Skip to main content

ದೂರದ ಉತ್ತರ ಭಾರತಿಂದ ಬಂದು ದಾರವಾಡದಲ್ಲಿ ಪ್ರಾರಂಬಿಸಿದ ಎಮ್ಮೆ ಹಾಲಿನ ಬಾಬು ಸಿಂಗ್ ಠಾಕೂರ್ ಪೇಡಾ ಪ್ರಸಿದ್ಧ ನಗರಗಳಲ್ಲಿ ಬ್ರಾಂಚ್ ಹೊಂದಿದೆ, ಜಿಯೋಗ್ರಾಪಿಕಲ್ ಇಂಡಿಕೇಷನ್ ಕೂಡ ಪಡೆದಿದೆ, ಆಹಾರ ಉದ್ಯಮದಲ್ಲಿ ಇವರ ಯಶೋಗಾಥೆ ಅನೇಕರಿಗೆ ಪ್ರೇರಣೆ

#ಮೊನ್ನೆ_ಸ್ವಾತಂತ್ರ್ಯೋತ್ಸವದ_75_ನೇ_ವಷಾ೯ಚಾರಣೆಗೆ_ನಮ್ಮ_ಸಿಬ್ಬಂದಿ_ವರ್ಗಕ್ಕೆ 
#ದಾರವಾಡದ_ಪೇಡಾ 
#ಬಾಬುಸಿಂಗ್_ಥಾಕೂರ್_ಪೇಡಾ 
#ಜಿಯೋಗ್ರಾಪಿಕಲ್_ಇಂಡಿಕೇಷನ್_ಟ್ಯಾಗ್_ನಂಬರ್_80
#ಉತ್ತರಪ್ರದೇಶದ_ಈ_ಕುಟುಂಬದ_ಯಶೋಗಾಥೆ.

