Skip to main content

# ಬೂದು ಗುಂಬಳ ಬಹು ಉಪಯೋಗಿ ಮತ್ತು ಔಷದಿ#

    ಬೂದು ಗುಂಬಳದಲ್ಲಿ ಒಳಬಾಗ ತುರಿದು ಹಿಂಡಿ ನೀರನ್ನ ಕುಡಿದರೆ ಚಮ೯ ರೋಗ ಮತ್ತು ನರ ಸಂಬಂದಿ ರೋಗಕ್ಕೆ ಮದ್ದ೦ತೆ, ನೀರು ಹಿಂಡಿದ ನಂತರದ ತುರಿಯಿ೦ದ ಹಲ್ವಾ ಮಾಡಿ ಹಾಗು ಸಿಪ್ಪೆಯನ್ನ ಸಂಡಿಗೆ ಮಾಡುವ ಉತ್ತರ ಭಾರತದ ಜನತೆ ಇದರ ಪೂಣ೯ ಉಪಯೋಗ ಕಂಡಿದ್ದಾರೆ.
  ನಮ್ಮ ಭಾಗದಲ್ಲಿ ಬೂದುಗುಂಬಳ ಅಂದರೆ ಭಾರೀ ಭಯ, ಭಕ್ತಿ. ಇದು ಮೇಲ್ ಜಾತಿಯವರು ಮಾತ್ರ ಬಳಸುವ ಪದಾಥ೯ ಅಂತ ಆಗಿಬಿಟ್ಟಿದೆ.
ನಮ್ಮ ಕಲ್ಯಾಣ ಮಂಟಪದಲ್ಲಿ ಬೂದುಗುಂಬಳ ಮದುವೆಯಲ್ಲಿ ಬಳಸುವ ವಿಚಾರದಲ್ಲಿ ಒಳ್ಳೆ ಚಚೆ೯ ಆಗುತ್ತೆ, ನಾನು ಬೂದುಗುoಬಳ ಕಡಿಮೆ ದರ ಅಂತ ಬರೆಸಿದರೆ, ಅಡುಗೆ ಭಟ್ಟರು ಒಂದು ಹುಳ ಬಿಟ್ಟಿರುತ್ತಾರೆ ಇದನ್ನ ನೀವೆಲ್ಲ ಬಳಸುವಂತಿಲ್ಲ ಅಂತ ಆದರೂ ಅವರ ಮಾತು ಕೇಳದೆ ಬಳಸಲು ತೀಮಾ೯ನಿಸಿದರೆ ಮದುವೆ ಮನೆ ಹಿರಿಯರಲ್ಲಿ ಇದು ಮಂಗಳ ಕಾಯ೯ ಬೂದು ಗು೦ಬಳ ಸರಿ ಅಲ್ಲ ಅಂದರೆ ಆಯಿತು ಬೂದುಗುಂಬಳಕ್ಕೆ ಗೇಟ್ ಪಾಸ್ ಸಿಕ್ಕ೦ತೆ ಈ ರೀತಿ ಶೂದ್ರರಲ್ಲಿ ಒಂದು ಭಯ ಹೊಕ್ಕಿದೆ.
ಈಗ ಮುಸ್ಲಿಂ ಜನರು ಬಿರಿಯಾನಿ, ಗೀ ರೈಸ್ ಜೊತೆಯ ದಾಲ್ ನಲ್ಲಿ ಬೂದುಗುಂಬಳ ಹಾಕಲು ಶುರು ಮಾಡಿದ್ದಾರೆ.
ಸೊರ್ಯಾಸೀಸ್ ಎ೦ಬ ತೀವ್ರ ಚಮ೯ದ ರೋಗದಿಂದ ಬಳಲುತ್ತಿದ್ದ ನನ್ನ ಕ್ಲಾಸ್ ಮೇಟ್ ಒಬ್ಬರು ಎಲ್ಲಾ ಚಿಕಿತ್ಸೆ ಮಾಡಿ ಹಣ ಸಮಯ ಹಾಳು ಮಾಡಿಕೊಂಡು ಹತಾಶರಾಗಿದ್ದರು ಆಗ ಆಯುವೆ೯ದ ವೈದ್ಯರ ಸಲಹೆಯಂತೆ ಬೂದುಗುಂಬಳದ ನೀರು ನಿತ್ಯ ಕುಡಿಯಲು ಪ್ರಾರಂಬಿಸಿ ರೋಗ ಮುಕ್ತರಾಗಿದ್ದಾರೆ.

