Skip to main content

Blog number 893.. ಜಾರ್ಜ್ ಪನಾ೯೦ಡೀಸರು ತಮ್ಮ ತವರು ರಾಜ್ಯದಲ್ಲಿ ರಾಜಕೀಯ ಪಕ್ಷ ಕಟ್ಟುವ ಕನಸು ನನಸಾಗದಂತೆ ಮಾಡುವಲ್ಲಿ 2004 ರಲ್ಲಿ ಅನಂತ ಕುಮಾರರ ದೊಡ್ಡ ಪಾಲಿದೆ.

#ಇವತ್ತು_ಉಡುಪಿ_ಸಂಸದರಾದ_ಐ_ಎಂ_ಜಯರಾಂಶೆಟ್ಟರು_ನೆನಪಾದರು.

#ಜೊತೆಗೆ_ಜಾರ್ಜ್_ಪರ್ನಾಂಡೀಸರೂ

#ಜಾಜ್೯ರ_ಸಮತಾ_ಪಾರ್ಟಿಯ_ಶಾಸನಗಳು_ಮತ್ತು_ನಿಯಮಗಳನ್ನು_ಕನ್ನಡಕ್ಕೆ_ಅನುವಾದಿಸುವ_ಅವಕಾಶ_ನನ್ನದಾಗಿದ್ದು.

   ಜಾರ್ಜ್ ಫರ್ನಾಂಡಿಸ್ ರು ವಾಜಪೇಯಿಯವರ ಎನ್. ಡಿ.ಎ. ಸರ್ಕಾರದಲ್ಲಿ ದೇಶದ ರಕ್ಷಣಾ ಸಚಿವರು, ಕರ್ನಾಟಕದ ಶ್ರೀನಿವಾಸ್ ಪ್ರಸಾದರು ಆಹಾರ ಮತ್ತು ನಾಗರೀಕ ಸೇವೆ ಖಾತೆಯ ಕೇಂದ್ರದ ರಾಜ್ಯ ಸಚಿವರು ಆಗಲೇ ಜಾರ್ಜ್ ರಿಗೆ ತಮ್ಮ ಹುಟ್ಟಿನ ಮೂಲದ ಕನಾ೯ಟಕ ರಾಜ್ಯದಲ್ಲಿ ತಮ್ಮ ಸಮತಾ ಪಾಟಿ೯ ಕಟ್ಟುವ ಆಕಾಂಕ್ಷೆ ಇರುತ್ತದೆ.
  ಅದಕ್ಕಾಗಿ ಬೈಂದೂರಿನಿಂದ ಒಂದು ಅವದಿಗೆ ಬಿಜೆಪಿಯಿಂದ ಶಾಸಕರಾಗಿ, ಉಡುಪಿ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದ (ಆಸ್ಕರ್ ಫರ್ನಾಂಡಿಸ್ ರನ್ನು ಸೋಲಿಸಿ) ಯಡೂರಪ್ಪರಿಗೆ ಆಪ್ತರಾಗಿದ್ದ ಐ.ಎಂ. ಜಯರಾಂ ಶೆಟ್ಟರನ್ನು ಸಮತಾ ಪಾರ್ಟಿಗೆ ಸೇರಿಸಿಕೊಂಡು ಕರ್ನಾಟಕ ರಾಜ್ಯದ ಅಧ್ಯಕ್ಷರನ್ನಾಗಿಸಿದ್ದರು.
  ಐ.ಎಂ. ಜಯರಾಂ ಶೆಟ್ಟರು ಬಿಜೆಪಿ ಬಿಟ್ಟು ಬರಲು ಕಾರಣ ಈಗ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವ ಉಡುಪಿ ಮೂಲದ ಅನಿಲ್ ಪ್ರಸಾದ್ ಹೆಗಡೆ ಮುಖ್ಯ ಕಾರಣ.
  ಕರ್ನಾಟಕ ರಾಜ್ಯದಲ್ಲಿ ಜಾರ್ಜ್ ರ ಸಮತಾ ಪಾರ್ಟಿ ಮತ್ತು  ಬಿಜೆಪಿ ಕೆಲ ಕ್ಷೇತ್ರಗಳಲ್ಲಿ ಸೀಟು ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ NDA ಸರ್ಕಾರ ರಚಿಸುವ ಉದ್ದೇಶವೂ ಅವರದ್ದು ಆಗಿತ್ತು.
