ಭಾಗ_21
ಘಟ್ಟಕ್ಕೆ_ಕರಾವಳಿಗರ_ವಲಸೆ
ವಲಸೆಗಾರರೇ_ಭೂಮಾಲಿಕರಾದಾಗ....
ಮುಂಬೈ ಮತ್ತು ಗಲ್ಫ್ ದೇಶಗಳ ವಲಸೆಯ ಕಥೆ ಒಂದಾದರೆ, ಕರಾವಳಿ ಕರ್ನಾಟಕದ ವಿಶೇಷವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಜನರು ತಾಯ್ನಾಡಿನ ಒಳಗೇ ಅಂದರೆ ಮಲೆನಾಡು ಮತ್ತು ಘಟ್ಟದ ಮೇಲಿನ ಪ್ರದೇಶಗಳಿಗೆ ಚಿಕ್ಕಮಗಳೂರು, ಶಿವಮೊಗ್ಗ, ಉತ್ತರಕನ್ನಡ, ಹಾಸನ, ಕೊಡಗು ವಲಸೆ ಹೋದ ಇತಿಹಾಸವೇ ಇನ್ನೊಂದು ರೋಚಕ ಅಧ್ಯಾಯ.
20ನೇ ಶತಮಾನದ ಆರಂಭದಿಂದ ಹಿಡಿದು ಮಧ್ಯಭಾಗದವರೆಗೆ ನಡೆದ ಈ ವಲಸೆಯು ಘಟ್ಟದ ಮೇಲಿನ ಸ್ಥಳೀಯ ಭೂಮಾಲೀಕರುಗಳಾದ ಗೌಡರು, ಹೆಗ್ಗಡೆಗಳು, ಲಿಂಗಾಯತರು ಮತ್ತು ಜಮೀನ್ದಾರರು ಹಾಗೂ ಕರಾವಳಿಯಿಂದ ಹೋದ ವಲಸಿಗರ ನಡುವೆ ತೀವ್ರ ಸಾಮಾಜಿಕ ಮತ್ತು ಆರ್ಥಿಕ ಸಂಘರ್ಷಕ್ಕೆ ಕಾರಣವಾಗಿತ್ತು.
ಕರಾವಳಿಯಲ್ಲಿ ಕೃಷಿ ಭೂಮಿಯ ಕೊರತೆ ಮತ್ತು ತೀವ್ರ ಜನಸಂಖ್ಯೆಯ ಒತ್ತಡವಿದ್ದಾಗ, ಬ್ರಿಟಿಷರ ಕಾಲದಲ್ಲಿ ಮಲೆನಾಡಿನ ದಟ್ಟ ಕಾಡುಗಳನ್ನು ಕಡಿದು ಕಾಫಿ, ಅಡಿಕೆ ಮತ್ತು ಏಲಕ್ಕಿ ತೋಟಗಳನ್ನು ಮಾಡುವ ಪ್ರಕ್ರಿಯೆ ಆರಂಭವಾಯಿತು.
ಕರಾವಳಿಯ ಬಿಲ್ಲವ, ಬಂಟ್ಸ್ ಮತ್ತು ಕೊಂಕಣಿ ಮತ್ತಿತರ ಅನೇಕ ಸಮುದಾಯದ ಯುವಕರು ಆರಂಭದಲ್ಲಿ ಮಲೆನಾಡಿನ ಕಾಫಿ ತೋಟಗಳಿಗೆ ಕೇವಲ ಕಾರ್ಮಿಕರಾಗಿ,ಕೂಲಿ ಆಳುಗಳಾಗಿ ಘಟ್ಟ ಹತ್ತಿದರು.
ಮಲೆನಾಡಿನ ಮಲೇರಿಯಾ ಜ್ವರ ಮತ್ತು ಕಠಿಣ ಹವಾಮಾನವನ್ನು ತಡೆದುಕೊಂಡು ದುಡಿಯುವ ತಾಕತ್ತು ಕರಾವಳಿಯ ಕಾರ್ಮಿಕರಿಗಿತ್ತು.
#ಕೂಲಿಯಾಳು_ಮಾಲೀಕನಾದಾಗ!..
ಈ ವಿಚಾರವೇ ಸ್ಥಳೀಯ ಘಟ್ಟದ ಭೂಮಾಲೀಕರು ಮತ್ತು ಕರಾವಳಿ ವಲಸಿಗರ ನಡುವಿನ ಅಸಮಾಧಾನಕ್ಕೆ ಮುಖ್ಯ ಕಾರಣ ವಾಯಿತು.
