Skip to main content

Blog number 1234. ಜಾತ್ರಾ ಪ್ರದರ್ಶನದ ಮುಖ್ಯ ಆಕರ್ಷಣೆ ಜೈ೦ಟ್ ವೀಲ್ ಎಂಬ ವಿದ್ಯುತ್ ಚಾಲಿತ ತೊಟ್ಟಿಲುಗಳ ಪ್ರವೇಶ ಧರ ಕೇವಲ 50 ರೂಪಾಯಿಗೆ ನಿಗಧಿ ಮಾಡಿಸಿದ ಸಾಗರದ ಶಾಸಕ ಹರತಾಳು ಹಾಲಪ್ಪ

#ಸಾಗರದ_ಮಾರಿಕಾಂಬಾ_ಜಾತ್ರೆಯ_ಅಮ್ಯುಸಮೆಂಟ್_ಪ್ರವೇಶ_ಧರ_50_ಮಾತ್ರ.

#ಜಾತ್ರೆಗಳಲ್ಲಿ_ಇರಲೇಬೇಕಾದ_ಜೈಂಟ್_ವೀಲ್_ತೊಟ್ಟಿಲು.

#ವಿಶ್ವದ_ಅತ್ಯಂತ_ಎತ್ತರದ_ಜೈಂಟ್_ವೀಲ್_ಐನ್_ದುಬೈನಲ್ಲಿದೆ.

#ಹದಿನೇಳನೆ_ಶತಮಾನದಲ್ಲಿ_ಬಲ್ಗೇರಿಯಾದಿಂದ_ಭಾರತಕ್ಕೆ_ಪರಿಚಯವಾದ_ಸಂತೋಷದ_ಚಕ್ರ

#ಇಟಲಿ_ಪ್ರವಾಸಿ_ಪಿಯೋತ್ರ_ಡಲ್ಲಾವಿಲ್ಲೆ_ಪತ್ರದಲ್ಲಿ_ಕಾನ್ಸಟೆಂಟಿನೋಪಲಲ್ಲಿ
#ರಂಜಾನ್_ಹಬ್ಬದಲ್ಲಿ_ಇಂತಹ_ವೀಲ್_ಹತ್ತಿದ್ದ_ಉಲ್ಲೇಖವಿದೆ

