Skip to main content

Posts

Showing posts from September, 2018

#ತ್ಯಾಜ್ಯ ವಿಲೇವಾರಿ ಮತ್ತು ಮಳೆ ನೀರು ಇಂಗಿಸುವ ನಮ್ಮ ಸವಾಲುಗಳಿಗೆ ನಮ್ಮ ಜವಾಬು#

ನಮ್ಮಲ್ಲಿ ಎರೆಡು ರೆಸ್ಟೋರಂಟ್, ಒಂದು ಕಲ್ಯಾಣ ಮಂಟಪ ಮತ್ತು ಎರೆಡು ಮನೆಗಳ ತ್ಯಾಜ್ಯ ವಿಲೆವಾರಿ ನಿತ್ಯ ಆಗಬೇಕು.   ಪ್ಲಾಸ್ಟಿಕ್, ಗಾಜು, ಹಸಿ ಕಸ ಹೀಗೆ ಪ್ರತ್ಯೇಕ ಡಬ್ಬಿಗಳಲ್ಲಿ ಹಾಕಿ ನಿತ್ಯ ಅವುಗಳನ್ನ ವಿಲೇವಾರಿ ಮಾಡುತ್ತೇವೆ.   ಪ್ಲಾಸ್ಟಿಕ್ ಖಾಲಿ ಬಾಟಲ್, ಹಾಲು ಎಣ್ಣೆ ಖಾಲಿ ಕವರ್, ಪಿನಾಯಿಲ್, ಡೆಟಾಲ್ ಖಾಲಿ ಕ್ಯಾನ್ಗಳನ್ನು ದೊಡ್ಡ ಚೀಲದಲ್ಲಿ ಹಾಕಿ ವಾರಕೊಮ್ಮೆ ರಿಸೈಕ್ಲಿOಗ್ ಘಟಕಕ್ಕೆ ಕಳಿಸುತ್ತೇವೆ.   ಸಣ್ಣ ಪೇಪರ್ಗಳು, ಬಳಸಿದ ನ್ಯಾಪ್ಕಿನ್ಗಳನ್ನ ನಮ್ಮದೆ ಸಣ್ಣ ಸುಡುವ ಘಟಕದಲ್ಲಿ ಸುಡಲಾಗುತ್ತದೆ. ಮಾಂಸಹಾರಿ ಹೋಟೆಲ್ ತ್ಯಾಜ್ಯ ಮತ್ತು ಸಸ್ಯಹಾರಿ ಹೋಟೆಲ್ ತ್ಯಾಜ್ಯ ನಿತ್ಯ ರಾತ್ರಿ ಹಂದಿ ಸಾಕಣೆ ಕೇಂದ್ರದವರಿಗೆ ನೀಡುತ್ತೇನೆ.   ಕಲ್ಯಾಣ ಮಂಟಪದ ಊಟದ ಎಲೆ, ತರಕಾರಿ ಸಿಪ್ಪೆ, ಉಳಿದ ಆಹಾರಗಳನ್ನ 10 ಅಡಿ ಅಗಲ ಮತ್ತು 3 ಅಡಿ ಎತ್ತರದ ಟ್ಯಾಂಕ್‌ಗೆ ಹಾಕಿ ಕೆಲ ದಿನ ಕೊಳೆಯಲು ಬಿಟ್ಟು ನಂತರ ನೀರು ತುಂಬಿಸಿ ಒಂದೆರೆಡು ದಿನದ ನಂತರ ಕೆಳಗಿನ ಟ್ಯಾಂಕ್‌ಗೆ ಬಿಟ್ಟು ಶೇಖರಿಸಿ ನಂತರ ಈ ಸಾವಯವ ಗೊಬ್ಬರದ ನೀರನ್ನ ನಮ್ಮ ರಬ್ಬರ್ ತೋಟಕ್ಕೆ ಹಾಕುತ್ತೇವೆ.   2006 ರಿಂದ ಈ ವರೆಗೆ ಒಂದು ಸಣ್ಣ ಕಸ ಕೂಡ ನಮ್ಮ ಸಂಸ್ಥೆ ಮತ್ತು ಮನೆಯಿಂದ ಎಲ್ಲೋ ಹೊರ ಚೆಲ್ಲಿದ ಉದಾಹರಣೆ ಇಲ್ಲ ಈ ಬಗ್ಗೆ ನನಗೆ ಹೆಮ್ಮೆ ಇದೆ. ಮಳೆಗಾಲದಲ್ಲಿ ಎಲ್ಲಾ ನೀರುಗಳನ್ನ ಕಾಲುವೆ ಮುಖಾಂತರ ನಮ್ಮ ಬೋರ್ ವೆಲ್ ಸಮೀಪ 12 ಅಡಿ ಅಗಲ 15 ಅಡಿ ಆಳದ ಇಂಗು ಗುಂಡಿಗೆ ಹಾಯಿಸಿ

