Skip to main content

Blog number 857, ಮೈದಾ ಹಿಟ್ಟು ಗೋದಿಯ ಒಳ ತಿರುಳಿನ ಹುಡಿ, ವಿಶ್ವದ ದೀರ್ಘ ಕಾಲ ವಾಣಿಜ್ಯ ಉದ್ದೇಶದ ಅಂಟಾಗಿ ಬಳಕೆ,ಬೇಕರಿಗಳಲ್ಲಿ ಬ್ರೆಡ್‌ ಮತ್ತು ಸಿಹಿ ಪದಾರ್ಥದಲ್ಲಿ ಹೆಚ್ಚು ಬಳಸುತ್ತಾರೆ,ಮೈದಾ ಅತಿ ಬಳಕೆಯಿಂದ ದುಷ್ಪರಿಣಾಮ ಜಾಸ್ತಿ.

#ಪೋಸ್ಟರ್_ಅಂಟಿಸಲು_ಮೈದಾಹಿಟ್ಟಿನ_ಅಂಟು.

#ಮೈದಾ_ಹಿಟ್ಟಿನ_ಅಂಟಿಗೆ_ಮೈಲುತುತ್ತಾ_ಬೆರೆಸುವುದು.

#ಮೈದಾ_ಹಿಟ್ಟು_ತಯಾರಿ_ಹೇಗೆ?

#ಮೈದಾಹಿಟ್ಟು_ಭಾರತಕ್ಕೆ_ಬಂದ_ಬಗೆ 

#ಬಾಲ್ಯದ_ಹೀರೊ_ಡುಮಿ೦ಗಣ್ಣರಿಂದ_ಕಲಿತ_ಮೈದಾಹಿಟ್ಟಿನ_ಅಂಟು_ತಯಾರಿಕೆ_ವಿದಾನ,

  ನನ್ನ ಬಾಲ್ಯದ ಹೀರೋ ದುಮುಗಣ್ಣ (ಡುಮಿಂಗ್ ರೆಬೆಲೋ) ಆನಂದಪುರಂನ ಸಿನಿಮಾ ಟೂರಿಂಗ್ ಟಾಕೀಸಿನಲ್ಲಿ ರಾತ್ರಿ ಗೇಟ್ ಕೀಪರ್ ಆಗಿ ಡ್ಯೂಟಿ ಮಾಡಿ ಹಗಲಿನಲ್ಲಿ ಹೊಸ ಬಾಡಿಗೆ ಸೈಕಲ್ ನ ಹಿಂಬಾಗದಲ್ಲಿ ಬಿದಿರಿನ ತಟ್ಟಿ ಕಟ್ಟಿ ಅದಕ್ಕೆ ಅವತ್ತಿನ ಸಿನಿಮಾ ಪೋಸ್ಟರ್ ಅಂಟಿಸಿಕೊಂಡು, ಸೆಕಲ್ ಬಂಪರ್ ಗೂ ಮತ್ತು ಹಿಂಬಾಗದ ಚಕ್ರದ ತಂತಿಯ ರಿಮ್ಮಿನ ಮಧ್ಯಕ್ಕೆ ಕತ್ತದ ಹಗ್ಗ ಕಟ್ಟಿ ಅದರ ಮಧ್ಯದಲ್ಲಿ ಸಣ್ಣ ತಗಡಿನ ಡಬ್ಬ ಕಟ್ಟಿರುತ್ತಿರುತ್ತಿದ್ದರು, ಇವರು ಸೈಕಲ್ ಸವಾರಿ ಮಾಡುವಾಗ ಆ ಕತ್ತದ ದಾರಕ್ಕೆ ಚಕ್ರದ ತಿರುಗುವಿಕೆಯಿಂದ ಉಂಟಾಗುವ ಕಂಪನ ಟಿನ್ ಡಬ್ಬಿಯಿಂದ ವಿಚಿತ್ರ ಶಬ್ದ ಜನರನ್ನು ಈ ಸೈಕಲ್ ಕಡೆ ತಿರುಗುವಂತೆ ಮಾಡುತ್ತಿತ್ತು.
  ಇದರಿಂದ ಹಳ್ಳಿಗಳಲ್ಲಿ ಆನಂದಪುರಂನಲ್ಲಿ ಪ್ರದರ್ಶನ ಅಗುವ ಸಿನಿಮಾ ಮಾಹಿತಿ ಗೊತ್ತಾಗುತ್ತಿತ್ತು ಮತ್ತು ಸೈಕಲ್ ಹ್ಯಾಂಡಲ್ ನಲ್ಲಿ ಪೋಸ್ಟರ್ ಅಂಟಿಸಲು ಗಮ್ ಇರುತ್ತಿತ್ತು ಪ್ರತಿ ಊರಿನ ನಿರ್ದಿಷ್ಟ ಬಾವಿಕಟ್ಟೆಯ ಗೋಡೆ ಮೇಲೆ ಪೋಸ್ಟರ್ ಅಂಟಿಸಿ ಬರುವುದು ಇವರ ಕೆಲಸ.
  ಸಿನಿಮಾದ ತುಂಡಾದ ರೀಲಿನ ತುಣುಕುಗಳು ಡುಮುಗಣ್ಣ ನಮಗೆ ತಂದು ಕೊಡುತ್ತಿದ್ದರು ಅದನ್ನು ಆನಂದಪುರಂ ಸಂತೆಯಲ್ಲಿ ನಾವು ಖರೀದಿಸುತ್ತಿದ್ದ ಸಣ್ಣ ಬೂತಕನ್ನಡಿ ಅಳವಡಿಸಿದ ಸಿನಿಮಾ ಡಬ್ಬಿಯ ಹಿಂಬಾಗದಲ್ಲಿ ಹಾಕಿ ನೋಡುವಾಗ ಬೂತ ಕನ್ನಡಿ ಕಾರಣದಿಂದ ದೊಡ್ಡದಾಗಿ ಕಾಣುತ್ತಿದ್ದ ಸಿನಿಮಾ ಸೀನುಗಳ ಅನುಭವವೇ ಬೇರೆ.
  ಡುಮಿಂಗಣ್ಣ ಅವರ ಅಂಟಿನ ಡಬ್ಬಕ್ಕೆ ಎರೆಡು ಭಾಗ ಮೈದಾ ಹಿಟ್ಟಿಗೆ ಮೂರು ಬಾಗ ನೀರು ಹಾಕಿ ಕಲಸಿ ಅದನ್ನು ಮೂರು ಸಣ್ಣ ಕಲ್ಲಿನ ಒಲೆ ಮಾಡಿ ಒಣಗಿದ ಎಲೆಕಡ್ಡಿಯಿಂದ ಬೆಂಕಿ ಮಾಡಿ ಬೇಯಿಸಿ ದಿಡೀರ್ ಅಂಟು ತಯಾರಿಸುವ ರಹಸ್ಯ ವಿದ್ಯೆ ನಾವೆಲ್ಲ ಕದ್ದು ನೋಡಿ ಕಲಿತುಕೊಂಡಿದ್ದೆ.
  ನಂತರ ನಮ್ಮ ಜನಪರ ಹೋರಾಟ, ರಾಜಕೀಯದ ಪ್ರಾರಂಭದಲ್ಲಿ ಪೋಸ್ಟರ್ ಅಂಟಿಸಲು ಇದು ಸಹಾಯ ಆಯಿತು.
  ಆಗಿನ ಪೋಸ್ಟ್ ಆಫೀಸುಗಳಲ್ಲಿ ಮೈದಾ ಹಿಟ್ಟಿನ ಅಂಟು ಇಟ್ಟಿರಲೇ ಬೇಕಿತ್ತು.
