Skip to main content

Blog number 1244.NEXT IS BEST ಎಂಬ ಆಂಗ್ಲ ಗಾದೆ ಮತ್ತು ಕನ್ನಡದ ಅಕ್ಕಿ ತಿನ್ನುವವನು ಹೋದರೆ ತೌಡು ತಿನ್ನುವವನು ಬರುತ್ತಾನೆ ಎಂಬ ಗಾದೆಗಳ ತರ್ಕ.

#Next_is_Best_ಎಂಬ_ಆಂಗ್ಲ_ಗಾದೆ

#ಅಕ್ಕಿ_ತಿನ್ನೋನು_ಹೋದರೆ_ತೌಡು_ತಿನ್ನೋನು_ಬರ್ತಾನೆ_ಎಂಬ_ಕನ್ನಡ_ಗಾದೆ

#ಬದಲಾವಣೆಗೆ_ಹೆದರದ_ಬದಲಾಯಿಸಲು_ದೈರ್ಯ_ಮಾಡದಂತ_ಈ_ಗಾಧೆಗಳು 

#ಅತ್ಯುತ್ತಮಗುಣಮಟ್ಟದ_ಬ್ಲಾಕ್_ಪಿನಾಲ್_ಪ್ಲೋರ್_ಕ್ಲೀನರ್_ಬ್ಲೀಚಿಂಗ್_ಪೌಡರ್_ಹೊಸ_ಸರಬರಾಜುದಾರರು.

   ವ್ಯವಹಾರದಲ್ಲಿ ಪ್ರತಿನಿತ್ಯವೂ ಹೊಸ ತನ ಬದಲಾವಣೆ ಸಹಜ ಇದರ ಮಧ್ಯೆ ದಿಡೀರ್ ಆಗಿ ಕೈ ಕೊಟ್ಟು ಹೋಗುವ ಕೆಲಸಗಾರರು, ಸರಬರಾಜುದಾರರು, ಗ್ರಾಹಕರುಗಳಿಂದ ಆ ಕ್ಷಣದಲ್ಲಿ ಪಿಚ್ಚೆನ್ನಿಸುತ್ತದೆ, ನೆನಪಿನ ಸುರುಳಿ ಹಿಂದಕ್ಕೆ ತಿರುಗಿಸಿ ಛೇ ಹೀಗೇಕೆ ಆಯಿತು? ನನ್ನದು ತಪ್ಪಾಯಿತಾ? ಅಂತೆಲ್ಲ ಯೋಚಿಸಿದರೆ ಖಂಡಿತಾ ನನ್ನ ತಪ್ಪು ಪೈಸೆ ಅಷ್ಟು ಇಲ್ಲ... ನನ್ನಿಂದ ಓಡಿ ಹೋದವ ಅನೇಕ ರೀತಿ ಸಹಾಯ ಸೌಲಭ್ಯ ಲಾಭ ಪಡೆದವನೇ... ಮತ್ಯಾಕೆ ಬಿಟ್ಟು ಹೋದ? ಗೊತ್ತಿಲ್ಲ.
 
   ಕಷ್ಟದ ದಿನಗಳಲ್ಲಿ ಇದ್ದವ ಬಿಟ್ಟು ಹೋದ ಯಾಕೆ? ಅಥವ ಲಾಭ ಇದ್ದಾಗ ಇದ್ದವನು, ಕಷ್ಟ ಬಂದಾಗ ಹೋದನೇಕೆ?. ಇಷ್ಟು ವರ್ಷ ಲಾಭ ಪಡೆದವ ಇವತ್ಯಾಕೆ ರಿಜಿಡ್ ಆಗಿ ದೂರಾದಾ?... ಅವನ ಮಗಳ ಮದುವೆಗೆ ಸಹಾಯ ಪಡೆದಿದ್ದ..ಅವನಿಗೆ ಕಾಯಿಲೆ ಆದಾಗ .... ಕಷ್ಟ ಆದಾಗ .....ಅವನ ಜೊತೆ ನಾನಿರಲಿಲ್ಲವೆ?  ನನ್ನ ಸಹಾಯ ಸಹಕಾರ ಆತನಿಗೆ ನೆನಪಿಲ್ಲಾವಾ?...

    ಹೀಗೆಲ್ಲ ಎಲ್ಲರೂ ಅವರವರ ಜೀವನದಲ್ಲಿ ಪ್ರಶ್ನೆ ಮಾಡಿಕೊಳ್ಳುವುದು ಇದ್ದೆ ಇದೆ, jealous ನಿಂದ ದೂರ ಆಗುವ, ನಿರೀಕ್ಷಿಸಿದ ಲಾಭವಿಲ್ಲದಾಗ ಅಥವ ಹಡಗು ಮುಳುಗುವ ಮೊದಲೇ ಸಮುದ್ರಕ್ಕೆ ಹಾರುವ ಇಲಿ ಹೆಗ್ಗಣಗಳ ಕಥೆ -ನೀತಿ ಕತೆಗಳೂ ಇದೆ.