  ಜಾರ್ಜ್ ರವರು ತಿಂಗಳಿಗೆ 2-3 ಸಾರಿ ಬೆಂಗಳೂರಿಗೆ ಬರುತ್ತಿದ್ದರು ಆದರೆ ಅವರು ಬರುವುದು ಹೋಗುವುದು ಪತ್ರಿಕೆಯವರಿಗೂ ಮಾಹಿತಿ ಇರುತ್ತಿರಲಿಲ್ಲ.
  ಪ್ರತಿ ಸಾರಿ ಬಂದಾಗಲೂ ಸಮತಾ ಪಾರ್ಟಿಯ constitution and rules ಪುಸ್ತಿಕೆ ಕನ್ನಡದಲ್ಲಿ ಅನುವಾದಿಸಿ ಪ್ರಕಟಿಸಿ ಎಲ್ಲಾ ಪದಾಧಿಕಾರಿಗಳು ಅದನ್ನು ಓದಬೇಕೆಂದು ಹೇಳಿ ಹೋಗುತ್ತಿದ್ದರು ಆದರೆ ಹೊಸದಾಗಿ ರಾಜ್ಯದಲ್ಲಿ ಬೇರೆ ಪಕ್ಷದಿಂದ ಸಮತಾ ಪಾರ್ಟಿಗೆ ಬಂದವರು ಜಾರ್ಜ್ ರ ಎದುರು ತಲೆ ಆಡಿಸಿ ಮರೆತು ಬಿಡುತ್ತಿದ್ದರು.
  ಅವತ್ತು ಐ.ಎಂ. ಜಯರಾಂ ಶೆಟ್ಟರ ಮನೆಯ ಡೈನಿಂಗ್ ಟೇಬಲ್ ಮೇಲೆ ಕುಚುಲಕ್ಕಿ ಅನ್ನ ಮತ್ತು ಸಮುದ್ರದ ವಿವಿದ ಮೀನಿನ ಪದಾರ್ಥಗಳ ಎದರು ಕುಳಿತ ಜಾರ್ಜ್ ಸ್ವಲ್ಪ ಬೇಸರದಲ್ಲಿ ಪಕ್ಷದ ರೂಲ್ಸ್ ಪುಸ್ತಕ ಕನ್ನಡದಲ್ಲಿ ಅನುವಾದಿಸಿ ಅಚ್ಚುಹಾಕಲು ಸಾಧ್ಯವಿಲ್ಲವಾ? ಎಂದಾಗ ಇದನ್ನು ಮರೆತಿದ್ದ ಐ.ಎಂ. ಜಯರಾಂ ಶೆಟ್ಟರು ಜಾಜ್೯ರ ಎದರು ಈ ಜವಾಬ್ದಾರಿ ನನಗೆ ವಹಿಸಿ ಬಿಟ್ಟರು ಅಷ್ಟೆ ಅಲ್ಲ ಅದನ್ನು ಜಾರ್ಜ್ ಸ್ವತಃ ಬಂದು ಬಿಡುಗಡೆ ಮಾಡಬೇಕೆಂದು ವಿನಂತಿಸಿದರು ಇದಕ್ಕೆ ಜಾರ್ಜ್ ರೂ ಒಪ್ಪಿಕೊಂಡರು.
  ಊಟದ ನಂತರ ಹೊರಡುವಾಗ ಜಾರ್ಜ್ ರು ತಮ್ಮ ಖಾದಿ ಜುಬ್ಬದ ಜೇಬಿನಿಂದ ಸಣ್ಣ ಕೈ ಪುಸ್ತಕ ತೆರೆದು ನೋಡಿ ಮುಂದಿನ ವಾರದ ಒಂದು ದಿನ ನಿಗದಿ ಮಾಡಿ ಗುರುತು ಮಾಡಿಕೊಂಡರು.
