Skip to main content

Blog number 881, ಸಂಬಾವಿತ ಯೋಗ್ಯ ಕಲಾವಿದ ವಿಜಯ್ ಮತ್ತು ಅವರ ಸಂಸ್ಥೆ ವಿಜಯ ಆರ್ಟ್ಸ್ ನ 30 ವರ್ಷದ ಹಳೆಯ ಗ್ರಾಹಕ ನಾನು,ಸ್ಥಳಿಯ ಕಲಾವಿದರಿಗೆ ಸ್ಥಳಿಯರಿಂದ ಬೆಂಬಲ ಪ್ರೋತ್ಸಾಹ ಸಿಗುವಂತಾಗಲಿ

#ನಮ್ಮ_ಊರಿನ_ಕಲಾವಿದ

#ವಿಜಯ_ಆರ್ಟ್ಸ್_ವಿಜಯ

#ನಾನು_ಕಳೆದ_ಮುವ್ವತ್ತು_ವರ್ಷದಿಂದ_ಇವರ_ಗ್ರಾಹಕ.

#ಸೌಮ್ಯ_ಸ್ವಬಾವದ_ಸಜ್ಜನ.

 1992 ರಿಂದ ಅಂದರೆ ಕಳೆದ 30 ವರ್ಷದಿಂದ ನಾನು ವಿಜಯ ಆರ್ಟ್ಸ್ ನ ಗ್ರಾಹಕ ಅಂದರೆ ಆಗೆಲ್ಲ ಹೋರಾಟ, ಸಭೆ ಸಮಾರಂಭ ಅಂದರೆ ಬಿಳಿ ಬಟ್ಟೆಯ ಮೇಲೆ ಬ್ರಷ್ ನಿಂದ ನೀಲಿ-ಹಸಿರು -ಕಪ್ಪು ಮತ್ತು ಕೆಂಪು ಬಣ್ಣದಲ್ಲಿ ಬ್ಯಾನರ್ ಬರೆಯುವ ಕಾಲ.
  (ಇದು 21- ಜನವರಿ -2004 ರಲ್ಲಿ ನನ್ನ ಸಾಗರ ತಾಲ್ಲೂಕ್ ಪಾದಯಾತ್ರೆಗೆ ವಿಜಯ ಬರೆದ ಬ್ಯಾನರ್ ಇದೇ ಬಟ್ಟೆಬ್ಯಾನರ್ ನ ಕೊನೆಯದ್ದು ನಂತರ ಎಲ್ಲಾ ಪ್ಲೆಕ್ಸ್ ಕಾಲ)
ಆನಂದಪುರಂನ ದಾಸಕೊಪ್ಪದ ವಿಜಯ ಆನಂದಪುರಂನ ಮೊದಲ ಬ್ಯಾನರ್ ಆರ್ಟಿಸ್ಟ್ ಅದಕ್ಕೂ ಮೊದಲು ಸಾಗರದ ಪ್ರಖ್ಯಾತ ಕಲಾವಿದರಾದ ಮಚಾದೋ, ಶಾಂತಾ ಆರ್ಟ್ಸ್ ಹತ್ತಿರವೇ ಹೋಗಿ ಬ್ಯಾನರ್ ಬರೆಸಿಕೊಂಡು ಬರಬೇಕಾಗಿತ್ತು.
  1992 ರಿಂದ 2002ರ ತನಕ ಕೈ ಬರಹದ ಬ್ಯಾನರ್ ಕಾಲ ಕಲಾವಿದರಿಗೆ ಕೈ ತುಂಬಾ ಕೆಲಸ, ಬೋರ್ಡ್ ಕೂಡ ಕೈ ಬರಹದಲ್ಲಿ ಬರೆಯುತ್ತಿದ್ದರು, ವಾಹನಗಳ ನಂಬರ್ ಪ್ಲೇಟ್ ಕೂಡ ಆದರೆ ಈಗ ಕಾಲ ಬದಲಾಗಿದೆ ಪ್ಲೆಕ್ಸ್, ಸ್ಟಿಕರ್ ಕಟಿಂಗ್ ಗಳು ಬಂದಿದೆ, ಕಲಾವಿದರ ಕೆಲಸವೆಲ್ಲ ಕಂಪ್ಯೂಟರ್ ಮುಂದೆ ಕುಳಿತು ಡಿಸೈನ್ ಮಾಡಿ ಯಂತ್ರದಲ್ಲಿ ಮುದ್ರಿಸುವ ಕೆಲಸ.
   ಆದ್ದರಿಂದ ಅನೇಕ ಕಲಾವಿದರು ಈ ಕ್ಷೇತ್ರವನ್ನೆ ಬಿಟ್ಟು ಬೇರೆ ಕೆಲಸಕ್ಕೆ ಬದಲಾದರು.
  ಆನಂದಪುರಂನ ವಿಜಯ ಮಾತ್ರ ಮುವ್ವತ್ರು ವರ್ಷದಿಂದ ಇದೇ ವೃತ್ತಿಯಲ್ಲಿ ಯಶಸ್ವಿಯಾಗಿ ಮುಂದುವರಿದಿದ್ದಾರೆ ಸ್ಥಳಿಯ ಪ್ಲೆಕ್ಸ್ ಆರ್ಡರ್ ಪಡೆದು ಗ್ರಾಹಕರ ಅಪೇಕ್ಷೆಯಂತೆ ಕಂಪ್ಯೂಟರ್ ಡಿಸೈನ್ ಮಾಡಿ ಪ್ರೂಪ್ ಗ್ರಾಹಕರು ಅನುಮೋದಿಸಿದ ನಂತರ ಶಿವಮೊಗ್ಗದಿಂದ ಪ್ಲೆಕ್ಸ್ ಮಾಡಿಸಿ ತಂದು ಅಳವಡಿಸಿಕೊಡುತ್ತಾರೆ.
  ಸೌಮ್ಯ ಸ್ವಬಾವದ ಹಣದ ಹಪಾಹಪಿ ಇಲ್ಲದ, ತನ್ನದೆಷ್ಟೇ ಜೀವನದ ನೋವಿದ್ದರು ಗ್ರಾಹಕರ ಹತ್ತಿರ ಹಸನ್ಮುಖರಾಗಿ ವ್ಯವಹರಿಸುತ್ತಾರೆ.
   ಓದುವ ಹವ್ಯಾಸ, ಸಾಮಾಜಿಕ ಜಾಲ ತಾಣದಲ್ಲಿ ಹೆಚ್ಚು ವಿಷಯ ತಿಳಿದುಕೊಳ್ಳುವ ವಿಜಯ್ ಎಂದರೆ ನನಗೆ ಅಚ್ಚುಮೆಚ್ಚು,ನಮ್ಮ ಊರಿನ ವರಸಿದ್ಧಿವಿನಾಯಕ ದೇವರ ರಥೋತ್ಸವ - ಜಾತ್ರೆಯ ಪ್ರಚಾರಕ್ಕೆ ಪ್ರತಿ ವರ್ಷ ಪ್ಲೆಕ್ಸ್ ಮಾಡುವುದು ವಿಜಯರದ್ದೆ ಕೆಲಸ 16 ವರ್ಷದಿಂದ ಅವರೇ ಈ ಕೆಲಸ ನಿರಂತರ ಮಾಡುತ್ತಾ ಇದ್ದಾರೆ.
  ನನ್ನ ಲಾಡ್ಜ್ -ರೆಸ್ಟೋರಾಂಟ್- ಕಲ್ಯಾಣ ಮಂಟಪಗಳಿಗೆ ಕೂಡ ಇವರೇ ಖಾಯಂ ಆಗಿದ್ದಾರೆ.
   ಮೊನ್ನೆ ನಮ್ಮ #ಚಂಪಕಾ_ಪ್ಯಾರಡೈಸ್ ಪುನರಾಂಭಕ್ಕಾಗಿ ಹೊಸ ಬೋರ್ಡ್ ಗಳನ್ನು ವಿಜಯ್ ಸುಂದರವಾಗಿ ಮಾಡಿ ತಂದಿದ್ದಾರೆ, ಪ್ರತಿ ಊರವರೂ ಅವರವರ ಊರಿನ ಸ್ಥಳಿಯ ಕಲಾವಿದರಿಗೆ ಅವಕಾಶ ನೀಡಿ ಅವರ ಆರ್ಥಿಕ ಸದೃಡತೆಗೆ ಈ ಮೂಲಕ ಸಹಾಯ ಮಾಡಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...