Skip to main content

Blog number 1273. ಸಾಗರದ ಪುಣ್ಯ ಕ್ಷೇತ್ರ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ವಿಶೇಷ ಮಹಾ ರುದ್ರಯಾಗದ ಗೌರವಾಧ್ಯಕ್ಷ ಟಿ.ವಿ. ಪಾಂಡುರಂಗ ಅವರೊಂದಿಗೆ.

https://youtu.be/Emz3jWVMC_o

#ಪಾಂಡಣ್ಣರ_ಗೌರವಾಧ್ಯಕ್ಷತೆಯಲ್ಲಿ_ಸಾಂಗವಾಗಿ_ನಡೆದ_ಮಹಾರುದ್ರ_ಯಾಗ

#ಶ್ರೀಶ್ರೀಧರ_ದತ್ತ_ಮಂದಿರ_ಅಗ್ರಹಾರ_ಸಾಗರದಲ್ಲಿ

#ಇದೇ_ಪೆಬ್ರುವರಿ_24ರಿಂದ_26ರವರೆಗೆ_ನಡೆಯಿತು

#ಮಹಾರುದ್ರಯಾಗ_ಇದೇ_ಮೊದಲು_ಸಾಗರ_ತಾಲ್ಲುಕಿನಲ್ಲಿ_ನಡೆದದ್ದು_ಎನ್ನುತ್ತಾರೆ.

#ಈ_ದತ್ತಮಂದಿರದಲ್ಲಿ_1950ರಲ್ಲಿ_ಶ್ರೀಧರ_ಸ್ಟಾಮಿಗಳ_ಪ್ರವಚನದಲ್ಲಿ
#ಶಿವಮೊಗ್ಗದ_ಪಿ_ಪುಟ್ಟಯ್ಯ_ನಿತ್ಯ_ಭಾಗವಹಿಸಿದ್ದ_ನೆನಪು.

#ಸಾಗರದ_ಮುನ್ಸಿಪಾಲಿಟಿ_ಪ್ರಥಮ_ಅಧ್ಯಕ್ಷರಾದ_ಖ್ಯಾತ_ವಕೀಲ
#ಮೃತ್ಯುಂಜಯಬಾಪಟ್_ದತ್ತಮಂದಿರ_ಕಮಿಟಿ_ದಮ೯ದರ್ಶಿಯಾಗಿದ್ದರು.

#ಮಹಾರುದ್ರಯಾಗದ_ಆಮಂತ್ರಣ_ಪತ್ರ_ವಿಶೇಷವಾಗಿ_ಮುದ್ರಿಸಲಾಗಿದೆ.