# ಬೂದು ಗುಂಬಳ ಬಹು ಉಪಯೋಗಿ ಮತ್ತು ಔಷದಿ#

    ಬೂದು ಗುಂಬಳದಲ್ಲಿ ಒಳಬಾಗ ತುರಿದು ಹಿಂಡಿ ನೀರನ್ನ ಕುಡಿದರೆ ಚಮ೯ ರೋಗ ಮತ್ತು ನರ ಸಂಬಂದಿ ರೋಗಕ್ಕೆ ಮದ್ದ೦ತೆ, ನೀರು ಹಿಂಡಿದ ನಂತರದ ತುರಿಯಿ೦ದ ಹಲ್ವಾ ಮಾಡಿ ಹಾಗು ಸಿಪ್ಪೆಯನ್ನ ಸಂಡಿಗೆ ಮಾಡುವ ಉತ್ತರ ಭಾರತದ ಜನತೆ ಇದರ ಪೂಣ೯ ಉಪಯೋಗ ಕಂಡಿದ್ದಾರೆ.   ನಮ್ಮ ಭಾಗದಲ್ಲಿ ಬೂದುಗುಂಬಳ ಅಂದರೆ ಭಾರೀ ಭಯ, ಭಕ್ತಿ. ಇದು ಮೇಲ್ ಜಾತಿಯವರು ಮಾತ್ರ ಬಳಸುವ ಪದಾಥ೯ ಅಂತ ಆಗಿಬಿಟ್ಟಿದೆ. ನಮ್ಮ ಕಲ್ಯಾಣ ಮಂಟಪದಲ್ಲಿ ಬೂದುಗುಂಬಳ ಮದುವೆಯಲ್ಲಿ ಬಳಸುವ ವಿಚಾರದಲ್ಲಿ ಒಳ್ಳೆ ಚಚೆ೯ ಆಗುತ್ತೆ, ನಾನು ಬೂದುಗುoಬಳ ಕಡಿಮೆ ದರ ಅಂತ ಬರೆಸಿದರೆ, ಅಡುಗೆ ಭಟ್ಟರು ಒಂದು ಹುಳ ಬಿಟ್ಟಿರುತ್ತಾರೆ ಇದನ್ನ ನೀವೆಲ್ಲ ಬಳಸುವಂತಿಲ್ಲ ಅಂತ ಆದರೂ ಅವರ ಮಾತು ಕೇಳದೆ ಬಳಸಲು ತೀಮಾ೯ನಿಸಿದರೆ ಮದುವೆ ಮನೆ ಹಿರಿಯರಲ್ಲಿ ಇದು ಮಂಗಳ ಕಾಯ೯ ಬೂದು ಗು೦ಬಳ ಸರಿ ಅಲ್ಲ ಅಂದರೆ ಆಯಿತು ಬೂದುಗುಂಬಳಕ್ಕೆ ಗೇಟ್ ಪಾಸ್ ಸಿಕ್ಕ೦ತೆ ಈ ರೀತಿ ಶೂದ್ರರಲ್ಲಿ ಒಂದು ಭಯ ಹೊಕ್ಕಿದೆ. ಈಗ ಮುಸ್ಲಿಂ ಜನರು ಬಿರಿಯಾನಿ, ಗೀ ರೈಸ್ ಜೊತೆಯ ದಾಲ್ ನಲ್ಲಿ ಬೂದುಗುಂಬಳ ಹಾಕಲು ಶುರು ಮಾಡಿದ್ದಾರೆ. ಸೊರ್ಯಾಸೀಸ್ ಎ೦ಬ ತೀವ್ರ ಚಮ೯ದ ರೋಗದಿಂದ ಬಳಲುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬರು ಎಲ್ಲಾ ಚಿಕಿತ್ಸೆ ಮಾಡಿ ಹಣ ಸಮಯ ಹಾಳು ಮಾಡಿಕೊಂಡು ಹತಾಶರಾಗಿದ್ದರು ಆಗ ಆಯುವೆ೯ದ ವೈದ್ಯರ ಸಲಹೆಯಂತೆ ಬೂದುಗುಂಬಳದ ನೀರು ನಿತ್ಯ ಕುಡಿಯಲು ಪ್ರಾರಂಬಿಸಿ ರೋಗ ಮುಕ್ತರಾಗಿದ್ದಾರೆ.  29/November/2018  1995 ರ ಮ

