Skip to main content

#Blog number 1528.ಕೊರಾನಾ ಎರಡನೆ ಅಲೆ (16-ಮೇ -2021)

#ಕೊರಾನಾ_ಮೊದಲ_ಅಲೆ_ಕಳೆದು_ಎರಡನೆ_ಅಲೆಯಲ್ಲಿ.
#ಕೊರಾನಾಕ್ಕೆ_ಹೆದರದ_ಪೋಲಿಸರಿಗೆ_ಹೆದರುವ_ಮತ್ತು_ಕೊರಾನಾ_ಎಲ್ಲಿ_ಎನ್ನುವ_ನನ್ನ_ಊರ_ಜನ.


  ಕಳೆದ ವರ್ಷ ಮಾರ್ಚ ತಿಂಗಳಿಂದ ಕೊರಾನಾ ಮೊದಲ ಅಲೆಯಿಂದ ಇವತ್ತಿನವರೆಗೆ ಆಗುತ್ತಿರುವ ಸಾವು ನೋವುಗಳು, ಅವರ ಕುಟುಂಬದ ದುಃಖ ದುಮ್ಮಾನಗಳು ನಿತ್ಯ ನೋಡುತ್ತಾ ಕುಳಿತಂತೆ ಇವತ್ತಿನ ಬೆಳಿಗ್ಗೆ ಕೂಡ ಕುಳಿತಿದ್ದಾಗಲೆ ಬೆಂಗಳೂರಿನ ಸಂಬಂದಿಕ ಮಹಿಳೆ ಒಬ್ಬರು ಕೊರಾನಾದಿಂದ ಮೃತರಾದ ಸುದ್ದಿ ಬಂದಿತು ಅವರ ಮಗನಿಗೆ ಸಂಪ್ರದಾಯದಂತೆ ಸಂತಾಪ ಕಳಿಸಿದೆ.
  ಆಗಲೇ ಮನೆಯ ಗೇಟಿನ ಎದರು ವಕ್೯ ಶಾಪ್ ಮಾಲಿಕರು ಕುತ್ತಿಗೆಗೆ ಮಾಸ್ಕ್ ಸಿಗಿಸಿಕೊಂಡು ಕಾರಿಂದ ಇಳಿದರು, ಗೇಟ್ ತೆರೆಯಲು ಪ್ರಯತ್ನಿಸಿ ಅದು ಬೀಗ ಹಾಕಿದ್ದು ನೋಡಿ, ಬೀಗ ತೆರೆಯಲು ಹೇಳಿದರು ನಾನು ಬೀಗ ತೆರೆಯಲಾರದ ಬಗ್ಗೆ ವಿವರಿಸಿ ಅವರ ಬಿಲ್ ನ್ನು ಗೇಟಿಗೆ ಅಳವಡಿಸಿರುವ ಅಂಚೆ, ವೃತ್ತಪತ್ರಿಕೆ ಇಡುವ ಪೈಪ್ ನಲ್ಲಿ ಇಡಲು ಹೇಳಿದೆ ಇದು ಅವರಿಗೆ ಪಥ್ಯ ಆಗಲಿಲ್ಲ ಆಗ ಅವರು ಕೊರಾನಾ ಪರಾನಾ ಎಲ್ಲಾ ಸುಳ್ಳು ಅಂದರು!?
   ಸುಳ್ಳು ಹೇಗೆ ಮರಾಯರ ನಿಮ್ಮ ಕೇರಿಯಲ್ಲಿ ಮೊನ್ನೆ ಮಾಜಿ ಗ್ರಾ.ಪಂ.ಸದಸ್ಯೆ ಸತ್ತದ್ದಾದರು ಹೇಗೆ ಅಂದೆ, ಓ ಅದು ಬೇರೆ ಕಾಯಿಲೆ ಅಂದರು, ಆಕೆ ಪತಿ ಆಸ್ಪತ್ರೆಯಲ್ಲಿ ಈಗಲೂ ಇದ್ದಾರಲ್ಲ ಅಂದರೆ ಅದಕ್ಕೂ ಇನ್ನೆಂತದೋ ಕಾರಣ.
   ಹೀಗೆ ನಮ್ಮ ಹಳ್ಳಿಗಳಲ್ಲಿ ಇಡೀ ದೇಶದಲ್ಲಿ ಜನ ಸಾಯುತ್ತಿದ್ದರೂ, ನಿತ್ಯ ಲೆಖ್ಖಕ್ಕೆ ಸಿಗದಷ್ಟು ಸಾರಿ ಸಾಗರದಿಂದ ಶಿವಮೊಗ್ಗಕ್ಕೆ ಸೈರನ್ ಬಾರಿಸುತ್ತಾ ಅಂಬ್ಯೂಲೆನ್ಸ್ ಗಳು ಸಾಗುತ್ತಿದ್ದರು ಕರೋನ ಸುಳ್ಳು ಅಂತಲೇ ವಾದಿಸುತ್ತಾರೆ.
   ಮಾಸ್ಕ್ ಯಾಕೆ ಹಾಕುತ್ತೀರೆಂದರೆ "ಪೋಲಿಸರು ದಂಡ ಹಾಕುತ್ತಾರೆ" ಅನ್ನುತ್ತಾರೆ, "ಈ ವರ್ಷ ಪರವಾಗಿಲ್ಲ ಯಡೂರಪ್ಪ ಬ್ರಾಂಡಿ ಶಾಪ್ ಓಪನ್ ಕೊಟ್ಟಿದ್ದಾರೆ " ಅಂತಾರೆ.
