Skip to main content

ಭಾಗ-59, ಆನಂದಪುರಂ ಇತಿಹಾಸ, ರಾಯರ ಪ್ರತಿನಿದಿ ಆಗಿ ಅವರ ವಾಕಿಂಗ್ ಸ್ಟಿಕ್ ಜೊತೆ ಎತ್ತಿನಗಾಡಿಯಲ್ಲಿ ಕೊಳಗ ಮತ್ತು ಗೋಣಿ ಚೀಲದ ಜೊತೆ ಗೇಣಿ ಬತ್ತದ ವಸೂಲಿಗೆ ಹೋಗುತ್ತಿದ್ದ ಆನಂದಪುರಂನ ಪೈಲ್ವಾನರ ಪಡೆ

#ಭಾಗ_59.
#ಆನಂದಪುರಂ_ಇತಿಹಾಸ.

#ರಾಮಕೃಷ್ಣಯ್ಯ0ಗಾರರ_ಕಟ್ಟಾಳುಗಳು.

#ಗೇಣಿ_ಬತ್ತ_ವಸೂಲಿ_ಪಡೆ

#ಆ_ಕಾಲದ_ಬೌನ್ಸರ್ಗಳು.

#ರಾಮಕೃಷ್ಣಾಯ್ಯ೦ಗಾರರ_ವಾಕಿಂಗ್_ಸ್ಪಿಕ್_ಅವರ_ಪ್ರತಿನಿದಿ,

#ಕಾಗೋಡು_ಚಳವಳಿಯಲ್ಲಿ_ಸಾವ೯ಜನಿಕ_ಸಭೆಗಳಲ್ಲಿ_ಗಣಪತಿಯಪ್ಪ_ಶಾಂತವೇರಿಗೋಪಾಲಗೌಡರಿಂದ_ವಿರೋದ

   ಆನಂದಪುರ0ನ ರಾಮಕೃಷ್ಣಾಯ್ಯಂಗಾರರು ಇನಾಂದಾರರು, ಜಮೀನ್ದಾರರು, ದೈವಭಕ್ತರು, ಕೊಡುಗೈ ದಾನಿಗಳು ಹೌದು ಅಷ್ಟೇ ಕುಟುಂಬದಲ್ಲಿ ಚಾಣಕ್ಷಮತಿಗಳು ಆಗಿದ್ದರು.
   ಸಾವಿರಾರು ಎಕರೆ ಜಮೀನು ಪ್ರತಿ ವರ್ಷ ಗೇಣಿದಾರರಿಗೆ ನೀಡಿ ಗೇಣಿ ಬತ್ತ ವಸೂಲಿ ಮಾಡುವುದು ಆ ಕಾಲದಲ್ಲಿ ಸುಲಭದ ಕೆಲಸ ಆಗಿರಲಿಲ್ಲ, ಗೇಣಿದಾರರ ಕುಟುಂಬಗಳು ಗೇಣಿ ಜಮೀನುಗಳು ಒಂದೇ ಕಡೇ ಇರುತ್ತಿರಲಿಲ್ಲ.
  ಸಂಬಾವಿತ ಗೇಣಿದಾರರು ಕಾಲ ಕಾಲಕ್ಕೆ ಸರಿಯಾಗಿ ಗೇಣಿ ಬತ್ತ ತಂದು ರಾಯರ ಅಕ್ಕಿ ಮಿಲ್ಲಿಗೆ ಜಮ ಮಾಡುತ್ತಿದ್ದರಾದರೂ ನೈಸಗಿ೯ಕ ವಿಕೋಪದಿಂದಲೋ, ಇನ್ನಾವುದೋ ಕಾರಣದಿಂದ ಗೇಣಿ ಪಾವತಿ ಮಾಡಲಾರದವರು ರಾಯರನ್ನು ಕಂಡು ವಿಶೇಷ ಅನುಮತಿ ಪಡೆಯುತ್ತಿದ್ದರು.
