Skip to main content

Blog number 1261. ಅಡಿಕೆ ಯಂತ್ರ ಅವಿಷ್ಕಾರದ ಪಿತಾಮಹ ಮುಂಡಿಗೆಸರದ ಮಂಜಪ್ಪಯ್ಯ.

ಅಡಿಕೆ ಸಿಪ್ಪೆ ಸುಲಿಯುವ ಯಂತ್ರದ ಅವಿಷ್ಕಾರದ ಪಿತಾಮಹ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ

1945ರಲ್ಲಿಯೇ ಸಾಗರ ತಾಲ್ಲೂಕಿನ ಮುಂಡಿಗೆಸರದ ಮಂಜಪ್ಪಯ್ಯ ಅಡಿಕೆ ಸುಲಿಯುವ ಯಂತ್ರಕ್ಕೆ ಪ್ರಯತ್ನಿಸಿದ್ದರಿಂದ ಅವರು ಅಡಿಕೆ ಸುಲಿಯುವ ಯಂತ್ರ ಅವಿಷ್ಕಾರದ ಪಿತಾಮಹ ಎಂಬುದು ಉದ್ದೇಶ ಪೂವ೯ಕವಾಗಿ ಮರೆಲಾಚುತ್ತಿದ್ದಾರೆಂದು ಈ ಲೇಖನದಲ್ಲಿದೆ ಮುಂಡಿಗೆಸರದ ಮಂಜಪ್ಪಯ್ಯರ ಪೋಟೋ, ಅಡಿಕೆ ಪತ್ರಿಕೆಯಲ್ಲಿ ಇವರ ಬಗ್ಗೆ ಬಂದ ಲೇಖನ ಯಾರಾದರೂ ನೀಡಲು ಸಾಧ್ಯವೆ?

    ಅಡಿಕೆ ಸುಲಿಯುವ ಯಂತ್ರದ ಸಂಶೋಧಕ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ.
     ರೈತ ಕುಲದಲ್ಲಿ ನಾವೇ ಶ್ರೇಷ್ಠರೆಂದು ಬೀಗುವ  ಅಡಿಕೆ ಬೆಳೆಗಾರರೂ ಸಹ ಎಲ್ಲಾ ಸಮಾಜದಲ್ಲಿರುವ ಶ್ರೇಷ್ಠತೆಯ ವ್ಯಸನಿಗಳ ಹಾಗೆ ನಯವಂಚನೆ, ಜಾಣ ಕುರುಡುತನದಂತಹ ಆತ್ಮಘಾತುಕುತನ ಬೆಳೆಸಿಕೊಂಡು ಚರಿತ್ರೆಗೆ ದ್ರೋಹವೆಸಗುವವರೆಂದು ಅತ್ಯಂತ ವಿಷಾದದಿಂದ ಹೇಳಬೇಕಾದ ದಿನ ಈ ತಾರೀಕು.