  ಇನ್ನೂ ಕೆಲ ಗೆಳೆಯರು ಮೋದಿ, ಅಮಿತ್ ಷಾ ಮತ್ತು ಯಡೂರಪ್ಪರ ಲೋಪ ಪಟ್ಟಿ ಮಾಡುತ್ತಾರೆ, ಕಳೆದ ವರ್ಷದಿಂದ ನನ್ನ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯ ಮಾಡಿದ್ದಕ್ಕೆ ನಾನು ಅದರಂತೆ ಪಾಲಿಸಿದ್ದಕ್ಕೆ ಗೇಲಿ ಮಾಡಿದ ಗೆಳೆಯರೂ ಅನೇಕರು ಅದರಲ್ಲಿ ಕೆಲವರ ಮನ ಪರಿವರ್ತನೆ ಆಗಿ ಮಾಸ್ಕ್ ಧರಿಸುತ್ತಿದ್ದಾರೆ.
   ಅದ್ಯಾರು ಅ0ತಾ ಸುದ್ದಿ ಹಬ್ಬಿಸಿದರೋ ಗೊತ್ತಿಲ್ಲ "ವ್ಯಾಕ್ಸಿನ್ ತಗೊಂಡರೆ ಆರು ತಿಂಗಳು ಮಧ್ಯ ಸೇವನೆ ಮಾಡುವಂತಿಲ್ಲ" ಎಂಬ ಘೋಷಣೆ ಇದರಿಂದ ಪ್ರಾರ೦ಭದ ದಿನದಲ್ಲಿ ವ್ಯಾಕ್ಸಿನ್ ಕೇಂದ್ರದವರು ಜನರಿಗೆ ಕಾಯಬೇಕಿತ್ತು ಈಗ ಜನ ಜಾಸ್ತಿ ಬರುತ್ತಾ ಇದಾರೆ ಆದರೆ ವ್ಯಾಕ್ಸಿನ್ ಗೆ ಕಾಯಬೇಕಾಗಿದೆ.
  ಈಗಲೂ ತಿರುಗಾಟದ ಚಟದ ಮನೆ ಮಕ್ಕಳು ಊರೆಲ್ಲಾ ತಿರುಗಾಡಿ ಬಂದು ಮನೇಲಿರುವ ಹಿರಿಯರಿಗೆ ಸೊಂಕು ಹರಡುತ್ತಿದ್ದಾರೆ.
  ಮನೆಯ ಬಾಗಿಲು ತೆರೆದಿಡುತ್ತಾರೆ ಪರಿಚಯಸ್ಥರು, ಸಂಬಂದಿಗಳನ್ನು ನಡು ಮನೆಗೆ ಕರೆದು ಅತಿಥಿ ಸತ್ಕಾರ ಮಾಡುತ್ತಿದ್ದಾರೆ, ಈ ಆಪತ್ಕಾಲದಲ್ಲಿ ಯಾರನ್ನೂ ಮನೆಗೆ ಕರೆಯಬೇಡಿ ನೀವೂ ಬೇರೆಯವರ ಮನೆಗೆ ಹೋಗಬೇಡಿ ಅಂದರೆ "ನಮ್ಮ ನೆಂಟರಿಗೆ ಬಿಟ್ಟು ಬೇರೆಯವರಿಗೆ ದೂರ ಇಟ್ಟಿದ್ದೇವೆ" ಅಂತಾರೆ, ಕೊರಾನಾ ನೆಂಟರಿಂದಲೂ ಬರುತ್ತದೆ೦ದರೆ ನಂಬುವುದಿಲ್ಲ.
  ಹೋದ ವರ್ಷ 25 ಕಿ.ಮಿ. ಆಚೆ ಕೊರೊನಾ ಪಾಸಿಟಿವ್ ಅಂದರೆ ಹೆದರುತ್ತಿದ್ದವರೆಲ್ಲ ಈಗ ಊರಲ್ಲಿ ಸತ್ತರೂ ಭಯ ಇಲ್ಲದವರಾಗಿದ್ದಾರೆ, ಸರ್ಕಾರ ಬೆಂಗಳೂರಿನ ಕೊಳಗೇರಿ ವಾಸಿಗಳಿಗೆ ಮತ್ತು ರಾಜ್ಯದ ಗ್ರಾಮೀಣ ಪ್ರದೇಶದವರಿಗೆ ಹೊಂ ಕ್ವಾರೆಂಟೈನ್ ಮಾಡಲು ಅವಕಾಶ ಇಲ್ಲ ಅಂತ ಅದೇಶ  ಜಾರಿ ಮಾಡಿದೆ, ಸರ್ಕಾರದ ಕ್ವಾರೆಂಟೈನ್ ಕೇಂದ್ರ ಸಾಗರದ ಬಂದಗದ್ದೆಯ ಮೊರಾರ್ಜಿ ದೇಸಾಯಿ ಶಾಲೆಗೆ ಇವತ್ತು ಸಾಗರದ ವಕೀಲೋರ್ವರು ಬೇಟಿ ನೀಡಿದಾಗ ಅಲ್ಲಿನ ಅವ್ಯವಸ್ಥೆ ಬಗ್ಗೆ ಸಚಿತ್ರ ವರದಿ ಮಾಡಿದ್ದಾರೆ.
   ಕಣ್ಣಿಗೆ ಕಾಣದ ವೈರಸ್‌ ಹರಡದಂತೆ ಮುಂಜಾಗೃತೆ ವಹಿಸಿ ಜೀವ ಉಳಿಸಿಕೊಳ್ಳುವ ಅನಿವಾರ್ಯತೆ ಎಲ್ಲರಿಗೂ ಇದೆ ಆದರೂ #ಕೊರಾನಾ_ಎಲ್ಲಿ? ಎಂದು ಮುರ್ಖರಂತೆ ಪ್ರಶ್ನಿಸುವವರಿಗೆ ಬುದ್ದಿ ಹೇಳುವವರಾರು?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...