   ನಾನಂತೂ ಆಂಗ್ಲ ಭಾಷೆಯ ಗಾದೆ ನೆಕ್ಸ್ಟ್ ಇಸ್ ಬೆಸ್ಟ್ (Next is best) ಅಳವಡಿಸಿಕೊಂಡಿದ್ದೇನೆ, ಬಂದವರಿಗೆ ಸ್ವಾಗತ - ಹೋದವರಿಗೆ ವಿಧಾಯ, ಅನೇಕ ಸಂದರ್ಭದಲ್ಲಿ Next is Best ಎನ್ನುವುದು ಸಾಬೀತಾಗಿದೆ ಈ ಪಾಮೂ೯ಲ ಎಲ್ಲಾ ವ್ಯವಹಾರಸ್ಥರಿಗೂ ಸೂಕ್ತವಾದದ್ದೆ ಕಳೆದು ಹೋದದ್ದನ್ನು ಚಿಂತಿಸದೆ ನಮ್ಮ ನಮ್ಮ ವ್ಯವಹಾರಗಳನ್ನು ಮುಂದುವರಿಸಲು ಸಹಕಾರಿ.
   ಇದರ ಮಧ್ಯದಲ್ಲಿ ಕನ್ನಡದ ಇನ್ನೊಂದು ಗಾದೆ ಸ್ವಲ್ಪ ತಲೆ ಕೆಡಿಸುತ್ತದೆ ಅದೇನೆಂದರೆ "ಅಕ್ಕಿ ತಿನ್ನೋನು ಹೋದರೆ ತೌಡು ತಿನ್ನೋನು ಬರುತ್ತಾನೆ" ಈ ಗಾದೆ ಪ್ರಕಾರ ಈಗಿನವನು ಹೋದರೆ ಮುಂದೆ ಬರುವವನು ಓಡಿ ಹೋದವನಿಗಿಂತ ಕರಾಬು ಮನುಷ್ಯ ಅಂತ, ಬಹುಶಃ ಇದ್ದಿದರಲ್ಲೇ ಯಥಾಸ್ಥಿತಿ ಕಾಪಾಡುವಂತೆ ಗಾದೆ ಇದು ಇರಬಹುದೇನೋ...
  ಸುಮಾರು 12 ವರ್ಷದಿಂದ ಶಿವಮೊಗ್ಗದಿಂದ ಪಿನಾಲ್ ಮತ್ತು ಬ್ಲೀಚಿಂಗ್ ಸರಬರಾಜು ಮಾಡುವ ಒಬ್ಬರಿದ್ದರು ಪ್ರತಿ ತಿಂಗಳು ನಮ್ಮ ಬೇಡಿಕೆಗೆ ಅನುಗುಣವಾಗಿ ಲಾಡ್ಜ್, ರೆಸ್ಟೋರೆಂಟ್, ಕಲ್ಯಾಣ ಮಂಟಪ ಮತ್ತು ಮನೆಗೆ ಅಂತ ಆತನಿಂದ  12 ವರ್ಷದಲ್ಲಿ ಹತ್ತಿರ ಹತ್ತಿರ ಎಂಟು ಲಕ್ಷಕ್ಕೂ ಮಿಕ್ಕಿದ ಖರೀದಿ ಮಾಡಿದ್ದೆ ಆದರೆ ಕಳೆದ ಎರೆಡು ವರ್ಷದಲ್ಲಿ ಆತನಿಗೇನೋ ದುರಾಸೆ, ಕಳಪೆ ಮಾಲು ಸರಬರಾಜು ಶುರುಮಾಡಿದ್ದ ಮತ್ತು ಶಿವಮೊಗ್ಗದ ಮಾಜಿ ಶಾಸಕರು ಗೆದ್ದಾಗ ಅವರಿಂದ ಲಾಭ ಪಡೆದಿದ್ದ ಅವರು ನನಗೆ ಮಿತ್ರರು ಮತ್ತು ನನಗೆ ಅನೇಕ ಸಂದರ್ಭದಲ್ಲಿ ಅವರು ಪ್ರಭಾವ ಬೀರಿ ಸಹಾಯ ಮಾಡಿದವರು, ಅವರಿಂದ ಉಪಕಾರ ಪಡೆದೂ ಅವರನ್ನು ಪ್ರಸನ್ನ ಖಾನ್ ಅಂತ ನಿಂದಿಸುವುದು ನನಗೆ ಆತನ ಬಗ್ಗೆ ಅಸಹನೆ ಮೂಡಿಸಿತ್ತು.