 29/November/2018

 1995 ರ ಮೊದಲು ಹೊಸದಾಗಿ ಕೃಷಿ ಮಾಡುವ ಹುಮ್ಮಸ್ಸು ಹಾಗಾಗಿ ಸಿಗುತ್ತಿದ್ದ ಮಾಹಿತಿ, ಗಾಳಿ ಸುದ್ದಿಗಳ ಕೇಳಿ ದೊಡ್ಡ ಪ್ರಮಾಣದಲ್ಲಿ ಬೂದಗುಂಬಳ ಬೆಳೆಯಲು ಪ್ರಯತ್ನಿಸಿದ್ದೆ.

  ಬೆಳೆ ಚೆನ್ನಾಗಿ ಬಂತು ಆದರೆ ಲೋಡುಗಟ್ಟಲೆ ಆಗಲಿಲ್ಲ, ಒಂದೆರೆಡು ಮೂರು ಟ್ರಾಕ್ಟರ್ ಅಷ್ಟು ಆಯಿತು.

  ಆದರೆ ಇದನ್ನ ಖರೀದಿಸುವವರು ಯಾರು ಸಿಗಲಿಲ್ಲ, ಬೇಸಿಗೆ ಬಿಸುಲು ಪ್ರಾರಂಭವಾಗಿ ಬಳ್ಳಿ ಒಣಗಲು ಪ್ರಾರಂಭವಾದ್ದರಿಂದ ಕೊಯಿಲು ಮಾಡಿ ಗದ್ದೆಮನೆಯಲ್ಲಿ ಇಟ್ಟೆ.

  ಎಲ್ಲರಿಗೂ ಉಚಿತವಾಗಿ ತೆಗೆದು ಕೊಂಡು ಹೋಗಿ ಅಂದರೂ ಆ ವಷ೯ ಎಲ್ಲರ ಮನೇಲೂ ಈ ಪಸಲು ಹೆಚ್ಚು ಅಂತ ತೆಗೆದುಕೊಳ್ಳಲಿಲ್ಲ.

 ನಂತರ ಟ್ರಾಕ್ಟರ್ ಮಾಡಿಗೆ ಮಾಡಿ ನಮ್ಮ ರೈಸ್ ಮಿಲ್ ನಲ್ಲಿ ಹಾಕಿದೆ, ಅಕ್ಕಿ ಮಾಡಿಸಲು ಬಂದ ಎಲ್ಲರಿಗೂ ಕೊಡಲು ಹೇಳಿದೆ.

 ಆದರೆ ಇದನ್ನ ಉಚಿತವಾಗಿ ಸ್ವೀಕರಿಸಲು ಅವರಾರು ಸಿದ್ದರಿಲ್ಲ, ಹತ್ತೊ ಇಪ್ಪತ್ತೊ ಪೈಸಾ ಕೊಟ್ಟು ಒಯ್ ಬೇಕಾಗಿ ವಿನಂತಿ ಮಾಡಿ ಒಂದು 3 ತಿಂಗಳಲ್ಲಿ ಖಾಲಿ ಮಾಡಿದೆ.

  ಡಬ್ಬಿಗೆ ಹಾಕಿದ ಪೈಸೆಗಳು ನೂರು ರೂಪಾಯಿಗೆ ಕೂಡ ತಲುಪಲಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...