Skip to main content

Blog number 1232. ಆನಂದಪುರಂನ ರಂಗನಾಥ ಭಟ್ಟರೆಂಬ ಸಜ್ಜನರು.

#ಆನಂದಪುರದ_ಜನತೆ_ಮಾರೆಯಲಾರದ_ರಂಗನಾಥ_ಭಟ್ಟರು
#ಸ್ವಾತಂತ್ರ_ನಂತರದ_ಮೊದಲ_ವಿಲೇಜ್_ಅಕೌಂಟೆಂಟ್_ಮತ್ತು_ಆನಂದಪುರದ_ವಿಲೇಜ್_ಪಂಚಾಯತ್_ಕಾಯ೯ನಿವ೯ಹಿಸಿದವರು.
   
     ಆನಂದಪುರದ ಅಧಿಕೃತ ಮಾಹಿತಿ ಹೇಳುವವರು ಈ ರಂಗನಾಥ ಭಟ್ಟರು ಮತ್ತು ಬೋಜ್ ರಾಜ್ ಮಾಸ್ತರ್ (ಬೋಜರಾಜ್ ಅಯ್ಯಂಗಾರರು) ಮಾತ್ರ, ಬೋಜ್ ರಾಜ್ ಆಯಂಗಾರರ ಮತ್ತು ರಂಗನಾಥ ಭಟ್ಟರ ಕುಟುಂಬ ಪ್ರಸಿದ್ಧ ಭೂ ಮಾಲಿಕರಾದ ರಾಮಕೃಷ್ಣ ಅಯ್ಯಂಗಾರ್ (ಮಂತ್ರಿ ಬದರಿನಾರಾಯಣ ಅಯ್ಯಂಗಾರ್ ರ ತಂದೆ) ಆನಂದಪುರಕ್ಕೆ ಬರುವ ಮೊದಲೇ ಇವರ ಅಜ್ಜಂದಿರದ್ದು ಮೂರು ತಲೆಮಾರು ಕಳೆದಿತ್ತಂತೆ.
     ನನಗೆ ಬಾರೀ ಕಷ್ಟದಿಂದ ಆನಂದಪುರದ ವಿಲೇಜ್ ಪಂಚಾಯಿತಿ ಕಟ್ಟಡದಲ್ಲೇ ಆನಂದಪುರದ ಶ್ರೀಮತಿ ಕೆರಿಯಮ್ಮ ನಡೆಸುತ್ತಿದ್ದ ನಸ೯ರಿ ಶಾಲೆಗೆ ಸೇರಿಸಿದಾಗ (ಒಂದೆರೆಡು ದಿನದಲ್ಲೇ ಬಿಟ್ಟುಬಿಟ್ಟೆ 1968 ರಲ್ಲಿ) ರಂಗನಾಥ ಭಟ್ಟರು ಬಿಳಿ ಶಟ್೯ ಮತ್ತು ಬಿಳಿ ಪಂಚೆಯಲ್ಲಿ ವಿಲೇಜ್ ಪಂಚಾಯಿತಿ ಅಧಿಕಾರಿ ಮತ್ತು ರೆವಿನ್ಯೂ ಇಲಾಖೆ ವಿಲೇಜ್ ಅಕೌಂಟೆಂಟ್ ಆಗಿದ್ದರು, ಆಗ ವಿಲೇಜ್ ಪಂಚಾಯತ್ ಛೇಮ೯ನ್ ಬದರೀನಾರಾಯಣ್ ಆಯ್ಯಂಗಾರರ ಅಣ್ಣ ವೆಂಕಟಚಲ ಅಯ್ಯಂಗಾರರು. (ಆಗ ರೆವಿನ್ಯೂ ಇಲಾಖೆಯ ಅಡಿಯಲ್ಲಿ ವಿಲೇಜ್ ಪಂಚಾಯಿತಿ ಇತ್ತು ಈಗ ಪ್ರತ್ಯೇಕ ಪಂಚಾಯತ್ ಇಲಾಖೆ ಆಗಿದೆ.)
   ಪ್ರತಿ ವರ್ಷದಂತೆ ಆನಂದಪುರದ ಇತಿಹಾಸ ಪ್ರಸಿದ್ದಿ ಪಡೆದ ರಂಗನಾಥ ದೇವಾಲಯದ ಜಾತ್ರಾ ಆಹ್ವಾನ ನೀಡಲು ಮೊನ್ನೆ ನನ್ನ ಮನೆಗೆ ರಂಗನಾಥ ಭಟ್ಟರು ಬಂದಾಗಲೂ ಸುಮಾರು 52 ವರ್ಷದ ಹಿಂದಿನ೦ತೆ ಬಿಳಿ ಶರ್ಟ್ ಪಂಚೆಯಲ್ಲೇ ಇದ್ದರು.