#ಮುಂಗಾರು ಪತ್ರಿಕೆ ಮತ್ತು ವಡ್ಡಸೆ೯ ರಘುರಾಮ ಶೆಟ್ಟರ ಬೇಟಿಯ ನೆನಪು#

  ಮುಂಗಾರು ನೆನಪು ಹೇಗೆಂದರೆ ನನ್ನ ಅಣ್ಣ ಅದರ ವರದಿಗಾರ ಮತ್ತು ಆನಂದಪುರಂ (ಸಾಗರ ತಾ)ನ ಪತ್ರಿಕಾ ಏಜೆಂಟರೂ ಆಗಿದ್ದರು. ಕಾಗೋಡು ತಿಮ್ಮಪ್ಪಾ ಬಂಗಾರಪ್ಪ ಮುಖ್ಯಮಂತ್ರಿ ಆದಾಗ ಹೌಸಿಂಗ್ ಬೋಡ್೯ ಅಧ್ಯಕ್ಷರಾಗಿದ್ದರು ನಮ್ಮ ಊರಲ್ಲಿ ಪಾದರ್ ಜೋಸ್ ಎ೦ಬುವವರು ಗೋಕುಲ್ ಪಾರಂ ಅಂತ ಮಾಡಿದ್ದರು ಅಲ್ಲಿನ ಕೋರ್ ಕಮಿಟಿಯಲ್ಲಿ ನಾನು, ಪ್ರಪುಲ್ಲಚಂದ್ರರು, ಡಾ.ವಿಗ್ನೇಶ್ ಎಲ್ಲಾ ಇದ್ದೆವು, ಅಲ್ಲಿ ವಿದ್ಯುತ್ ಸಂಪಕ೯ ಮಾಡಲು ಟ್ರಾನ್ಸ ಪಾರಂ ಕೊರತೆಯಿ೦ದ ಆಗಿರಲಿಲ್ಲ ಹಾಗಾಗಿ ಸ್ಥಳಿಯ ಶಾಸಕರು ಆಗಿದ್ದ ಕಾಗೋಡರನ್ನ ಬೆಂಗಳೂರಿನ ಅವರ ಹೌಸಿಂಗ್ ಬೋಡ್೯ ಕಚೇರಿಗೆ ಹೋಗಿದ್ದೆ ಅಲ್ಲಿ ವಡ್ಡಸೆ೯ ಕೂಡ ಕುಳಿತಿದ್ದರು , ನನ್ನ ಮನವಿ ಕೇಳಿದ ಕಾಗೋಡು ಇದು ಕ್ರಿಶ್ಚಿಯನ್ ಸಂಸ್ಥೆ ಅಂತ ರಾಗ ಎಳಿದರು ಆಗ ನಾನು ಹಿಂದೂ ಸ೦ಸ್ಥೆಗಿಂತ ಹೆಚ್ಚಿನ ಸೇವಾ ಬಾವನೆ ಈ ಕ್ರಿಶ್ಚಿಯನ್ ಸಂಸ್ಥೆಗೆ ಇರುವುದರಿಂದ ತಕ್ಷಣ ಟ್ರಾನ್ಸ ಪಾಮ೯ರ್ ಕೊಡಿಸ ಬೇಕು ಅಂದಾಗ ವಡ್ಡಸೆ೯ಯವರು ಅದು ಸತ್ಯ ಎಂದು ಧ್ವನಿಗೂಡಿಸಿದಾಗ ಕಾಗೋಡು ಮೌನವಾಗಿದ್ದು ನೆನಪಾಯಿತು.