  ಈ ರೀತಿ ಅನುಮತಿ ಪಡೆಯದ ಬಾಕಿದಾರರಿ೦ದ ಬತ್ತ ವಸೂಲಿ ಮಾಡಿಸಲು ಆ ಕಾಲದಲ್ಲಿ ಭೂ ಮಾಲಿಕರ ವಸೂಲಿ ಪಡೆ ಇರುತ್ತಿತ್ತು ಅವರ ಕೆಲಸ ಮಾಲಿಕರ ಗುಮಸ್ತರು ನೀಡುವ ಪಟ್ಟಿಯಂತೆ ಬಾಕಿದಾರನ ಮನೆಗೆ ಹೋಗಿ ಬೆದರಿಸುವ ಅಥವ ಮನೆಯಲ್ಲಿನ ದವಸ ಧಾನ್ಯ ಅಪಹರಿಸುವ ದಬ್ಬಾಳಿಕೆ ಮಾಡುವವರಾಗಿರುತ್ತಿದ್ದರು.
  ಆದರೆ ಆನಂದಪುರಂನ ಭೂ ಮಾಲಿಕರು ಬಾಕಿದಾರರಿಗೆ ಬೇರೆ ರೀತಿಯಲ್ಲಿ ವಸೂಲಿ ಪಡೆ ವ್ಯವಸ್ಥೆ ಮಾಡಿದ್ದು ವಿಶೇಷ ಅದೇನೆಂದರೆ ಪ್ರತಿ ಬಾಕಿದಾರನಿಗೆ ಮೂರು ಅವಕಾಶ ನೀಡುವುದು ಅಷ್ಟರಲ್ಲಿ ಗೇಣಿ ಬಾಕಿ ನೀಡದೇ ಇದ್ದರೆ ಒಂದು ಎತ್ತಿನಗಾಡಿಯಲ್ಲಿ ರಾಯರ ವಾಕಿಂಗ್ ಸ್ಟಿಕ್, ಗೋಣಿ ಚೀಲ ಮತ್ತು ಬತ್ತ ಅಳತೆ ಮಾಡುವ ಕೊಳಗದ ಜೊತೆ ವಸೂಲಿ ತಂಡದ ಪ್ರಮುಖರಾದ ಮಂಜುನಾಥಪ್ಪ ಇವರು ಆನಂದಪುರಂನ ಗಿಡ್ದ ರಾಮಣ್ಣರ ತಂದೆ ಮತ್ತು ಹೋಟೆಲ್ ಕೃಷ್ಣಣ್ಣರ ದೊಡ್ಡಪ್ಪ, ಯಡೇಹಳ್ಳಿ ಅಮೀನ್ ಸಾಬ್ ಇವರು ಯಡೇಹಳ್ಳಿಯ ವಿ.ಎಸ್.ಎನ್ ಶ್ಯಾಮಿಯಾನದ ಮಾಲಿಕರಾದ ಜಪರುಲ್ಲಾ (ಮಾಪೀರ್ ) ಅಜ್ಜ, ಆನಂದಪುರಂನ ಸಾಬ್ಜಿ ಸಾಬ್ ಹಾಲಿ ಯಡೇಹಳ್ಳಿ ವಾಸಿ ವಲೀಫೀರ್ ತಂದೆ, ಮಸಾಲ್ತಿ ಮುಕುಂದಣ್ಣ ಯಡೇಹಳ್ಳಿಯ ಶ್ರೀ ವರಸಿದ್ದಿ ವಿನಾಯಕ ಸ್ವಾಮಿ ದೇವಾಲಯದಲ್ಲಿ ಪಾರಪತ್ಯೆದಾರರಾದ ಲಾರಿ ಮಾಲಿಕರಾದ ಸೋಮಶೇಖರ್ ತಂದೆ ಬಾಕಿದಾರನ ಮನೆಗೆ ಹೋಗುತ್ತಿದ್ದರು.
