Skip to main content

Blog number 1979. ಕೆ.ಶಿವರಾಮ್ ನೆನಪುಗಳು ಭಾಗ 2, ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬಂದದ್ದು ಮತ್ತು ನಮ್ಮ ಆನಂದಪುರಂ ಯುವಜನ ಮೇಳದಲ್ಲಿ ನನ್ನ ಆಯ್ಕೆಯ ತೀರ್ಪುಗಾರರನ್ನೆ ಅನುಮೋದಿಸಿದ ನೆನಪುಗಳು

#ಕೆ_ಶಿವರಾಂ_ನೆನಪುಗಳು_ಭಾಗ_2

#ಶಿವಮೊಗ್ಗ_ಜಿಲ್ಲಾ_ಪಂಚಾಯತ್_ಮುಖ್ಯ_ಕಾರ್ಯನಿರ್ವಹಣಾಧಿಕಾರಿ_ಆಗಿ_ಕೆ_ಶಿವರಾಂ

#ಆನಂದಪುರಂನಲ್ಲಿ_ನಡೆದ_ಯುವಜನ_ಮೇಳದ_ಪ್ರಶಸ್ತಿ_ಪತ್ರದಲ್ಲಿ_ಅವರ_ಸ್ಟಹಸ್ತಾಕ್ಷರ

#ಜಿಲ್ಲಾ_ಮಟ್ಟದ_ಯುವಜನ_ಮೇಳದ_ನೂತನ_ತೀರ್ಪುಗಾರರನ್ನು_ವಿರೋದಿಸಿದ_ಅಧಿಕಾರಿಗಳು

#ನಾನು_ಆಯ್ಕೆ_ಮಾಡಿದ್ದ_ತೀರ್ಪುಗಾರ_ಯುವ_ಮುಂದಾಳುಗಳು_ಈಸೂರು_ಲೋಕೇಶ್_ತಂಡ

#ಹೊನ್ನಾಳಿ_ಚಂದ್ರಶೇಖರ್_ಹೆಚ್_ಬಿ_ರಾಘವೇಂದ್ರ_ಸುನಿಲ್_ಶಿರನೆಲ್ಲಿ
#ತಮ_ನರಸಿಂಹ_ಕಣ್ಣೂರಿನ_ಡೊಳ್ಳಿನ_ಕಲಾವಿದ_ಘಟ್ಟದಮಂಜಪ್ಪ_ಗೆಳೆಯರು

