Skip to main content

Blog number 888,ಜಾತಿ ಧರ್ಮ ಮೀರಿದ ಮನುಷ್ಯತ್ವದ ಇಂತಹ ಯುವಕರು ಪ್ರತಿ ಹಳ್ಳಿಯಲ್ಲಿರಬೇಕು, ಜಾತ್ಯಾತೀತ ನಾಯಕರಾಗಿದ್ದ ದಿವಂಗತ ಹಾಜಿ ಗನ್ನಿ ಸಾಬರ ಕಿರಿಯ ಪುತ್ರ ಜಿಯಾವುಲ್ಲಾ ನಮ್ಮ ಊರಿನ ಸರ್ವ ಜನಾಂಗದ ಸರ್ವಪ್ರಿಯ ಯುವ ಮುಂದಾಳು

#ಹಾಜಿ_ಗನ್ನಿ_ಸಾಬರ_ಸದ್ಗುಣಗಳಿರುವ_ಅವರ_ಪುತ್ರ_ಜಿಯಾವುಲ್ಲಾ 

#ನಮ್ಮ_ಊರ_ಜಾತ್ಯಾತೀತ_ಯುವ_ಮುಂದಾಳು.

#ಹಿಂದೂ_ಮುಸ್ಲಿಂ_ಸೌಹಾರ್ದತೆಗೆ_ಮುಂದುವರಿದ_ಕುಟುಂಬ_ಸದಸ್ಯ.

#ಸಾಮಾಜಿಕ_ಜಾಲತಾಣದಲ್ಲಿ_ಸಕ್ರಿಯರು.

