Skip to main content

Blog number 2003. ಬಿಜೆಪಿಯ ತವರು ಜಿಲ್ಲೆಯ ಬಿಜೆಪಿ ಬಂಡಾಯ ಈಶ್ವರಪ್ಪರ ಸ್ವತಂತ್ರ ಲೋಕ ಸಭಾ ಸ್ವರ್ದೆ

#ಶಿವಮೊಗ್ಗದಲ್ಲಿ_ಈಶ್ವರಪ್ಪರ_ಬಂಡಾಯದ_ಬಿಸಿ_ತುಪ್ಪ

#ಬಿಜೆಪಿ_ಕಾಂಗ್ರೇಸ್_ನೇರ_ಸ್ಪರ್ದೆ_ತ್ರಿಕೋನ_ಸ್ಪರ್ದೆ_ಆಗಲಿದೆ

#ಕಾಂಗ್ರೇಸ್_ಈ_ಸದಾವಕಾಶ_ಬಳಸಿಕೊಳ್ಳಲಿದೆ

#ಕಳೆದ_ವಿಧಾನಸಭಾ_ಚುನಾವಣೆಯಲ್ಲಿ_ಬಿಜೆಪಿ_ಆಂತರಿಕ_ಬಂಡಾಯ_ನಿರ್ಲಕ್ಷಿಸಿದ್ದರಿಂದ

#ಸಾಗರ_ಸೊರಬದಲ್ಲಿ_ಸೋಲು_ಅನುಭವಿಸಿತ್ತು

#ಶಿಕಾರಿಪುರದಲ್ಲಿ_ಪ್ರಯಾಸದಿಂದ_ಗೆಲ್ಲಬೇಕಾಗಿತ್ತು.

#ಜಿಲ್ಲೆಯ_ತ್ರಿಮೂರ್ತಿ_ಗೆಳೆಯರು_ಜೀವನ_ಸಂಜೆಯಲ್ಲಿ_ಮತ್ತೆ_ಒಂದಾಗಲಿ.


    ದಕ್ಷಿಣ ಭಾರತದ ಬಿಜೆಪಿಯ ತವರು ಮನೆ ಶಿವಮೊಗ್ಗದಲ್ಲಿ ಆಂತರಿಕ ಬಂಡಾಯ ಪ್ರಾರಂಭವಾಗಿದೆ ಇದಕ್ಕೆ ಇಡೀ ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ಪಡೆಯಲಾಗದವರೂ ಮತ್ತು ಯಡೂರಪ್ಪರ ವಿರೋದಿಗಳು ಸೇರಿರುವುದರಿಂದ ಬಿಸಿ ಹೆಚ್ಚಾಗಿದೆ.
 ಶಿವಮೊಗ್ಗ ಜಿಲ್ಲೆ ಜನ ಸಂಘ- ಬಿಜೆಪಿ- ದಲಿತ ಸಂಘಟನೆಗಳು - ರೈತ ಸಂಘಟನೆಗಳು - ಸಮಾಜವಾದಿ ಚಳುವಳಿಗಳು ಮತ್ತು ಬಂಗಾರಪ್ಪನವರು ಕಾಂಗ್ರೆಸ್ ಗೆ ಬಂಡಾಯದ ಸೆಡ್ಡು ಹೊಡೆದು ಸ್ಥಾಪಿಸಿದ ಕೆಸಿಪಿ ಪಾರ್ಟಿ ಹಾಗೆಯೇ ಯಡೂರಪ್ಪ 2013ರಲ್ಲಿ ಬಿಜೆಪಿ ವಿರುದ್ದ ಬಂಡಾಯದ ಕೆಜಿಪಿ ಪಾರ್ಟಿಗಳಿಗೆ ಸಾಕ್ಷಿಯಾದ ಜಿಲ್ಲೆ.
