Skip to main content

Blog number 1987. ಪ್ರತಿ ಶಿವರಾತ್ರಿ ದಿನ ನನಗೆ ಸ್ಮರಣೀಯ ದಿನವಾಗಿದೆ ಐದು ವರ್ಷದ ಹಿಂದೆ ಶಿವರಾತ್ರಿ ದಿನದಿಂದ ರಾತ್ರಿ ಊಟ ತ್ಯಜಿಸಿ ಇವತ್ತಿಗೆ ಐದು ವರ್ಷ ಆಯಿತು.

#ಪ್ರತಿ_ಶಿವರಾತ್ರಿ_ನನಗೆ_ಸ್ಮರಣೀಯ_ದಿನ

#ಐದು_ವರ್ಷದ_ಹಿಂದೆ_ಶಿವರಾತ್ರಿ_ದಿನದಿಂದಲೇ

#ನಾನು_ರಾತ್ರಿ_ಊಟ_ತ್ಯಜಿಸಿದ್ದು

#ನಮ್ಮಲ್ಲಿರುವುದ_ಬಿಟ್ಟು_ಬೇರೆಲ್ಲೋ_ಹುಡುಕುವ_ಸಹಜ_ಬುದ್ಧಿ_ಬದಲಿಸಿಕೊಂಡು

#ಪ್ರಕೃತಿಯ_ಜೊತೆ_ಮನೆಯಲ್ಲೇ_ಖರ್ಚಿಲ್ಲದೆ_ಸ್ಥೂಲಕಾಯ_ನಿವಾರಣೆಗೆ

#ದೃಡ_ನಿರ್ಧಾರ_ತೆಗೆದು_ಕೊಂಡ_ವಿಶೇಷ_ದಿನ


  2019 ಫೆಬ್ರುವರಿ 23ಕ್ಕೆ ಅಂದರೆ ಐದು ವರ್ಷದ ಹಿಂದೆ ಶಿವರಾತ್ರಿ ದಿನ ಅವತ್ತೇ ತೀಮಾ೯ನ ಮಾಡಿದ್ದೆ ಮುಂದಿನ ವರ್ಷದ ಶಿವರಾತ್ರಿ ತನಕ ರಾತ್ರಿ ಊಟ ಬಿಡುವುದಂತ ಅವತ್ತು ನನ್ನ ತೂಕ ಬರೋಬ್ಬರಿ 140 ಮತ್ತು ಆಗಾಗ್ಗೆ 145 ಕ್ಕೂ ಜಂಪ್ ಮಾಡುತ್ತಾ 150 ದಾಟುವ ಹಂತ...
   ನಮ್ಮ ತಂದೆ ಕೂಡ ರಾತ್ರಿ ಊಟ ಮಾಡುತ್ತಿರಲಿಲ್ಲ ಮಲಗುವಾಗ ಒಂದು ಲೋಟ ರಾಗಿ ಅಂಬಲಿ ಮತ್ತು ಹಾಲು ಮಾತ್ರ ಅವರ ದೈನಂದಿನ ಆಹಾರ ಪದ್ಧತಿ ಆಗಿತ್ತು.
  ಇದರ ಹಿಂದಿನ ವರ್ಷ 2018  ಜನವರಿಯಲ್ಲಿ ಶಿವಮೊಗ್ಗದ ಡಾಕ್ಟರ್ ಪ್ರೀತಂ (ನಮ್ಮ ಕುಟುಂಬ ವೈದ್ಯರು) ತಪಾಸಣೆಗೆ ಹೋದಾಗ ಡಯಾಬಿಟೀಸ್ ಖಾಲಿ ಹೊಟ್ಟೆಯಲ್ಲಿ 240 ಊಟದ ನಂತರ 300 ರ ಸಮೀಪ ಇರುತ್ತಿತ್ತು, ಹೊಟ್ಟೆ ಗುಡಾಣ ಆಗಿತ್ತು ಅದರ ಮಧ್ಯೆ ಹೊಕ್ಕುಳ ಹತ್ತಿರ ಹನಿ೯ಯಾ ಬೇರೆ.