   ಅವರನ್ನು ಜಯರಾಂ ಶೆಟ್ಟರು ಮತ್ತು ಪಕ್ಷದ ರಾಜ್ಯ ಪ್ರದಾನ ಕಾಯ೯ದರ್ಶಿಗಳಾಗಿದ್ದ ನಾವೆಲ್ಲ ವಿಮಾನ ನಿಲ್ದಾಣಕ್ಕೆ ಬಿಟ್ಟು ಬರುವಾಗ ಐ.ಎಂ. ಜಯರಾಂ. ಶೆಟ್ಟರು "ಅರುಣ್ ಪ್ರಸಾದರೆ ಹೇಗಾದರೂ ಮಾಡಿ ಮುಂದಿನ ವಾರ ಆ ಪುಸ್ತಕ ಮಾತ್ರ ರೆಡಿ ಇಡಲೇ" ಬೇಕು ಅಂದರು ನನಗೆ ಅದನ್ನು ಅನುವಾದಿಸುವ ಕೆಲಸದ ಜೊತೆ ಅದನ್ನು ಡಿಟಿಪಿ ಮಾಡಿಸಿ ಪ್ರೂಪ್ ನೋಡಿ ಅಚ್ಚು ಹಾಕಿಸುವ ಕೆಲಸವೂ ಸೇರಿಕೊಂಡಿತು.
  ಬೆಂಗಳೂರಿನ ರಾಜ್ ಕುಮಾರ್ ರಸ್ತೆಯ #ಈ_ಸಂಜೆ ವೆಂಕಟೇಶರನ್ನು ಬೇಟಿ ಮಾಡಿ ನಮ್ಮ ತುರ್ತು ಉದ್ದೇಶದ ಪುಸ್ತಕದ ಬಗ್ಗೆ ತಿಳಿಸಿದಾಗ ಅವರು ಅವರ ಸಹೋದರ ನಾಗರಾಜ್ ಗೆ ತಕ್ಷಣ ಮುದ್ರಿಸಿ ಕೊಡುವ ಜವಾಬ್ದಾರಿ ವಹಿಸಿದರು.
  ಮರುದಿನ ಸಂಜೆ ಈ ಸಂಜೆ ಕಛೇರಿಗೆ #ಸಮತಾ_ಪಾರ್ಟಿ_ಶಾಸನಗಳು_ಮತ್ತು_ನಿಯಮಗಳು ಕೈಪಿಡಿಯ ಕನ್ನಡ ಅನುವಾದದ ಕರಡು ನೀಡಿದೆ ಮರುದಿನ ಬೆಳಿಗ್ಗೆ 10ಕ್ಕೆ ಇದರ ಒಂದೊಂದು ಪುಟ ಒಬ್ಬೊಬ್ಬ DTP ಆಪರೇಟರಿಗೆ ನೀಡಿದರು ಅರ್ಧ ಗಂಟೆಯಲ್ಲಿ ಎಲ್ಲಾ ಪುಟಗಳು ತಯಾರಾಯಿತು, ನನಗೆ ಅದನ್ನು ಇನ್ನೊಮ್ಮೆ ಓದಿ ತಿದ್ದಿ ಕೊಡುವ ಕೆಲಸ ನಂತರ ಅವರ ಅತ್ಯಾದುನಿಕ ಯಂತ್ರದಲ್ಲಿ ಪುಸ್ತಕ ಅಚ್ಚಾಯಿತು ಮುಖಪುಟ ಹಸಿರು ಬಣ್ಣದಲ್ಲಿ ಇನ್ನೊಂದು ಯಂತ್ರದಲ್ಲಿ ನಂತರ ಅವರ ಇನ್ನೊಂದು ಪಕ್ಕದ ಕಟ್ಟಡದಲ್ಲಿ ಬೈಂಡಿಂಗ್ ಆಗಿ ಪ್ಯಾಕ್ ಆಗಿ 2000 ಪ್ರತಿಗಳು ಬೆಂಗಳೂರಿನ ಬಸವೇಶ್ವರ ನಗರದ ಸಮತಾ ಪಾರ್ಟಿ ಕಛೇರಿಗೆ ರಾತ್ರಿ 8ಕ್ಕೆ ತಲುಪಿತು.
  ರಾಜ್ಯ ಅಧ್ಯಕ್ಷರಾಗಿದ್ದ ಐ.ಎ೦.ಜಯರಾಂ ಶೆಟ್ಟರಿಗೆ ನನ್ನ ಈ ಕೆಲಸ ತುಂಬಾ ಹಿಡಿಸಿತು ಇದರಿಂದ ಮುಂದಿನ ಜವಾಬ್ದಾರಿ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಸಮಾವೇಶದ ಹೆಚ್ಚುವರಿ ಜವಾಬ್ದಾರಿಯು ನೀಡಿದರು.