 75 ನೇ ಸ್ವಾತಂತ್ರ್ಯೋತ್ಸವಕ್ಕೆ ನಮ್ಮ ಸಂಸ್ಥೆಯ ಎಲ್ಲರಿಗೂ ದಾರವಾಡದ ಪ್ರಖ್ಯಾತ ಬಾಬು ಸಿಂಗ್ ಥಾಕೂರ್ ಪೇಡಾ ನೀಡುವ ವ್ಯವಸ್ಥೆ ಮಾಡಿದ್ದೆ.
  ದಾರವಾಡದ ಗೌಳಿಗರು ಸಾಕುವ ಎಮ್ಮೆ ಹಾಲು ಸಕ್ಕರೆ ಜೊತೆಗೆ ಅವರದ್ದೇ ಆದ ಕುಟುಂಬದ ವಿದಾನದಲ್ಲಿ ತಯಾರಿಸುವ ದಾರವಾಡದ ಪೇಡಾಕ್ಕೆ ಜೀಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ದೊರೆತಿದೆ ಅಂದರೆ ಅರ್ಥವಾದೀತು ದಾರವಾಡ ಪೇಡದ ಪ್ರಖ್ಯಾತಿ.
  19 ನೇ ಶತಮಾನದ ಶುರುವಿನಲ್ಲಿ ದೂರದ ಉತ್ತರ ಪ್ರದೇಶದ ಉನ್ನೋ ಪ್ರಾಂತ್ರ್ಯದಿಂದ  ವಲಸೆ ಬಂದ ರಾಮ ರತನ್ ಸಿಂಗ್ ಠಾಕೂರ್ ಪ್ರಾರಂಬಿಸಿದ ಈ ಪೇಡಾ ಪ್ರಾರಂಭದಲ್ಲಿ ಸ್ಥಳಿಯ ಜನರಿಗಾಗಿ ಮಾತ್ರ ತಯಾರಿಸುತ್ತಿದ್ದರಂತೆ ಇವರ ಮೊಮ್ಮಗ ಬಾಬು ಸಿಂಗ್ ಠಾಕೂರ್ ಅಜ್ಜನ ಉದ್ದಿಮೆಯನ್ನು ವಿಸ್ತರಿಸುತ್ತಾರೆ ಇವರ ಲೈನ್ ಬಜಾರ್ ಸ್ಟೋರ್ ನಲ್ಲಿ ಮಾರಾಟ ಮಾಡುತ್ತಿದ್ದರಿಂದ ಸ್ಥಳಿಯರು ಲೈನ್ ಬಜಾರ್ ಪೇಡಾ ಅಂತಲೇ ಬಾಬು ಸಿಂಗ್ ಠಾಕೂರ್ ಪೇಡಾಕ್ಕೆ ಕರೆಯುತ್ತಾರೆ (ಮಿಶ್ರಾ ಎಂಬ ಕಂಪನಿ ಪೇಡಾ ಕೂಡ ಮಾರುಕಟ್ಟೆಯಲ್ಲಿದೆ).
  ದಾರವಾಡದಲ್ಲಿ ಇವರ ಪೇಡಾ ತಯಾರಿಗಾಗಿ ದೊಡ್ಡ ಪ್ರಮಾಣದ ಎಮ್ಮೆ ಹಾಲು ಪೂರೈಸಲಿಕ್ಕಾಗಿ ಗೌಳಿಗರು ಹೆಚ್ಚು ಹೆಚ್ಚು ಎಮ್ಮೆ ಸಾಕಿದ್ದಾರೆ.
  ಇವತ್ತು ದೇಶದ ಪ್ರಮುಖ ನಗರಗಳಲ್ಲಿ ಬಾಬು ಸಿಂಗ್ ಠಾಕೂರ್ ಪೇಡಾದ ಮಾರಾಟ ಮಳಿಗೆ ಪ್ರಾರಂಭ ಆಗಿದೆ, ರುಚಿ - ಶುಚಿಯಲ್ಲಿ ರಾಜಿ ಇಲ್ಲ, ಇವರ ತಯಾರಿಕಾ ಘಟಕ ಕೂಡ ಮನುಷ್ಯನ ಕೈ ಬೆರಳು ನೇರ ತಾಕದಂತೆ ಸುರಕ್ಷಿತವಾಗಿ ಆರೋಗ್ಯಕರ ವಾತಾವರಣದಲ್ಲಿ ತಯಾರಾಗಿ ಅತ್ಯುತ್ತಮವಾಗಿ ಪ್ಯಾಕ್ ಮಾಡಿ ಗ್ರಾಹಕರಿಗೆ ನೀಡುತ್ತಾರೆ.
  ಮಲೆನಾಡಿನಲ್ಲೂ ಅನೇಕ ಪಾರಂಪರ್ಯವಾದ ಸಿಹಿ ತಿನಿಸು ಕೂಡ ಇದೆ, ಕೆಲವರು ತಯಾರಿಸಿ ಮಾರಾಟ ಪ್ರಾರಂಬಿಸುತ್ತಾರೆ ಒಂದೆರೆಡು ವರ್ಷದಲ್ಲಿ ಖ್ಯಾತಿ ಪಡೆದ ಮೇಲೆ ಕಮರ್ಷಿಯಲ್ ಪ್ರೊಡಕ್ಷನ್ ನಲ್ಲಿ ರುಚಿ - ಶುಚಿ- ಗುಣಮಟ್ಟದ ಪ್ಯಾಕಿಂಗ್ ಮಾಡದೆ ಮಾರುಕಟ್ಟೆಯಿಂದ ದೂರ ಆಗುತ್ತಾರೆ ಕೇಳಿದರೆ ಬೇರೇನೋ ಕಥೆ ಹೇಳುತ್ತಾರೆ.
  ದಾರವಾಡದ ಬಾಬು ಸಿಂಗ್ ಠಾಕೂರ್ ಕುಟುಂಬದ ಈ ಯಶೋಗಾಥೆ,ಜಿಯೋಗ್ರಾಪಿಕಲ್ ಇಂಡಿಕೇಷನ್ ಟ್ಯಾಗ್ ಪಡೆದ ಅವರ ಪೇಡಾ, ದೊಡ್ಡ ಪಟ್ಟಣಗಳಲ್ಲಿ ಅವರ ಬ್ರಾಂಚ್ ಗಳು ಮತ್ತು ಸ್ಥಳಿಯ ಗೌಳಿಗರಿಗೆ ಎಮ್ಮೆ ಸಾಕಾಣಿಕೆ ಕಾರಣಗಳು ಮಲೆನಾಡ ನವ ಉದ್ಯಮಿಗಳಿಗೆ ಪ್ರೇರಣೆ ಆಗಲಿ ಎ೦ದು ಹಾರೈಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...