 ಇಂತಹ ನೂರಾರು ಸಂಘಟನೆ ಪಕ್ಷಗಳಿಗೆ ನೆಲೆಯಾದ ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿಯ ತ್ರಿಮೂರ್ತಿಗಳು ಇದ್ದಾರೆ ಅವರು ಡಿಹೆಚ್ .ಶಂಕರ್ ಮೂರ್ತಿ - ಯಡಿಯೂರಪ್ಪ - ಈಶ್ವರಪ್ಪ.
   ಡಿಎಚ್ ಶಂಕರಮೂರ್ತಿ ಆಗಿನಿಂದಲೂ ಆರ್ಥಿಕವಾಗಿ ಸಬಲರಾದ ಪ್ರತಿಷ್ಠಿತ ವ್ಯಾಪಾರಿ ಕುಟುಂಬದವರು ಅವರು ಜನಸಂಘ ನಂತರ ಬಿಜೆಪಿ ಆದ ಪಕ್ಷದಲ್ಲಿ ದೆಹಲಿ ಮಟ್ಟದ ಸಂಪರ್ಕಗಳು ಇರುವವರು, ಅವರ ಮನೆ ಅಡ್ವಾನಿ ವಾಜಪೇಯಿ ಮುಂತಾದ ಬಿಜೆಪಿಯ ಮತ್ತು ಹಿಂದುತ್ವದ ಅತಿರಥ ಮಹಾರಥರಿಗೆ ಆತಿಥ್ಯ ನೀಡಿದ ಮನೆ.     
     ಶಿಕಾರಿಪುರದಲ್ಲಿ ಯಡಿಯೂರಪ್ಪನವರನ್ನು
ಆ ಕಾಲದಲ್ಲಿ ಆಹಾರ ಮಂತ್ರಿ ಆಗಿದ್ದ ಗುಂಡೂರಾವ್ ಸಂಪುಟದ ವೆಂಕಟಪ್ಪನವರ ವಿರುದ್ಧ ಹೋರಾಟಕ್ಕೆ ತಯಾರು ಮಾಡಿದ ಜನಸಂಘ ಅವರನ್ನು ಶಾಸಕರನ್ನಾಗಿಸಲು ಸಫಲವಾಯಿತು.
    ಆ ಸಮಯದಲ್ಲಿ ಶಿವಮೊಗ್ಗದಲ್ಲಿ ತಮ್ಮ ಹಳೆಯ tvs ನಲ್ಲಿ ತಮ್ಮ ಅಡಿಕೆ ಚೀಟಿ-ಚಾಕಲೇಟ್ಗಳನ್ನು ಸಣ್ಣ ಅಂಗಡಿ ಅಂಗಡಿಗಳಿಗೆ ನೀಡುವ ವ್ಯಾಪಾರಿ ಆಗಿದ್ದ ಈಶ್ವರಪ್ಪನೆಂಬ ಹಿಂದುತ್ವದ ಯುವಕರನ್ನು ಡಿಎಸ್ ಶಂಕರ್ ಮೂರ್ತಿ, ಯಡಿಯೂರಪ್ಪ ತಮ್ಮ ಜೊತೆಯಲ್ಲೇ ತೆಗೆದುಕೊಂಡು ಹೋದರು.
    ಆಕಾಲದಲ್ಲಿ ಯಡಿಯೂರಪ್ಪ ಶಿವಮೊಗ್ಗಕ್ಕೆ ಬಂದರೆ ಬಸ್ ನಿಲ್ದಾಣದಲ್ಲಿ ಕಾದು ತಮ್ಮ ಟಿವಿಎಸ್ ಮೇಲೆ ಡಿಹೆಚ್ ಶಂಕರ ಮೂರ್ತಿ ಅವರಲ್ಲಿ ಕರೆದೊಯ್ಯುತ್ತಿದ್ದ ಕೆಲಸ ಈಶ್ವರಪ್ಪನವರದು, ಶಂಕರ್ ಮೂರ್ತಿಯವರು ಎಲ್ಲಾ  ಪಕ್ಷ ಸಂಘಟನೆಗೆ ಆರ್ಥಿಕ ಬೆನ್ನೆಲುಬಾಗಿದ್ದರು,ಅವರೇ ಇವರೆಲ್ಲರ ಊಟ ತಿಂಡಿ ಪ್ರಯಾಣದ, ಸಭೆ ಸಮಾರಂಭದ ವೆಚ್ಚಗಳನ್ನು ನಿರ್ವಹಿಸುತ್ತಿದ್ದ ದೊಡ್ಡ ದಾನಿಗಳು.