   ಪ್ರತಿ ಆಗಸ್ಟ್ 28 ರಂದು ಹೀಗೆಯೇ ಸಿಟ್ಟು ಬಂದು ಸಮಾಧಾನಿಸಿಕೊಂಡಿದ್ದಿದೆ. ನಮ್ಮ ಸುತ್ತ ಮುತ್ತಲಿನ ಡಂಬಾಚಾರಿಗಳ ಸನ್ಮಾನ, ಪುಗಸಟ್ಟೆ ಪ್ರಶಸ್ತಿ ಪ್ರತಾಪಿಗಳ ಅಬ್ಬರ ಅಡಿಕೆ ಅಂಗಳಕ್ಕೂ ಕಾಲಿಟ್ಟು ಊಳಿಟ್ಟರೂ ಬಾಯಿಬಿಡದ ಅವಿವೇಕಿ ಬೆಳೆಗಾರರು, ರೈತ ಸಂಘಟನೆಯ ನೇತಾರರು, ಗಜ ಗಾಂಭೀರ್ಯ ಘತ್ತಿನ ಅಡಿಕೆ ಸಹಕಾರಿ ಸಂಘಗಳ ಸೋ ಕಾಲ್ಡ್ ಬಲಿಷ್ಠರು ತುಟಿಪಿಟಕ್ಕೆನ್ನದೇ ಮಳ್ಳರಂತೆ ನುಣಚಿಕೊಳ್ಳುವುದು ನೋಡಿ ಇವರಲ್ಲಿ ಯಾರಾದರೂ ಬೆತ್ತಲಾಗಿ ಸತ್ಯ ಹೊರಬರಲೆಂದು ಚರಿತ್ರೆಯಲ್ಲಿ ಹೂತಿಡಲಾದ ಅನ್ಯಾಯದ ಪುಟವೊಂದನ್ನು, ಒಂದೇ ಒಂದು ಪುಟ ನಿಮ್ಮ ಮುಂದಿಡಲಾಗಿದೆ, ಸಂಕ್ಷಿಪ್ತವಾಗಿದೆ.
    ಸಾಗರ ತಾಲ್ಲೂಕಿನಲ್ಲೇ ಮೊದಲು ಕಾರು ಹೊಂದಿದ್ದ ಕುಟುಂಬದ ಹೆಗ್ಗೋಡು ಸಮೀಪ ಮುಂಡಿಗೆಸರದ M R ಮಂಜಪ್ಪಯ್ಯನವರು...ಹುಟ್ಟಿದ್ದು 26-12-1926. ತಮ್ಮ ಶಾಲಾ ಕಲಿಕೆಗೆ 8ನೇ ತರಗತಿಯಲ್ಲೇ ವಿದಾಯ ಹೇಳಿ ಕೃಷಿಯಲ್ಲಿ ತೊಡಗಿದ್ದರು. ವಿರಳ ಜನಸಂಖ್ಯೆಯ ಮಲೆನಾಡಿಗೆ ಅಂದು ಅಡಿಕೆ ಸುಲಿಯಲು ಬಯಲುನಾಡಿನಿಂದ ಜನರನ್ನು ಕರೆತರಬೇಕಿತ್ತು. ಈ ಕಿರಿಕಿರಿ ಬೇಡವೆಂದು ಮಂಜಪ್ಪಯ್ಯ ತಮ್ಮ ಹದಿನೆಂಟರ ಪ್ರಾಯದಲ್ಲಿ ಅಂದರೆ 1945 ರಲ್ಲೇ ಅಡಿಕೆ ಸುಲಿಯುವ ಯಂತ್ರದ ಅನ್ವೇಷಣೆಗೆ ಶುರುವಿಟ್ಟುಕೊಳ್ಳುತ್ತಾರೆ. (ಇಪ್ಪತ್ತೇಳು ವರ್ಷಗಳ ಹಿಂದಿನ 'ಅಡಿಕೆ ಪತ್ರಿಕೆ '  ನವೆಂಬರ್ 1993 ರ ಲೇಖನವೊಂದನ್ನು ಗಮನಿಸಿ.) 
