Skip to main content

Blog number 1235.ಸಾಗರದಲ್ಲಿ ಅನೇಕ ಕೈಗಾರಿಕೆಗಳಿಗೆ ಹುಟ್ಟು ಹಾಕಿದ್ದ SRS ಗ್ರೂಪ್ ನ ಆ ಕಾಲದ ಸಾಹಸ ಸಣ್ಣದಲ್ಲ, SRS ಸಹೋದರರಲ್ಲಿ ಒಬ್ಬರಾದ ತ್ಯಾಗರ್ತಿಯ ರುದ್ರಾರಾಧ್ಯರ ಪುಣ್ಯ ತಿಥಿ ಸಂದರ್ಭದಲ್ಲಿ ಅವರ ಸ್ಮರಣೆ.

#ಸಾಗರದಲ್ಲಿ_ಕೈಗಾರಿಕೆಗಳ_ಯುಗದ_ಪ್ರಾರಂಭದ_ಕೊಡುಗೆ_ನೀಡಿದ_ಆರಾಧ್ಯ_ಕುಟುಂಬ.

#60ರ_ದಶಕದ_ಯಶಸ್ವಿ_ಕೈಗಾರಿಕೋದ್ಯಮಿ 

#ತ್ಯಾಗತಿ೯_ರುದ್ರಾರಾಧ್ಯ_ಒಂದು_ನೆನಪು
 
#ಪ್ರತಿಷ್ಟಿತ_SRS_ಗ್ರೂಪ್

   1970 ರಿಂದ 1975ರಲ್ಲಿ ನಾವೆಲ್ಲ 5 ರಿಂದ 10 ವಷ೯ದ ಬಾಲಕರು, ಆಗ ಆನಂದಪುರಂನಲ್ಲಿ ಇದ್ದದ್ದು ಬದರಿನಾರಾಯಣ್ ಅಯ್ಯOಗಾರ್ ಕುಟುಂಬದ ಒಂದೇ ಒಂದು ಅಕ್ಕಿ ಗಿರಣಿ ಮಾತ್ರ.
   ಆಗ ಸಾಗರದ ಆರಾಧ್ಯ ಸಹೋದರರು ಹೊಸ ಸಾಹಸಿ ಉದ್ದಿಮೆದಾರರಾಗಿ ಹೊರ ಹೊಮ್ಮುತ್ತಿದ್ದ ಕಾಲವದು ಅವರ  ನಮ್ಮ ಯಡೇಹಳ್ಳಿಯಲ್ಲಿ ಒಂದು ಅಕ್ಕಿ ಗಿರಣಿ ಪ್ರಾರಂಭಿಸಿದರು, ಆದರ ಮೇಲ್ಚಾವಣಿಗೆ ಲಿಂಗನಮಕ್ಕಿ ಡ್ಯಾ೦ ಮುಳುಗಡೆಯಲ್ಲಿ ಕಡಿತಲೆ ಮಾಡಲಾದ ನಾಟ ಹರಾಜಿನಲ್ಲಿ ಹಿಡಿದು ತಂದಿದ್ದರಂತೆ.

  ಈ ಸಹೋದರರು ಸಾಗರ, ಆನಂದಪುರಂನ ಯಡೇಹಳ್ಳಿ, ತ್ಯಾಗತಿ೯, ಪಕ್ಕದ ಹೊಸoತೆಯಲ್ಲಿ ರೈಸ್ ಮಿಲ್ ಪ್ರಾರಂಬಿಸಿದರು, ತ್ಯಾಗತಿ೯ ಮಿಲ್ ಅಲ್ಲಿನ ಜನಪ್ರಿಯ ಇನಾ೦ದಾರರಾದ ಗುರುಮೂತಿ೯ ರಾಯರದ್ದಾಗಿತ್ತು ಅದನ್ನ ಈ ಸಹೋದರರು ಖರೀದಿಸಿದರು.
 
