Skip to main content

Blog number 1244.NEXT IS BEST ಎಂಬ ಆಂಗ್ಲ ಗಾದೆ ಮತ್ತು ಕನ್ನಡದ ಅಕ್ಕಿ ತಿನ್ನುವವನು ಹೋದರೆ ತೌಡು ತಿನ್ನುವವನು ಬರುತ್ತಾನೆ ಎಂಬ ಗಾದೆಗಳ ತರ್ಕ.

#Next_is_Best_ಎಂಬ_ಆಂಗ್ಲ_ಗಾದೆ

#ಅಕ್ಕಿ_ತಿನ್ನೋನು_ಹೋದರೆ_ತೌಡು_ತಿನ್ನೋನು_ಬರ್ತಾನೆ_ಎಂಬ_ಕನ್ನಡ_ಗಾದೆ

#ಬದಲಾವಣೆಗೆ_ಹೆದರದ_ಬದಲಾಯಿಸಲು_ದೈರ್ಯ_ಮಾಡದಂತ_ಈ_ಗಾಧೆಗಳು 

#ಅತ್ಯುತ್ತಮಗುಣಮಟ್ಟದ_ಬ್ಲಾಕ್_ಪಿನಾಲ್_ಪ್ಲೋರ್_ಕ್ಲೀನರ್_ಬ್ಲೀಚಿಂಗ್_ಪೌಡರ್_ಹೊಸ_ಸರಬರಾಜುದಾರರು.

   ವ್ಯವಹಾರದಲ್ಲಿ ಪ್ರತಿನಿತ್ಯವೂ ಹೊಸ ತನ ಬದಲಾವಣೆ ಸಹಜ ಇದರ ಮಧ್ಯೆ ದಿಡೀರ್ ಆಗಿ ಕೈ ಕೊಟ್ಟು ಹೋಗುವ ಕೆಲಸಗಾರರು, ಸರಬರಾಜುದಾರರು, ಗ್ರಾಹಕರುಗಳಿಂದ ಆ ಕ್ಷಣದಲ್ಲಿ ಪಿಚ್ಚೆನ್ನಿಸುತ್ತದೆ, ನೆನಪಿನ ಸುರುಳಿ ಹಿಂದಕ್ಕೆ ತಿರುಗಿಸಿ ಛೇ ಹೀಗೇಕೆ ಆಯಿತು? ನನ್ನದು ತಪ್ಪಾಯಿತಾ? ಅಂತೆಲ್ಲ ಯೋಚಿಸಿದರೆ ಖಂಡಿತಾ ನನ್ನ ತಪ್ಪು ಪೈಸೆ ಅಷ್ಟು ಇಲ್ಲ... ನನ್ನಿಂದ ಓಡಿ ಹೋದವ ಅನೇಕ ರೀತಿ ಸಹಾಯ ಸೌಲಭ್ಯ ಲಾಭ ಪಡೆದವನೇ... ಮತ್ಯಾಕೆ ಬಿಟ್ಟು ಹೋದ? ಗೊತ್ತಿಲ್ಲ.
 
   ಕಷ್ಟದ ದಿನಗಳಲ್ಲಿ ಇದ್ದವ ಬಿಟ್ಟು ಹೋದ ಯಾಕೆ? ಅಥವ ಲಾಭ ಇದ್ದಾಗ ಇದ್ದವನು, ಕಷ್ಟ ಬಂದಾಗ ಹೋದನೇಕೆ?. ಇಷ್ಟು ವರ್ಷ ಲಾಭ ಪಡೆದವ ಇವತ್ಯಾಕೆ ರಿಜಿಡ್ ಆಗಿ ದೂರಾದಾ?... ಅವನ ಮಗಳ ಮದುವೆಗೆ ಸಹಾಯ ಪಡೆದಿದ್ದ..ಅವನಿಗೆ ಕಾಯಿಲೆ ಆದಾಗ .... ಕಷ್ಟ ಆದಾಗ .....ಅವನ ಜೊತೆ ನಾನಿರಲಿಲ್ಲವೆ?  ನನ್ನ ಸಹಾಯ ಸಹಕಾರ ಆತನಿಗೆ ನೆನಪಿಲ್ಲಾವಾ?...

    ಹೀಗೆಲ್ಲ ಎಲ್ಲರೂ ಅವರವರ ಜೀವನದಲ್ಲಿ ಪ್ರಶ್ನೆ ಮಾಡಿಕೊಳ್ಳುವುದು ಇದ್ದೆ ಇದೆ, jealous ನಿಂದ ದೂರ ಆಗುವ, ನಿರೀಕ್ಷಿಸಿದ ಲಾಭವಿಲ್ಲದಾಗ ಅಥವ ಹಡಗು ಮುಳುಗುವ ಮೊದಲೇ ಸಮುದ್ರಕ್ಕೆ ಹಾರುವ ಇಲಿ ಹೆಗ್ಗಣಗಳ ಕಥೆ -ನೀತಿ ಕತೆಗಳೂ ಇದೆ.