#ದಲಿತ ಶೂದ್ರರ ಕೈಯ ಸ್ಪಷ೯ದಲ್ಲಿ ಪೂಜಿಸುವ ಏಕೈಯ ದೇವಾಲಯ ಕನಾ೯ಟಕದ ಗೋಕಣ೯#

#ಕನಾ೯ಟಕ ರಾಜ್ಯದಲ್ಲಿ ಶೂದ್ರ ದಲಿತರು ದೇವರ ವಿಗ್ರಹ ಸ್ಪಷಿ೯ಸಿ ಪೂಜೆ ಮಾಡುವ ಏಕೈಕ ಪುರಾಣ ಪ್ರಸಿದ್ದ ಸ್ಥಳ ಗೋಕಣ೯#   ದೇವರಿಗೆ ಜಾತಿ ಇಲ್ಲ, ಜಾತಿಯತೆ ಇದ್ದಲ್ಲಿ ದೇವರಿಲ್ಲ ಹೀಗೆ ಎಷ್ಟೆಲ್ಲ ವೇದಾಂತ ಹೇಳಿದರು ಶೂದ್ರರು ಮತ್ತು ದಲಿತರು ದೇವಾಲಯಗಳಲ್ಲಿ ಜಾತಿ ಕಾರಣದಿಂದ ಅಸ್ಪ್ರಶ್ಯ ಆಚರಣೆಯಿ೦ದ ಅವಮಾನಿತರಾಗುತ್ತಿದ್ದಾರೆ.   ಹಿಂದು ನಾವೆಲ್ಲ ಒಂದು ಎನ್ನುವ ಸ್ಲೋಗನ್ ಬಗ್ಗೆ ಅನುಭವಿಸಿದವರಿಗೆಲ್ಲ ಗೊತ್ತಿದೆ.   ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕಣ೯ದ ಆತ್ಮಲಿಂಗ  ಮಹಬಲೇಶ್ವರ ಲಂಕಾಸುರ ರಾವಣನಿಂದ ಬಂದದ್ದು, ಇದನ್ನ ರಾವಣನಿಂದ ಗಣಪತಿ ತಪ್ಪಿಸಿದ ಆಗ ಸಿಟ್ಟಿಗೆದ್ದ ಹತಾಷ ರಾವಣ ಎಂಬುದು ಅದನ್ನ ಕೀಳಲು ಪ್ರಯತ್ನಿಸಿದಾಗ ಒಂದು ತುಂಡು ಮುರುಡೇಶ್ವರದಲ್ಲಿ ಬಿತ್ತು ಎಂದು ಹೇಳುತ್ತಾರೆ. ಏನೇ ಆಗಲಿ ಇದು ನಾಡಿನ ಶೂದ್ರ ದಲಿತರ ಕೈ ಸ್ಪಶ೯ದಿOದ ಪೂಜಿಸಲ್ಪಡುವ ಜಾತಿಯತೆ ಇಲ್ಲದ ಏಕೈಕ ದೇವ ಸ್ಥಾನ ಇದು ಸಕಾ೯ರದ ಉಸ್ತುವಾರಿಗೆ ಈಗ ಬಂದಿದೆ ಹಾಗೆ ಮುಂದುವರಿಯಲಿ ಎಂದು ನನ್ನ ಹಾರೈಕೆ. ಇದನ್ನ ಬೆಂಬಲಿಸುವವರನ್ನ ಸ್ವಾಗತಿಸುತ್ತೇನೆ ಮತ್ತು  ವಿರೋದಿಸುವವರು ಸಕಾರಣ ನೀಡಬೇಕಾಗಿಯೂ ನಿನOತಿ.