   ಆಕಾಲದಲ್ಲಿ ನಮ್ಮ ಊರಿನಲ್ಲಿ 1975 -76 ರಲ್ಲಿ ಯಡಿಯೂರಪ್ಪನವರು  ಶಿಕಾರಿಪುರದಿಂದ ಜೋಗ್ ಫಾಲ್ಸ್ ಗೆ ನಿತ್ಯ ಬರುತ್ತಿದ್ದ ಕುಮದ್ವತಿ ಬಸ್ಸಿಗೆ ಆನಂದಪುರಂನ ಪಕ್ಷ ಸಂಘಟನೆಗೆ ಏಕಾಂಗಿಯಾಗಿ ಬರುತ್ತಿದ್ದರು, ಅವರನ್ನು ಆನಂದಪುರದ ಬಸ್ ಏಜೆಂಟ್ ಆಗಿದ್ದ ಶ್ರೀಧರಣ್ಣ, ಮಂಜುನಾಥ ಕೊಲ್ವೇಕರ್ ಮತ್ತು ಗೀತಾ ಹೋಟೆಲ್ ಮಾಲಿಕರಾದ ಶ್ರೀನಿವಾಸ ಶೆಣೈ ಈ ಮೂವರು ಅವರನ್ನು ಕರೆದುಕೊಂಡು ಗೀತಾ ಹೋಟೆಲಿನ ಚಹಾ-ಪಕೊಡ ತಿನ್ನಿಸಿ   ಅಲ್ಲಿಂದ ಸಂತೆ ಮಾರ್ಕೆಟ್ ಮೂಲಕ ನಡೆದು ಕೊಂಡು ಆನಂದಪುರಂನ ಕೋಟೆ ಆಂಜನೇಯ ದೇವಸ್ಥಾನದಲ್ಲಿ ಸಣ್ಣ ಸಭೆಗಳನ್ನು ನಡೆಸುತ್ತಿದ್ದರು ಆ ಸಭೆಗೆ ಏಳೆಂಟು ಜನರಿಗಿಂತ ಹೆಚ್ಚು ಜನ ಸೇರಿದ ದಾಖಲೆ ಇಲ್ಲ.
   ಆ ಸಭೆಯ ನಂತರ ಪುನಃ ಶಣೈರ ಹೋಟೆಲಲ್ಲಿ ದೋಸೆ ತಿನ್ನಿಸಿ ಶಿಕಾರಿಪುರಕ್ಕೆ ಹೋಗುವ ಬಸ್ಸಿನಲ್ಲಿ ಕುಳ್ಳಿರಿಸಿ ಪ್ರಿ ಟಿಕೇಟಿನಲ್ಲಿ ಕಳಿಸುತ್ತಿದ್ದರು ಇದು ಅವತ್ತಿನ ಶಿವಮೊಗ್ಗ ಜಿಲ್ಲೆಯ ಜನಸಂಘ ಪಕ್ಷದ ಸಂಘಟನೆ ಪ್ರಯಾಸದ ಕಾಲದ ಮಾದರಿಯಾಗಿತ್ತು.