  ನಮ್ಮ ಜಮಾನದಲ್ಲಿ ಮೈದಾ ಹಿಟ್ಟಿನ ಅಂಟು ಕೊಳೆತು ಹಳಸಿ ವಾಸನೆ ಬರುತ್ತಿದ್ದರಿಂದ ಅದಕ್ಕೆ ಒಂದೆರೆಡು ಕಾಳು ಮೈಲುತುತ್ತಾ ಹಾಕುವ ಐಡಿಯಾ ಯಾರೋ ಹೇಳಿದ್ದರಿಂದ ಅದು ಬಳಕೆಗೆ ಬಂತು.
  19 ನೇ ಶತಮಾನದಲ್ಲಿ ಅಂದರೆ 1890 ರಿಂದ 1970 ರ ವರೆಗೆ ವಾಣಿಜ್ಯ ಉದ್ದೇಶದ ಪ್ಯಾಕಿಂಗ್ ಉದ್ಯಮದಲ್ಲಿ ಹೆಚ್ಚು ಬಳಕೆಯಲ್ಲಿದ್ದ ಅಂಟು ಈ ಮೈದಾ ಅಂಟು ಕಾಲ ಕ್ರಮೇಣ ಕೃತಕ ಗೊಂದು - ಅಂಟುಗಳಿಂದ ಮತ್ತು ಪ್ಲಾಸ್ಟಿಕ್ ಗಮ್ ಟೇಪ್ ಗಳಿಂದ ಈಗ ಬದಲಾಗಿದೆ.
  ಮೈದಾ ಹಿಟ್ಟು ತಯಾರಾಗುವುದೇ ಗೋದಿಯಿಂದ, ಗೋದಿಯ ಹೊರ ಸಿಪ್ಪೆ, ತೌಡುಗಳ ಸಮೇತ ಆಗುವ ಗೋದಿ ಹಿಟ್ಟು (ಅಟ್ಟಾ) ಆಹಾರ ಬಳಕೆಯ ಗೋದಿ ಹಿಟ್ಟು ಆದರೆ, ಗೋದಿಯ ಹೊರ ಸಿಪ್ಪೆಯ ಕವಚ ಮತ್ತು ತೌಡುಗಳನ್ನು ಬೇರ್ಪಡಿಸಿ ಗೋದಿ ಕಾಳಿನ ಒಳಬಾಗದ ಬಿಳಿ ತಿರುಳಿನ ಪುಡಿಯೇ ಮೈದಾ ಹಿಟ್ಟು.
  ಇದಕ್ಕೆ 3000 ಸಾವಿರ ವರ್ಷದ ಇತಿಹಾಸ ಇದೆ, ಇದು ಭಾರತಕ್ಕೆ ಮುಸ್ಲಿ೦ ವ್ಯಾಪಾರಿಗಳಿಂದ ಪರೋಟ ನಾನ್ ತಯಾರಿಗಾಗಿ ಬಂದಿತಂತೆ. ಎರಡನೆ ಮಹಾಯುದ್ಧ ಕಾಲದಲ್ಲಿ ಆಹಾರ ಕೊರತೆಯಿಂದ ಮೈದಾ ಹಿಟ್ಟಿನ ಬಳಕೆ ಹೆಚ್ಚಾಗಿದೆ ಮತ್ತು ಇದು ಜನಪ್ರಿಯ ಆಯಿತು.
 ಮೈದಾ ಹಿಟ್ಟಿನ ಹೆಚ್ಚು ಬಳಕೆ ಪರೋಟ ನಾನ್ ಮತ್ತು ಬೇಕರಿ ಉದ್ಯಮದ ಕೇಕ್ ಮತ್ತು ಬ್ರೆಡ್ ನಲ್ಲಿ ಬಳಕೆ ಇದೆ, ಹೆಚ್ಚು ಮೈದಾ ಬಳಕೆಯಿಂದ ಮನುಷ್ಯ ದೇಹದ ಪ್ಯಾಂಕ್ರಿಯಾಸ್ ನ ಬೇಟಾ ಸೆಲ್ ಗಳು ಹಾಳಾಗುವುದರಿಂದ ಇನ್ಸುಲಿನ್ ಉತ್ಪಾದನೆ ಏರು ಪೇರು ಆಗಿ ಡಯಾಬಿಟೀಸ್ ಗೆ ಕಾರಣ ಆಗುತ್ತದೆಂಬ ಸಂಶೋಧನಾ ವರದಿಗಳಿದೆ.
  ಯುರೋಪಿನಲ್ಲಿ ಲಿಕ್ಕರ್ ಮತ್ತು ನೈಟ್ ಕ್ಲಬ್ ಪ್ರಚಾರಕ್ಕಾಗಿ ಫೋಸ್ಟರ್ ಗಳನ್ನು ಅ೦ಟಿಸಲು ಮೈದಾ ಹಿಟ್ಟಿನ ಅಂಟಿನ ಬಳಕೆ ಮಾಡಿರುವುದು ಮೈದಾ ಹಿಟ್ಟಿನ ಅಂಟಿನ ಮೊದಲ ಬಳಕೆ ಆಗಿದೆ.
  ನಂತರ ಸಿನಿಮಾ ರಾಜಕೀಯ ವಾಣಿಜ್ಯ ಪ್ರಚಾರಕ್ಕಾಗಿ, ಅಂಚೆ ಸ್ಟಾಂಪ್ ಗಳಲ್ಲಿ  ವಿಶ್ವದಾದ್ಯಂತ ಮತ್ತು ಭಾರತದಲ್ಲಿ ಮೈದಾ ಹಿಟ್ಟಿನ ಅಂಟು ಬಳಕೆಯಲ್ಲಿತ್ತು.
  ಆದ್ದರಿಂದಲೇ ವಿದೇಶದಲ್ಲಿ ಮೈದಾ ಹಿಟ್ಟಿಗೆ All Purpose Flour ಎಂಬ ಹೆಸರಿದೆ.
  ಈಗ ರಾಸಾಯನಿಕ, ಬ್ಲೀಚಿಂಗ್ ಬಳಸಿ ತಯಾರಿಸುವ ಮೈದಾ ಹಿಟ್ಟು ಮತ್ತು ಕಲಬೆರಕೆಯ ಮೈದಾ ಹಿಟ್ಟುಗಳ ಬಳಕೆ ಹೆಚ್ಚಾಗಿದೆ ಇದರಿಂದ ಜನರ ಆರೋಗ್ಯದ ಅನಾಹುತಾ ಪರಿಣಾಮಗಳು ಕೂಡ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...