   ನಾನಂತೂ ಆಂಗ್ಲ ಭಾಷೆಯ ಗಾದೆ ನೆಕ್ಸ್ಟ್ ಇಸ್ ಬೆಸ್ಟ್ (Next is best) ಅಳವಡಿಸಿಕೊಂಡಿದ್ದೇನೆ, ಬಂದವರಿಗೆ ಸ್ವಾಗತ - ಹೋದವರಿಗೆ ವಿಧಾಯ, ಅನೇಕ ಸಂದರ್ಭದಲ್ಲಿ Next is Best ಎನ್ನುವುದು ಸಾಬೀತಾಗಿದೆ ಈ ಪಾಮೂ೯ಲ ಎಲ್ಲಾ ವ್ಯವಹಾರಸ್ಥರಿಗೂ ಸೂಕ್ತವಾದದ್ದೆ ಕಳೆದು ಹೋದದ್ದನ್ನು ಚಿಂತಿಸದೆ ನಮ್ಮ ನಮ್ಮ ವ್ಯವಹಾರಗಳನ್ನು ಮುಂದುವರಿಸಲು ಸಹಕಾರಿ.
   ಇದರ ಮಧ್ಯದಲ್ಲಿ ಕನ್ನಡದ ಇನ್ನೊಂದು ಗಾದೆ ಸ್ವಲ್ಪ ತಲೆ ಕೆಡಿಸುತ್ತದೆ ಅದೇನೆಂದರೆ "ಅಕ್ಕಿ ತಿನ್ನೋನು ಹೋದರೆ ತೌಡು ತಿನ್ನೋನು ಬರುತ್ತಾನೆ" ಈ ಗಾದೆ ಪ್ರಕಾರ ಈಗಿನವನು ಹೋದರೆ ಮುಂದೆ ಬರುವವನು ಓಡಿ ಹೋದವನಿಗಿಂತ ಕರಾಬು ಮನುಷ್ಯ ಅಂತ, ಬಹುಶಃ ಇದ್ದಿದರಲ್ಲೇ ಯಥಾಸ್ಥಿತಿ ಕಾಪಾಡುವಂತೆ ಗಾದೆ ಇದು ಇರಬಹುದೇನೋ...
  ಸುಮಾರು 12 ವರ್ಷದಿಂದ ಶಿವಮೊಗ್ಗದಿಂದ ಪಿನಾಲ್ ಮತ್ತು ಬ್ಲೀಚಿಂಗ್ ಸರಬರಾಜು ಮಾಡುವ ಒಬ್ಬರಿದ್ದರು ಪ್ರತಿ ತಿಂಗಳು ನಮ್ಮ ಬೇಡಿಕೆಗೆ ಅನುಗುಣವಾಗಿ ಲಾಡ್ಜ್, ರೆಸ್ಟೋರೆಂಟ್, ಕಲ್ಯಾಣ ಮಂಟಪ ಮತ್ತು ಮನೆಗೆ ಅಂತ ಆತನಿಂದ  12 ವರ್ಷದಲ್ಲಿ ಹತ್ತಿರ ಹತ್ತಿರ ಎಂಟು ಲಕ್ಷಕ್ಕೂ ಮಿಕ್ಕಿದ ಖರೀದಿ ಮಾಡಿದ್ದೆ ಆದರೆ ಕಳೆದ ಎರೆಡು ವರ್ಷದಲ್ಲಿ ಆತನಿಗೇನೋ ದುರಾಸೆ, ಕಳಪೆ ಮಾಲು ಸರಬರಾಜು ಶುರುಮಾಡಿದ್ದ ಮತ್ತು ಶಿವಮೊಗ್ಗದ ಮಾಜಿ ಶಾಸಕರು ಗೆದ್ದಾಗ ಅವರಿಂದ ಲಾಭ ಪಡೆದಿದ್ದ ಅವರು ನನಗೆ ಮಿತ್ರರು ಮತ್ತು ನನಗೆ ಅನೇಕ ಸಂದರ್ಭದಲ್ಲಿ ಅವರು ಪ್ರಭಾವ ಬೀರಿ ಸಹಾಯ ಮಾಡಿದವರು, ಅವರಿಂದ ಉಪಕಾರ ಪಡೆದೂ ಅವರನ್ನು ಪ್ರಸನ್ನ ಖಾನ್ ಅಂತ ನಿಂದಿಸುವುದು ನನಗೆ ಆತನ ಬಗ್ಗೆ ಅಸಹನೆ ಮೂಡಿಸಿತ್ತು.
