಇತಿಹಾಸ_ಜನರಿಗೆ_ತೆರೆದಿಡುವ_ಡಿಜಿಟಲ್_ಮಾಧ್ಯಮಕ್ಕೆ #ಗುಡ್ನಾಪುರ_ಇತಿಹಾಸ_ವಿವರಿಸಿದ_ಸಂಶೋದಕ_ಡಾಕ್ಟರ್_ಸಾಮಕ್_ಅವರಿಗೆ #ಅಭಿನಂದನೆಗಳು. https://www.facebook.com/share/v/8fcaGkX1s5HHdvht/?mibextid=oFDknk

Blog number 2031. ಆತ್ಮರಕ್ಷಣೆಗೆ - ರೈತರ ಪಸಲು ರಕ್ಷಣೆಗೆ ಲೈಸೆನ್ಸ್ ಪಡೆದ ಶಸ್ತ್ರಾಸ್ತ್ರಗಳನ್ನು ಪ್ರತಿ ಚುನಾವಣೆಯ ಪ್ರಕ್ರಿಯೆ ಮುಗಿಯುವ ತನಕ ಅವರ ವ್ಯಾಪ್ತಿಯ ಪೋಲಿಸ್ ಠಾಣೆಗಳಲ್ಲಿ ಸರೆಂಡರ್ ಮಾಡುವ ಪದ್ಧತಿ ಸರಿಯೇ...

#ರಾಜ್ಯದ_ಜನಪರ_ವಕೀಲರೇ_ಇದನ್ನು_ಗಮನಿಸಿ #ಓಬಿ_ರಾಯನ_ಕಾಲದ_ಪದ್ದತಿ #ಲೋಕಸಭಾ_ಚುನಾವಣೆ_ಬಂದಿದೆ #ಆತ್ಮರಕ್ಷಣೆ_ಪಸಲುರಕ್ಷಣೆ_ರಿವಾಲ್ವಾರ್_ಬಂದೂಕುಗಳು_ಪೋಲಿಸ್_ಠಾಣೆಯಲ್ಲಿ_ಸರೆಂಡರ್_ಮಾಡಬೇಕು. #ಚುನಾವಣೆ_ಬಂದಾಗ_ದರೋಡೆಕೊರರು_ಪಸಲು_ತಿನ್ನುವ_ಪ್ರಾಣಿಗಳು_ಸುಮ್ಮನಿರುತ್ತದಾ? #ಈ_ಅನಾಗರೀಕ_ಅವೈಜ್ಞಾನಿಕ_ಪದ್ಧತಿ_ರಾಜ್ಯದಲ್ಲಿ_ಈ_ಚುನಾವಣೆಯಲ್ಲಿಯೂ_ಜಾರಿ_ಇದೆ #ಕೇರಳಾ_ರಾಜ್ಯದ_ಉಚ್ಚ_ನ್ಯಾಯಾಲಯ_ಈ_ಪದ್ದತಿಗೆ_ತಡೆ_ಆಜ್ಞೆ_ನೀಡಿದೆ. #ಕರ್ನಾಟಕ_ರಾಜ್ಯದಲ್ಲಿ_ಯಾರೋಬ್ಬರೂ_ಈ_ಬಗ್ಗೆ_ಉಚ್ಚ_ನ್ಯಾಯಾಲಯದಲ್ಲಿ_ಈ_ಪದ್ದತಿ_ರದ್ದತಿಗೆ_ರಿಟ್_ಹಾಕಿಲ್ಲ.    ಆತ್ಮ ರಕ್ಷಣೆ ಮತ್ತು ಪಸಲು ರಕ್ಷಣೆಗಾಗಿ ರಿವಾಲ್ವಾರ್ ಅಥವ ಬಂದೂಕು ಲೈಸೆನ್ಸ್ ಪಡೆದವರಿಗೆ ಪ್ರತಿ ಚುನಾವಣೆಯ ಸಂದರ್ಭದಲ್ಲಿ ತಮ್ಮ ತಮ್ಮ ರಿವಾಲ್ವಾರ್ / ಬಂದೂಕುಗಳನ್ನು ಅವರ ವ್ಯಾಪ್ತಿಯ ಪೋಲಿಸ್ ಠಾಣೆಗೆ ತಂದು ಸರೆಂಡರ್ ಮಾಡಬೇಕೆಂಬ ಜ್ಞಾಪನಾ ಪತ್ರ ಪೋಲಿಸರು ನೀಡುತ್ತಾರೆ.   ಅದರಂತೆ ಆ ವ್ಯಾಪ್ತಿಯ ಜನರು ಪೋಲಿಸರ ಆದೇಶ ಪಾಲಿಸುತ್ತಾರೆ ಆದರೆ ಈ ಪದ್ಧತಿ ಸರಿಯಾ? ದರೋಡೆಕೋರರು - ಕಳ್ಳರು ತಮ್ಮ ವೃತ್ತಿಯನ್ನು ಚುನಾವಣೆಯಲ್ಲಿ ಬಿಡುತ್ತಾರಾ? ಚುನಾವಣಾ ಸಂದರ್ಭದಲ್ಲಿ ಬಂದೂಕು ಪೋಲಿಸ್ ಠಾಣೆಯಲ್ಲಿ ಡಿಪೋಸಿಟ್ ಮಾಡಿರುತ್ತಾರೆಂಬ ಮಾಹಿತಿ ಅವರಿಗೆ ಹೆಚ್ಚಿನ ದೈರ್ಯ ನೀಡದೇ ಇರುತ್ತದಾ?.    ಈ ಅವೈಜ್ಞಾನಿಕ ಪದ್ದತಿಯನ್ನು ಕೇರಳ ರಾಜ್ಯದ ಉಚ್ಚ ನ್ಯಾಯಾಲಯದ ಆದೇಶದಲ್ಲಿ ತಡೆ ಹ