    ಟಿ.ವಿ.ಪಾಂಡುರಂಗ ದೈವಭಕ್ತರು ಅವರನ್ನು ಜನ ಪಾಂಡಣ್ಣ ಎಂದೇ ಪ್ರೀತಿಯಿ೦ದ ಕರೆಯುತ್ತಾರೆ ಅವರು ಸುಮಾರು 15 ವರ್ಷದಿಂದ ನಮ್ಮ ಊರಿನ ಶ್ರೀವರ ಸಿದ್ಧಿವಿನಾಯಕ ದೇವಾಲಯದಲ್ಲಿ ಅಂಗಾರಕ ಸಂಕಷ್ಟಹರ ಚತುರ್ಥಿಯಂದು ಚಂದ್ರದರ್ಶನದ ನಂತರದ ಅನ್ನ ಸಂತರ್ಪಣೆ ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ ಕನಿಷ್ಟ 500 ಗರಿಷ್ಟ 1500 ಭಕ್ತರು ಆ ದಿನ ಪ್ರಸಾದ ಸೇವಿಸುತ್ತಾರೆ.
  ತುಂಬಾ ದಿನಗಳ ನಂತರ ನನ್ನ ಆಫೀಸಿಗೆ ಪಾಂಡಣ್ಣ ಇವತ್ತು ಬಂದಿದ್ದರು ಇದೇ ಫೆಬ್ರುವರಿ 24 ರಿಂದ 26 ರವರೆಗೆ ಸಾಗರದ ಅಗ್ರಹಾರದ ಶ್ರೀ ಶ್ರೀಧರ ದತ್ತಮಂದಿರದಲ್ಲಿ ನಡೆದ ಮಹಾರುದ್ರಯಾಗದ ಗೌರವಾಧ್ಯಕ್ಷರಾಗಿ ತಮ್ಮ ಜವಾಬ್ದಾರಿ ಯಶಸ್ವಿಯಾಗಿ ನಡೆಸಿದ ಬಗ್ಗೆ ಅವರ ಹತ್ತಿರ ಕೇಳುವುದೂ ಇತ್ತು.
   ಸಾಗರದ ದತ್ತಮಂದಿರದ ಕ್ಷೇತ್ರ ಮಹಾತ್ಮೆ ಮತ್ತು ಸ್ಥಳ ಪುರಾಣಗಳು ಅನೇಕ. ಅಲ್ಲಿ ವರದಳ್ಳಿಯ ಶ್ರೀಧರ ಸ್ವಾಮಿಗಳು ತಪಸ್ಸು ಮಾಡಿದ್ದರು, 1950ರಲ್ಲಿ ನಿತ್ಯ ಶ್ರೀಧರ ಸ್ವಾಮಿಗಳ ಪ್ರವಚನ ನಡೆಯುತ್ತಿತ್ತು ಆಗ ಸಾಗರದಲ್ಲಿ 8ನೇ ತರಗತಿ ಓದುತ್ತಿದ್ದ ಶಿವಮೊಗ್ಗದ ಪ್ರಕೃತಿ ಮುದ್ರಣಾಲಯದ ಪಿ. ಪುಟ್ಟಯ್ಯ ಈ ಪ್ರವಚನ ಕೇಳಲು ಹೋಗುತ್ತಿದ್ದ ನೆನಪುಗಳು ಹೇಳುತ್ತಿದ್ದರು.
  ಈ ಜಾಗದಲ್ಲೇ ಮಹಾರುದ್ರಯಾಗ ನಡೆದಿದೆ, ಈ ಯಾಗದ ಆಮಂತ್ರಣ ಪತ್ರ ವಿಶೇಷ ಮಾಹಿತಿಗಳ ಜೊತೆ ಮುದ್ರಿಸಲಾಗಿದೆ, ಕೆಳದಿ ಅರಸರಾದ ರಾಜ ವೆಂಕಟಪ್ಪ ನಾಯಕರು ಸಾಗರ ಪಟ್ಟಣ ನಿರ್ಮಿಸಿದ ದಾಖಲೆಗಳಿರುವ ಶಿವ ತತ್ವ ರತ್ನಾಕರ ಮತ್ತು ಕೆಳದಿ ನೃಪವಿಜಯದ ಉಲ್ಲೇಖ, ದತ್ತಮಂದಿರದ ಸ್ಥಳ ಪುರಾಣ, ಆಗಿನ ದಾನಿಗಳು, ಶ್ರೀಧರ ಸ್ವಾಮಿಗಳ ಭಾಗವಹಿಸುವಿಕೆ, ಈಗ ನೆರವೇರಿದ ಮಹಾರುದ್ರಯಾಗದ ಬಗ್ಗೆ, ಇದರ ನೇತೃತ್ವ ವಹಿಸಿದವರು, ದಾನಿಗಳು, ಸಭಾ ಕಾಯ೯ಕ್ರಮ ಇತ್ಯಾದಿಗಳ 20 ಪುಟಗಳ ಕೈಪಿಡಿ ರೂಪದ ಆಮಂತ್ರಣ ಪತ್ರ ಇದು.
