Skip to main content

Blog number 899. ದೇವರ ಮಗನಾದ ನಾರಾಯಣ ಅಕಸ್ಮಿಕವಾಗಿ ಅಪಾಯಕಾರಿ ಅಪಘಾತ ವಲಯದಲ್ಲಿ ನಮಗೆ ದೊರೆತ ಪ್ರೀತಿಯ ಸಹೋದರ, ನಮಗೂ ಮತ್ತು ನಮ್ಮ ಸಂಸ್ಥೆಯ ಎಲ್ಲರಿಗೂ ಪ್ರೀತಿ ಪಾತ್ರ ನಾರಾಯಣ್ ಪ್ರದಾನ್

#ಎಲ್ಲಾ_ಸಂಬಂದಗಳಿಗಿಂತ_ನನಗೆ_ಈ_ಸಂಬಂದ_ತುಂಬಾ_ಇಷ್ಟ.

#ಅಕಸ್ಮಿಕವಾಗಿ_ರಸ್ತೆಯಲ್ಲಿ_ಯಾವುದೇ_ಕ್ಷಣದಲ್ಲಿ_ಅಪಘಾತದಿಂದ_ಜೀವ_ಕಳೆದುಕೊಳ್ಳುವ_ಸಂದರ್ಭದಲ್ಲಿ_ಸಿಕ್ಕಿದವ

#ಹಿಂದಿನ_ಜನ್ಮದಲ್ಲಿ_ನಾನು_ಇವನ_ಬಾಕಿದಾರನಿರಬಹುದು.
#ಹನ್ನೆರೆಡು_ವರ್ಷದಿಂದ_ನನ್ನ_ಕಿರಿಯ_ಸಹೋದರನಾಗಿ_ಇದ್ದಾನೆ.

#ದೃಷ್ಟಿ_ಸಾಮರ್ಥ್ಯ_ಶೇಕಡಾ_2ಕ್ಕಿಂತ_ಕಡಿಮೆ_ಇದ್ದರೂ_ಬುದ್ದಿವಂತ.

#ಇವನು_ದೇವರ_ಮಗ_ನಮಗೂ_ನಮ್ಮ_ಸಂಸ್ಥೆಯ_ಎಲ್ಲರಿಗೂ_ಇವನು_ಪ್ರೀತಿಯ_ನಾರಾಯಣ.