Blog number 2030. ಕೊರಾನಾ ನೆನಪಿನ ಡೈರಿ ಭಾಗ -11 ವಲ್ಡ್ ಹೆಲ್ತ್ ಆರ್ಗನೈಸೇಶನ್ ಭಾರತಕ್ಕೆ ನೀಡಿದ ಎಚ್ಚರಿಕೆ

#ಕೊರಾನಾ_ನೆನಪಿನ_ಡೈರಿ_ಭಾಗ_10 #ಭಾರತ_ಕೊರಾನಾ_ಮೂರನೆ_ಹಂತ_ತಲುಪಿದರೆ #ಏಪ್ರಿಲ್_15_2020ಕ್ಕೆ_ಭಾರತದಲ್ಲಿ_ಕೊರಾನ_ಸಾವಿನ_ಸಂಖ್ಯೆ_50_ಸಾವಿರ_ದಾಟೀತು #ಇನ್ನಾದರೂ_ಅಂತರ_ಕಾಪಾಡಿ #ತಿರುಗಾಟ_ಇತ್ಯಾದಿ_ಕೈಬಿಟ್ಟು_ಮನೇಲೇ_ಇರಿ #ಮುಂದಿನ_20_ಗಂಟೆಗಳು_ಭಾರತಕ್ಕೆ_ಭಾರಿ_ಎಚ್ಚರಿಕೆ #ಡಬ್ಲ್ಯುಎಚ್‌ಒ_ಐಸಿಎಂಆರ್_ಭಾರತವನ್ನು_ಎಚ್ಚರಿಸಿದೆ   ದಿನಾಂಕ 28 ಮಾರ್ಚ್ 2020 ಭಾರತ ದೇಶದ ಲಾಕ್ ಡೌನ್ ನ ನಾಲ್ಕನೇ ದಿನದಲ್ಲಿ     ಮುಂದಿನ 20 ಗಂಟೆಗಳಲ್ಲಿ ಭಾರತೀಯರು ಸುಧಾರಿಸದಿದ್ದರೆ, ಭಾರತವು "ಥರ್ಡ್ ಸ್ಟೆಪ್" ಅಂದರೆ ನಾಳೆ 29- ಮಾರ್ಚ್- 2020ರ ರಾತ್ರಿ 11 ಗಂಟೆಗೆ "ಸಮುದಾಯ ಪ್ರಸರಣ" ಕ್ಕೆ ಪ್ರವೇಶಿಸುತ್ತದೆ ಎಂದು ಡಬ್ಲ್ಯುಎಚ್‌ಒ ಐಸಿಎಂಆರ್ ಹೇಳಿದೆ.  ಭಾರತವು ಕಳೆದ ರಾತ್ರಿಯ ವೇಳೆಗೆ ಮೂರನೇ ಹಂತಕ್ಕೆ ಹೋಗಿದ್ದರೆ, 15 ಏಪ್ರಿಲ್ ವೇಳೆಗೆ ಭಾರತದಲ್ಲಿ ಸಾವಿನ ಸಂಖ್ಯೆ  50000 (ಐವತ್ತು ಸಾವಿರ) ವರೆಗೆ ತಲುಪಬಹುದು ಎಂದಿದೆ.   ಏಕೆಂದರೆ ಭಾರತದ ಜನಸಂಖ್ಯಾ ಸಾಂದ್ರತೆಯು ಇತರ ದೇಶಗಳಿಗಿಂತ ಹೆಚ್ಚಾಗಿದೆ ಆದರೆ ಭಾರತೀಯರು ಇನ್ನೂ ಅದರ ಬಗ್ಗೆ ಗಂಭೀರವಾಗಿರುತ್ತಾರ ಎಂಬುದು ಅರ್ಥವಾಗುತ್ತಿಲ್ಲ.    ನಾಳೆ ತನಕ ಭಾರತವು ಎರಡನೇ ಹಂತದಲ್ಲಿ ಉಳಿಯಬೇಕೆಂದು ದೇವರನ್ನು ಪ್ರಾರ್ಥಿಸಿ.    ಎಲ್ಲಾ ನಾಗರಿಕರೊಂದಿಗೆ ಮನವಿ ಮಾಡಿ, ದಯವಿಟ್ಟು ಕೊರಾನಾ ಎಂಬುದು ಜೋಕ್ ಆಗಿ ಪರಿಗ

Blog number 2029. ನರ್ಮದಾ ನದಿ ಪರಿಕ್ರಮಣ ಯಾತ್ರೆಗೆ ಪುರಾಣದ ನಂಟಿದೆ.