   ನಂತರ ಈ ಮೂವರು ತಮ್ಮ ಆರ್ಥಿಕ ಸಬಲತೆಗಾಗಿ ತಮ್ಮ ಪತ್ನಿಯ೦ದಿರ ಪಾಲುದಾರಿಕೆಯಲ್ಲಿ ಅವರ ಹೆಸರಿನ ಮೊದಲಕ್ಷರಗಳಿಂದ ಆಯ್ದ ಹೆಸರಿನಿಂದ ಸಂಸ್ಥೆಯೊಂದನ್ನು ಸ್ಥಾಪಿಸಿದರು,ಮಾಚೇನಹಳ್ಳಿಯ ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಒಂದನ್ನು ಪಡೆದು ಅಲ್ಲಿ ಹ್ಯೂಮ್ ಪೈಪ್ ಪ್ಯಾಕ್ಟರಿಯನ್ನು ಪ್ರಾರಂಭಿಸಿದ್ದರು ಅದು ಆ ಕಾಲದ ದೊಡ್ಡ ಸುದ್ದಿಯಾಗಿತ್ತು.
  ನಂತರ ನಡೆದದ್ದು ಯಾರೂ ಉಹಿಸದ ಇತಿಹಾಸ ಯಡ್ಯೂರಪ್ಪನವರು ಪಕ್ಷಕ್ಕೆ ಅಧಿಕಾರ, ಕಾರ್ಯಕರ್ತರಿಗೆ ಬೇಕಾದ ಸವಲತ್ತುಗಳನ್ನು ನೀಡಿದರು ಇದರಿಂದ ಈ ಮೂರು ತ್ರಿಮೂರ್ತಿಗಳು ಮಂತ್ರಿಗಳು ಆದರೂ, ಅವರ ಕಷ್ಟದ ದಿನಗಳನ್ನು ಅವರು ಮರೆಯುವಂತ ಶ್ರೀಮಂತಿಕೆಗೆ ಮತ್ತು ಅಧಿಕಾರ ಈ ಮೂವರಿಗೂ ಸಿಕ್ಕಿತು.
    ಒಂದು ಹಂತದಲ್ಲಿ ಯಡ್ಯೂರಪ್ಪನವರು ಬಿಜೆಪಿಯನ್ನು ತೊರೆದು ಕೆಜೆಪಿ ಮಾಡಿದರು ನಂತರ ಪುನಃ 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೇರಿ ಸಂಸತ್ ಸದಸ್ಯರಾದರು ಆಗ ಅವರ ಗೆಲುವಿಗೆ ಈಶ್ವರಪ್ಪನವರು ಹೆಚ್ಚಿನ ಶ್ರಮವನ್ನು ಹಾಕಿದ್ದರು.
  ಯಡಿಯೂರಪ್ಪನವರ ತಮ್ಮ ಇಬ್ಬರು ಪುತ್ರರನ್ನು ಮತ್ತು ಡಿ. ಹೆಚ್.ಶಂಕರ ಮೂರ್ತಿ ತಮ್ಮ ಏಕೈಕ ಪುತ್ರನನ್ನ ರಾಜಕೀಯದಲ್ಲಿ ಯಶಸ್ವಿಯಾಗಿ ಲಾಂಚ್ ಮಾಡಿದರು 
ಆದರೆ ಈಶ್ವರಪ್ಪನವರ ಪುತ್ರ ರಾಣಿಬೆನ್ನೂರಿನಲ್ಲಿ ವಿಧಾನಸಭೆ ಉಪ ಚುನಾವಣೆಗೆ ನಿಲ್ಲಲು ಎಲ್ಲಾ ತಯಾರಿ ಮಾಡಿದರು ಆದರೆ ಅವರಿಗೆ ಟಿಕೆಟ್ ನೀಡಲಿಲ್ಲ, ಸ್ವತಃ ಈಶ್ವರಪ್ಪನವರಿಗೂ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಟಿಕೇಟ್ ನೀಡಲಿಲ್ಲ, ಅವರ ಮಗನಿಗೂ ಅವಕಾಶ ನೀಡಲಿಲ್ಲ ಕಾಣದ ಕೈಗಳ ಕೆಲಸ ಇದು ಈಶ್ವರಪ್ಪ ಅಸಮಾಧಾನಕ್ಕೆ ಕಾರಣ.