ಭೂಮಿ ಖರೀದಿಸಿದ ಕರಾವಳಿಗರು ಆರಂಭದಲ್ಲಿ ಘಟ್ಟದ ಜಮೀನ್ದಾರರ ಬಳಿ ಕೂಲಿ ಕೆಲಸ ಮಾಡುತ್ತಿದ್ದ ಕರಾವಳಿಯ ಯುವಕರರಾಗಿದ್ದರು.
ತಮ್ಮ ಕಠಿಣ ಪರಿಶ್ರಮ ಮತ್ತು ಉಳಿತಾಯದ ಹಣದಿಂದ ಮಲೆನಾಡಿನಲ್ಲೇ ಸಣ್ಣ ಸಣ್ಣ ಕಾಡು ಮೇಡುಗಳನ್ನು, ಬಂಜರು ಭೂಮಿಯನ್ನು ಅಗ್ಗದ ಬೆಲೆಗೆ ಖರೀದಿಸಲು ಆರಂಭಿಸಿದರು.
ಕರಾವಳಿಯ ದಕ್ಷಿಣಿಗಳು (ಘಟ್ಟದ ಮೇಲೆ ಕರಾವಳಿಯವರನ್ನು ದಕ್ಷಿಣಿಗಳು ಎನ್ನುತ್ತಿದ್ದರು) ಹಗಲಿರುಳು ದುಡಿದು ಕಾಫಿ ಮತ್ತು ಅಡಿಕೆ ತೋಟಗಳನ್ನು ಅಭಿವೃದ್ಧಿಪಡಿಸಿ ಶ್ರೀಮಂತರಾಗತೊಡಗಿದರು.
ತಮಗೆ ತಲೆಬಾಗುತ್ತಾ ಇದ್ದ ಕೂಲಿಯಾಳುಗಳು ತಮಗೆ ಸಮಾನವಾಗಿ ಭೂಮಾಲೀಕರಾಗುತ್ತಿರುವುದನ್ನು ಕಂಡ ಘಟ್ಟದ ಸಾಂಪ್ರದಾಯಿಕ ಭೂಮಾಲೀಕರಿಗೆ ಇದನ್ನು ಸಹಿಸಿಕೊಳ್ಳುವುದು ಕಷ್ಟವಾಯಿತು.
ಇದು ಇತ್ತಂಡಗಳ ನಡುವೆ ಆರ್ಥಿಕ ಈರ್ಷೆಗೆ ಕಾರಣವಾಯಿತು.
ಘಟ್ಟದ ಮೇಲಿನ ಮಲೆನಾಡು ಸಂಸ್ಕೃತಿಗೂ ಮತ್ತು ಕರಾವಳಿಯ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸವಿತ್ತು ಇದು ಸಾಮಾಜಿಕ ವಲಯದಲ್ಲಿ ಸಂಘರ್ಷ ತಂದಿಟ್ಟಿತು.
ಕರಾವಳಿಯವರು ತಮ್ಮದೇ ಆದ ತುಳು ಅಥವಾ ವಿಶಿಷ್ಟ ಕುಂದಾಪುರ ಕನ್ನಡ ಭಾಷೆಯನ್ನು ಆಡುತ್ತಿದ್ದರು.
ಘಟ್ಟದ ಮೇಲಿನ ಗೌಡರು ಅಥವಾ ಹೆಗ್ಗಡೆಗಳ ಸಾಂಪ್ರದಾಯಿಕ ಊಳಿಗಮಾನ್ಯ ಪದ್ಧತಿಗೆ ಕರಾವಳಿಯ ಯುವಕರು ಸುಲಭವಾಗಿ ತಲೆಬಾಗುತ್ತಿರಲಿಲ್ಲ.
ಕರಾವಳಿಗರ ಈ ಸ್ವಾವಲಂಬಿ ಮತ್ತು ಗಟ್ಟಿತನದ ಸ್ವಭಾವವನ್ನು ಘಟ್ಟದ ಮಾಲೀಕರು ಅಹಂಕಾರ ಎಂದು ಭಾವಿಸಿದರು.
ಭೂಮಿಯ ಹಕ್ಕು, ಒತ್ತುವರಿ ಮತ್ತು ಗಡಿ ವಿಚಾರವಾಗಿ ಘಟ್ಟದ ಮಾಲೀಕರು ಮತ್ತು ಕರಾವಳಿ ವಲಸಿಗರ ನಡುವೆ ಸ್ಥಳೀಯ ಪಂಚಾಯಿತಿಗಳಲ್ಲಿ ಮತ್ತು ಕೋರ್ಟ್ಗಳಲ್ಲಿ ದಶಕಗಳ ಕಾಲ ಕಾನೂನು ಸಮರಗಳು ನಡೆದವು.
