#ಕನಾ೯ಟಕ ರಾಜ್ಯದಲ್ಲಿ ಶೂದ್ರ ದಲಿತರು ದೇವರ ವಿಗ್ರಹ ಸ್ಪಷಿ೯ಸಿ ಪೂಜೆ ಮಾಡುವ ಏಕೈಕ ಪುರಾಣ ಪ್ರಸಿದ್ದ ಸ್ಥಳ ಗೋಕಣ೯#
ದೇವರಿಗೆ ಜಾತಿ ಇಲ್ಲ, ಜಾತಿಯತೆ ಇದ್ದಲ್ಲಿ ದೇವರಿಲ್ಲ ಹೀಗೆ ಎಷ್ಟೆಲ್ಲ ವೇದಾಂತ ಹೇಳಿದರು ಶೂದ್ರರು ಮತ್ತು ದಲಿತರು ದೇವಾಲಯಗಳಲ್ಲಿ ಜಾತಿ ಕಾರಣದಿಂದ ಅಸ್ಪ್ರಶ್ಯ ಆಚರಣೆಯಿ೦ದ ಅವಮಾನಿತರಾಗುತ್ತಿದ್ದಾರೆ.
ಹಿಂದು ನಾವೆಲ್ಲ ಒಂದು ಎನ್ನುವ ಸ್ಲೋಗನ್ ಬಗ್ಗೆ ಅನುಭವಿಸಿದವರಿಗೆಲ್ಲ ಗೊತ್ತಿದೆ.
ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಗೋಕಣ೯ದ ಆತ್ಮಲಿಂಗ ಮಹಬಲೇಶ್ವರ ಲಂಕಾಸುರ ರಾವಣನಿಂದ ಬಂದದ್ದು, ಇದನ್ನ ರಾವಣನಿಂದ ಗಣಪತಿ ತಪ್ಪಿಸಿದ ಆಗ ಸಿಟ್ಟಿಗೆದ್ದ ಹತಾಷ ರಾವಣ ಎಂಬುದು ಅದನ್ನ ಕೀಳಲು ಪ್ರಯತ್ನಿಸಿದಾಗ ಒಂದು ತುಂಡು ಮುರುಡೇಶ್ವರದಲ್ಲಿ ಬಿತ್ತು ಎಂದು ಹೇಳುತ್ತಾರೆ.
ಏನೇ ಆಗಲಿ ಇದು ನಾಡಿನ ಶೂದ್ರ ದಲಿತರ ಕೈ ಸ್ಪಶ೯ದಿOದ ಪೂಜಿಸಲ್ಪಡುವ ಜಾತಿಯತೆ ಇಲ್ಲದ ಏಕೈಕ ದೇವ ಸ್ಥಾನ ಇದು ಸಕಾ೯ರದ ಉಸ್ತುವಾರಿಗೆ ಈಗ ಬಂದಿದೆ ಹಾಗೆ ಮುಂದುವರಿಯಲಿ ಎಂದು ನನ್ನ ಹಾರೈಕೆ.
ಇದನ್ನ ಬೆಂಬಲಿಸುವವರನ್ನ ಸ್ವಾಗತಿಸುತ್ತೇನೆ ಮತ್ತು ವಿರೋದಿಸುವವರು ಸಕಾರಣ ನೀಡಬೇಕಾಗಿಯೂ ನಿನOತಿ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment