Skip to main content

Blog number 1233. ಜನಪರ ಹೋರಾಟಗಾರ ಟಿ.ಆರ್. ಕೃಷ್ಣಪ್ಪರ ಹೋರಾಟದ ಹಾದಿಯಲ್ಲಿ ಭಾಗ-2

#https://youtu.be/IBhXHYPqZBU ?

#ಹೋರಾಟಗಾರರನ್ನು_ಅನುಮಾನದಲ್ಲಿ_ನೋಡುವ_ಕಾಲವಿದು

#ತತ್ವ_ಸಿದ್ಧಾಂತದ_ಹೆಸರಲ್ಲಿ_ಭ್ರಷ್ಟಾಚಾರ_ವಿರೋದಿಸುವವರ_ಅಂತಿಮ_ಜೀವನ_ಏನಾಗಿದೆ?

#ವ್ಯವಸ್ಥೆ_ಬದಲಾಗಲೂ_ಇಲ್ಲ_ನಿಜವಾದ_ಹೋರಾಟಗಾರ_ಮನೆಯಲ್ಲೂ_ಸಮಾಜದಲ್ಲೂ_ಕಡೆಗಾಣಿಸಲ್ಪಡುವುದು_ಸುಳ್ಳಾ?

#ರಿಪ್ಪನಪೇಟೆಯ_ಟಿ_ಆರ್_ಕೃಷ್ಣಪ್ಪರ_ಹೋರಾಟದ_ಹಾದಿಯ_ಭಾಗ_2 

  1981-82 ರ ಕಾಲದಲ್ಲಿ ಶಿವಮೊಗ್ಗದ ಡಿವಿಎಸ್ ಕಾಲೇಜಿನ ರಾಚಪ್ಪನವರು ಸಾಗರ್ ಹೋಟೆಲ್ ಸರ್ಕಲ್ ನ ಸರ್ಕಾರಿ ಬಾಲಕಿಯರ ಪ್ರಾಥಮಿಕ ಶಾಲೆಯ ಕೊಠಡಿಯಲ್ಲಿ ರಾತ್ರಿ 7 ರ ಸಮಯದಲ್ಲಿ ಕಪ್ಪು ಹಲಗೆಯ ಮೇಲೆ ಸೀಮೆ ಸುಣ್ಣದಲ್ಲಿ ಜೇಡರ ಬಲೆ ಚಿತ್ರ ಬರೆದು ಅದನ್ನು ನಮ್ಮ ಆಡಳಿತ ವ್ಯವಸ್ಥೆ ಅಂತ ಬಿಂಬಿಸಿ ಅದರಲ್ಲಿ ಸಣ್ಣ ಸಣ್ಣ ಕೀಟಗಳು ಸಿಕ್ಕಿಬಿದ್ದು ತಪ್ಪಿಸಿಕೊಳ್ಳಲಾರದ ಬಗ್ಗೆ ಮತ್ತು ದೊಡ್ಡ ಹಕ್ಕಿಗಳು ಜೇಡರ ಬಲೆ ಛೇದಿಸಿಕೊಂಡು ಹೋಗುವ ಸಾಮರ್ಥ್ಯ ವಿವರಿಸುತ್ತಿದ್ದರು.
  ಅಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದುರ್ಬಲರು ದೀನ ದಲಿತರು ಬದುಕುವುದು ಕಷ್ಟ ಆದರೆ ಹಣವಂತರು ಅವ್ಯವಹಾರಿಗಳು ಎಲ್ಲವನ್ನೂ ಛೇದಿಸಿ ಬದಕುತ್ತಾರೆ ಅನ್ನುತ್ತಾ ಇದಕ್ಕಾಗಿ ಜನಸಂಘಟನೆ - ಪ್ರತಿಭಟನೆ - ಅನ್ಯಾಯದ ವಿರುದ್ದ ಆಂದೋಲನ ನಡೆಯಬೇಕು ಈ ಮೂಲಕ ಸಮಾಜ ಸೇವೆ ಮಾಡಬೇಕೆಂಬ ಸಂದೇಶದ ಜೊತೆ ಎ.ಕೆ.ಗೋಪಾಲನ್ ಆತ್ಮಚರಿತ್ರೆ, ಮ್ಯಾಕ್ಸಿಂ ಗೋರ್ಕಿಯ ತಾಯಿ ಪುಸ್ತಕಗಳನ್ನು ಓದಲು ನೀಡಿದ್ದರಿಂದ ನಾನು ಸಾಗರದ ಆಗಿನ ಹೋರಾಟಗಾರರಾದ ತೀ.ನಾ. ಶ್ರೀನಿವಾಸ್, ಶಿವಾನಂದ ಕುಗ್ವೆ, ಸಿಗರೇಟು ನಾಗರಾಜ್, ಅದರಂತೆ ವಿಶ್ವನಾಥ ಗೌಡ, ಆಟೋ ಮೋಹನ್, ಪೆಡರಿಕ್, ಮಂಡಗಳಲೆ ನಾರಾಯಣ ಮುಂತಾದವರ ಜೊತೆ ಆಗಿ ಸ್ಥಳಿಯ ಹೋರಾಟಗಳ ಭಾಗ ಆದೆ ಮುಂದೆ ಲಾಠಿ ಏಟು- ಜೈಲು-ಮು೦ತಾದನ್ನು ಅನುಭವಿಸಿದೆ.