  ಮೊನ್ನೆ ಅವರು ತಂದ ಪಿನಾಲ್ ಬ್ಲೀಚಿಂಗ್ ಪೌಡರ್ ಗಳು ಪುನಃ ಕಳಪೆ ಆಗಿತ್ತು ಇದನ್ನು ನನ್ನ ಸಿಬ್ಬಂದಿಗಳು ಆತನ ಜೊತೆಗಾರರ ಗಮನಕ್ಕೆ ತಂದರು ಅವರೂ ಕೂಡ ತಮ್ಮ ಈ ಉತ್ಪನ್ನ ಸರಿ ಇಲ್ಲ ಎಂದು ಒಪ್ಪಿಕೊಂಡಿದ್ದಾರೆ ಇದರಿಂದ ಸರಬರಾಜುದಾರ ಅವಮಾನದಿಂದ ಕುಣಿಯಲು ಶುರು ಮಾಡಿದ್ದಾನೆ ಈ ಗಲಾಟೆಯಿಂದ ನನಗೂ ಈತನ ವ್ಯವಹಾರಿಕಾ ಸಂಬಂದ ಮುಂದುವರಿಸಲು ಇಷ್ಟ ಇರಲಿಲ್ಲ ಆದ್ದರಿಂದ ಈತನ ಪಿನಾಯಿಲ್ ಬ್ಲೀಚಿಂಗ್ ವ್ಯವಹಾರದ ಸಂಬಂದ ಅಂತ್ಯಗೊಳಿಸಿದೆ.
  ಈಗ ಎಲ್ಲರೂ ಪಿನಾಲ್ ಮತ್ತು ಪ್ಲೋರ್ ಕ್ಲೀನರ್ ಒಂದೇ ಅಂತ ಬಾವಿಸಿದ್ದಾರೆ ಆದರೆ ಪಿನಾಲ್ ಮಾತ್ರ ನಂಜುನಿರೋದಕ ಸೊಂಕಿಗೆ ಕಾರಣವಾಗುವ ಸೂಕ್ಷ್ಮಾಣು ಜೀವಿ ನಾಶ ಮಾಡಲು 1843 ರಲ್ಲಿ ಕಲ್ಲಿದ್ದಲು ಟಾರ್ ನಿಂದ ಬ್ಲಾಕ್ ಪಿನಾಲ್ ಉತ್ಪಾದಿಸಲು ಪ್ರಾರಂಭ ಮಾಡಿದ್ದು ಪ್ರೆಂಚ್ ರಸಾಯನ ತಜ್ಞ ಚಾರ್ಲ್ಸ್ ಗೆಹಾರ್ಡ್ ಪಿನಾಲ್ ಇವರಿಂದಾಗಿ ಇದಕ್ಕೆ ಪಿನಾಲ್ ಎಂಬ ಹೆಸರು ಬ್ಲಾಕ್ ಪಿನಾಲ್ 5 ಲೀಟರ್ ಕ್ಯಾನ್ ಗೆ 350 ರೂಪಾಯಿ, ಬ್ಲಾಕ್ ಪಿನಾಲ್ ಇಲ್ಲದೆ ನಿಮ್ಮ ಸಂಸ್ಥೆಯ ಶೌಚಾಲಯಗಳು ನಂಜುನಿರೋದಕವಾಗಲು ಸಾಧ್ಯವೇ ಇಲ್ಲ.
  ಡಿ ಅಡೋರೆಂಟ್ ಮಿಶ್ರ ದ್ರವ ವೈಟ್ ಪಿನಾಲ್ ಎಂಬ ಪ್ಲೋರ್ ಕ್ಲೀನರ್ ತಯಾರಿಸಲು ಬೇಕಾದ ಕಂಪೌಂಡ್ ಮತ್ತು ಡಿ ಅಡೋರೆಂಟ್ ಗಳು ಶಿವಮೊಗ್ಗದ ರಾಜ್ ಕೆಮಿಕಲ್ಸ್ ನಲ್ಲಿ ಲಭ್ಯವಿದೆ ಅದನ್ನು ತಂದು ನಾವೇ ಪ್ಲೋರ್‌ ಕ್ಲೀನರ್ ತಯಾರಿಸಿಕೊಳ್ಳುತ್ತೇವೆ ಇವರಲ್ಲಿ ಅತ್ಯುತ್ತಮ ಗುಣಮಟ್ಟದ ಬ್ಲೀಚಿಂಗ್ ಪೌಡರ್ ಕೂಡ ಇವರಲ್ಲಿ ಸಿಗುತ್ತದೆ ಇವರ ಸಂಪರ್ಕ ಸಂಖ್ಯೆ 8050015059.
   ಅರ್ಧ ಬೆಲೆಯಲ್ಲಿ ಗುಣಮಟ್ಟದ  ಪಿನಾಲ್ / ಬ್ಲೀಚಿಂಗ್ ಸರಬರಾಜು ಮಾಡುವ ಹೊಸಬರು ಸಿಕ್ಕಿದ್ದಾರೆ ಆದ್ದರಿಂದ NEXT IS BEST ಎಂಬುದು ಸತ್ಯವೇ ಅಂತ ಸಾಬೀತಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