  ಮೊನ್ನೆ ಅವರು ತಂದ ಪಿನಾಲ್ ಬ್ಲೀಚಿಂಗ್ ಪೌಡರ್ ಗಳು ಪುನಃ ಕಳಪೆ ಆಗಿತ್ತು ಇದನ್ನು ನನ್ನ ಸಿಬ್ಬಂದಿಗಳು ಆತನ ಜೊತೆಗಾರರ ಗಮನಕ್ಕೆ ತಂದರು ಅವರೂ ಕೂಡ ತಮ್ಮ ಈ ಉತ್ಪನ್ನ ಸರಿ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ ಇದರಿಂದ ಸರಬರಾಜುದಾರ ಅವಮಾನದಿಂದ ಕುಣಿಯಲು ಶುರು ಮಾಡಿದ್ದಾನೆ ಈ ಗಲಾಟೆಯಿಂದ ನನಗೂ ಈತನ ವ್ಯವಹಾರಿಕಾ ಸಂಬಂದ ಮುಂದುವರಿಸಲು ಇಷ್ಟ ಇರಲಿಲ್ಲ ಆದ್ದರಿಂದ ಈತನ ಪಿನಾಯಿಲ್ ಬ್ಲೀಚಿಂಗ್ ವ್ಯವಹಾರದ ಸಂಬಂದ ಅಂತ್ಯಗೊಳಿಸಿದೆ.
  ಈಗ ಎಲ್ಲರೂ ಪಿನಾಲ್ ಮತ್ತು ಪ್ಲೋರ್ ಕ್ಲೀನರ್ ಒಂದೇ ಅಂತ ಬಾವಿಸಿದ್ದಾರೆ ಆದರೆ ಪಿನಾಲ್ ಮಾತ್ರ ನಂಜುನಿರೋದಕ ಸೊಂಕಿಗೆ ಕಾರಣವಾಗುವ ಸೂಕ್ಷ್ಮಾಣು ಜೀವಿ ನಾಶ ಮಾಡಲು 1843 ರಲ್ಲಿ ಕಲ್ಲಿದ್ದಲು ಟಾರ್ ನಿಂದ ಬ್ಲಾಕ್ ಪಿನಾಲ್ ಉತ್ಪಾದಿಸಲು ಪ್ರಾರಂಭ ಮಾಡಿದ್ದು ಪ್ರೆಂಚ್ ರಸಾಯನ ತಜ್ಞ ಚಾರ್ಲ್ಸ್ ಗೆಹಾರ್ಡ್ ಪಿನಾಲ್ ಇವರಿಂದಾಗಿ ಇದಕ್ಕೆ ಪಿನಾಲ್ ಎಂಬ ಹೆಸರು ಬ್ಲಾಕ್ ಪಿನಾಲ್ 5 ಲೀಟರ್ ಕ್ಯಾನ್ ಗೆ 350 ರೂಪಾಯಿ, ಬ್ಲಾಕ್ ಪಿನಾಲ್ ಇಲ್ಲದೆ ನಿಮ್ಮ ಸಂಸ್ಥೆಯ ಶೌಚಾಲಯಗಳು ನಂಜುನಿರೋದಕವಾಗಲು ಸಾಧ್ಯವೇ ಇಲ್ಲ.
  ಡಿ ಅಡೋರೆಂಟ್ ಮಿಶ್ರ ದ್ರವ ವೈಟ್ ಪಿನಾಲ್ ಎಂಬ ಪ್ಲೋರ್ ಕ್ಲೀನರ್ ತಯಾರಿಸಲು ಬೇಕಾದ ಕಂಪೌಂಡ್ ಮತ್ತು ಡಿ ಅಡೋರೆಂಟ್ ಗಳು ಶಿವಮೊಗ್ಗದ ರಾಜ್ ಕೆಮಿಕಲ್ಸ್ ನಲ್ಲಿ ಲಭ್ಯವಿದೆ ಅದನ್ನು ತಂದು ನಾವೇ ಪ್ಲೋರ್‌ ಕ್ಲೀನರ್ ತಯಾರಿಸಿಕೊಳ್ಳುತ್ತೇವೆ ಇವರಲ್ಲಿ ಅತ್ಯುತ್ತಮ ಗುಣಮಟ್ಟದ ಬ್ಲೀಚಿಂಗ್ ಪೌಡರ್ ಕೂಡ ಇವರಲ್ಲಿ ಸಿಗುತ್ತದೆ ಇವರ ಸಂಪರ್ಕ ಸಂಖ್ಯೆ 8050015059.
   ಅರ್ಧ ಬೆಲೆಯಲ್ಲಿ ಗುಣಮಟ್ಟದ  ಪಿನಾಲ್ / ಬ್ಲೀಚಿಂಗ್ ಸರಬರಾಜು ಮಾಡುವ ಹೊಸಬರು ಸಿಕ್ಕಿದ್ದಾರೆ ಆದ್ದರಿಂದ NEXT IS BEST ಎಂಬುದು ಸತ್ಯವೇ ಅಂತ ಸಾಬೀತಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...