  ಇವರ ಕಿರಿಯ ಸಹೋದರ ಕೆ.ವಿ.ಸುರೇಶ್ ಶಿವಮೊಗ್ಗದಲ್ಲಿ ಇದ್ದಾರೆ ಈಗಲೂ ನನಗೆ ಆನಂದಪುರದ ಮಾಹಿತಿಗೆ ಸಹಕರಿಸುತ್ತಾರೆ, ಇನ್ನೊಬ್ಬ ಸಹೋದರರ ಮಗ ಈಗ ಮಣಿಪಾಲ ಸಂಸ್ಥೆಯ ಕೀಲು ಮೂಳೆ ವಿಭಾಗದ ಮುಖ್ಯಸ್ಥರಾಗಿರುವ ಡಾ.ಅನಿಲ್ ಭಟ್ ದೇಶದಲ್ಲೇ ಕೆಲವೇ ಕೆಲವು ಪ್ರಸಿದ್ಧ ವೈದ್ಯರಲ್ಲಿ ಒಬ್ಬರು. (Orthopedic Head of the Dept)
  ಯಾರಿಗೂ ತೊಂದರೆ ಕೊಡದ, ಕೈಲಾದ ಸಹಾಯ ಮಾಡುತ್ತಾ ಸಾತ್ವಿಕರಾಗಿ, ದೈವಭಕ್ತರಾಗಿ ಈಗ ನಿವೃತ್ತ ಜೀವನ ನಡೆಸುತ್ತಿರುವ ರಂಗನಾಥ ಭಟ್ಟರು ಆ ಕಾಲದಲ್ಲಿ ಜಿಲ್ಲಾಧಿಕಾರಿಗಳಾದವರಿಂದ ಪ್ರಶಂಸೆಗೊಳಪಟ್ಟ ಸಕಾ೯ರದ ನಿಯತ್ತಿನ ಸೇವಕರಾದವರು, ಆ ಕಾಲದ ರಾಜ್ಯದ ವಿದ್ಯಾ ಮಂತ್ರಿ, ಲೋಕಸಭಾ ಸದಸ್ಯರಾಗಿದ್ದ ಬದರಿನಾರಾಯಣ ಅಯ್ಯಂಗಾರರು ಆನಂದಪುರದ ಅಭಿವೃದ್ದಿ ಮತ್ತಿತರ ಕಾರಣಕ್ಕೆ ರಂಗನಾಥ ಭಟ್ಟರ ಹತ್ತಿರ ಚಚಿ೯ಸುತ್ತಿದ್ದರಂತ ನಮ್ಮ ತಂದೆ ಹೇಳುತ್ತಿದ್ದ ನೆನಪು.
  ದೂರದ ದಾರವಾಡ ಸೀಮೆಯ ಕೋಳಿವಾಡದಿಂದ ತೀಥ೯ಹಳ್ಳಿ ಬೊಮ್ಮರಸ ಅಗ್ರಹಾರದವರೆಗೆ ವಲಸೆ ಬಂದು ನಂತರ ಆನಂದಪುರದಲ್ಲಿ ನೆಲೆನಿಂತ ಇವರ ಕುಟುಂಬ ಈಗ ನಾನ್ನೂರು ವರ್ಷದ ನಂತರ ಇವರ ಮಕ್ಕಳ ಕುಟುಂಬ ಈ ಕಾಲದಲ್ಲಿ ಉದ್ಯೋಗ ಜೀವನಕ್ಕಾಗಿ ಬೇರೆ ಕಡೆ ನೆಲೆ ಕಂಡುಕೊಳ್ಳುತ್ತಾ ಇದೆ.
     ಮುಂದಿನ ದಿನದಲ್ಲಿ ಆನಂದಪುರದ ಇತಿಹಾಸ ಇವರ ನಂತರ ಹೇಳುವವರು ಯಾರು? ಅಂತ ಯೋಚಿಸುತ್ತಾ 'ಕಾಲ ಎಲ್ಲವನ್ನೂ ನಿರ್ದರಿಸುತ್ತದೆ" ಎಂದು ಭಗವದ್ಗೀತಾದಲ್ಲಿ ಶ್ರೀ ಕೃಷ್ಣ ಐದು ಸಾವಿರದ ವರ್ಷದ ಹಿಂದೆಯೆ ಈ ವಾಸ್ತವ ವಿಚಾರ ಹೇಳಿದ್ದನ್ನ ನೆನಪಿಸಿಕೊಂಡೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...