   ರಾಯರ ವಾಕಿಂಗ್ ಸ್ಟಿಕ್ ಮನೆ ಬಾಗಿಲಿಗೆ ಬಂದಿದೆ ಅಂದರೆ ರಾಯರೇ ಬಂದಂತೆ ಹಾಗಾಗಿ ಗೇಣಿ ಬಾಕಿದಾರ ಯಾವುದೇ ಸಬೂಬು ಹೇಳದೆ ಬತ್ತ ಅಳತೆ ಮಾಡಿ ಕೊಡುತ್ತಿದ್ದರು ಅಥವ ಸಾದ್ಯವೇ ಆಗದಿದ್ದರೆ ಇದೇ ಗಾಡಿಯಲ್ಲಿ ರಾಯರ ವಾಕಿಂಗ್ ಸ್ಟಿಕ್ ಜೊತೆ ರಾಯರ ಮನೆಗೆ ಹೋಗಿ ವಿಚಾರಣೆ ಎದುರಿಸಬೇಕಿತ್ತು.
  ಇದೊಂದು ರೀತಿ ವಾರೆಂಟ್ ಆಗಿತ್ತು ಆಕಾಲದ ಈ ವಸೂಲಿಗಾರರು ಕುಸ್ತಿ ಪೈಲ್ವಾನರು ಆಗಿದ್ದವರು, ಯಾವುದೇ ಭಯ ಇಲ್ಲದ ರಾಯರ ರಾಜಾಶ್ರಯ ಬೇರೆ ಇವರಿಗೆ ಇತ್ತು ಹಾಗಾಗಿ ಭೂ ಮಾಲಿಕರ ಕಾನೂನು ಮಾತ್ರ ಇವರ ಜಾರಿ ವಿಷಯ ಆಗಿರುತ್ತಿತ್ತು.
  ಇದನ್ನೂ ಮೀರಿ ಭೂ ಮಾಲಕರಿಗೆ ತಿರುಮಂತ್ರ ಮಾಡುವ ಗೇಣಿದಾರನಿಗೆ ರಾಯರು ಕೋರ್ಟ್ ಕಾನೂನು ಜಾರಿ ಮಾಡಲು ಆಗಿನ ಪ್ರಖ್ಯಾತ ವಕೀಲರಾದ ಕಡಿದಾಳು ಮಂಜಪ್ಪರನ್ನು ನೇಮಿಸಿಕೊಂಡಿದ್ದರು ಮುಂದೆ ಕಡಿದಾಳು ಮಂಜಪ್ಪರು ಮಂತ್ರಿ ಮುಖ್ಯಮಂತ್ರಿ ಆದದ್ದು ಇತಿಹಾಸ.
   ಇದು ದಬ್ಬಾಳಿಕೆ ಎಂಬ ವಿರೋದವೂ ಇತ್ತು, ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ ಮತ್ತು ಶಾಂತವೇರಿ ಗೋಪಾಲಗೌಡರು ಸಾರ್ವಜನಿಕ ಸಭೆಯಲ್ಲಿ ರಾಮಕೃಷ್ಣಾಯ್ಯಂಗಾರರ ಈ ವಸೂಲಿ ಕ್ರಮ ವಿರೋದಿಸಿ ಮಾತಾಡಿದ್ದರಂತೆ.
  ಹಾಗಾಗಿ ಈ ಕುಟುಂಬದ ನಂತರದ ತಲೆಮಾರಿನ ಯಜಮಾನರಾದ ವೆಂಕಟಾಚಲಯ್ಯಂಗಾರ್ ಮತ್ತು ಬದರಿನಾರಾಯಣಾಯ್ಯಂಗಾರ್ ಕಾಲದಲ್ಲಿ ಇವರ ಪ್ರತಿನಿದಿ ಆಗಿ ವಾಕಿಂಗ್ ಸ್ಟಿಕ್ ಕಳಿಸಿ ಕೊಡುವ ದೀರ್ಘ ಕಾಲದ ಈ ಪ್ರಕ್ರಿಯೆ ನಿಲ್ಲಿಸಿದರು.
(ನಾಳೆ ಭಾಗ-60)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...