   ಜಿಯಾ ಉಲ್ಲಾ ನಮ್ಮ ಆತ್ಮೀಯರಾಗಿದ್ದ ದಿವಂಗತ ಹಾಜಿ ಗನ್ನಿ ಸಾಹೇಬರ ಕಿರಿಯ ಪುತ್ರ, ಇಪ್ಪತ್ತು ವಷ೯ದ ಹಿಂದೆ ಸಾಗರ ತಾಲ್ಲೂಕಿನಲ್ಲಿ ಹಿಂದೂ ಮುಸ್ಲಿಂ ಗಲಾಟೆಗಳಾದಾಗ ಅದು ಸಾಗರ ಪಟ್ಟಣದಿಂದ ಶುರುವಾಗಿ ತಾಲ್ಲೂಕಿನ ತಾಳಗುಪ್ಪ ಮತ್ತು ತ್ಯಾಗರ್ತಿ ಅಂತ ಊರುಗಳಿಗೆ ಹಬ್ಬಿತ್ತು ಆದರೆ ಆ ಕಾಲದಲ್ಲಿ ಆರು ಮಸೀದಿಗಳಿರುವ ಆನಂದಪುರಂ ಹೋಬಳಿಯಲ್ಲಿ ಇಂತಹ ಘಟನೆ ಉದ್ಭವಿಸದಿರಲು ಗನ್ನಿಸಾಹೇಬರಂತವರ ಯೋಗ್ಯ ನಾಯಕತ್ವ.
  ಮರುದಿನ ಅಂತಹ ಗಲಾಟೆಯ ಕಿಡಿ ಹತ್ತುವ ಸೂಚನೆ ಗೊತ್ತಾಗಿ ತಡ ರಾತ್ರಿಯಲ್ಲಿ ಎರೆಡೂ ಗುಂಪಿನ ಯುವಕರನ್ನು ಒಂದು ಗೂಡಿಸಿ ಅವರಿಗೆ ಗನ್ನಿಸಾಹೇಬರು ಹೇಳಿದ ಬುದ್ದಿ ಮಾತು ಮರುದಿನ ಇಡೀ ಹೋಬಳಿ ಶಾಂತಿ ಕಾಪಾಡಿತು, ಯುವಕರ ಹಿಂದಿದ್ದ ಕಿಡಿಗೇಡಿಗಳಿಗೆ ನಿರಾಶೆ ಆಗಿತ್ತು.
  ಈಗ ಗನ್ನಿ ಸಾಹೇಬರು ಇಲ್ಲ, ಅವರ ಕಿರಿಯ ಪುತ್ರ ಜೀಯಾವುಲ್ಲಾನಲ್ಲಿ ತಂದೆಯ ಈ ಗುಣಗಳು ನೋಡಿ ನನಗೆ ಸಂತೋಷ ಆಗಿದೆ.
  S.S. L.C ನಂತರ ಅವರ ದಮ೯ದ ಪಾಠ ಕಲಿತು ಕೆಲ ಕಾಲ ಮಸೀದಿ ಹಜರತ್ ಆಗಿ ನಂತರ ವಿದೇಶದಲ್ಲಿ ಕೆಲಸ ಮಾಡಿ ಊರಿಗೆ ಬಂದು ಕೆಲ ಕಾಲ ಹೋಟೆಲ್ ನಡೆಸಿ ಕೊರಾನ ಕಾಲದಲ್ಲಿ ಅದನ್ನು ನಿಲ್ಲಿಸಿ ನಮ್ಮ ಊರಲ್ಲಿ ಹೋಲ್ ಸೇಲ್ ದಿನಸಿ ಅಂಗಡಿ ಪ್ರಾರಂಬಿಸಿದ್ದಾರೆ, ಇದು ನಮ್ಮ ಊರಿನ ಮೊದಲ ಸುಸಜ್ಜಿತ ದಿನಸಿ ಅಂಗಡಿ ನಾನು ನಮ್ಮ ಮನೆ ಬಳಕೆಗೆ, ಹೋಟೆಲ್ ಗೆ ಇವರ ಅಂಗಡಿಯಿಂದನೇ ದಿನಸಿ ಖರೀದಿಸುತ್ತೇನೆ.
   ಎರೆಡು ವರ್ಷದ ಹಿಂದೆ ಆನಂದಪುರಂ ಮಾರಿ ಜಾತ್ರೆಯಂದು ಆನಂದಪುರಂ ರಾಷ್ಟ್ರೀಯ ಹೆದ್ದಾರಿ ವಾಹನ ದಟ್ಟಣೆಯಿಂದ ರೋಡ್ ಬ್ಲಾಕ್ ಆಗಿ ಕೆಲ ಕಿಲೋ ಮೀಟರ್ ದೂರದವರೆಗೆ ವಾಹನ ಸಂಜೆ 6.30 ರಿಂದ ರಾತ್ರಿ 10 ರ ತನಕ ಬಂದ್ ಆಗಿತ್ತು ಯಾರಿಗೂ ಏನೂ ಮಾಡಲು ತೋಚಲಿಲ್ಲ ಪೋಲಿಸರು ಕಡಿಮೆ ಸಂಖ್ಯೆಯಲ್ಲಿದ್ದರು ಈ ಸಮಯದಲ್ಲಿ ಜಿಯಾವುಲ್ಲಾ ತನ್ನದೇ ಕೆಲ ಗೆಳೆಯರ ಜೊತೆ ಮಾಡಿಕೊಂಡು ಸತತ ಒಂದೆರೆಡು ಗಂಟೆ ಶ್ರಮಪಟ್ಟು ತನ್ನದೇ ಬುದ್ದಿವಂತಿಕೆಯಿಂದ ಸಂಚಾರ ಸುಗಮ ಮಾಡಿದ್ದು ನಾನು ಸ್ವತಃ ನೋಡಿದ್ದೆ.
  ಊರಲ್ಲಿ ಏನೇ ತೊಂದರೆ ಆದರೂ ಮುನ್ನುಗ್ಗಿ ಅದನ್ನು ಪರಿಹರಿಸಲು ಪ್ರಯತ್ನಿಸುವ ದೇಶದ ಕಾನೂನು ಸಂವಿದಾನ ಗೌರವಿಸುವ,ಎಲ್ಲಾ ದರ್ಮಿಯರನ್ನು ಅವರ ಆಚರಣೆ ಗೌರವಿಸುವ ಜೀಯಾವುಲ್ಲಾ ನಮ್ಮ ಊರಿನಲ್ಲಿ ಸರ್ವಜನಾ೦ಗದ ಸರ್ವಪ್ರಿಯ ವ್ಯಕ್ತಿ.
  ಕೊರಾನ ಬಂದಾಗ ಆನಂದಪುರಂ ಜಾಮಿಯ ಮಸೀದಿ ಎದರು ಅವರ ಧರ್ಮದ ಗುರುಗಳು ಮತ್ತ ಮತ್ತು ಮುಖಂಡರನ್ನು ಸೇರಿಸಿ ಸರ್ಕಾರದ ಲಾಕ್ ಡೌನ್ ನಿಯಮದಂತೆ ಸಾರ್ವಜನಿಕ ಪ್ರಾರ್ಥನೆ ರದ್ದು ಮಾಡಿದ್ದನ್ನು ಪಾಲಿಸುವಂತೆ ಇವರು ಕನ್ನಡದಲ್ಲಿ ಮಾಡಿದ ವಿನಂತಿಯ ವಿಡಿಯೋ ವೈರಲ್ ಆಗಿ ಲಕ್ಷಾಂತರ ಜನ ವೀಕ್ಷಿಸಿದ್ದು ದಾಖಲೆ ಆಗಿತ್ತು.
  ಇವರು ಸಾಮಾಜಿಕ ಜಾಲ ತಾಣದಲ್ಲಿ ಸರ್ವ ಧರ್ಮ ಸಹಿಷ್ಣುತೆ ಸಾರುವ ವಿಡಿಯೋಗಳು, ಮತಾಂದರ ಕೆಟ್ಟ ಬರಹಗಳಿಗೆ ತಿಳಿ ಹೇಳುವ, ಸ್ಟದರ್ಮಿಯರಿಗೆ ಯಾರದೇ ಪ್ರಚೋದನೆಗೆ ಒಳಗಾಗದಂತೆ, ದೇವರ ಮೇಲಿನ ಭಕ್ತಿ ಆಚರಣೆಗಳ ಅರ್ಥ, ದರ್ಮಗ್ರಂಥಗಳ ಸಾರಗಳನ್ನು ಮತ್ತು ಮೂಡನಂಬಿಕೆಗಳನ್ನು ನಂಬದಂತೆ ಆಚರಿಸದಂತೆ ಹಾಕುವ ಪೋಸ್ಟ್ ಗಳು ಸಾವಿರಾರು ಜನ ನೋಡುತ್ತಾರೆ.
  ನನ್ನ ಎರಡನೆ ಪುಸ್ತಕ ಸಣ್ಣ ಕಥಾ ಸಂಕಲನ "ಭಟ್ಟರ ಬೊಂಡಾದ ಬಾಂಡ್ಲಿಯಲ್ಲಿ " #ಬಿಲಾಲಿ_ಬಿಲ್ಲಿ_ಅಭ್ಯಂಜನ ಪುಸ್ತಕದಲ್ಲಿ ಕೆಲವು ಕಥೆಗಳಲ್ಲಿ ನಮ್ಮ ಗನ್ನಿಸಾಹೇಬರ ಉಲ್ಲೇಖವಿದೆ ಈ ಕಥಾ ಸಂಕಲನ ಗನ್ನಿ ಸಾಹೇಬರ ಕಿರಿಯ ಪುತ್ರ ಓದುವ ಹವ್ಯಾಸ ಇರುವ ಜೀಯಾವುಲ್ಲಾಗೆ ಮೊನ್ನೆ ಅವರ ಅಣ್ಣನ ಮಗಳ ವಿವಾಹ ಆಹ್ವಾನ ಪತ್ರಿಕೆ ನೀಡಲು ಬಂದಾಗ ನೀಡಿದೆ, ಇಬ್ಬರೂ ಸೇರಿ ಅವರ ತಂದೆಯ ನೆನಪಿನಲ್ಲಿ ಕೆಲ ಘಟನೆ ನೆನಪಿಸಿಕೊಂಡೆವು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...