1970ರ ದಶಕದಲ್ಲಿ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ತಂದ ಭೂಸುಧಾರಣಾ ಕಾಯ್ದೆ ಈ ಸಂಘರ್ಷದ ಉತ್ತುಂಗಕ್ಕೆ ಕಾರಣವಾಯಿತು.
ಮಲೆನಾಡಿನ ದೊಡ್ಡ ಜಮೀನ್ದಾರರ ಭೂಮಿಯಲ್ಲಿ ಗೇಣಿದಾರರಾಗಿ ದುಡಿಯುತ್ತಿದ್ದ ಕರಾವಳಿಯ ವಲಸಿಗರಿಗೆ ಈ ಕಾಯ್ದೆಯಿಂದಾಗಿ ಭೂಮಿಯ ನೇರ ಮಾಲೀಕತ್ವ ಸಿಕ್ಕಿತು.
ಶತಮಾನಗಳಿಂದ ರಾಜನಂತೆ ಬದುಕಿದ್ದ ಘಟ್ಟದ ಹಲವು ಭೂಮಾಲೀಕರು ತಮ್ಮ ಜಮೀನನ್ನು ಕಳೆದುಕೊಂಡು ಆರ್ಥಿಕವಾಗಿ ಕುಗ್ಗಿದರೆ, ಕರಾವಳಿಯ ವಲಸಿಗರು ಅಧಿಕೃತ ಭೂಮಾಲೀಕರಾಗಿ ಮಲೆನಾಡಿನಲ್ಲಿ ಗಟ್ಟಿಯಾಗಿ ನೆಲೆನಿಂತರು.
ಈ ರಾಜಕೀಯ ಮತ್ತು ಕಾನೂನು ಬದಲಾವಣೆಯು ಘಟ್ಟದವರಲ್ಲಿ ಕರಾವಳಿಗರ ವಿರುದ್ಧ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಲೆನಾಡಿನ ಭೂಮಾಲೀಕರು ಮತ್ತು ಕರಾವಳಿ ವಲಸಿಗರ ನಡುವಿನ ಈ ಸಾಮಾಜಿಕ ಸಂಘರ್ಷವು ಕನ್ನಡ ಸಾಹಿತ್ಯದಲ್ಲೂ ದಾಖಲಾಗಿದೆ.
ರಾಷ್ಟ್ರಕವಿ ಕುವೆಂಪು ಅವರ ಕಾನೂರು ಹೆಗ್ಗಡಿತಿ ಮತ್ತು ಮಲೆಗಳಲ್ಲಿ ಮದುಮಗಳೂ ಕಾದಂಬರಿಗಳಲ್ಲಿ ಹಾಗೂ ತೇಜಸ್ವಿಯವರ ಬರಹಗಳಲ್ಲಿ ಕರಾವಳಿಯಿಂದ ಬಂದು ಮಲೆನಾಡಿನ ಕಾಡುಗಳನ್ನು ಕಡಿದು ತೋಟ ಮಾಡುವ, ಸ್ಥಳೀಯ ಮಾಲೀಕರೊಂದಿಗೆ ಸಂಘರ್ಷಕ್ಕಿಳಿಯುವ ವಲಸೆ ಕರಾವಳಿಗರ ಪಾತ್ರಗಳ ಉಲ್ಲೇಖಗಳು ಬರುತ್ತವೆ.
ಅದೇ ರೀತಿ ನಾವು ಮೊದಲೇ ಚರ್ಚಿಸಿದಂತೆ ಯಕ್ಷಗಾನ ತಾಳಮದ್ದಳೆಗಳಲ್ಲಿಯೂ ಘಟ್ಟದ ಮೇಲಿನ ಜಮೀನ್ದಾರರ ದರ್ಪ ಮತ್ತು ಅದನ್ನು ಕರಾವಳಿಯ ಯುವಕರು ಎದುರಿಸುವ ಸನ್ನಿವೇಶಗಳು ಲೌಕಿಕ ದೃಷ್ಟಾಂತಗಳಾಗಿ ಚರ್ಚೆಯಾಗುತ್ತವೆ.
ಆರಂಭದಲ್ಲಿ ಕರಾವಳಿ ವಲಸಿಗರು ಮತ್ತು ಘಟ್ಟದ ಭೂಮಾಲೀಕರ ನಡುವೆ ಕೂಲಿ ಮತ್ತು ಮಾಲೀಕನ ನಡುವಿನ ಸಂಘರ್ಷವಿತ್ತು ನಂತರ ಅದು ಭೂಮಿಯ ಮಾಲೀಕತ್ವದ ಹೋರಾಟವಾಗಿ ಬದಲಾಯಿತು.
