Skip to main content

Blog number 862, ಪಶ್ಚಿಮ ಘಟ್ಟದ ಜನವಸತಿ ಕೇಂದ್ರಗಳು ವಿಸ್ತಾರವಾದಂತೆ ಒ0ದು ಕಾಲದಲ್ಲಿ ಸಮೃದ್ಧವಾಗಿದ್ದ ಕವಳಿಕಾಯಿ ಪೂದೆಗಳು ಕಣ್ಮರೆ ಆಗಲು ಕಾರಣವೇನು? ನೈಸಗಿ೯ಕವಾಗಿ ದೊರೆಯುವ ಕವಳಿಕಾಯಿ ಮತ್ತು ರಸವತ್ತಾದ ಕಪ್ಪು ದ್ರಾಕ್ಷಿಯಂತ ಕವಳಿ ಹಣ್ಣಿನ ಮೌಲ್ಯವರ್ಧನೆ ಆಗಬೇಕಾಗಿದೆ.

#ಕವಳಿ_ಗಿಡಗಳು_ಈಗ_ಅಪರೂಪ_ಏಕೆ?

#ಪರಿಸರ_ಮಾಲಿನ್ಯ_ಇದಕ್ಕೆ_ಕಾರಣವಾ?

#ಒಂದು_ಕಾಲದಲ್ಲಿ_ಹಳ್ಳಿಯ_ಸುತ್ತಲು_ಗುಡ್ಡಗಾಡಿನಲ್ಲಿ_ಯಥೇಚ್ಚವಾಗಿದ್ದ_ಕವಳಿ_ಗಿಡ_ಈಗಿಲ್ಲ.

#ಕವಳಿಕಾಯಿ_ಖಾದ್ಯ_ದ್ರಾಕ್ಷಿಹಣ್ಣಿನಂತ_ಕವಳಿಕಾಯಿ_ಈಗ_ನೆನಪು_ಮಾತ್ರ.

#ಕವಳಿ_ಕಾಯಿ_ಮತ್ತು_ಹಣ್ಣಿನ_ಮೌಲ್ಯವರ್ಧನೆ_ಆಗಬೇಕಾಗಿದೆ.

   80-90ರ ದಶಕದಲ್ಲಿ ಉತ್ತರ ಕನ್ನಡದ ಕರಾವಳಿಯ ಸಂತೆಗಳಲ್ಲಿ ಕವಳಿಕಾಯಿ - ಹಣ್ಣು ಮಾರಾಟ ಮಾಡುತ್ತಿದ್ದ ಹಾಲಕ್ಕಿ ಮಹಿಳೆಯರು, ಗೋವಾದಲ್ಲಿ ಇದನ್ನು ಮಾರುವ ಕುಣುಬಿ ಮಹಿಳೆಯರು ಮತ್ತು ಬಯಲು ಸೀಮೆಯಲ್ಲಿ ಲಂಬಾಣಿ ಮಹಿಳೆಯರ ನೋಡಿದಾಗ ನಮಗೆಲ್ಲ ಸೋಜಿಗ ಯಾಕೆಂದರೆ ಆಗಿನ ದಿನದಲ್ಲಿ ನಮ್ಮ ಊರ ಕೊನೆಯ ಮನೆ ದಾಟಿದರೆ ಕವಳಿಕಾಯಿಯ ಸಾವಿರಾರು ಪೊದೆಗಳು ಇದ್ದವು, ಯಾರೂ ಮಾರಾಟ ಮಾಡುತ್ತಿರಲಿಲ್ಲ ಮತ್ತು ಖರೀದಿಸುವವರು ಇರಲಿಲ್ಲ.
  ನಾವೆಲ್ಲ ಉಪ್ಪಿನ ಪೊಟ್ಟಣದ ಜೊತೆ ತರಹೇವಾರಿ ಕವಳಿಕಾಯಿ ಜಗಿದು ಚುಳ್ಳನಿಸುವ ದವಡೆ ದಂತದಿಂದ ಸಂಜೆ ಊರಿಗೆ ಬರುತ್ತಿದ್ದೆವು.
  ಕವಳಿ ಹಣ್ಣಿನ ಕಾಲದಲ್ಲಿ ಕೇಜಿಗಟ್ಟಲೆ ಕಪ್ಪು ದ್ರಾಕ್ಷಿಯ ತಿನ್ನುತ್ತಾ ಬೇಸಿಗೆ ರಜೆ ಕಳೆಯುತ್ತಿದ್ದೆವು.
  ಆದರೆ ಈಗ ಕವಳಿ ಗಿಡ ಯಾಕೆ ನಶಿಸಿದೆ? ಯಾರಿಗೂ ಗೊತ್ತಿಲ್ಲ! ಇದನ್ನು ಬೇರಾವುದೇ ಉದ್ದೇಶಕ್ಕೆ ಬಳಕೆ ಇದ್ದರೆ ಈ ಸಸ್ಯ ನಶಿಸುತ್ತಿದೆ ಅಂತ ಭಾವಿಸಬಹುದಿತ್ತು ಅಂತದ್ದು ಯಾವುದೂ ಇಲ್ಲ ಆದರೆ ಈಗ ಕವಳಿ ಕಾಯಿ ಅಷ್ಟು ಸುಲಭದಲ್ಲಿ ಸಿಗುವುದಿಲ್ಲ.
   ನನ್ನ ಗೆಳೆಯರಾದ #ಘ೦ಟಿನಕೊಪ್ಪದ_ಗಜೇಂದ್ರ ಮತ್ತು #ಗೇರುಬೀಸಿನ_ಚನ್ನಪ್ಪ ಈ ವರ್ಷದ ಕವಳಿ ಪಸಲು ನೀಡಿದ್ದಾರೆ.
  ಉಪ್ಪಿನಕಾಯಿಗೆ ಬಳಸಿ ಉಳಿದದ್ದು ಮಂದನ ಗೊಜ್ಜು ಮಾಡಿದೆ ಇಲ್ಲಿ ಇನ್ನೊಂದು ಹೇಳಬೇಕು ಕವಳಿಕಾಯಿ ಮಂದನ ಗೊಜ್ಜು ಮಾವಿನ ಮಂದನ ಗೊಜ್ಜಿಗಿಂತ ಹೆಚ್ಚು ಬಿನ್ನ ರುಚಿ.
  ಪಶ್ಚಿಮ ಘಟ್ಟದಲ್ಲಿ ಹೆಚ್ಚಾಗಿ ಮತ್ತು ಭಾರತ ನೇಪಾಳ ಮತ್ತು ಶ್ರೀಲಂಕಾದಲ್ಲಿ ಇದು ನೈಸರ್ಗಿಕ ಬೆಳೆ ಆದರೂ ಇದರ ವಾಣಿಜ್ಯ ಬಳಕೆ ಇನ್ನೂ ಪ್ರಾರ೦ಬ ಆಗಿಲ್ಲ.
  ಕ್ಯಾರಿಸ್ಸಾ ಕರಂಡಾಸ್ ಎಂಬ ಬಟೋನಿಕಲ್ ಹೆಸರಿನ ಈ ಕವಳಿ ಕಾಯಿ ಮತ್ತು ಕವಳಿ ಹಣ್ಣಿನ ಮೌಲ್ಯ ವರ್ಧನೆ ಕೆಲಸ ಮುಂದಿನ ದಿನಗಳಲ್ಲಿ ಆಗಬೇಕಾಗಿದೆ ಮತ್ತು ಈ ಸಸ್ಯ ಜನ ಸಾಂದ್ರತೆ ಪ್ರದೇಶದಿಂದಲೇ ನೈಸಗಿ೯ಕವಾಗಿ ದೂರವಾಗುವ ನಿಜಕಾರಣದ ಸಂಶೋದನೆಯೂ ಆಗಬೇಕಾಗಿದೆ.