  ಹತ್ತಿಪ್ಪತ್ತು ಹೆಜ್ಜೆ ನಡೆಯಲು ಆಯಾಸ,ಇದು ನನ್ನ ದೇಹದ ಒಳಗಿನ  ಬಯಾಲಾಜಿಕಲ್ ಕ್ಲಾಕ್ ಅಲಾರಂ ಮಾಡುತ್ತಿತ್ತು "#ನಿನ್ನ_ಆರೋಗ್ಯ_ಹದಗೆಟ್ಟಿದೆ_ಎಚ್ಚರ " ಅಂತ.
  1995 ರ ತನಕ ನನ್ನ 35 ವರ್ಷದ ತನಕ ನನಗೆ ತೂಕದ ಸಮಸ್ಯೆ ಇರಲಿಲ್ಲ ನಂತರವೇ ಪ್ರಾರಂಭ ಆದ ತೂಕದ ಏರುಗತಿ 2001ರಲ್ಲಿ 120 ದಾಟಿ ಅಲ್ಲೇ ನಿಂತಿದ್ದು 2015ಕ್ಕೆ ಪುನಃ ತನ್ನ ಏರುಗತಿ ಪ್ರಾರಂಬಿಸಿತ್ತು.
  ಪ್ರತಿ 3 ತಿಂಗಳಿಗೆ ತೊಡುವ ಬಟ್ಟೆ ಅಳತೆ ಬದಲಾಗಿ ಹೊಸ ಬಟ್ಟೆ ಬೇಕಾಗಿತ್ತು, ಬೇರಿಯಾಟ್ರಿಕ್ ಸಜ೯ರಿ ಮಾಡಿಸಿಕೊಳ್ಳುವ ಮನಸ್ಸೂ ಮಾಡಿದ್ದೆ ನಮ್ಮಲ್ಲಿಗೆ ಬೇಟಿ ನೀಡಿದ್ದ, ಬೇರಿಯಾಟ್ರಿಕ್ ಸರ್ಜರಿ ಮಾಡಿಸಿಕೊಂಡಿದ್ದ ರವಿ ಬೆಳಗೆರೆ, ಚಿತ್ರ ನಟ ದೊಡ್ಡಣ್ಣ ತಮ್ಮ ಬೇರಿಯಾಟ್ರಿಕ್ ಸಜ೯ರಿ ಯಶಸ್ಸಾಗಿದೆ ಅನ್ನುತ್ತಿದ್ದರು ಬೇರೆ.
  ಎಲ್ಲಾ ರೀತಿಯ ಡಯಟ್, ಕ್ರಾಶ್ ಡಯಾಟ್- ಅಮೆರಿಕನ್ ಡಯಟ್ ಹೀಗೆ ಸಾಲು ಸಾಲು ತೂಕ ಇಳಿಸಿಕೊಳ್ಳುವ ಪ್ರಯತ್ನ ಸ್ವಲ್ಪವೂ ಫಲ ನೀಡಲೇ ಇಲ್ಲ.
  ರಾತ್ರಿ ಚಪಾತಿ ತಿನ್ನುವುದು, ಬೆಳಿಗ್ಗೆ ಬಿಸಿ ನೀರಲ್ಲಿ ನಿಂಬೆರಸ ಜೇನು ತುಪ್ಪ, ಸಿರಿ ಧಾನ್ಯ ಇಂತಹ ಎಲ್ಲಾ ಪ್ರಯತ್ನವೂ ನನ್ನ ದೇಹದ ತೂಕ ನಿಯಂತ್ರಿಸಲು ಸಾಧ್ಯವೇ ಆಗಲಿಲ್ಲ.
