Skip to main content

Blog number 2036. ಬಾರದ ಲೋಕಕ್ಕೆ ಶಾಲಾ ಸಹಪಾಠಿ -ನಟ -ಪರಿಸರ ಹೋರಾಟಗಾರ ಹೆಗ್ಗೋಡು ಏಸು ಪ್ರಕಾಶ್ ಪಯಣ.

#ಬಾರದ_ಲೋಕಕ್ಕೆ_ತೆರಳಿದ_ಗೆಳೆಯ_ಏಸುಪ್ರಕಾಶ್

#ಪ್ರೌಡಶಾಲಾ_ಸಹಪಾಠಿ

#ಹೆಗ್ಗೋಡು_ನೀನಾಸಂ_ರಂಗ_ಕಲಾವಿದ

#ಚಲನಚಿತ್ರ_ದಾರಾವಾಹಿ_ನಟ

#ಪರಿಸರ_ಹೋರಾಟಗಾರ

#ತಾಯಿಗೆ_ತಕ್ಕ_ಮಗನಾಗಿದ್ದವರು

 ನಿನ್ನೆ ರಾತ್ರಿ 8.41 ಕ್ಕೆ #ಏಸುಪ್ರಕಾಶ್ ಗೆ ಪೋನ್ ಮಾಡಿದ್ದೆ ಕೆಲವು ಬಾರಿ ಪ್ರಯತ್ನಿಸಿದೆ ರಿಂಗ್ ಆಗುತ್ತಿತ್ತು ಆದರೆ ರಿಸೀವ್ ಮಾಡಲಿಲ್ಲ...
  #ಡಿಜಿಟಲ್_ಮಾಧ್ಯಮದ ನಂದಿನಿ ಆಕರ್ಷ ದಂಪತಿಗಳು ನೀನಾಸಂ - ಕೆ.ವಿ.ಸುಬ್ಬಣ್ಣ ಬಗ್ಗೆ ಕೆಲವು ಎಪಿಸೋಡು ಮಾಡುವ ಉದ್ದೇಶ ಹೊಂದಿದ್ದರಿಂದ ಏಸು ಪ್ರಕಾಶರಿಗೆ ಈ ದಂಪತಿಗಳಿಗೆ ಸಹಕರಿಸಲು ವಿನಂತಿಸಲು ಪೋನ್ ಮಾಡಿದ್ದೆ.
  ಏಸು ಪ್ರಕಾಶ್ ಫೋನಿಗೆ ಸಿಗಲಿಲ್ಲ ಅಂದಾಗ #ನೀನಾಸಂ_ಪ್ರಾಂಶುಪಾಲರಾದ_ಗಣೇಶರಿಗೆ ಪೋನ್ ಮಾಡಿದೆ ಅವರೂ ರಿಸೀವ್ ಮಾಡಲಿಲ್ಲ.
 ಕೆಲ ಸಮಯದ ನಂತರ ಪ್ರಾಂಶುಪಾಲರೆ ವಾಪಾಸು ಕರೆ ಮಾಡಿದಾಗ ಗೊತ್ತಾಗಿದ್ದು ಏಸು ಪ್ರಕಾಶ್ ಇನ್ನಿಲ್ಲ ಅಂತ.
  ಲಿವರ್ ಕ್ಯಾನ್ಸರ್ ಸ್ಟೇಜ್ 4 ಕ್ಕೆ ತಲುಪಿ ದೇಹದ ಅಂಗಾಂಗ ವೈಫಲ್ಯದಿಂದ ನಿನ್ನೆ ಕರಾವಳಿಯ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
  ಬೆನ್ನು ನೋವಿದೆ ಅನ್ನುತ್ತಾ ತಮಗೆ ಬಂದ ಕ್ಯಾನ್ಸರ್ ಕಾಯಿಲೆ ಎಲ್ಲರಿಂದ ಮರೆ ಮಾಚಿದ್ದಾರೆ...
  ಈ ವಿಚಾರ ಇವರಿಗೆ ಮತ್ತು ಇವರ ದೊಡ್ಡ ಮಗಳಿಗೆ ಬಿಟ್ಟು ಯಾರಿಗೂ ಗೊತ್ತಿರಲಿಲ್ಲ.
  ಎರಡು ತಿಂಗಳ ಹಿಂದೆ ಅವರು ಪೋನ್ ಮಾಡಿದ್ದರು ನಮ್ಮ ಕಲ್ಯಾಣ ಮಂಟಪದಲ್ಲಿ ಅವರ ಗೆಳೆಯರಿಗೆ ನಿರ್ದಿಷ್ಟ ದಿನಾಂಕದಂದು ಹಾಲ್ ಬೇಕು ಅಂತ ಆದರೆ ಆ ದಿನಾಂಕ ಬೇರಾರೋ ಬುಕ್ ಮಾಡಿದ್ದರು ಎಂಬ ಮಾಹಿತಿ ತಿಳಿಸಿದಾಗ ನಂತರ ಪೋನ್ ಮಾಡುವುದಾಗಿ ಕರೆ ಅಂತ್ಯಗೊಳಿಸಿದ್ದರು.
  2019 ರ ನವೆಂಬರ್ ನಲ್ಲಿ ನಡೆದ ನನ್ನ ಮಗಳ ಮದುವೆಗೆ ಏಸು ಪ್ರಕಾಶ್ ತಮ್ಮ ಪತ್ನಿ ಮತ್ತು ಇಬ್ಬರು ಪುತ್ರಿಯರ ಜೊತೆ ಬಂದಿದ್ದರು ಏಸು ಪ್ರಕಾಶ್ ಅವರ ಪತ್ನಿ ಮತ್ತು  ಪುತ್ರಿಯರಿಬ್ಬರೂ ಕಲಾವಿದರು ಪುತ್ರ ಬೆಂಗಳೂರಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
