Skip to main content

#Blog number 1528.ಕೊರಾನಾ ಎರಡನೆ ಅಲೆ (16-ಮೇ -2021)

#ಕೊರಾನಾ_ಮೊದಲ_ಅಲೆ_ಕಳೆದು_ಎರಡನೆ_ಅಲೆಯಲ್ಲಿ.
#ಕೊರಾನಾಕ್ಕೆ_ಹೆದರದ_ಪೋಲಿಸರಿಗೆ_ಹೆದರುವ_ಮತ್ತು_ಕೊರಾನಾ_ಎಲ್ಲಿ_ಎನ್ನುವ_ನನ್ನ_ಊರ_ಜನ.


  ಕಳೆದ ವರ್ಷ ಮಾರ್ಚ ತಿಂಗಳಿಂದ ಕೊರಾನಾ ಮೊದಲ ಅಲೆಯಿಂದ ಇವತ್ತಿನವರೆಗೆ ಆಗುತ್ತಿರುವ ಸಾವು ನೋವುಗಳು, ಅವರ ಕುಟುಂಬದ ದುಃಖ ದುಮ್ಮಾನಗಳು ನಿತ್ಯ ನೋಡುತ್ತಾ ಕುಳಿತಂತೆ ಇವತ್ತಿನ ಬೆಳಿಗ್ಗೆ ಕೂಡ ಕುಳಿತಿದ್ದಾಗಲೆ ಬೆಂಗಳೂರಿನ ಸಂಬಂದಿಕ ಮಹಿಳೆ ಒಬ್ಬರು ಕೊರಾನಾದಿಂದ ಮೃತರಾದ ಸುದ್ದಿ ಬಂದಿತು ಅವರ ಮಗನಿಗೆ ಸಂಪ್ರದಾಯದಂತೆ ಸಂತಾಪ ಕಳಿಸಿದೆ.
  ಆಗಲೇ ಮನೆಯ ಗೇಟಿನ ಎದರು ವಕ್೯ ಶಾಪ್ ಮಾಲಿಕರು ಕುತ್ತಿಗೆಗೆ ಮಾಸ್ಕ್ ಸಿಗಿಸಿಕೊಂಡು ಕಾರಿಂದ ಇಳಿದರು, ಗೇಟ್ ತೆರೆಯಲು ಪ್ರಯತ್ನಿಸಿ ಅದು ಬೀಗ ಹಾಕಿದ್ದು ನೋಡಿ, ಬೀಗ ತೆರೆಯಲು ಹೇಳಿದರು ನಾನು ಬೀಗ ತೆರೆಯಲಾರದ ಬಗ್ಗೆ ವಿವರಿಸಿ ಅವರ ಬಿಲ್ ನ್ನು ಗೇಟಿಗೆ ಅಳವಡಿಸಿರುವ ಅಂಚೆ, ವೃತ್ತಪತ್ರಿಕೆ ಇಡುವ ಪೈಪ್ ನಲ್ಲಿ ಇಡಲು ಹೇಳಿದೆ ಇದು ಅವರಿಗೆ ಪಥ್ಯ ಆಗಲಿಲ್ಲ ಆಗ ಅವರು ಕೊರಾನಾ ಪರಾನಾ ಎಲ್ಲಾ ಸುಳ್ಳು ಅಂದರು!?
   ಸುಳ್ಳು ಹೇಗೆ ಮರಾಯರ ನಿಮ್ಮ ಕೇರಿಯಲ್ಲಿ ಮೊನ್ನೆ ಮಾಜಿ ಗ್ರಾ.ಪಂ.ಸದಸ್ಯೆ ಸತ್ತದ್ದಾದರು ಹೇಗೆ ಅಂದೆ, ಓ ಅದು ಬೇರೆ ಕಾಯಿಲೆ ಅಂದರು, ಆಕೆ ಪತಿ ಆಸ್ಪತ್ರೆಯಲ್ಲಿ ಈಗಲೂ ಇದ್ದಾರಲ್ಲ ಅಂದರೆ ಅದಕ್ಕೂ ಇನ್ನೆಂತದೋ ಕಾರಣ.
   ಹೀಗೆ ನಮ್ಮ ಹಳ್ಳಿಗಳಲ್ಲಿ ಇಡೀ ದೇಶದಲ್ಲಿ ಜನ ಸಾಯುತ್ತಿದ್ದರೂ, ನಿತ್ಯ ಲೆಖ್ಖಕ್ಕೆ ಸಿಗದಷ್ಟು ಸಾರಿ ಸಾಗರದಿಂದ ಶಿವಮೊಗ್ಗಕ್ಕೆ ಸೈರನ್ ಬಾರಿಸುತ್ತಾ ಅಂಬ್ಯೂಲೆನ್ಸ್ ಗಳು ಸಾಗುತ್ತಿದ್ದರು ಕರೋನ ಸುಳ್ಳು ಅಂತಲೇ ವಾದಿಸುತ್ತಾರೆ.
   ಮಾಸ್ಕ್ ಯಾಕೆ ಹಾಕುತ್ತೀರೆಂದರೆ "ಪೋಲಿಸರು ದಂಡ ಹಾಕುತ್ತಾರೆ" ಅನ್ನುತ್ತಾರೆ, "ಈ ವರ್ಷ ಪರವಾಗಿಲ್ಲ ಯಡೂರಪ್ಪ ಬ್ರಾಂಡಿ ಶಾಪ್ ಓಪನ್ ಕೊಟ್ಟಿದ್ದಾರೆ " ಅಂತಾರೆ.