  ಜಯರಾಂ ಶೆಟ್ಟರು ಅವರ ಬಸ್ರೂರು ಮನೆಯಲ್ಲಿ ನಡೆಯುವ ಕಂಬಳಕ್ಕೆ ರಕ್ಷಣಾ ಮಂತ್ರಿ ಜಾರ್ಜರನ್ನು ಕರೆಸಿ ದೊಡ್ಡ ಸಭೆಯೂ ನಡೆಸಿದ್ದರು, ಕೋಟೇಶ್ವರದ ಶಾಲಾ ಆವರಣದಲ್ಲಿ ಅವರ ಹೆಲಿಕಾಪ್ಟರ್ ಲ್ಯಾಂಡ್ ಆಗಿತ್ತು.
  ನಂತರ ಜಾರ್ಜ್ ಮತ್ತು ನಿತೀಶ್ ರು ಸೇರಿ ಜನತಾ ದಳ ಸಂಯುಕ್ತ (JDU) ನಲ್ಲಿ ವಿಲೀನಗೊಳಿಸಿದರು ಆಗಲೂ ಐ.ಎಂ. ಜಯರಾಂ ಶೆಟ್ಟರನ್ನೆ ರಾಜ್ಯ ಅಧ್ಯಕ್ಷರನ್ನಾಗಿಸಿದರು ನಾನು JDU ರಾಜ್ಯ ಪ್ರದಾನ ಕಾರ್ಯದಶಿ೯ಯಾಗಿ ಮುಂದುವರಿದಿದ್ದೆ.
  ಇವತ್ತು ಪುಸ್ತಕಗಳ ಮಧ್ಯ ಈ ಪುಸ್ತಕ ನೋಡಿ ಐ.ಎಂ.ಜಯರಾಂ ಶೆಟ್ಟರು ಮತ್ತು ಜಾರ್ಜ್ ಪನಾ೯೦ಡೀಸರು ನೆನಪಾದರು.
  ಮುಂದೆ ವಿದಾನ ಸಭಾ ಚುನಾವಣೆಯಲ್ಲಿ ಸಂಸದರಾಗಿದ್ದ ಅನಂತಕುಮಾರರು ಜಾರ್ಜರ ವಿನಂತಿ ನಿರ್ಲಕ್ಷಿಸಿದರು ಜಾರ್ಜ್ ರ JDU  ಪಾರ್ಟಿಗಿಂತ ಅವರಿಗೆ ಆಗ ಬಿಜೆಪಿ ಸೇರಿದ್ದ ಬಂಗಾರಪ್ಪನವರು ಹಿತವಾದರು, ಅವರಿಗೆ ಬಂಗಾರಪ್ಪರ ಬಳಸಿ ಯಡೂರಪ್ಪರನ್ನು ಹಣಿಯುವ ಹಿಡನ್ ಅಜೆಂಡವೂ ಇತ್ತು. 
  ರಾಜ್ಯದಲ್ಲಿ ಬೈಂದೂರಿನಿಂದ ಐ.ಎ೦.ಜಯರಾಂ ಶೆಟ್ಟರು JDU ಪಾರ್ಟಿಯಿಂದ ಸ್ಪರ್ಧೆಗೆ ಒಪ್ಪಿ ಅಲ್ಲಿ ಬಿಜೆಪಿ ಅಭ್ಯರ್ಥಿ ಹಾಕುವುದಿಲ್ಲ ಎಂದಿದ್ದ ಅನಂತಕುಮಾರ್ ನಂತರ ಅವರ ಎದುರು ಬಿಜೆಪಿ ಅಭ್ಯರ್ಥಿ ಸ್ಪರ್ದೆಗೆ ಇಳಿಸಿ ಐ.ಎಂ.ಜಯರಾಂ ಶೆಟ್ಟರ ಮೇಲೆ ಸೇಡು ತೀರಿಸಿಕೊಂಡರು (ಬಿಜೆಪಿ ತೊರೆದು ಜಾರ್ಜ್ ಪಾರ್ಟಿ ಸೇರಿದ್ದು), ಯಡೂರಪ್ಪರ ವಿನಂತಿಯನ್ನೂ ಪರಿಗಣಿಸದಷ್ಟು ಕ್ರೂರ ವರ್ತನೆ ಅವರದ್ದಾಗಿತ್ತು ಇದರಿಂದ ಬೈಂದೂರಿನಲ್ಲಿ ಕಾಂಗ್ರೇಸ್ ನ ಗೋಪಾಲ ಪೂಜಾರರ ಗೆಲುವು ಸುಲಭ ಆಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