   1968-69 ರಲ್ಲಿ ಇವರ ಮೊದಲ ಯಂತ್ರ ಅಡಿಕೆ ಸುಲಿಯಲು ಯಶಸ್ವಿಯಾಗಿ ಎಲ್ಲರ ಹುಬ್ಬೇರುವಂತಾಯಿತು. ಇನ್ನಷ್ಟು ಯಶ ಗಳಿಸಲು ಎರಡನೇ ಮಹಾಯುದ್ಧಕ್ಕೆ ಅಣಿಯಾಗುತ್ತಲೇ ಇವರ ಮಗ ರಾಮಮೂರ್ತಿಯವರು ಶಾಲಾ ದಿನಗಳಲ್ಲಿಯೇ ತಂದೆಯೊಂದಿಗೆ ಕೈಜೋಡಿಸಿದ್ದರು. ಇಬ್ಬರೂ ಇಂಜಿನಿಯರಿಂಗ್ ಓದಿಲ್ಲ, ವರ್ಕ್ ಶಾಪ್ ಇಟ್ಟುಕೊಂಡವರಲ್ಲ. ಹಠಕ್ಕೆ ಕೊನೆಯಿದೆ ಎಂದು ನಂಬಿದವರಲ್ಲ. 1984-85 ರಲ್ಲಿ ಇವರು ರುಪಿಸಿದ್ದಂತು ಅದ್ಭುತ ಮಾದರಿ. ಏಕೆಂದರೆ ಇಂದು ನಾವು ನೋಡುತ್ತಿರುವ ವಿವಿಧ ತಯಾರಕರು ಮಾರುತ್ತಿರುವ ಅಡಿಕೆ ಸುಲಿಯುವ ಜನಪ್ರಿಯ ಯಂತ್ರಗಳಿಗೆಲ್ಲಾ ಇದೇ ಬೀಜಾಕ್ಷರ. 
    ಈ ಯಂತ್ರದಲ್ಲಿ ಬಳಸಿದ ತಂತ್ರಜ್ಞಾನದ ಆಧಾರದಲ್ಲೇ  ಬ್ಲೇಡ್ ಮೌಂಟೆಡ್ ಅಲ್ಯೂಮಿನಿಯಮ್ ಚಕ್ರಗಳು ಅಡಿಕೆ ಸುಲಿಯುವ ಕ್ರಮಗಳನ್ನು ವಿವರಿಸಿ ಇವರು ಬರೆದ ಚಿತ್ರ (ಡ್ರಾಯಿಂಗ್) ಗಳನ್ನು ನೋಡಿ ತಾಂತ್ರಿಕ ವರದಿಗೆ ಬಂದ ಇಂಜಿನಿಯರುಗಳು ಮೂಕವಿಸ್ಮಿತರಾದರು. ಈ ಗೀಳಿನಿಂದಾಗಿಯೇ ಮಂಜಪ್ಪಯ್ಯನವರ ಕುಟುಂಬ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಬಿಟ್ಟಿರುತ್ತದೆ. ಪೇಟೆಂಟ್ ತೆಗೆದುಕೊಳ್ಳಬೇಕೆಂಬ ಹಂಬಲ.... ಕಾಸಿಲ್ಲ. ವಾಣಿಜ್ಯ ಉತ್ಪಾದನೆ ಮಾಡಿ ರೈತರ ಕೈಗಿಡಬೇಕೆಂದು ಆಸೆ...ಯಾರೂ ಸಹಾಯ ಹಸ್ತ ಚಾಚಲಿಲ್ಲ. ಅಸ್ತವ್ಯಸ್ತವಾದ ಬದುಕಿನ ಬಂಡಿ. ಆ ಘಳಿಗೆಗೆ ಹೊಳೆಯುವ ಚಿಕ್ಕ ಪುಟ್ಟ ಮಾರ್ಪಾಡುಗಳಿಗೆ ಕೊನೆಗೂ MAMCOS ನವರು ಕೆಲವು ಸಂಶೋಧಕರಿಗೆ ಪ್ರೋತ್ಸಾಹ ಹಣ ನೀಡುತ್ತೇವೆಂದಾಗ 1995-96 ರಲ್ಲಿ ಅರ್ಜಿ ಹಾಕಿ ಪಡೆಯಬೇಕಾಯಿತು. ಆರೋಗ್ಯ ಹದಗೆಟ್ಟಿದ್ದರಿಂದ ಮತ್ತೊಮ್ಮೆ ಮಗ ರಾಮಮೂರ್ತಿಯವರ ಹೆಸರಿನಲ್ಲಿ ಇದೇ MAMCOS ನವರಿಂದ 2005 ರಲ್ಲಿ ಪ್ರೋತ್ಸಾಹ ಧನ ಪಡೆದು ಸಣ್ಣ ಸಣ್ಣ ಬದಲಾವಣೆ ಮಾಡಿದರೂ ಬೆಂಗಳೂರು, ಚೆನ್ನೈ, ದೆಹಲಿ ಓಡಾಡಿ ಪೇಟೆಂಟ್ ಪಡೆಯಲಾಗಲಿ, ವಾಣಿಜ್ಯ ಉತ್ಪಾದನೆಗೆ ಸಹಾಯವಾಗಲಿ ದೊರೆಯಲಿಲ್ಲ. 