  ವ್ಯವಸ್ಥೆ ಬದಲಾಯಿತಾ? ಲಂಚ ನಿಮೂ೯ಲನೆ ಆಯಿತಾ? ಅಂತ ತಿರುಗಿ ನೋಡಿದರೆ ಯಾವುದೂ ಬದಲಾಗಲಿಲ್ಲ ವ್ಯವಸ್ಥೆ ಜೊತೆ ಹೊಂದಾಣಿಕೆಯಿಂದ ಅನಿವಾರ್ಯವಾಗಿ ಬಾಳುವುದನ್ನು ಜನ ಸಮೂದಾಯ ಸುಲಭವಾಗಿ ಕಲಿತಿದೆ. ಪುನಃ ಪುನಃ ಚುನಾವಣೆಗಳು ಅದರಲ್ಲಿ ಲಂಚ ಮುಕ್ತ ಆಡಳಿತದ ಅಶ್ವಾಸನೆಗಳು ಯಥಾ ಪ್ರಕಾರ ಹೊಸ ಮುಖ, ಹೊಸ ಪಕ್ಷಗಳಿಂದ ಕೇಳುತ್ತಲೇ ಇದೀವಿ.
  ಈ ರೀತಿ ವ್ಯವಸ್ಥೆಯ ಲೋಪ ದೋಷಗಳನ್ನು ನಿವಾರಣೆಗೆ ಹೋರಾಟದ ಮಾರ್ಗವಾದ ಪ್ರತಿಭಟನೆ - ಸತ್ಯಾಗ್ರಹಗಳು ಸವಕಲಾಯಿತಾ? ಗೊತ್ತಿಲ್ಲ.. ಆದರೆ ಪರಿಣಾಮ ಶೂನ್ಯ.
  ಸರಕಾರಿ ಕೆಲಸ ಪಡೆಯಲು ಅಹ೯ತಾ ಸುತ್ತಿನ ಪರೀಕ್ಷೆಯಲ್ಲಿ ತೇರ್ಗಡೆ ಆದ ಮೆರಿಟ್ ಅಭ್ಯರ್ಥಿಗಳಲ್ಲಿ ಒಂದು ಹುದ್ದೆಗೆ ಹತ್ತು ಜನರನ್ನು (1:10) ಸಂದರ್ಶನಕ್ಕೆ ಕರೆದು 10 ವರ್ಷಗಳ ಅವನ ವೇತನದಷ್ಟು ಹಣ ನೀಡುವವರು ಸರ್ಕಾರಿ ಕೆಲಸ ಪಡೆಯುವುದು ರಹಸ್ಯವೇನಲ್ಲ ಹಾಗಾಗಿ 10 ವರ್ಷ ಸಂಬಳದಷ್ಟು ಹಣ ಕೊಟ್ಟು ಬಂದವ ಅದರ ನೂರು ಪಟ್ಟು ಹಣ ಗಳಿಸಲು ಇರುವ ಮಾರ್ಗ ಲಂಚವೇ ಆದ್ದರಿಂದ ಅದು ನಿರ್ಮೂಲನೆ ಸಾಧ್ಯವಾ? ಎಂಬ ಪ್ರಶ್ನೆಗೆ ಉತ್ತರ ಎಲ್ಲರಿಗೂ ಗೊತ್ತಿರುವುದೆ.
  ಅದ್ದರಿಂದ ಮುಂದಿನ ದಿನಗಳಲ್ಲಿ ನಮ್ಮ ಮಕ್ಕಳನ್ನು ವ್ಯವಸ್ಥೆ ವಿರುದ್ದ ಹೋರಾಡದಂತೆ ಬದುಕು ಕಲಿಸಬೇಕು ಇಲ್ಲದಿದ್ದರೆ ಬದುಕುವುದು ಕಷ್ಟವೆ.
   ಇಂತಹ ಹೋರಾಟವೇ ಜೀವನ ಮಾಡಿಕೊಂಡವರ ಪರಿಸ್ಥಿತಿ ಕೂಡ ಕಷ್ಟದ್ದೇ ಸ್ವತಃ ಮನೆಯಲ್ಲೂ ಸಮಾಜದಲ್ಲೂ ಇವರ ಹೋರಾಟಗಳಿಂದ ತಿರಸ್ಕಾರವೇ ಬಳುವಳಿ ಆಗಿದೆ.
  ಇದಕ್ಕೆ ಕಾರಣ ಭ್ರಷ್ಟಾಚಾರ ಸರ್ವಾಂತರ್ಯಾಮಿ ಆಗಿರುವುದು.
   ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆಯ ಏಕಾಂಗಿ ಜನಪರ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ತಮ್ಮ 72 ನೇ ವಯಸ್ಸಿನಲ್ಲೂ ತಮ್ಮ ಹೋರಾಟಗಳಿಂದ ನಂಬಿಕೆ ಕಳೆದುಕೊಂಡಿಲ್ಲ ಅವರ ಹೋರಾಟದ ಸರಣಿಯ ಭಾಗ - 2 ಇಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