  ಇನ್ನೂ ಕೆಲ ಗೆಳೆಯರು ಮೋದಿ, ಅಮಿತ್ ಷಾ ಮತ್ತು ಯಡೂರಪ್ಪರ ಲೋಪ ಪಟ್ಟಿ ಮಾಡುತ್ತಾರೆ, ಕಳೆದ ವರ್ಷದಿಂದ ನನ್ನ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿದ್ದಕ್ಕೆ ನಾನು ಅದರಂತೆ ಪಾಲಿಸಿದ್ದಕ್ಕೆ ಗೇಲಿ ಮಾಡಿದ ಗೆಳೆಯರೂ ಅನೇಕರು ಅದರಲ್ಲಿ ಕೆಲವರ ಮನ ಪರಿವರ್ತನೆ ಆಗಿ ಮಾಸ್ಕ್ ಧರಿಸುತ್ತಿದ್ದಾರೆ.
   ಅದ್ಯಾರು ಅ0ತಾ ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ "ವ್ಯಾಕ್ಸಿನ್ ತಗೊಂಡರೆ ಆರು ತಿಂಗಳು ಮಧ್ಯ ಸೇವನೆ ಮಾಡುವಂತಿಲ್ಲ" ಎಂಬ ಘೋಷಣೆ ಇದರಿಂದ ಪ್ರಾರ೦ಭದ ದಿನದಲ್ಲಿ ವ್ಯಾಕ್ಸಿನ್ ಕೇಂದ್ರದವರು ಜನರಿಗೆ ಕಾಯಬೇಕಿತ್ತು ಈಗ ಜನ ಜಾಸ್ತಿ ಬರುತ್ತಾ ಇದಾರೆ ಆದರೆ ವ್ಯಾಕ್ಸಿನ್ ಗೆ ಕಾಯಬೇಕಾಗಿದೆ.
  ಈಗಲೂ ತಿರುಗಾಟದ ಚಟದ ಮನೆ ಮಕ್ಕಳು ಊರೆಲ್ಲಾ ತಿರುಗಾಡಿ ಬಂದು ಮನೇಲಿರುವ ಹಿರಿಯರಿಗೆ ಸೊಂಕು ಹರಡುತ್ತಿದ್ದಾರೆ.
  ಮನೆಯ ಬಾಗಿಲು ತೆರೆದಿಡುತ್ತಾರೆ ಪರಿಚಯಸ್ಥರು, ಸಂಬಂದಿಗಳನ್ನು ನಡು ಮನೆಗೆ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದಾರೆ, ಈ ಆಪತ್ಕಾಲದಲ್ಲಿ ಯಾರನ್ನೂ ಮನೆಗೆ ಕರೆಯಬೇಡಿ ನೀವೂ ಬೇರೆಯವರ ಮನೆಗೆ ಹೋಗಬೇಡಿ ಅಂದರೆ "ನಮ್ಮ ನೆಂಟರಿಗೆ ಬಿಟ್ಟು ಬೇರೆಯವರಿಗೆ ದೂರ ಇಟ್ಟಿದ್ದೇವೆ" ಅಂತಾರೆ, ಕೊರಾನಾ ನೆಂಟರಿಂದಲೂ ಬರುತ್ತದೆ೦ದರೆ ನಂಬುವುದಿಲ್ಲ.
  ಹೋದ ವರ್ಷ 25 ಕಿ.ಮಿ. ಆಚೆ ಕೊರೊನಾ ಪಾಸಿಟಿವ್ ಅಂದರೆ ಹೆದರುತ್ತಿದ್ದವರೆಲ್ಲ ಈಗ ಊರಲ್ಲಿ ಸತ್ತರೂ ಭಯ ಇಲ್ಲದವರಾಗಿದ್ದಾರೆ, ಸರ್ಕಾರ ಬೆಂಗಳೂರಿನ ಕೊಳಗೇರಿ ವಾಸಿಗಳಿಗೆ ಮತ್ತು ರಾಜ್ಯದ ಗ್ರಾಮೀಣ ಪ್ರದೇಶದವರಿಗೆ ಹೊಂ ಕ್ವಾರೆಂಟೈನ್ ಮಾಡಲು ಅವಕಾಶ ಇಲ್ಲ ಅಂತ ಅದೇಶ  ಜಾರಿ ಮಾಡಿದೆ, ಸರ್ಕಾರದ ಕ್ವಾರೆಂಟೈನ್ ಕೇಂದ್ರ ಸಾಗರದ ಬಂದಗದ್ದೆಯ ಮೊರಾರ್ಜಿ ದೇಸಾಯಿ ಶಾಲೆಗೆ ಇವತ್ತು ಸಾಗರದ ವಕೀಲೋರ್ವರು ಬೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಬಗ್ಗೆ ಸಚಿತ್ರ ವರದಿ ಮಾಡಿದ್ದಾರೆ.
   ಕಣ್ಣಿಗೆ ಕಾಣದ ವೈರಸ್‌ ಹರಡದಂತೆ ಮುಂಜಾಗೃತೆ ವಹಿಸಿ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ ಆದರೂ #ಕೊರಾನಾ_ಎಲ್ಲಿ? ಎಂದು ಮುರ್ಖರಂತೆ ಪ್ರಶ್ನಿಸುವವರಿಗೆ ಬುದ್ದಿ ಹೇಳುವವರಾರು?

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