#ನನ್ನ_ಆಯ್ಕೆಯ_ತೀರ್ಪುಗಾರರನ್ನೇ_ಎತ್ತಿ_ಹಿಡಿದ_ಶಿವರಾಂ
  ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ (1995 2000) ಕೆ ಶಿವರಾಂ ಅವರು ನಮ್ಮ ಜಿಲ್ಲಾ ಪಂಚಾಯತಿಗೆ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಬರುತ್ತಿದ್ದಾರೆ ಎಂಬ ಸುದ್ದಿ ಬಂತು, ಆಗ ನಮಗೆಲ್ಲ ಕುತೂಹಲ ಏಕೆಂದರೆ ಕನ್ನಡದಲ್ಲಿ ಪ್ರಥಮ ಬಾರಿಗೆ ಐಎಎಸ್ ಮಾಡಿದ ವ್ಯಕ್ತಿ ಅವರು ಹಾಗೆಯೆ ನಾಗತಿಹಳ್ಳಿ ಚಂದ್ರಶೇಖರ್ ಅವರ ಕಥೆ ನಿರ್ದೇಶನದಲ್ಲಿ #ಬಾನಲ್ಲೆ_ಮದುಚಂದ್ರಕ್ಕೆ ಎಂಬ ಸಿನಿಮಾ ನಟನೆ ಮಾಡಿ ಪ್ರಸಿದ್ಧರಾದವರು, ಬೆಂಗಳೂರು ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸುವಾಗ ಅತ್ಯಂತ ,ಬಡವರಿಗೆ ದಲಿತರಿಗೆ  ನಿವೇಶನಗಳನ್ನು ಮತ್ತು ಮನೆಗಳನ್ನು ಸರ್ಕಾರದಿಂದ ನಿರ್ಮಿಸಿ ಕೊಟ್ಟವರು ಈ ರೀತಿಯ ಸುದ್ದಿಗಳು ಅವರ ಬಗ್ಗೆ ಕೂತೂಹಲ ಹಾಗೂ ಅಭಿಮಾನ ಮೂಡಿಸಿತ್ತು.
   ಅವರು ಶಿವಮೊಗ್ಗ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಗಿ ತಮ್ಮ ಅಧಿಕಾರ ಸ್ವೀಕಾರ ಮಾಡಿ ನಂತರ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ನಮ್ಮನೆಲ್ಲ ಅವರ ಕಚೇರಿಗೆ ಕರೆಸಿ ಪರಸ್ಪರ ಪರಿಚಯಗಳನ್ನು ಮಾಡಿಕೊಂಡರು.
    ಅವರಿಗೆ ಜಿಲ್ಲೆಯ ವಿದ್ಯಾಮಾನ ಮೊದಲೇ ತಿಳಿದಿತ್ತು, ಆಗ ಜೆ ಹೆಚ್ ಪಟೇಲರು ಮುಖ್ಯಮಂತ್ರಿ, ಬಸವಣ್ಣಪ್ಪನವರು ಜಿಲ್ಲಾ ಮಂತ್ರಿ ರ, ಜಿಲ್ಲೆಯಲ್ಲಿ ಶಿಕಾರಿಪುರದಿಂದ ಯಡಿಯೂರಪ್ಪ ಶಾಸಕರಾಗಿ ವಿರೋದ ಪಕ್ಷದ ನಾಯಕರಾಗಿದ್ದರು ಸಾಗರ ತಾಲ್ಲೂಕಿನಿಂದ ಕಾಗೋಡು ತಿಮ್ಮಪ್ಪ, ತೀರ್ಥಹಳ್ಳಿಯಿಂದ ಆರಗ ಜ್ಞಾನೇಂದ್ರ, ಹೊಸನಗರದಿಂದ ಆಯನೂರು ಮಂಜುನಾಥ್, ಭದ್ರಾವತಿಯಿಂದ ಅಪ್ಪಾಜಿಗೌಡರು, ಶಿವಮೊಗ್ಗದಿಂದ ಈಶ್ವರಪ್ಪ, ಸೊರಬ ಕ್ಷೇತ್ರದಿಂದ ಕುಮಾರ್ ಬಂಗಾರಪ್ಪ ಶಾಸಕರುಗಳು ಆಗಿದ್ದರು ಆಗ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಬಲ್ಕೀಶ್ ಬಾನು ಮತ್ತು ಉಪಾಧ್ಯಕ್ಷರು ತಿಪ್ಪಾ ನಾಯಕರು.
   ಆಗಲೇ ನಮ್ಮ ಆನಂದಪುರದಲ್ಲಿ ಶಿವಮೊಗ್ಗ ಜಿಲ್ಲಾ ಯುವಜನ ಮೇಳ ನಿಗದಿ ಆಗಿತ್ತು ಇದಕ್ಕಾಗಿ ನಾವೆಲ್ಲಾ ವ್ಯವಸ್ಥೆ ಹಮ್ಮಿಕೊಂಡಿದ್ದೆವು, ಈ ಜಿಲ್ಲಾ ಮಟ್ಟದ ಯುವ ಜನ ಮೇಳಕ್ಕೆ ಶಿವರಾಂರನ್ನು ಆಹ್ವಾನಿಸಿದೆ ಆದರೆ ಶಿವರಾಂ ಅವರು ಆ ದಿನ ಜಿಲ್ಲೆಯಲ್ಲಿ ಲಭ್ಯವಿಲ್ಲದ ಕಾರಣ ಬೇರೆ ಕೆಲಸಗಳು ಇದ್ದ ಕಾರಣ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ. 
    ಆ ಜಿಲ್ಲಾಮಟ್ಟದ ಯುವ ಜನ ಮೇಳ ಆನಂದಪುರಂನ ಪ್ರತಿಷ್ಠಿತ ಕನ್ನಡ ಸಂಘದ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳಲಾಗಿತ್ತು, ಆಗ ಅದರ ಅಧ್ಯಕ್ಷ ಹಾ.ಮೋ. ಭಾಷಾ ಅವರು ಪ್ರಶಸ್ತಿ ಪತ್ರಗಳನ್ನು ಸ್ಮರಣೀಯವಾಗಿ ಇರಬೇಕೆಂದು ಆಲೋಚಿಸಿ ಸಾಗರದ ಕಲಾವಿದ ಷಣ್ಮುಖಪ್ಪನವರಿಂದ ತುಂಬಾ ಚೆನ್ನಾಗಿ ಮಾಡಿಸಿದ್ದರು.
   ಅದರಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಕನ್ನಡ ಸಂಘದ ಅಧ್ಯಕ್ಷರು ಮತ್ತು ಸ್ಥಳಿಯ ಜಿಲ್ಲಾ ಪಂಚಾಯತ್ ಸದಸ್ಯನಾದ ನನ್ನ ಸಹಿ ಹಾಕಬೇಕಿತ್ತು.
    ಸಾವಿರಾರು ಪ್ರಶಸ್ತಿ ಪತ್ರಕ್ಕೆ ಸಹಿ ಹಾಕುವುದು ದೊಡ್ಡ ಮಟ್ಟದ ಅಧಿಕಾರಿಗಳಿಗೆ ಕಷ್ಟ ಕೂಡ ಆಗ ಶಿವರಾಂ ಅವರು ತಮ್ಮ ಸಹಿ ಇರುವ ರಬ್ಬರ್ ಸ್ಟಾಂಪ್ ಬಳಸಿಕೊಳ್ಳಬಹುದು ಎಂದರು ಆದರೆ ನಾನು ಒಪ್ಪಲಿಲ್ಲ, ಕನ್ನಡದಲ್ಲಿ ಮೊದಲ ಐಎಎಸ್ ಮಾಡಿದ ವ್ಯಕ್ತಿ ನೀವು, ಚಲನಚಿತ್ರ ನಟರು ಆದ ನೀವು ಈಗ ನಮ್ಮ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಯಾಗಿ ಬಂದಿದ್ದೀರಿ ಆದ್ದರಿಂದ ಜಿಲ್ಲಾ ಯುವಜನ ಮೇಳದಲ್ಲಿ ಭಾಗವಹಿಸಿದ ಎಲ್ಲಾ ಕಲಾವಿದರಗಳಿಗೆ ನಿಮ್ಮ ಸ್ವಂತ ಹಸ್ತಾಕ್ಷರ ಇರುವ ಪ್ರಶಸ್ತಿ ಪತ್ರ ಸಿಗಲೇ ಬೇಕು ಎಂದು ಒತ್ತಾಯಿಸಿದೆ.
   ನಂತರ ಅವರಿಂದ ಸಹಿ ಹಾಕಿಸುವ ಜವಾಬ್ದಾರಿ ಗೆಳೆಯ ಅಂಬಲಿಗೋಳದ ಕಲಾವಿದ ಗೆಳೆಯ ಹನೀಪರಿಗೆ ವಹಿಸಿದೆ ಅವರು ಶಿವರಾಮದಿಂದ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ  ಶ್ರೀಮತಿ ಬಲ್ಕೀಶ್ ಭಾನು ಅವರಿಂದ ಎಲ್ಲಾ ಪ್ರಶಸ್ತಿ ಪತ್ರಗಳಿಗೆ ಸಹಿ ಹಾಕಿಸಿ ತಂದರು.
    ಜಿಲ್ಲಾ ಮಟ್ಟದ ಯುವಜನ ಮೇಳಕ್ಕೆ ತೀರ್ಪುಗಾರರಾಗಿ ಹೊಸ ಸಮರ್ಥ ಮುಖಗಳನ್ನು ಪರಿಚಯಿಸಲು ನಾನು ಮುಂದಾದೆ  ಆಗಿನ ಯುವ ಮುಂದಾಳುಗಳಾಗಿದ್ದ ಈಸೂರು ಲೋಕೇಶ್, ಹೊನ್ನಾಳಿ ಚಂದ್ರು, ಸುನಿಲ್ ಶಿರನೆಲ್ಲಿ, ತ.ಮ. ನರಸಿಂಹ, ಕಣ್ಣೂರಿನ ಡೊಳ್ಳಿನ ಕಲಾವಿದ ಘಟ್ಟದ ಮಂಜಪ್ಪ, ಸಾಗರದ ಹೆಚ್.ಬಿ.ರಾಘವೇಂದ್ರ ಮುಂತಾದ ಗೆಳೆಯರನ್ನು ನೇಮಿಸಿದೆ ಆದರೆ ಜಡ್ಡು ಕಟ್ಟಿದ ಯುವಜನ ಇಲಾಖೆ ಪಟ್ಟಭದ್ರ ಹಿತಾಸಕ್ತಿಯ ಮತ್ತು  ಪಕ್ಷಪಾತದ ತೀರ್ಪು ನೀಡುವ ಹಳೆಯ ತೀರ್ಪುಗಾರರಿಗೇ ಅವಕಾಶ ನೀಡಬೇಕೆಂದು ಗುಲ್ಲೆಬ್ಬಿಸಿದರು ಮತ್ತು ನಾನು ಆಯ್ಕೆ ಮಾಡಿದ ತೀರ್ಪುಗಾರರನ್ನು ಬದಲಿಸಬೇಕೆಂದು ಒತ್ತಡ ತಂದರು.
   ಇದನ್ನು ಕೆ ಶಿವರಾಂ ಅವರ ಗಮನಕ್ಕೆ ತರಲಾಯಿತು ಅವರು ಅಧಿಕಾರಿಗಳ ಮಾತಿಗೆ ಮಣೆ ಹಾಕದೆ ನನ್ನ ಆಯ್ಕೆಯ ಜಿಲ್ಲೆಯ ಯುವ ಮುಂದಾಳುಗಳ ತೀರ್ಪುಗಾರರನ್ನು ಮುಂದುವರಿಸಲು ನನಗೆ ಅವಕಾಶ ನೀಡಿದರು.
ಹೀಗೆ ಜಿಲ್ಲೆಗೆ ಬಂದ ಐಎಎಸ್ ಶಿವರಾಂ ನನಗೆ ಆಪ್ತರಾದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