     ಹನ್ನೆರಡು ವರ್ಷದ ಹಿಂದೆ ಇದೇ ದಿನ ಶಿವಮೊಗ್ಗದಿಂದ ನಮ್ಮ ಊರಿಗೆ ನಾನು ಮತ್ತು ನನ್ನ ಗೆಳೆಯರಾದ ಅಮೀರ್ ವಾಪಸ್ಸಾಗುತ್ತಿದ್ದಾಗ ಶಿವಮೊಗ್ಗದ ಸಿಂಹದಾಮದ ಎದರು ರಾಷ್ಟ್ರೀಯ ಹೆದ್ದಾರಿ ನವೀಕರಣಕ್ಕಾಗಿ ಎಡ ಭಾಗದ ರಸ್ತೆ ಅರ್ದ ಭಾಗ ಒಂದಾಳು ಆಳ ತೆಗೆದಿದ್ದರು, ಎಲ್ಲಾ ವಾಹನಗಳು ಬಲ ಬಾಗದ ಅರ್ಧ ರಸ್ತೆಯಲ್ಲಿ ಕಷ್ಟದಿಂದ ಚಲಿಸುತ್ತಿದ್ದವು, ಮೈ ಮರೆತು ಎಡಕ್ಕೆ ಹೊರಳಿದರೆ ಆಳೆತ್ತರದ ರಸ್ತೆ ಕಂದಕಕ್ಕೆ ಬೀಳಬೇಕು ಜನರು ಆಕಡೆ ಚಲಿಸದಂತೆ ರೆಡಿಯಂ ಟೇಪ್ ಕಟ್ಟಿದ್ದರು.
   ಆಗ ಮೈನ್ಸ್ ಲಾರಿಗಳ ಒಡಾಟದ ಅಭ೯ಟ ಆದ್ದರಿಂದ ಶಿವಮೊಗ್ಗ ಸಾಗರ ಮಾರ್ಗ ಡೆಂಜರ್ ಮಾರ್ಗವೆ ಆಗಿತ್ತು.
  ನಾವು ಈ ಸ್ಥಳಕ್ಕೆ ಬರುವಾಗ ಕತ್ತಲಾಗುತ್ತಿತ್ತು ಸುಮಾರು 7 ಗಂಟೆ, ಜಿಟಿ ಜಿಟಿ ಮುಂಗಾರು ಮಳೆ, ಎದುರಿನಿಂದ ಬರುವ ವಾಹನಗಳ ಪ್ರಖರ ಬೆಳಕು ಒಟ್ಟಾರೆ ಎಂತಹ ಚಾಲಕರು ಭಯ ಪಡುವ ರಸ್ತೆಯ ಮದ್ಯದಲ್ಲಿ ಕೆಂಪು ಟೀ ಶಟ್೯ ಕಪ್ಪು ಪ್ಯಾಂಟ್ ಇನ್ ಮಾಡಿದ ಕಪ್ಪು ಶೂ ಮತ್ತು ಬೆನ್ನು ಚೀಲದ ಯುವಕ ತಡರು ಕಾಲು ಹಾಕುತ್ತಾ ಕಷ್ಟ ಪಟ್ಟು ನಡೆಯುತ್ತಾ ಇರುವುದು ನೋಡಿದ ಮಿತ್ರರು "ಅಣ್ಣಾ ಯಾವುದೋ ಶಾಲೆ ಹುಡುಗ ಬಸ್ಸು ತಪ್ಪಿಸಿಕೊಂಡು , ಈ ಮಳೆಯಲ್ಲಿ ಚತ್ರಿ ಕೂಡ ಇಲ್ಲದೆ ನಡೆದುಕೊಂಡು ಹೋಗುತ್ತಾನೆ" ಅಂದರು ಅಷ್ಟರಲ್ಲಿ ಎದುರಿನಿಂದ ಪ್ರಖರ ಬೆಳಕು ಬೀರುತ್ತಾ ಲಾರಿ ಬಂದಿದ್ದರಿಂದ ನನಗೆ ಯಾರೂ ಕಾಣಲಿಲ್ಲ, ಲಾರಿ ಪಾಸಾದ ಮೇಲೆ ನಿಲ್ಲಿಸಿದ ನಮ್ಮ ಕಾರಿನ ಎದರು ನಡೆದು ಹೋಗುವ ಹುಡುಗ ಕಂಡ.
  ಎಡಕ್ಕೆ ಒಂದು ಹೆಜ್ಜೆ ಇಟ್ಟರೆ ರಸ್ತೆಯ ದುರಸ್ತಿಯ ಕಂದಕಕ್ಕೆ, ಬಲಕ್ಕೆ ಸರಿದರೆ ಯಾವುದೇ ವಾಹನದ ಚಕ್ರಕ್ಕೆ ಸಿಕ್ಕಿಬೀಳುವ ಡೇಂಜರ್ ಜೋನ್ ನಲ್ಲಿ ನಡೆಯುತ್ತಿದ್ದ.
   ಗೆಳೆಯರ ಅವನ ಪಕ್ಕದಲ್ಲಿ ನಿಲ್ಲಿಸಿ ಯಾವ ಊರಿಗೆ ಹೋಗಬೇಕಪ್ಪ ಅಂದರು ಅವನ ಉತ್ತರ ಚೆನೈ ಅಂದಾಗಲೇ ನಮಗೆ ಗೊತ್ತಾಗಿದ್ದು ಈತ ಸ್ಥಳಿಯ ವಿದ್ಯಾರ್ಥಿ ಅಲ್ಲ ಅಂತ ಮತ್ತು ದಾರಿ ತಪ್ಪಿ ಬಂದವ ಅಂತ.