  ಇದರ ಜೊತೆ ರಾಜ್ಯದಲ್ಲಿ ಯಡಿಯೂರಪ್ಪನವರ ವಿರುದ್ಧವಾಗಿ ಮತ್ತು ಬಿಜೆಪಿ ಪಕ್ಷದ ಸಂಘಟನೆ ಪರವಾಗಿ ಧ್ವನಿ ಎತ್ತಿದ ಅನೇಕರಿಗೆ ಲೋಕಸಭಾ ಚುನಾವಣೆಯಲ್ಲಿ ಕೋಕ್ ನೀಡಲಾಗಿದೆ, ಅವರೆಲ್ಲರೂ ಈಗ ಒಂದಾಗಿ ಈಶ್ವರಪ್ಪನವರ ಬಂಡಾಯಕ್ಕೆ ಕೈಜೋಡಿಸಿದ್ದಾರೆ, ಅವರ ಹೋರಾಟ ಸಾಂಕೇತಿಕವಾದರೂ ಇದು ತಮ್ಮ ಮತ್ತು ಯಡಿಯೂರಪ್ಪನವರ ಮೇಲಿನ ಅಸಮಾಧಾನವನ್ನು ದೆಹಲಿಯ ದೊರೆಗಳಿಗೆ ರವಾನಿಸುವ ವಿಧಾನವಾಗಿದೆ ಮತ್ತು ದೆಹಲಿ ಮಟ್ಟದ ದೊಡ್ಡ ಕೈಗಳೂ ಇವರಿಗೆ ಬೆಂಬಲವಾಗಿದೆ ಎಂಬುದು ಸುಳ್ಳಲ್ಲ.
 ಈಶ್ವರಪ್ಪನವರ ಬಂಡಾಯದಿಂದ ತಕ್ಷಣ ಬಿಸಿ ತಟ್ಟಿರುವುದು ಯಡಿಯೂರಪ್ಪನವರಿಗೆ ಮತ್ತು ಶಿವಮೊಗ್ಗ ಲೋಕಸಭಾ ಅಭ್ಯರ್ಥಿ ರಾಘವೇಂದ್ರರಿಗೆ, ತುಂಬಾ ಸುಲಭವಾಗಿ ಗೆದ್ದು ಕೇಂದ್ರ ಸರ್ಕಾರದಲ್ಲಿ ಮಂತ್ರಿ ಆಗುವ ನಿರೀಕ್ಷೆಯಲ್ಲಿದ್ದ  ಅವರ ಪುತ್ರನ ಲೋಕಸಭಾ ಕ್ಷೇತ್ರ ಶಿವಮೊಗ್ಗ ಈಗ ತ್ರಿಕೋನ ಸ್ಪರ್ಧೆಗೆ ಬದಲಾಗುತ್ತಿದೆ.
   ಇದರಿಂದ ಚುನಾವಣಾ ಫಲಿತಾಂಶ ಏನಾಗಬಹುದು ಎಂಬ ಚರ್ಚೆ ಪ್ರಾರಂಭ ಆಗಿದೆ.... ಅನೇಕರ ವಿಮರ್ಶೆ ಈಶ್ವರಪ್ಪನವರು ಸ್ಪರ್ಧಿಸಿದರೆ ಯಡಿಯೂರಪ್ಪರ ಪುತ್ರ ರಾಘವೇಂದ್ರ ಸೋಲೊಪ್ಪಿ ಕೊಳ್ಳಲೇಬೇಕು ಮತ್ತು ಕಾಂಗ್ರೆಸ್ಸಿನ ಗೀತಾ ಶಿವರಾಜಕುಮಾರ್ ಲೋಕಸಭಾ ಸದಸ್ಯರಾಗಲು ಸುಲಭವಾಗಿ ದಾರಿ ಮಾಡಿಕೊಟ್ಟಂತಾಗುತ್ತದೆ ಎನ್ನುತ್ತಾರೆ.