     ಈ ಮಹಾರುದ್ರಯಾಗದಲ್ಲಿ 200ಕ್ಕೂ ಹೆಚ್ಚಿನ ಋತ್ವಿಜರು ಭಾಗವಹಿಸಿದ್ದರಂತೆ, ಸುಮಾರು 12 ಸಾವಿರ ಜನರಿಗೆ ಎರೆಡು ದಿನದಲ್ಲಿ ಅನ್ನ ಸಂತರ್ಪಣೆ ಆಯಿತಂತೆ, 1000 ತೆಂಗಿನ ಕಾಯಿ, 100 ಕೆಜಿ ತುಪ್ಪ 100 ಕೆಜಿ ಅಕ್ಕಿ, 1200 ಕೆಜಿ ಬತ್ತ, 200 ಕೆಜಿ ಕರಿ ಎಳ್ಳು, 200 ಪಂಚೆ, 50ಕೆಜಿ ಅಡಿಕೆ,2000 ಕೆಜಿ ಹೋಮದ ಕಟ್ಟಿಗೆ ಜೊತೆ ವಿವಿದ ಹಣ್ಣು - ಹೂವು - ವೀಳ್ಯದೆಲೆ - ಬಾಳೆ ಹಣ್ಣುಗಳನ್ನು ಯಾಗಕ್ಕೆ ಸಮರ್ಪಿಸಲಾಗಿದೆ.
  ಸುಮಾರು 35 ಲಕ್ಷ ವೆಚ್ಚದಲ್ಲಿ ದಾನಿಗಳ ಸಹಾಯ - ಸಹಕಾರದಲ್ಲಿ ಸಾಗರದ ಅನೇಕ ಮಹನೀಯರ ಶ್ರಮ ಮತ್ತು ಮೇಲ್ವಿಚಾರಣೆಯಲ್ಲಿ ಈ ಅಭೂತಪೂರ್ವಕವಾದ ಮಹಾರುದ್ರಯಾಗ ಭಕ್ತಿ ಪೂರ್ವಕವಾಗಿ ನಡೆದಿದೆ ಇದು ಹಣ ಮಾತ್ರ ಸಂಗ್ರಹಣೆಯಿಂದ  ಅಷ್ಟು ಸುಲಭವಾಗಿ ನಡೆಯಲು ಸಾಧ್ಯವಿಲ್ಲ ಇದಕ್ಕೆ ಬೇಕಾದ ದೊಡ್ಡ ಸಂಖ್ಯೆಯ ಯೋಗ್ಯ ಋತ್ವಿಜರನ್ನು ಕರೆತರುವುದು ಈ ಕಾಲದಲ್ಲಿ ತುಂಬಾ ಕಷ್ಟ.
  ಸಾಗರ ತಾಲ್ಲೂಕಿನಲ್ಲಿ ಇಂತಹ ದೊಡ್ಡದಾದ ಯಾಗ ನಡೆಸಲು ಕಾರಣರಾದ ಸರ್ವರಿಗೂ ಅಭಿನಂದಿಸುತ್ತಾ ಈ ಸಮಿತಿಯ ಗೌರವಾಧ್ಯಕ್ಷರಾಗಿದ್ದ ಪಾಂಡಣ್ಣರನ್ನು ನಮ್ಮ ಊರಿನ ಶ್ರೀ ವರಸಿದ್ದಿ ವಿನಾಯಕ ದೇವರ ಪೋಟೋ ನೀಡಿ ಮುಂದಿನ ದಿನಗಳಲ್ಲಿ ಅವರಿಂದ ಇನ್ನೂ ದೊಡ್ಡ ದೊಡ್ಡ ದಾಮಿ೯ಕ ಸೇವೆಗಳು ನೆರವೇರಲಿ ಎಂದು ಹಾರೈಸಿದೆ. 
  ಈ ಮಹಾರುದ್ರಯಾಗದ ಬಗ್ಗೆ ಪಾಂಡಣ್ಣನವರು ಮಾತಾಡಿದ ವಿಡಿಯೋ ಇಲ್ಲಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