#ನನ್ನನ್ನು_ಹೆಚ್ಚು_ಕಾಡುತ್ತಿರುವ_ನರ್ಮದಾನದಿ_ಪರಿಕ್ರಮ #ವಿಂದ್ಯಾಪರ್ವತದಲ್ಲಿ_ಹುಟ್ಟಿ_ಪಶ್ಚಿಮಾಬಿ_ಮುಖವಾಗಿ_ಹರಿದು_ಅರಬೀಸಮುದ್ರ_ಸೇರುತ್ತದೆ #ನರ್ಮದಾ_ನದಿ_1312_ಕಿಮಿ_ಹರಿಯುವ_ನದಿಯ_ಜಲಾಯನ_ಪ್ರದೇಶದ_ವ್ಯಾಪ್ತಿ_38143_ಚದರ_ಮೈಲು #ಹಿಂದೂ_ಪುರಾಣದಲ್ಲಿ_ನರ್ಮದಾ_ನದಿ_ಗಂಗಾನದಿಯಂತೆ_ಪವಿತ್ರ #ನರ್ಮದಾ_ನದಿ_ಪರಿಕ್ರಮಣ_ಎಂಬ_ಪುರಾತನ_ಕಾಲದಿಂದ_ನಡೆದು_ಬಂದಿರುವ_ದಾರ್ಮಿಕ_ಯಾತ್ರೆ #ನರ್ಮದಾ_ನದಿಯ_ಪರಿಕ್ರಮದ_ಯಾತ್ರಾರ್ಥಿ_ತನ್ನ_ಬಲಭಾಗದಲ್ಲಿನ_ನದಿಪಾತ್ರದಲ್ಲಿ_3500_ಕಿಮಿ_ಪರಿಕ್ರಮಿಸುವ_ಯಾತ್ರೆ    ದೇಶದ ಐದು ಪ್ರಮುಖ ನದಿಗಳಲ್ಲಿ ಒಂದಾದ ಮಧ್ಯಪ್ರದೇಶದ ವಿಂದ್ಯ ಪರ್ವತದ ಅಮರಕಂಟಕ ಬೆಟ್ಟದ ನರ್ಮದ ಕುಂಡದಲ್ಲಿ ಉಗಮಿಸಿ ಮಧ್ಯಬಾರತದಲ್ಲಿ ಹರಿದು ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಹಾದು ಗುಜರಾತ್ ರಾಜ್ಯದ ಭರೂಚ ನಗರದ ಬಳಿ ಅರಬೀ ಸಮುದ್ರ ಸೇರುವ ನರ್ಮದಾ ನದಿ ಪೂರ್ವದಲ್ಲಿ ಹುಟ್ಟಿ ಪಶ್ಚಿಮಕ್ಕೆ ಹರಿಯುವ ಕೆಲವೇ ಕೆಲವು ಅಪರೂಪದ ನದಿಗಳಲ್ಲಿ ಒಂದು.    ಇದು ಉಗಮ ಸ್ಥಾನದಿಂದ 1312 ಕಿಮಿ ಹರಿದು ಸಮುದ್ರ ಸೇರುತ್ತದೆ ಈ ನರ್ಮದಾ ನದಿಯ ಜಲಾಯಾನ ಪ್ರದೇಶದ ವ್ಯಾಪ್ತಿ ನಾಲ್ಕು ರಾಜ್ಯಗಳಲ್ಲಿ 38143 ಚದರ ಮೈಲು ವಿಸ್ತಿರ್ಣ .   ಈ ನದಿಗೆ ಸರ್ದಾರ್ ಸರೋವರ ಆಣೆಕಟ್ಟು ನಿರ್ಮಾಣ ವಿರೋದಿಸಿ ನರ್ಮದಾ ಬಚಾವೋ ಆಂದೋಲನ ಬಾಬಾ ಆಮ್ಟೆ ಮತ್ತು ಮೇದಾ ಪಾಟ್ಕರ್ ನಡೆಸಿದ್ದರು.   ಈ ನದಿ ಪಾತ್ರದಲ್ಲಿ ಆವರ್ತನದಲ್ಲಿ  (ಕ್ಲಾ

Blog number 2028.ಕೊರಾನಾ ನೆನಪುಗಳ ಡೈರಿ 10.ಕೊರಾನಾ ಹಿಂದಿನ ವೈಜ್ಞಾನಿಕ ಕಾರಣಗಳು.