   ಕನ್ನಡದಲ್ಲಿ ತಿರುಗುಣಿ ತೊಟ್ಟಿಲು ಅನ್ನುವ ಎಲ್ಲಾ ಜಾತ್ರೆ - ಪ್ರದರ್ಶನಗಳಲ್ಲಿ ಮುಖ್ಯ ಆಕರ್ಷಣೆ ಆಗಿರುವ ಇಂಗ್ಲೀಷ್‌ನಲ್ಲಿ ಜೈ೦ಟ್ ವೀಲ್ (ಬ್ಬಹತ್ ಗಾತ್ರದ ಚಕ್ರದ ತೊಟ್ಟಿಲು) ಹಿಂದಿಯಲ್ಲಿ ಜೂಲ, ಅಮೇರಿಕಾದಲ್ಲಿ ಪೆರಿಸ್ ವೀಲ್ 1893ರಲ್ಲಿ ಅಮೇರಿಕಾದ ಚಿಕಾಗೋದಲ್ಲಿ ನಡೆದ ಕೊಲ೦ಬಿಯಾ ಪ್ರದರ್ಶನದಲ್ಲಿ ಜಾಜ್೯ ವಾಷಿಂಗ್ಟನ್ ಗೇಲ್ ಪೆಲಿಸ್ ಜೂನಿಯರ್ ಪ್ರಥಮ ಬಾರಿಗೆ ನಿರ್ಮಿಸಿ ಬಳಸಿದರು.
  ಇದಕ್ಕೂ ಮೊದಲು ಇದು ಮಾನವ ದೈಹಿಕ ಶಕ್ತಿಯಿಂದ ತಿರುಗಿಸುವ ಮರದ ಸಣ್ಣ ತೊಟ್ಟಿಲುಗಳು ಇದಕ್ಕೆ ಸಂತೋಷದ ಚಕ್ರ (Happy wheel) ಅನ್ನುವ ಹೆಸರು 17ನೇ ಶತಮಾನದಲ್ಲಿ ಬಲ್ಗೇರಿಯದಿಂದ ಭಾರತಕ್ಕೆ ಬಂತು ಎಂಬ ಉಲ್ಲೇಖಗಳಿದೆ.
  ಇಟಲಿಯ ಪ್ರವಾಸಿ ಪಿಯೋತ್ರ ಡಲ್ಲಾವಿಲ್ಲೆ ತನ್ನ ಪ್ರವಾಸಿ ಪತ್ರದಲ್ಲಿ ರಂಜಾನ್ ಹಬ್ಬದಲ್ಲಿ ಕಾನ್ಸ್ಟೆಂಟಿನೋಪಲ್ ನಲ್ಲಿ ಇಂತಹ ಚಕ್ರದಲ್ಲಿ ಕುಳಿತ ಅವರ ಅನುಭವ ಬರೆದ ದಾಖಲೆ ಇದೆ.
  ವಿದ್ಯುತ್ ಚಾಲಿತ ಸುದಾರಣೆಯ ರಾಕ್ಷಸ ಗಾತ್ರದ ಜೈಂಟ್ ವೀಲ್ ಗಳ ಈ ಕಾಲದಲ್ಲಿ ವಿಶ್ವದ ಅತ್ಯಂತ ಎತ್ತರದ ಜೈಂಟ್ ವೀಲ್ 853 ಅಡಿ ಎತ್ತರದ್ದು (260 ಮೀಟರ್) ಐನ್ ದುಬೈಯಲ್ಲಿದೆ.
  ಭಾರತದಲ್ಲಿ ಬಿಹಾರದ ನಲಂದಾ, ಜೋದ್ ಪುರ, ಅಹಮದಾಬಾದ್ ನಲ್ಲಿ 40 ಸೀಟಿನ ವಿದ್ಯುತ್ ಚಾಲಿತ ಜಾಯಿಂಟ್ ವೀಲ್ ತಯಾರಿಸಿ 7 ರಿಂದ 8 ಲಕ್ಷಕ್ಕೆ  ಮಾರಾಟ ಮಾಡುವ ಅನೇಕ ಸಂಸ್ಥೆಗಳು ಇದೆ.
   ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಜೈಂಟ್ ವೀಲ್ ಜೊತೆಗೆ ಅನೇಕ ಮನೋರಂಜನೆಯ ಪ್ರದರ್ಶನಗಳು ಬರುತ್ತವೆ ಈ ಬಾರಿ ಅವುಗಳ ಪ್ರವೇಶ ಧರ ಕೇವಲ 50 ರೂಪಾಯಿಗೆ ನಿಗದಿ ಮಾಡಿರುವುದರಿಂದ ಅನುಕೂಲವಾಗಿದೆ.
   ಮೂರು ವರ್ಷಗಳಿಗೂಮ್ಮೆ ನಡೆಯುವ ಮಾರಿಕಾಂಬಾ ಜಾತ್ರೆಯಲ್ಲಿ ಸಾಗರ ಪಟ್ಟಣ ವಾಸಿಗಳ ಮಕ್ಕಳು ನಿತ್ಯ ಜಾತ್ರೆಯ ಅಮ್ಯೂಸ್‌ಮೆಂಟ್ ಗೆ ಹೋಗಿ ಇಂತಹ ಮನೋರಂಜನೆಯಲ್ಲಿ ಭಾಗವಹಿಸುತ್ತಾರೆ ಪ್ರತಿ ಕುಟುಂಬ ಕಡಿಮೆ ಅಂದರೂ 8 ರಿಂದ 10 ಸಾವಿರ ವ್ಯಯಿಸುತ್ತದೆ.
  ಪ್ರವೇಶದ ಧರ 50 ರೂಪಾಯಿಗೆ ಸೀಮಿತಗೊಳಿಸುವ ಪ್ರಯತ್ನ ಸ್ಥಳಿಯ ಶಾಸಕ ಹರತಾಳು ಹಾಲಪ್ಪನವರದ್ದೆಂದು ಇದಕ್ಕೆ ಸಾಗರ ಮಾರಿಕಾಂಬಾ ಸಮಿತಿ ಕೂಡ ಸಹಕರಿಸಿರುವುದು ಶ್ಲಾಘನೀಯವಾಗಿದೆ ಇದರಿಂದ ಸಾಗರ ಪಟ್ಟಣ ವಾಸಿಗಳ ಜೊತೆ ಗ್ರಾಮೀಣ ಪ್ರದೇಶದ ಜಾತ್ರಾ ವೀಕ್ಷಕರಿಗೂ ಕಡಿಮೆ ಬಜೆಟ್ ನಲ್ಲಿ ತಮ್ಮ ಮಕ್ಕಳಿಗೆ ಈ ಪ್ಯಾಂಟಸಿ ಜಗಮಗ ಜಗತ್ತು ತೋರಿಸಲು ಸುಲಭ ಸಾಧ್ಯವಾಗಿದೆ ಎಲ್ಲಾ ಊರುಗಳಲ್ಲೂ ಹರತಾಳು ಹಾಲಪ್ಪರ ಈ ಪಾರ್ಮೂಲಾ ಜಾತ್ರಾ ಪ್ರದರ್ಶನಗಳಲ್ಲಿ ಆಯಾ ಶಾಸಕರು ಅಳವಡಿಸಿಕೊಳ್ಳಬೇಕು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