  2006 ರಿಂದ ತಪ್ಪದೇ ಸಿದ್ದ ಸಮಾದಿ ಯೋಗ ಸಂಸ್ಥೆಯ ಯೋಗಾಸನ, ಪ್ರಾಣಯಾಮ ಮತ್ತು ಧ್ಯಾನ ಇವತ್ತಿನ ದಿನದ ತನಕವೂ ತಪ್ಪಿಸಿಲ್ಲ ಆದರೆ ಅದು ತೂಕದ ಸುದ್ದಿಗೆ ಹೋಗಲಿಲ್ಲ.
  ನನ್ನ ದೇಹ ನನ್ನ ಎಲ್ಲಾ ತೂಕ ಇಳಿಸುವ ಪ್ರಯತ್ನಕ್ಕೆ ಸೆಡ್ಡು ಹೊಡೆದು ಮುಖ ತಿರುಗಿಸಿತ್ತು.
  ಹನಿ೯ಯಾಗೆ ಶಸ್ತ್ರಚಿಕಿತ್ಸೆ ಅನಿವಾಯ೯ ಅನ್ನುವ ಸಂದರ್ಭದಲ್ಲೇ 2019ರ ಶಿವರಾತ್ರಿ ದಿನ ತೆಗೆದುಕೊಂಡ ತೀಮಾ೯ನ ಒಂದು ವರ್ಷದಲ್ಲಿ ಸುಮಾರು 20 ಕೇಜಿ ತೂಕ ಇಳಿಸಿತು, ಹರ್ನಿಯಾ ನಾಪತ್ತೆ ಆಯಿತು, ಡಯಾಬಿಟಿಸ್ ಖಾಲಿ ಹೊಟ್ಟೆಯಲ್ಲಿ ನೂರರ ಒಳಗೆ ಊಟದ ನಂತರ 130 ದಾಟಲಿಲ್ಲ, ಪ್ರತಿದಿನ ಆಯಾಸ ಇಲ್ಲದೇ 2 ಗಂಟೆ ಸತತ ನಡೆಯುವ ಶಕ್ತಿಗಳೆಲ್ಲ ದೇಹ ಪಡೆದಿದೆ.
   ಮದ್ಯಾಹ್ನದ ಊಟ ಯಾವುದೂ ಬಿಡಲಿಲ್ಲ, ಹಾಲು- ತುಪ್ಪ -ಬೆಣ್ಣೆ ಬೇಕಾದಷ್ಟು ತಿನ್ನುತ್ತೇನೆ ಇದೆಲ್ಲ ಏಕೆ ಹೇಳುತ್ತೇನೆಂದರೆ ಡಯಟ್ ತಜ್ಞರು ಇದನ್ನೆಲ್ಲ ಬಳಸಬಾರದೆಂದು ಹೇಳುತ್ತಾರೆ.
  ಸ್ವತಃ  ಪ್ರಯೋಗ ಮಾಡಿ ನೋಡದ ಎಲ್ಲಾ ಪುಸ್ತಕದ ಬದನೆಕಾಯಿಯಂತ ಪ್ರಕೃತಿಗೆ ವಿರುದ್ದವಾದ ಡಯಟ್ ಪಾಲನೆ ಕಷ್ಟಸಾಧ್ಯ, ಪ್ರಾರಂಭದಲ್ಲಿ ಇರುವ ಉತ್ಸಾಹ ನಂತರ ನಾಲಿಗೆ ನಮ್ಮ ಮಾತು ಕೇಳುವುದಿಲ್ಲ ಇದರಿಂದ ಉತ್ಸಾಹ ಕಳೆದುಕೊಂಡವರ,ಬೋನಸ್ ತೂಕ ಪಡೆದವರ ನೂರಾರು ಕಥೆ ನನ್ನ ಸುತ್ತಲಿನವರದ್ದು.
   2019ರಲ್ಲಿ ನನ್ನ ಪೋಟೋ ನೋಡಿ ನನ್ನ ಮುಖ ಹಿತ್ತಾಳೆ ಚೆಂಬಿನಂತೆ ಅಗಲ ಆಗುತ್ತಿತ್ತು ಇವತ್ತು ಕೊಬ್ಬು ಕರಗಿ ಬದಲಾಗಿರುವುದು ನೋಡಬಹುದು.