#ಕೊರೊನಾlockdown_ಹಿಂದಿನ_ವೈಜ್ಞಾನಿಕ_ಕಾರಣ_ತಿಳಿದುಕೊಳ್ಳಿ. #ಕೇರಳದ_ಕೆಲವು_ಪ್ರದೇಶಗಳಲ್ಲಿ_ಕರೋನಾ_ಮೂರನೆ_ಹಂತವನ್ನು_ತಲುಪಿದೆ.  #ಈ_ಹಂತವು_ಮಧ್ಯಪ್ರದೇಶದಲ್ಲಿ_1_ರಿಂದ_2_ರವರೆಗೆ.  #ಈ_ಹಂತಗಳು_ಯಾವುವು?  #ಮೊದಲ_ಹಂತ  ರಮೇಶ ವಿದೇಶದಿಂದ ಬಂದರು.  ವಿಮಾನ ನಿಲ್ದಾಣದಲ್ಲಿ ಅವರಿಗೆ ಜ್ವರ ಇರಲಿಲ್ಲ.  ಅವನಿಗೆ ಮನೆಗೆ ಹೋಗಲು ಅನುಮತಿ ನೀಡಲಾಯಿತು.  ಆದರೆ ಅವರಿಂದ 14 ದಿನಗಳ ಕಾಲ ಗ್ರಹಬಂಧನದಲ್ಲಿ ಇರುವ ಬಗ್ಗೆ ವಿಮಾನ ನಿಲ್ದಾಣದಲ್ಲಿ ಅಫಿಡವಿಟ್ ಪಡೆಯಲಾಯಿತು.  ಮತ್ತು ಜ್ವರ ಬಂದಾಗ ಸಹಾಯವಾಣಿಗೆ ಸಂಪರ್ಕಿಸುವಂತೆ ಸೂಚಿಸಲಾಯಿತು.  ಮನೆಗೆ ಹೋಗಿ ಅಫಿಡವಿಟ್‌ನ ಷರತ್ತುಗಳನ್ನು ಪಾಲಿಸಿದರು.  ಅವರು ಮನೆಯಲ್ಲಿಯೇ ಇರಬೇಕಾಯಿತು.  ಅವರು ಮನೆಯ ಸದಸ್ಯರಿಂದ ದೂರವಿರುತ್ತಿದ್ದರು.  "ಹೇ, ನಿನಗೆ ಏನೂ ಆಗಿಲ್ಲ" ಎಂದು ರಮೇಶ ತಾಯಿ ಹೇಳಿದರು.  ಪ್ರತ್ಯೇಕವಾಗಿ ಉಳಿಯಬೇಡ.  ಇಷ್ಟು ದಿನಗಳ ನಂತರ ನೀನು ಮನೆಯ ಆಹಾರವನ್ನು ಪಡೆಯುತ್ತೀರುವೆ, ನಮ್ಮೊಂದಿಗೆ ಕುಳಿತು ಊಟ ಮಾಡು ಎಂದರು.  ರಮೇಶ ನಿರಾಕರಿಸಿದರು.  ಮರುದಿನ ಬೆಳಿಗ್ಗೆ, ಅಮ್ಮ ಮತ್ತೆ ಅದೇ ಮಾತನ್ನು ಹೇಳಿದಳು.  ಈ ಬಾರಿ ರಮೇಶಗೇ ಕೋಪ ಬಂತು.  ಅವನು ತಾಯಿಯ ಮೇಲೆ  ರೇಗಿದನು. ಅಮ್ಮನ ಕಣ್ಣಿನಲ್ಲಿ ಕಣ್ಣೀರು ಜಿನುಗಿತು ತಾಯಿಗೆ ಬೇಸರವಾಯಿತು.  ರಮೇಶ ಪ್ರತ್ಯೇಕವಾಗಿ ಮುಂದುವರೆದರು.  6-7 ನೇ ದಿನ ರಮೇಶನಿಗೆ  ಜ್ವರ, ಶೀತ ಕೆಮ್ಮು ಮುಂತಾದ ಲಕ್ಷಣಗಳನ್ನು ಕಾಣಲಾರಂಭಿಸಿ

Blog number 2027. ಕೊರಾನ ನೆನಪುಗಳ ಡೈರಿ ಭಾಗ-9.ಲಂಡನ್ ನಲ್ಲಿ ವಾಸ ಇರುವ ಅನಿವಾಸಿ ಭಾರತೀಯ ಪೀಯೂಷ್ ಪರೇಖಾ ಅಲ್ಲಿನ ಪ್ರಸಕ್ತ ಲಾಕ್ ಡೌನ್ ಬಗ್ಗೆ ತಿಳಿಸಿದ್ದಾರೆ.

 ಪೀಯೂಷ್ ಪರೇಖಾ ಲಂಡನ್ ನಲ್ಲಿ ವಜ್ರದ ವಾಪಾರದ ಉದ್ದಿಮೆದಾರರು  ಅನಿವಾಸಿ ಭಾರತೀಯರು  ಅವರು ಅಲ್ಲಿನ ಕೊರಾನಾ ವೈರಸ್ ಬಗ್ಗೆ ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಸಿದ್ದಾರೆ.   ಭಾರತದ ಲಾಕ್ ಡೌನ್ ಗಿಂತ 10 ದಿನ ಮೊದಲೇ UK  ಲಾಕ್ ಡೌನ್ ಪ್ರಾರಂಭಿಸಿತ್ತು. .......Corontine Started two weeks ago & situation is so bad can’t come out from home here is lock down.   .......Well they deliver medicine my house & food my wife go for shopping.  .......They give 80% what ever ur salary or government give £150 week to help people.