    ಕವಳಿಕಾಯಿ ಮಂದನ ಗೊಜ್ಜು ಸುಲಭ ರೆಸಿಪಿ
  ಒಂದು ಕಪ್‌ ಕವಳಿಕಾಯಿ ತೊಳೆದು ಒಂದು ಕಪ್ ನೀರು - 2 ಹಸಿ ಮೆಣಸು ಹಾಕಿ ಬೇಯಿಸುವುದು ನಂತರ ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ನುಣ್ಣಗೆ ಪೇಸ್ಟ್ ಮಾಡಿ ಬದಿಗೆ ಇಡಿ.
  ಬಾಣಲೆಯಲ್ಲಿ 3 ರಿಂದ 4 ಚಮಚ ಕೊಬ್ಬರಿ ಎಣ್ಣೆ ಬಿಸಿ ಮಾಡಿ, ಒಂದು ಚಮಚ ಸಾಸಿವೆ ಸಿಡಿಸಿ ನಂತರ ಅರ್ಧ ಚಮಚ ಮೆಂತೆ ಸೇರಿಸಿ, 4 ಖಾರದ ಹಸಿ ಮೆಣಸು ಸಣ್ಣಗೆ ತುಂಡರಿಸಿ ಹಾಕಿ, ಒ0ದು ಚಮಚ ಕಡಲೆ ಬೇಳೆ, ಉದ್ದಿನ ಬೇಳೆ ಒಂದು ಚಮಚ, 10 ಎಸಳು ಬೆಳ್ಳುಳ್ಳಿ ಸಿಪ್ಪೆ ತೆಗೆದು ಜಜ್ಜಿ ಹಾಕಿ, ಕಾಲು ಚಮಚ ಇಂಗು, ಕಾಲು ಚಮಚ ಅರಿಶಿಣ, ಒಂದು ಎಸಳು ಕರಿಬೇವಿನ ಎಲೆ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
  ಇದಕ್ಕೆ ಮಿಕ್ಸಿ ಮಾಡಿದ ಪೇಸ್ಟ್ ಸೇರಿಸಿ, ಅರ್ಧದಿಂದ ಮುಕ್ಕಾಲು ಕಪ್ ನೀರು ಸೇರಿಸಿ, ನಿಮ್ಮ ರುಚಿಗೆ ತಕ್ಕ ಉಪ್ಪು - ಬೆಲ್ಲ ಸೇರಿಸಿ, 3ರಿಂದ 5 ನಿಮಿಷ ಸಣ್ಣ ಉರಿಯಲ್ಲಿ ಬೇಯಿಸಿ ಇಳಿಸಿ.
   ಬಿಸಿ ಅನ್ನದ ಜೊತೆ ಕವಳಿಕಾಯಿಯ ಈ ಮಂದನ ಗೊಜ್ಜು ಜೊತೆಗೆ ಕೊಬ್ಬರಿ ಎಣ್ಣೆ ಅಥವ ತುಪ್ಪ ಸೇರಿಸಿ ಕಲಸಿಕೊಂಡು ಊಟ ಮಾಡಿ ಅಭಿಪ್ರಾಯ ತಿಳಿಸಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