ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಪೂರ್ಯಾ ನಾಯಕರು 1995 ರಿಂದ 2000 ಅವದಿಯಲ್ಲಿ ನನ್ನ ಜೊತೆಗಾರರು ಆದರೆ ಅವದಿಗೂ ಮುನ್ನ ಅವರು ದೆಹಲಿಯಲ್ಲಿ ಇಹಲೋಕ ತ್ಯಜಿಸಿದರು, ಅವರು ದೆಹಲಿಗೆ ಹೋಗಿದ್ದು ಮತ್ತು ಅವರ ಸಾವಿನ ರಹಸ್ಯ ಇವತ್ತಿಗೂ ಗೊತ್ತಾಗಲಿಲ್ಲ.
ಮ್ರತ ದೇಹ ದೆಹಲಿಯಿ೦ದ ತರಲು ಆಗಿನ ಮುಖ್ಯಮಂತ್ರಿ ಪಟೇಲರು ವಿಶೇಷ ಸಹಾಯ ಮಾಡಿದ್ದು ಮರೆಯುವಂತಿಲ್ಲ, ಅವತ್ತು ಅಂಜನಾಪುರದ ಅವರ ಮೂಲ ಮನೆಯಲ್ಲಿ ಅಂತಿಮ ದಶ೯ನಕ್ಕೆ 20 ಸಾವಿರಕ್ಕೂ ಅಧಿಕ ಜನ ಸೇರಿದ್ದು ನಾನೇ ಕಣ್ಣಾರೆ ಕಂಡಿದ್ದ ಸತ್ಯ.
ಈಗಲೂ ಇವರ ಅಭಿಮಾನಿಗಳಲ್ಲಿ ಒಂದು ಅನುಮಾನ ಹಾಗೆ ಉಳಿದಿದೆ, ರಾಜಕೀಯವಾಗಿ ಅವರನ್ನ ಕೊಲೆ ಮಾಡಲಾಗಿದೆ ಅಂತ ಆದರೆ ಅದರ ಸತ್ಯಾಸತ್ಯತೆ ದೇವರಿಗೆ ಗೊತ್ತು.
ಶಿಕಾರಿಪುರ ಕ್ಷೇತ್ರದಿಂದ ಶಾಸಕರಾಗಬೇಕೆಂಬ ಅವರ ಬಯಕೆ ಈಡೇರಲಿಲ್ಲ ಆದರೆ ಅವರ ಪತ್ನಿ ಶ್ರೀಮತಿ ಶಾರದಾ ಪೂಯಾ೯ನಾಯಕರು ಶಿವಮೊಗ್ಗ ಗ್ರಾಮಾಂತರದಿಂದ ಜೆ.ಡಿ.ಎಸ್.ಶಾಸಕರಾಗಿರುವುದು ಅವರ ಆತ್ಮಕ್ಕೆ ಖಂಡಿತಾ ನೆಮ್ಮದಿ ತಂದಿರ ಬಹುದು.
ನೇರ, ದಿಟ್ಟ ಸ್ವಭಾವದ ನಾಯಕರು ಆ ಸಂದಭ೯ದಲ್ಲಿ ನಮಗೆಲ್ಲ ನಮ್ಮ ಹೋರಾಟದಲ್ಲಿ ಬೆಂಬಲಿಸುತ್ತಿದ್ದರು, ಯಾರನ್ನಾದರೂ ಎದುರಿಸಬಹುದು ಆದರೆ ನಮ್ಮ ನಮ್ಮ ತಾಲ್ಲೂಕಿನ ಆಡಳಿತರೂಡ ರಾಜಕಾರಣಿಗಳನ್ನ ಎದುರಿಸುವುದು ಕಷ್ಟ ಅಂತ ನನ್ನ ಮತ್ತು ಕಾಗೋಡರ ಸಂಘಷ೯ದಲ್ಲಿ ಎಚ್ಚರಿಸುತ್ತಿದ್ದರು.
ಶಾಲೆಗಳು, ಪೆಟ್ರೋಲ್ ಪಂಪ ,ಜಲ್ಲಿ ಕ್ರಷರ್ ಹೊಂದಿದ್ದ ಅವರು ಶಿವಮೊಗ್ಗದಲ್ಲಿ ಸ್ವಂತ ಮನೆ ಹೊಂದಿದ್ದರು ಅವರ ನಿಧನ ನಂತರ ಅವರ ಕುಟುಂಬ ಎಲ್ಲಾ ಕಷ್ಟಗಳನ್ನ ಎದುರಿಸಿ ಉತ್ತಮ ಸ್ಥಿತಿಯಲ್ಲಿರುವುದು ಪೂಯಾ೯ ನಾಯಕರ ಅಭಿಮಾನಿಗಳಿಗೆಲ್ಲ ಹೆಮ್ಮೆ.
ಇವತ್ತು ವಿಜಯವಾಣಿ ದಿನಪತ್ರಿಕೆಯಲ್ಲಿ ಅವರ 18 ನೆ ವಷ೯ದ ಪುಣ್ಯತಿಥಿಯ ಜಾಹಿರಾತು ಹಳೇ ನೆನಪುಗಳನ್ನ ನೆನಪಿಸಿತು, ಶಿವಮೊಗ್ಗದ ಶ್ರOಗೇಶರ ಜನ ಹೋರಾಟ ದಿನಪತ್ರಿಕೆಯಲ್ಲಿ ಒಳಗುಟ್ಟು ಅಂತ ಕಾಲಮ್ನಲ್ಲಿ ಬರೆಯುವಾಗ ನಾಯಕರ ಬಗ್ಗೆ ಒಂದು ಲೇಖನ ಬರೆದಿದ್ದೆ "ಬೆಂಕಿ ಚೆಂಡಿನಂತ ಪೂಯ೯ ನಾಯಕರು" ಅಂತ ಹೆಡ್ಡಿO ಗ್ನಲ್ಲಿ ಅವರ ಪತ್ನಿ ಆಗ ಶಾಸಕಿ ಆಗಿರಲಿಲ್ಲ, ಪತ್ರಿಕಾ ಕಚೇರಿಯನ್ನ ಸಂಪಕಿ೯ಸಿ ನನ್ನ ಸೆಲ್ ಪೋನ್ಗೆ ಕರೆ ಮಾಡಿ ದನ್ಯವಾದ ಹೇಳಿದ್ದರು.
ಆಗೆಲ್ಲ ನಾವು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್ ಕಚೇರಿಗೆ ಸಮೀಪದ ನಾಯಕರ ಮನೆಗೆ ಗುಂಪಾಗಿ ಹೋಗುತ್ತಿದ್ದೆವು ಆಗೆಲ್ಲ ಬಂದ ಅತಿಥಿಗಳಿಗೆ ಚಹಾ ಒಳಬಾಗಿಲಿ೦ದ ನೀಡುತ್ತಿದ್ದ ನಾಯಕರ ಶ್ರೀಮತಿ ಶಾರದಾ ಈಗ ರಾಜಕಾರಣದಲ್ಲಿ ಮುಂಚೂಣಿಗೆ ಅನಿವಾಯ೯ವಾಗಿ ಬರಬೇಕಾಯಿತು ಹಾಗೂ ಒಳ್ಳೆಯ ರಾಜಕಾರಣಿ ಎಂಬ ಹೆಸರು ಪಡೆದಿದ್ದು ನಮಗೆಲ್ಲ ಸಂತೋಷದ ವಿಷಯ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
After preparing the medicine after boiling, a foam layer formed on the medicine after 2 days.Is that normal?
ReplyDelete