  ಸಾಗರದಲ್ಲಿ ಸಂಗಮೇಶ್ವರ ಹಂಚಿನ ಕಾಖಾ೯ನೆ ಕೂಡ ಸ್ಥಾಪಿಸಿದ ಕೀತಿ೯ ಈ ಸಹೋದರರದ್ದು.
  
   ಇವರ ಉದ್ಯೋಗದ ಯಶಸ್ಸಿನಲ್ಲಿ ಇವರ ದೊಡ್ಡಣ್ಣ ಗುರು ಬಸಯ್ಯರ ಶ್ರಮ ದೊಡ್ಡದು, ಈ ಸಹೋದರರಲ್ಲಿ  ಒಬ್ಬರು ಆನಂದಪುರಂ ಯಡೇಹಳ್ಳಿಯಲ್ಲಿ ಅಲ್ಯೂಮಿನಿಯಂ ಪಾತ್ರೆ ತಯಾರಿಸುವ ದೊಡ್ಡ ಘಟಕ ತಯಾರಿಸಿದ್ದರು.
   
  ಇವತ್ತು (13 - ಪೆಬ್ರವರಿ -2019) ಸದಾ ಹಸನ್ಮುಖಿ 60 ರ ದಶಕದ ಯಶಸ್ವಿ ಕೈಗಾರಿಕೋದ್ಯಮಿ ರುದ್ರಾರಾದ್ಯರು ಇಹಲೋಕ ತ್ಯಜಿಸಿದರೆಂದಾಗ ಈ ನೆನಪಾಯಿತು.

  ಒಂದು ಕಾಲದಲ್ಲಿ ಕಾಗೋಡು ತಿಮ್ಮಪ್ಪರ ರಾಜಕಾರಣದ ಪ್ರಾರ೦ಭದಲ್ಲಿ ಅವರಿಗೆ ಆಥಿ೯ಕ ಸಹಾಯ ನೀಡುತ್ತಿದ್ದ ಕುಟುಂಬ ಈ SRS ಗ್ರೂಪ್.

  ಈಗ ಈ ಸಹೋದರರಲ್ಲಿ ಮಹೇಶ್ ಮೂತಿ೯ ಮತ್ತು ಚಂದ್ರ ಶೇಖರ ಆರಾಧ್ಯರು ಉಳಿದಿದ್ದಾರೆ.

  ಈಗಿನ ಸಕಾ೯ರಗಳ ಕೈಗಾರಿಕಾ ನೀತಿ, ಬ್ಯಾಂಕ್ಗಳ ಆಥಿ೯ಕ ಸಹಾಯ ಇಲ್ಲದಿದ್ದ ಸ್ವಾತಂತ್ರ ನಂತರದ ದಿನಗಳಲ್ಲಿ ಸಾಗರ ತಾಲ್ಲೂಕಿನಲ್ಲಿ ಈ ಸಹೋದರರ ಕೈಗಾರಿಕೆಗಳ ಸ್ಥಾಪನೆ ನಿಜಕ್ಕೂ ಆಶ್ಚಯ೯ ಅದರಲ್ಲೂ ಆ ಕಾಲದಲ್ಲಿ ಇವರು ಯಶಸ್ವಿ ಕೈಗಾರಿಕೋದ್ಯಮಿಗಳಾಗಿದ್ದರೆಂದು ನೆನಪಿಸಿ ಕೊಳ್ಳಲು ಹೆಮ್ಮೆ ಕೂಡ.

  ಶ್ರೀ ರುದ್ರಾರಾಧ್ಯರ ಆತ್ಮಕ್ಕೆ ಚಿರ ಶಾಂತಿ ದೊರೆಯಲಿ ಎಂದು ಹಾರೈಸುತ್ತೇನೆ.

ನೆನಪು / ಬರಹ.
ಕೆ.ಅರುಣ್ ಪ್ರಸಾದ್‌
ಮಾಜಿ ಜಿ.ಪಂ.ಸದಸ್ಯ
ಆನಂದಪುರಂ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...