  ಇದರ ಮಧ್ಯೆ ಪಕ್ಷದ ಕಟ್ಟರ್ ಅಭಿಮಾನಿಗಳು ಮತ್ತು ಕಾರ್ಯಕರ್ತರಿಗೆ ಈಶ್ವರಪ್ಪ ಹಾಗೂ  ಯಡಿಯೂರಪ್ಪ ಅವರಿಬ್ಬರ ಮಧ್ಯೆ ಉಂಟಾಗಿರುವ ಭಿನ್ನಾಭಿಪ್ರಾಯ ಪಕ್ಷದ ಮುಖಂಡರುಗಳು ತಕ್ಷಣ ಬಗೆಹರಿಸಲಿ,ಈ ಚುನಾವಣೆಯಲ್ಲಿ ಎಲ್ಲಾ ಭೇದಭಾವವನ್ನು ಮರೆತು ಈಶ್ವರಪ್ಪನವರು ಬಿಜೆಪಿ ಪಕ್ಷದ ಪರವಾಗಿ ರಾಘವೇಂದ್ರರ ಗೆಲುವಿಗಾಗಿ ಚುನಾವಣೆಯ ನೇತೃತ್ವ ವಹಿಸಲಿ ಮತ್ತು  ಮುಂದಿನ ದಿನಗಳಲ್ಲಿ ಈಶ್ವರಪ್ಪನವರಿಗೆ ನ್ಯಾಯ ಸಿಗಲಿ ಎನ್ನುವ ಆಶಾಭಾವನೆಯು ಇದೆ.
   ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೊರಬ ಮತ್ತು ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಬಿಜೆಪಿ ಕಾರ್ಯಕರ್ತರ ಅಸಮಾಧಾನವೇ  ಶಾಸಕರಾಗಿದ್ದ  ಕುಮಾರ್ ಬಂಗಾರಪ್ಪ ಮತ್ತು ಹರತಾಳು ಹಾಲಪ್ಪನವರನ್ನು ಸೋಲಿಗೆ ಕಾರಣವಾಗಿತ್ತು, ಶಿಕಾರಿಪುರದಲ್ಲಿ ಯಡೂರಪ್ಪರ ಪುತ್ರ ವಿಜಯೇಂದ್ರ ಪ್ರಯಾಸದಿಂದ ಗೆಲುವು ಪಡೆದ ಉದಾಹರಣೆ ಇದೆ.
      ಜಿಲ್ಲೆಯ ತ್ರಿಮೂರ್ತಿಗೆಳೆಯರು ಜೀವನ ಸಂಜೆಯಲ್ಲಿ ಮತ್ತೆ ಒಂದಾಗಲಿ ಎಂದು ವೈಯಕ್ತಿಕವಾಗಿ ಹಾರೈಸುತ್ತೇನೆ.
    ಈಶ್ವರಪ್ಪನವರಿಗೆ ಈ ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರ ವೇಗ ತಡೆಯುವ ಶಕ್ತಿ ಇರುವುದು ಸುಳ್ಳಲ್ಲ ಒಂದು ವೇಳೆ ಅವರ ಸ್ಪರ್ಧೆ ಸಂದಾನದಿಂದ ಬಗೆಹರಿಯದಿದ್ದರೆ ಅದರ ಲಾಭ ಕಾಂಗ್ರೇಸ್ ಪಕ್ಷ ಬಳಸಿಕೊಳ್ಳುವುದು ಸುಳ್ಳಲ್ಲ.
   ಮುಂದಿನ ದಿನಗಳಲ್ಲಿ ಇದಕ್ಕೆ ಉತ್ತರ ದೊರೆಯಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