  ಏಸು ಪ್ರಕಾಶರ ಕುಟುಂಬ ನನ್ನ ಪ್ಯಾಮಿಲಿ ಪ್ರೆಂಡ್ ಕುಟುಂಬ ಅವರ ತಾಯಿಗೆ ಈಗ 85 ವರ್ಷ 60 ರ ದಶಕದಲ್ಲಿ ನಮ್ಮ ಊರಾದ ಆನಂದಪುರಂನ ಕನಕಮ್ಮಾಳ್ ಆಸ್ಪತ್ರೆಯಲ್ಲಿ #ಲೀಲಾ_ಸಿಸ್ಟರ್ ಎಂದೇ ಜನ ಮನ್ನಣೆ ಪಡೆದು ಸೇವೆ ಸಲ್ಲಿಸಿದ್ದಾರೆ.
ಅನೇಕ ಬಾರಿ ಏಸು ಪ್ರಕಾಶರಿಗೆ ಅವರ ತಾಯಿ ಲೀಲಾವತಿ ಸಿಸ್ಟರ್ ಕರೆದುಕೊಂಡು ಬರಲು ವಿನಂತಿಸಿದ್ದೆ 2021 ರ ನವೆಂಬರ್ ತಿಂಗಳಲ್ಲಿ ತಾಯಿ ಮಗ ಇಬ್ಬರೂ ನನ್ನ ಅತಿಥಿ.
 ನಾನೂ ನನ್ನಣ್ಣ ಅವರಿಗೆ ಶಾಲು ಹೊದಿಸಿ ಗೌರವಿಸಿ ಅವರ ಕಾಲಿಗೆ ಬಿದ್ದು ಆಶ್ರೀವಾದ ಪಡೆದಿದ್ದೆವು.
   ಉತ್ತರ ಕರ್ನಾಟಕದ ಕೈಮಗ್ಗದ ಸೀರೆ ಉಡುಗೊರೆ ಆಗಿ ನೀಡಿದ್ದೆ  ಆ ವರ್ಷದ ಕ್ರಿಸ್ ಮಸ್ ಪ್ರಾರ್ಥನೆಗೆ ನನ್ನ ಮಗ ಉಡುಗೊರೆ ನೀಡಿದ ಸೀರೆಯೇ ಉಡುವುದಾಗಿ ಅವರ ತಾಯಿ ನನ್ನ ಉಡುಗೊರೆ ಸಾರ್ಥಕಗೊಳಿಸಿದ್ದನ್ನ ಏಸು ಪ್ರಕಾಶ್ ಪೋನ್ ನಲ್ಲಿ ತಿಳಿಸಿದ್ದರು.
  ಸಾಗರದ ಮುನ್ಸಿಪ್ ಹೈಸ್ಕೂಲ್ ನಲ್ಲಿ ಏಸು ಪ್ರಕಾಶ್ ನನ್ನ ಸಹಪಾಠಿ ಅಲ್ಲಿ #ಮೈಕಲ್_ಡಿಸೋಜ, #ಸ್ಟೀವನ್_ವಿಲ್ಸನ್_ಐಮನ್,.#ಚಾಕೂಲೂಕೋ ಮತ್ತು #ಮ್ಯಾಥ್ಯೂಲೂಕೋ ಎಲ್ಲಾ ನನ್ನ ಸಹಪಾಠಿ ಕ್ರಿಶ್ಚಿಯನ್ ಗೆಳೆಯರು ಆದರೆ ಅವರೆಲ್ಲರ ಹೆಸರಿಗಿಂತ ಬಿನ್ನ ಹೆಸರು ಏಸು ಪ್ರಕಾಶ್ ಇದು ಇತರ ಸಹಪಾಠಿಗಳಿಗೆ ಆಶ್ಚಯ೯.
   ಹುಟ್ಟು ಅಕಸ್ಮಿಕ ಸಾವು ನಿರೀಕ್ಷಿತ  ಈ ಸಂದರ್ಭದಲ್ಲಿ ಏಸು ಪ್ರಕಾಶ್ ಜೊತೆ ಕಳೆದ ದಿನಗಳ ಸಾಂಗತ್ಯದ ನೆನಪು ಮಾಡುತ್ತಾ ಅವರ ಆತ್ಮಕ್ಕೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತೇನೆ.
   ಹಾಗೂ ಅವರ ತಾಯಿ 85 ರ ವಯೋಮಾನದ ಲೀಲಾವತಿ ಸಿಸ್ಟರ್, ಪತ್ನಿ - ಇಬ್ಬರು ಪುತ್ರಿಯರಿಗೆ ಮತ್ತು ಪುತ್ರನಿಗೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ ಎಂದು ಪ್ರಾರ್ಥಿಸುತ್ತೇನೆ.
   ಏಸು ಪ್ರಕಾಶ್ ಅವರ ತಾಯಿ ಜೊತೆ ನಮ್ಮಲ್ಲಿಗೆ ಬಂದ ನೆನಪಿನ ಲೇಖನ ಏಸು ಪ್ರಕಾಶ್ ಸ್ಮರಣೆಗಾಗಿ ಇಲ್ಲಿ ಕ್ಲಿಕ್ ಮಾಡಿ ನೋಡಿ...
https://arunprasadhombuja.blogspot.com/2021/12/66-1960.html.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...