    ಇವರ ಅಸಹಾಯಕತೆ ಒಂದು ಕಡೆ ಮತ್ತೊಂದೆಡೆ ಹೊರೆಯಾಗದಂತೆ ತಂತ್ರಜ್ಞಾನವನ್ನು ರೈತರಿಗೆ ತಲುಪಿಸುವ ಇವರ ಉದಾರತೆಯನ್ನು ವಿಫಲಗೊಳಿಸಲು ಇವರಿಂದಲೇ ಪಡೆದ ಮಾಹಿತಿಯನ್ನು ದುರುಪಯೋಗಪಡಿಸಿಕೊಳ್ಳುವ ದುರುಳರ ಸಂಚು. ರೈತರಿಗಾಗಿ ಹಠ ಬಿಡದಿದ್ದ ಮಂಜಪ್ಪಯ್ಯನವರು ದ್ರೋಹ ಸಹಿಸಿಕೊಳ್ಳಲಾಗದೆ ತಮ್ಮ ಆರು ದಶಕಗಳಿಗೂ ಹೆಚ್ಚು ಕಾಲದ ಸಂಶೋಧನೆಯ ಗೀಳಿಗಾಗಿಯೇ ಜೀವ ಬಿಟ್ಟಿದ್ದು 25 - 08 - 2008. ಈ ದಿನ ಮಾನವಿಟ್ಟುಕೊಳ್ಳಬೇಕೆಂಬ ಅಡಿಕೆ ಬೆಳೆಗಾರರ ಪ್ರಾತಸ್ಮರಣೀಯ ಮುಂಡಿಗೆಸರ ಮಂಜಪ್ಪಯ್ಯನವರ ಪುಣ್ಯ ಸ್ಮರಣೆ. 
      ಪೇಟೆಂಟ್ ಹಾಗೂ ವಾಣಿಜ್ಯ ಉತ್ಪಾದನೆ ಸಾಧ್ಯವಾಗದೆ  ತಮ್ಮ ತಂದೆ ತೀರಿಕೊಂಡ ಬೇಸರದಿಂದ ರಾಮಮೂರ್ತಿ ತನ್ನ ತಂದೆಯವರ ಶ್ರಮಕ್ಕೆ ಸಿಗದ ಪ್ರತಿಫಲ ತನಗೂ ಬೇಡವೆಂದರು. ತಮ್ಮ ಬಳಿಯಿದ್ದ ಎಲ್ಲಾ ಮಾದರಿಯ ಯಂತ್ರಗಳನ್ನು, ಅವುಗಳ ತಾಂತ್ರಿಕ ಮಾಹಿತಿಗಳನ್ನು ಎಲ್ಲರಿಗೂ ಈ ದಿನದವರೆಗೂ ಹಂಚುತಿದ್ದು ಯಾರೂ ದಯವಿಟ್ಟು ಈ ಯಂತ್ರಕ್ಕೆ ಪೇಟೆಂಟ್ ಪಡೆಯಬೇಡಿ ಎಂದು ಅಂಗಲಾಚುತ್ತಾರೆ. ಏಕೆಂದರೆ ಇದರಿಂದ ರೈತರಿಗೆ ಅನ್ಯಾಯವಾಗುತ್ತದೆಂದು. 