  ಹಿಂದಿನಿಂದ ಮತ್ತು ಮುಂದಿನಿಂದ ಸಾಲಾಗಿ ಬರುತ್ತಿದ್ದ ವಾಹನಗಳಿಂದ ಹೆಚ್ಚು ಹೊತ್ತು ಅಲ್ಲಿ ನಮ್ಮ ವಾಹನ ನಿಲ್ಲುವಂತಿಲ್ಲ ಆಗ ತಕ್ಷಣ ಗೆಳೆಯರು ಹಿಂದಿಯಲ್ಲಿ ನಾವೂ ಚೆನೈಗೆ ಹೋಗುತ್ತಿದ್ದೇವೆ ಕರೆದುಕೊಂಡು ಹೋಗುತ್ತೇವೆ ಅಂತ ಹೇಳಿ ಹಿಂದಿನ ಸೀಟಿಗೆ ಕುಳ್ಳಿರಿಸಿ ಈ ಅಪಘಾತದ ವಲಯ ದಾಟಿದ ಮೇಲೆ ಈ ಆಗುಂತಕ ಚೆನೈ ಪ್ರಯಾಣಿಕನನ್ನ ವಿಚಾರಿಸಿದರೆ ಈತ ಕಲ್ಕತ್ತಾದಿಂದ ರೈಲಲ್ಲಿ ಬೆಂಗಳೂರು ಅಲ್ಲಿಂದ ಶಿವಮೊಗ್ಗ ನಿಲ್ದಾಣ ತಲುಪಿದ್ದಾನೆ ಅಲ್ಲಿ ಯಾರು ಯಾರಿಗೋ ಚೆನೈ ರಸ್ತೆ ಕೇಳಿರಬೇಕು ಅವರು ಶಿವಮೊಗ್ಗ ಬಸ್ ಸ್ಟಾಂಡ್ ದಾರಿ ತೋರಿದ್ದಾರೆ ಹಾಗೆ ನಡೆಯುತ್ತಾ ನಡೆಯುತ್ತಾ ಶಿವಮೊಗ್ಗ ಸಾಗರ ಮಾರ್ಗದಲ್ಲಿ ಸಿಂಹ ದಾಮದ ಎದರು ನಮಗೆ ಸಿಕ್ಕಿದ.
  ಅವನಿಗೆ ಚಾಕಲೇಟು ಕೊಡುವಾಗಲೇ ಗೊತ್ತಾಗಿದ್ದು ಅವನಿಗೆ ದೃಷ್ಟಿ ದೋಷ ಅಂತ ಹೀಗೆ ನನ್ನ ಅತಿಥಿ ಆಗಿ ಬಂದ ನಾರಾಯಣ್ ನಮ್ಮ ಮನೆಯವನೇ ಆಗಿದ್ದಾನೆ, ಅವನಿಗೆ ಆಗಾಗ್ಗೆ ನೆನಪಾದಾಗ ಕೆಲ ವಿಚಾರಗಳು ಹೇಳುತ್ತಾನೆ ಕೆಲವೊಮ್ಮೆ ದಿನಗಟ್ಟಲೆ ಮೌನಿ.
   ಅವನಿಂದ ಯಾವುದೇ ಕೆಲಸ ಮಾಡಲೂ ಸಾಧ್ಯವಿಲ್ಲ, ವೈದ್ಯರು ಪರೀಕ್ಷೆ ಮಾಡಿ ಹೇಳಿದ್ದು ಇವನು ಹುಟ್ಟುವಾಗಲೇ ಇವನ ದೃಷ್ಟಿಯಲ್ಲಿ ಕೆಲ ಬೆಳವಣಿಗೆಗಳು ಆಗಿಲ್ಲ ಅಂತ.
  ಬೌದ್ದಿಕವಾಗಿಯೂ ಅತಿ ಸೂಕ್ಷ್ಮ ಆದ್ದರಿಂದ ಇವನನ್ನು ತುಂಬಾ ಜಾಗೃತೆಯಿಂದ ನೋಡಿಕೊಳ್ಳಬೇಕಾಯಿತು.
  ಹುಟ್ಟಿನಿಂದ ಅನಾಥ ಯಾವ ಯಾವದೋ NGO ಗಳು ವಿಕಲ ಚೇತನ ಮಕ್ಕಳಿಗೆ ವಿದ್ಯಾಬ್ಯಾಸ ನೀಡುವ ಶಾಲೆಗಳಲ್ಲಿ ಇವನಿಗೆ ಇವನಿಗೆ 7 ನೇ ತರಗತಿ ತನಕ ವಿದ್ಯಾಬ್ಯಾಸ ಊಟ-ಉಪಚಾರ ನೀಡಿದೆ.
   ನಂತರ ಒಂದು ಕುಟುಂಬ ಇವನನ್ನು ಸಾಕಲು ದತ್ತು ಪಡೆದಿರಬೇಕು ಅವರಿಗೆ ಗಂಡು ಮಕ್ಕಳಿಲ್ಲ ಒಂದು ಹೆಣ್ಣು ಮಗಳು, ಕುಟುಂಬದ ಯಜಮಾನ ಗ್ಯಾರೇಜ್ ಕಾರ್ಮಿಕ ದತ್ತು ಪಡೆದ 8-10 ವರ್ಷದಲ್ಲಿ ಯಜಮಾನ ಮೃತರಾಗಿದ್ದಾರೆ ,ಕೂಲಿ ಕಾರ್ಮಿಕ ಸಾಕು ತಾಯಿ ಜೀವನದ ಅನಿವಾಯ೯ದಿಂದ ನಾರಾಯಣನಿಗೆ ಕೂಲಿ ಕೆಲಸಕ್ಕೆ ಒತ್ತಾಯದಿಂದ ಕಳಿಸಿದ್ದಾಳೆ ಆದರೆ ನಾರಾಯಣನ ದೈಹಿಕ ಅಸಮರ್ಥತೆಯಿಂದ ಯಾರೂ ಕೆಲಸ ಕೊಡಲಿಲ್ಲ, ಇದರಿಂದ ಸಾಕು ತಾಯಿಗೆ ಇವನು ಹೊರೆ ಅನ್ನಿಸಿದೆ, ನಾರಾಯಣನೂ ಅಸಾಧ್ಯ ಸಿಟ್ಟು ಮತ್ತು ಜಗಳ ಮಾಡುವ ಸ್ವಭಾವದವನಾದ್ದರಿಂದ ಅವರೇ ಇವನಿಗೆ ರೈಲಲ್ಲಿ ಹತ್ತಿಸಿ ಹೊರೆ ಇಳಿಸಿಕೊಂಡಿರಬಹುದು ಅಥವ ನಾರಾಯಣನೇ ಅವರ ಸಂಬಂದಕ್ಕೆ ರೋಸಿ ಮನೆ ಬಿಟ್ಟಿರಬೇಕು.
   ಪ್ರಾರಂಭದಲ್ಲಿ ನಮ್ಮಲ್ಲೂ ಅವನಿಂದ ಹೊಡೆತ ತಿನ್ನದವರೇ ಇಲ್ಲ, ಕ್ರಮೇಣ ನಾವೆ ಎಲ್ಲಾ ಅವನಿಗೇ ಹೊಂದಿಕೊಂಡು ಹೋಗಬೇಕಾಯಿತು ಆದರೆ ದೇವರಂತ ಹುಡುಗ.
  ದಿನಕ್ಕೆ ನೂರು ಸಲ ನಾರಾಯಣ .. ನಾರಾಯಣ ಅಂತ ಕರೆಯುತ್ತಾ ನಾರಾಯಣ ದೇವರ ಸ್ಮರಣೆಯೂ ನಮ್ಮದಾಗಿದೆ.
   12 ವರ್ಷದಲ್ಲಿ ನಾರಾಯಣನೇ ನಮಗೆ Boss ನಾವೆಲ್ಲ ಅವನ ಅಡಿಯಾಳು ಅಂತ ಗೆಳೆಯರು ತಮಾಷೆ ಮಾಡುತ್ತಾರೆ.
  ನಮ್ಮ ತಂದೆ ಕೂಡ ಅನಾಥ ಮಗುವಾಗಿ ಎಲ್ಲೋ ದಾರಿ ಮಗ್ಗುಲಲ್ಲಿ ಬಿಸಾಡಿದ ಮಗುವಾಗಿದ್ದ ಕಥೆ ನಮಗೆ ಗೊತ್ತಿರುವುದರಿಂದ ನಾವು ನಾರಾಯಣನ ಜೀವನ ಪರ್ಯಂತ ಪಾಲಕರಾಗಿದ್ದೇವೆ, ಇತ್ತೀಚೆಗೆ ಹೊಸ ಸ್ಮಾರ್ಟ್ ಫೋನ್ ಅವನಿಗೆ ಕೊಡಿಸಿದ್ದೇನೆ ಅದರಲ್ಲಿ ಬೆಂಗಾಲಿ, ಹಿಂದಿ, ಓರಿಯಾ ಸಿನಿಮಾ ಇತ್ಯಾದಿ ಕಷ್ಟಪಟ್ಟು ನೋಡುತ್ತಾನೆ ಹಾಗಂತ ಅವನು ಈಗ ಕನ್ನಡವೂ ಕಲಿತಿದ್ದಾನೆ ಹಿಂದಿ-ಇಂಗ್ಲೀಷ್- ಬೆಂಗಾಲಿ - ಓರಿಯಾ - ಬೋಜ್ ಪುರಿ ಅವನಿಗೆ ಮೊದಲಿಂದ ಬರುತ್ತದೆ.
  ಈಗ ನಾರಾಯಣನ ವಯಸ್ಸು 40 ಹತ್ತಿರ,ಮದುವೆ ಆಗ್ತೀಯ ಅಂದರೆ ಆಗುವುದಿಲ್ಲ ಅನ್ನುತ್ತಾನೆ ಯಾರನ್ನೂ ನಂಬುವುದಿಲ್ಲ.
   ಮನುಷ ಜೀವನದಲ್ಲಿ ಇಂತಹ ಅಕಸ್ಮಿಕ ಸಂಬಂದಗಳು ಗಟ್ಟಿ ಆಗಲು ಏನೋ ಕಾರಣವಿರಬಹುದು ಹಾಗಾಗಿ ನಾರಾಯಣ ನನ್ನ ಕಿರಿಯ ಸಹೋದರನೇ ಆಗಿದ್ದಾನೆ ಅವನು ದೇವರ ಮಗ ನಮಗೆ ಮತ್ತು ನಮ್ಮ ಸಂಸ್ಥೆಯ ಎಲ್ಲರಿಗೂ ಅವನು ಪ್ರೀತಿಯ ನಾರಾಯಣ, ನಿಮ್ಮೆಲ್ಲರ ಹಾರೈಕೆಗಳು ಅವನ ಮೇಲಿರಲಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