   ಈ ರೀತಿ ವರ್ಷದಿಂದ ವರ್ಷದ  ಶಿವರಾತ್ರಿಗೂ ನನ್ನ ಈ ಡಯಟ್ ಮುಂದುವರಿದಿದೆ ಈ ವರ್ಷ ಇವತ್ತಿಗೆ ಐದು ವರ್ಷ ತುಂಬಿದೆ ನನಗೆ ರಾತ್ರಿ ಊಟ ಜೀವಮಾನ ಪೂರ್ತಿ ಬೇಕಾಗಿಲ್ಲ ಅದು ಅಬ್ಯಾಸ ಆಗಿದೆ.
  ನಮ್ಮಲ್ಲಿರುವುದ ಮರೆತು ಬೇರೆಲ್ಲೊ ಹುಡುಕುವ ನಮ್ಮ ಸಹಜ ಬುದ್ದಿ ಬದಲಾಯಿಸಿ ಕೊಂಡು ಪ್ರಕೃತಿಯ ಜೊತೆಗೆ ಮನೆಯಲ್ಲೇ ಯಾವುದೇ ಖಚಿ೯ಲ್ಲದೆ ಸ್ಥೂಲಕಾಯ ನಿವಾರಿಸಿಕೊಳ್ಳುವ ಸುಲಭ ಮಾರ್ಗಗಳಿದೆ.
 ಆದರೆ ನಿಮ್ಮ ಪ್ರಯತ್ನಕ್ಕೆ ಕನಿಷ್ಟ ಒಂದು ವರ್ಷದ ಕಾಲಾವಕಾಶ ಇಟ್ಟುಕೊಳ್ಳಬೇಕು, ಎರಡೇ ದಿನದಲ್ಲಿ ತೂಕ ಪರೀಕ್ಷಿಸಿಕೊಂಡರೆ ಹತಾಷೆ ಗ್ಯಾರಂಟಿ.
  ನಾನು ಪ್ರಾರಂಭದ ಆರು ತಿಂಗಳು ತೂಕ ಪರೀಕ್ಷೆ ಮಾಡಲೇ ಇಲ್ಲ ಇವತ್ತಿನ ತೂಕ 108 kg, ನನಗೆ ಶೀಘ್ರ ತೂಕ ನಿವಾರಣೆ ಇಷ್ಟವೂ ಇಲ್ಲ ಸುಮಾರು 40 ಕಿಲೋ ತೂಕದ ಚೀಲ ತಲೆ ಮೇಲಿಂದ ನಿವಾರಿಸಿಕೊಂಡ ನಿರಾಳತೆ ಹೊಸ ಜೀವನದ ಜೀವನೋತ್ಸವ ಲವಲವಿಕೆ ಹೆಚ್ಚಾಗಿರುವುದೇ ಸಮಾದಾನ.
  ಇವತ್ತು ಬೆಳಿಗ್ಗೆ ನನ್ನ ಪ್ರೀತಿಯ ಶಂಭೂರಾಮನ ಜೊತೆ ಒಂದು ಗಂಟೆ ವಾಕಿಂಗ್ ಮಾಡಿ 7612 ಹೆಜ್ಜೆ ನಡೆದಿದ್ದೇನೆ.
   ಹಾಗಾಗಿ ಪ್ರತಿ ವರ್ಷದ ಶಿವರಾತ್ರಿ ನನಗೆ ನನ್ನ ಜೀವನದ ಆರೋಗ್ಯ ಬಾಗ್ಯದ ದೃಡ ನಿರ್ಧಾರದ ತಿರುವು ತೆಗೆದು ಕೊಂಡ ದಿನವಾದ್ದರಿಂದ ಶಿವರಾತ್ರಿ ವಿಶೇಷ ದಿನವಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