    ರೈತ ವಿಜ್ಞಾನಿ ;ತಂತ್ರಜ್ಞಾನಿ ಅಪ್ಪ ಮಕ್ಕಳು ದಡ್ಡರಲ್ಲ. ಆದರೇನು ದುಷ್ಟರಲ್ಲವಲ್ಲ? ಇವರ ಅನ್ವೇಷಣೆಯನ್ನು ತಮ್ಮದೆಂದು ಪೇಟೆಂಟ್ ಪಡೆಯಲು ಅರ್ಜಿ ಗುಜರಾಯಿಸಿದ ಪುಂಗ್ಲಿಗಳಿಗೆ ತಮ್ಮೆದುರೇ ಸನ್ಮಾನ ನಡೆದಾಗಲೂ ಸ್ಥಿತಪ್ರಜ್ನೆ ಮೆರೆದ ರಾಮಮೂರ್ತಿ ಯಾರೆಂದರೆ ಮಂಜಪ್ಪಯ್ಯನವರ ಮಗನೇ ಹೌದು. 
    ನೇಪಥ್ಯದಲ್ಲಿ ಪ್ರಶಸ್ತಿಗೆ ಶಿಫಾರಸು ಮಾಡುವ ನೇತಾಗಳು, ಅದನ್ನು ನೋಡಿ ಚಪ್ಪರಿಸಿ ಚಪ್ಪಾಳೆ ತಟ್ಟುವ ರೈತ ನೇತಾಗಳು ಯಾರ ಯಾರ ಮಕ್ಕಳು? ವಿಮಾನವನ್ನು ಮೊದಲ ಬಾರಿಗೆ ಕೆಲವೇ ಮೀಟರುಗಳಷ್ಟು ದೂರ ಹಾರಿಸಿದ್ದಷ್ಟೆ. ಈಗ ಐದು ಹತ್ತು ಸಾವಿರ ಕಿಲೋಮೀಟರುಗಳ ದೂರ ಹಾರುವ ವಿಮಾನಗಳನ್ನು ತಯಾರಿಸಿದ್ದರೂ ಮೊದಲು ಹಾರಿಸಿದ ರೈಟ್ ಸಹೋದರರ ಹೆಸರನ್ನೇ ಹೇಳುತ್ತಾರಲ್ಲವೆ? ಅಡಿಕೆ ಸುಲಿಯುವ ಯಂತ್ರವನ್ನು ಪರಿಪೂರ್ಣವಾಗಿ ಸಿದ್ಧಗೊಳಿಸಿ ಯಶಸ್ವಿಯಾದ ಮಂಜಪ್ಪಯ್ಯನವರ ಹೆಸರು ಬಿಟ್ಟು ಬೇರೆಯವರ ಹೆಸರು ಹೇಳುವುದನ್ನು ಬಾಯಿ ಹಾದರ ಎನ್ನಬೇಕಲ್ಲವೇ?

- ತಿರುಮಲ,  ನಾನು ಒಬ್ಬ ಸಾಮಾನ್ಯ ಅಡಿಕೆ ಬೆಳೆಗಾರ,   ಸತ್ಯ ಹೇಳಬೇಕು ಅನಿಸಿತು ಅದಕ್ಕೆ ಬರೆದೆ  ನಿಮಗೇನಾದರು ಸತ್ಯಪರಿಶಿಲಿಸಬೇಕು ಎಂದರೆ ಮ್ಯಾಗಸೆ ಪ್ರಶಸ್ತಿಯ ಕೆ.ವಿ.ಸುಬ್ಬಣ್ಣ ರವರ ಊರಿಗೆ ಹೋಗಿ  ವಿಚಾರಿಸಿ.  ಕ್ರಾಸ್ ಚೆಕ್ ಮಾಡಿಕೊಳ್ಳಿ,    ನಿಜವಾದ ಸದಾಕರ ಹೆಸರು ಇತಿಹಾಸದ ಪುಟ ಸೇರಲಿ ಎಂಬುದು ನನ್ನ ಕಾಳಜಿ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