# ಹೆಗ್ಗೋಡಿನ ಚರಕ ಎಂಬ ಖಾದಿ ಸಂಸ್ಥೆ ಹುಟ್ಟು ಹಾಕಿ ದಲಿತ ಮಹಿಳೆಯರನ್ನ ತರಬೇತಿ ನೀಡಿ ಚರಕ ಎಂಬ ಬ್ರಾಂಡ್ ಪ್ರಸಿದ್ಧಿಗೊಳಿಸಿದ ರಂಗ ಕಮಿ೯ ಪ್ರಸನ್ನ#

#ಹೆಗ್ಗೋಡಿನ ಚರಕ ಸಂಸ್ಥೆಯ ಪ್ರಸನ್ನ#      ನಾನು ಜಿಲ್ಲಾ ಪಂಚಾಯಿತಿ ಸದಸ್ಯನಾಗಿದ್ದಾಗ ಇವರು ಕೆ.ವಿ.ಸುಬ್ಬಣ್ಣರ ಮೇಲೆ ಯಾವುದೋ ಬಿನ್ನಾಭಿಪ್ರಾಯದಿ೦ದ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿದ್ದಾಗ ಹೆಗ್ಗೋಡು ಸಮೀಪದ ಸಹಕಾರಿ ಬಂದು ಮತ್ತಿಕೊಪ್ಪದ ಹರನಾಥರಾಯರು ಕರೆದು ಕೊಂಡು ಹೋಗಿದ್ದರು ನನ್ನನ್ನ. ನಂತರ ಇವರನ್ನ ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಥಿಯೇಟರ್ ನಲ್ಲಿ ಇವರು ಮುಖ್ಯಸ್ಥರಾಗಿದ್ದಾಗ ಬೇಟಿ ಆಗಿದ್ದೆ, ಅವತ್ತು ಇವರು ಅಲ್ಲಿ ಲೈಲಾ ಮೇರಿ ಜಾನ್ ಎಂಬ ನಾಟಕದ ನಿದೇ೯ಶನ ಮಾಡುತ್ತಿದ್ದರು. ನಂತರ ಚರಕ ಸಂಸ್ಥೆಗೆ ಜಿಲ್ಲಾ ಪಂಚಾಯತ್ ನಿಂದ ಸಹಾಯಧನ ಬಿಡುಗಡೆ ವಿಳಂಬ ಆಗುತ್ತಿದ್ದರಿಂದ ಅನೇಕ ಸಾರಿ ನನ್ನ ಮನೆಗೆ ಬಂದಿದ್ದರು ಒಟ್ಟಿಗೆ ಊಟ ಮಾಡಿದ್ದೆವು ನಂತರ ಇವರು ನಾನು ಎದುರಾ ಬದುರಾ ಆದರೂ ನನ್ನ ಗುರುತು ಅವರಿಗೆ ಸಿಗಲಿಲ್ಲ!?