ಆದರೆ ಇಂದಿನ ತಲೆಮಾರಿಗೆ ಬರುವಷ್ಟರಲ್ಲಿ ಈ ಸಂಘರ್ಷ ಸಂಪೂರ್ಣವಾಗಿ ಮುಗಿದುಹೋಗಿದೆ.
ಇಂದು ಕರಾವಳಿಯ ವಲಸಿಗರು ಮಲೆನಾಡಿನ ಸಂಸ್ಕೃತಿಯೊಂದಿಗೆ ಸಂಪೂರ್ಣವಾಗಿ ಬೆರೆತುಹೋಗಿದ್ದಾರೆ ಮತ್ತು ಅಲ್ಲಿನ ಪ್ರಮುಖ ಅಡಿಕೆ/ಕಾಫಿ ಬೆಳೆಗಾರರಾಗಿ ಮಲೆನಾಡಿನ ಆರ್ಥಿಕತೆಯ ಬೆನ್ನೆಲುಬಾಗಿದ್ದಾರೆ.
ಸೌದಿ ಅರೇಬಿಯಾ, ಯುಎಇ (ದುಬೈ), ಕತಾರ್ ಮುಂತಾದ ಗಲ್ಫ್ ದೇಶಗಳಿಗೂ ಅವರ ಮಕ್ಕಳು ಉದ್ಯೋಗ ಅರಸಿ ಹೋದರು.
ಒಂದು ಕಾಲದಲ್ಲಿ ಹೊಟ್ಟೆಪಾಡಿಗಾಗಿ ಕೂಲಿಗಾಗಿ ಕಷ್ಟ ಪಟ್ಟು ಘಟ್ಟಕ್ಕೆ ನಡೆದು ಹೋಗಿ ಇಂಬಳಗಳಿಂದ ಮತ್ತು ಶೇರೇಗಾರನಿಂದ ಹೈರಾಣಾಗುತ್ತಿದ್ದ ಈ ಕರಾವಳಿ ವಲಸಿಗರ ಹೆಚ್ಚಿನ ಕುಟುಂಬಗಳು ಈಗ ಆರ್ಥಿಕವಾಗಿ ಸಾಮಾಜಿಕವಾಗಿ ಮುಂದೆ ಬಂದಿದ್ದಾರೆ.
1980 ಮತ್ತು ಇತ್ತೀಚಿನ ದಶಕಗಳಲ್ಲಿ ಇವರ ಕುಟುಂಬಗಳಲ್ಲಿ ಭಾರತದ ಉನ್ನತ ಶಿಕ್ಷಣ ಪಡೆದು ಇಂಜಿನಿಯರ್ಗಳು, ವೈದ್ಯರು ಮತ್ತು ಐಟಿ ವೃತ್ತಿಪರರು ಆಗಿದ್ದಾರೆ.
ಉತ್ತಮ ಅವಕಾಶಗಳಿಗಾಗಿ ಅಮೆರಿಕ (USA), ಕೆನಡಾ, ಯುಕೆ (UK), ಜರ್ಮನಿ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ವಲಸೆ ಹೋಗುತ್ತಿದ್ದಾರೆ.
ಭಾರತದಲ್ಲಿ ವಲಸೆಗೆ ಮುಖ್ಯ ಕಾರಣಗಳು ಆರ್ಥಿಕ ಕಾರಣಗಳು,
ಹಳ್ಳಿಗಳಲ್ಲಿ ಕೃಷಿ ನಷ್ಟ ಮತ್ತು ಸ್ಥಳೀಯವಾಗಿ ಉದ್ಯೋಗದ ಕೊರತೆ ಕಾರಣವಾಗಿತ್ತು.
ನೀವೂ ಕರಾವಳಿ ವಲಸಿಗರ ಕುಟುಂಬದವರ?.., ಘಟ್ಟಕ್ಕೆ ಬಂದವರು ಘಟ್ಟದಲ್ಲೇ ಖಾಯಂ ನಿವಾಸಿಗಳಾಗಿದ್ದೀರಾ... ಹಾಗಾದರೆ ನಿಮ್ಮ ಕುಟುಂಬದವರಿಗೆ ಇದನ್ನು ಶೇರ್ ಮಾಡಿ.
#seasonalmigration #coastal #kundapura #udupi
#mangalore #Karwar #ankola #kumta #honnavara
#westernghats #shivamogga #sirsi #kodagu #chikkamagalore
Comments
Post a Comment