ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಪೂರ್ಯಾ ನಾಯಕರು 1995 ರಿಂದ 2000 ಅವದಿಯಲ್ಲಿ ನನ್ನ ಜೊತೆಗಾರರು ಆದರೆ ಅವದಿಗೂ ಮುನ್ನ ಅವರು ದೆಹಲಿಯಲ್ಲಿ ಇಹಲೋಕ ತ್ಯಜಿಸಿದರು, ಅವರು ದೆಹಲಿಗೆ ಹೋಗಿದ್ದು ಮತ್ತು ಅವರ ಸಾವಿನ ರಹಸ್ಯ ಇವತ್ತಿಗೂ ಗೊತ್ತಾಗಲಿಲ್ಲ.
ಮ್ರತ ದೇಹ ದೆಹಲಿಯಿ೦ದ ತರಲು ಆಗಿನ ಮುಖ್ಯಮಂತ್ರಿ ಪಟೇಲರು ವಿಶೇಷ ಸಹಾಯ ಮಾಡಿದ್ದು ಮರೆಯುವಂತಿಲ್ಲ, ಅವತ್ತು ಅಂಜನಾಪುರದ ಅವರ ಮೂಲ ಮನೆಯಲ್ಲಿ ಅಂತಿಮ ದಶ೯ನಕ್ಕೆ 20 ಸಾವಿರಕ್ಕೂ ಅಧಿಕ ಜನ ಸೇರಿದ್ದು ನಾನೇ ಕಣ್ಣಾರೆ ಕಂಡಿದ್ದ ಸತ್ಯ.
ಈಗಲೂ ಇವರ ಅಭಿಮಾನಿಗಳಲ್ಲಿ ಒಂದು ಅನುಮಾನ ಹಾಗೆ ಉಳಿದಿದೆ, ರಾಜಕೀಯವಾಗಿ ಅವರನ್ನ ಕೊಲೆ ಮಾಡಲಾಗಿದೆ ಅಂತ ಆದರೆ ಅದರ ಸತ್ಯಾಸತ್ಯತೆ ದೇವರಿಗೆ ಗೊತ್ತು.
ಶಿಕಾರಿಪುರ ಕ್ಷೇತ್ರದಿಂದ ಶಾಸಕರಾಗಬೇಕೆಂಬ ಅವರ ಬಯಕೆ ಈಡೇರಲಿಲ್ಲ ಆದರೆ ಅವರ ಪತ್ನಿ ಶ್ರೀಮತಿ ಶಾರದಾ ಪೂಯಾ೯ನಾಯಕರು ಶಿವಮೊಗ್ಗ ಗ್ರಾಮಾಂತರದಿಂದ ಜೆ.ಡಿ.ಎಸ್.ಶಾಸಕರಾಗಿರುವುದು ಅವರ ಆತ್ಮಕ್ಕೆ ಖಂಡಿತಾ ನೆಮ್ಮದಿ ತಂದಿರ ಬಹುದು.
ನೇರ, ದಿಟ್ಟ ಸ್ವಭಾವದ ನಾಯಕರು ಆ ಸಂದಭ೯ದಲ್ಲಿ ನಮಗೆಲ್ಲ ನಮ್ಮ ಹೋರಾಟದಲ್ಲಿ ಬೆಂಬಲಿಸುತ್ತಿದ್ದರು, ಯಾರನ್ನಾದರೂ ಎದುರಿಸಬಹುದು ಆದರೆ ನಮ್ಮ ನಮ್ಮ ತಾಲ್ಲೂಕಿನ ಆಡಳಿತರೂಡ ರಾಜಕಾರಣಿಗಳನ್ನ ಎದುರಿಸುವುದು ಕಷ್ಟ ಅಂತ ನನ್ನ ಮತ್ತು ಕಾಗೋಡರ ಸಂಘಷ೯ದಲ್ಲಿ ಎಚ್ಚರಿಸುತ್ತಿದ್ದರು.
ಶಾಲೆಗಳು, ಪೆಟ್ರೋಲ್ ಪಂಪ ,ಜಲ್ಲಿ ಕ್ರಷರ್ ಹೊಂದಿದ್ದ ಅವರು ಶಿವಮೊಗ್ಗದಲ್ಲಿ ಸ್ವಂತ ಮನೆ ಹೊಂದಿದ್ದರು ಅವರ ನಿಧನ ನಂತರ ಅವರ ಕುಟುಂಬ ಎಲ್ಲಾ ಕಷ್ಟಗಳನ್ನ ಎದುರಿಸಿ ಉತ್ತಮ ಸ್ಥಿತಿಯಲ್ಲಿರುವುದು ಪೂಯಾ೯ ನಾಯಕರ ಅಭಿಮಾನಿಗಳಿಗೆಲ್ಲ ಹೆಮ್ಮೆ.
ಇವತ್ತು ವಿಜಯವಾಣಿ ದಿನಪತ್ರಿಕೆಯಲ್ಲಿ ಅವರ 18 ನೆ ವಷ೯ದ ಪುಣ್ಯತಿಥಿಯ ಜಾಹಿರಾತು ಹಳೇ ನೆನಪುಗಳನ್ನ ನೆನಪಿಸಿತು, ಶಿವಮೊಗ್ಗದ ಶ್ರOಗೇಶರ ಜನ ಹೋರಾಟ ದಿನಪತ್ರಿಕೆಯಲ್ಲಿ ಒಳಗುಟ್ಟು ಅಂತ ಕಾಲಮ್ನಲ್ಲಿ ಬರೆಯುವಾಗ ನಾಯಕರ ಬಗ್ಗೆ ಒಂದು ಲೇಖನ ಬರೆದಿದ್ದೆ "ಬೆಂಕಿ ಚೆಂಡಿನಂತ ಪೂಯ೯ ನಾಯಕರು" ಅಂತ ಹೆಡ್ಡಿO ಗ್ನಲ್ಲಿ ಅವರ ಪತ್ನಿ ಆಗ ಶಾಸಕಿ ಆಗಿರಲಿಲ್ಲ, ಪತ್ರಿಕಾ ಕಚೇರಿಯನ್ನ ಸಂಪಕಿ೯ಸಿ ನನ್ನ ಸೆಲ್ ಪೋನ್ಗೆ ಕರೆ ಮಾಡಿ ದನ್ಯವಾದ ಹೇಳಿದ್ದರು.
ಆಗೆಲ್ಲ ನಾವು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರು ಜಿಲ್ಲಾ ಪಂಚಾಯತ್ ಕಚೇರಿಗೆ ಸಮೀಪದ ನಾಯಕರ ಮನೆಗೆ ಗುಂಪಾಗಿ ಹೋಗುತ್ತಿದ್ದೆವು ಆಗೆಲ್ಲ ಬಂದ ಅತಿಥಿಗಳಿಗೆ ಚಹಾ ಒಳಬಾಗಿಲಿ೦ದ ನೀಡುತ್ತಿದ್ದ ನಾಯಕರ ಶ್ರೀಮತಿ ಶಾರದಾ ಈಗ ರಾಜಕಾರಣದಲ್ಲಿ ಮುಂಚೂಣಿಗೆ ಅನಿವಾಯ೯ವಾಗಿ ಬರಬೇಕಾಯಿತು ಹಾಗೂ ಒಳ್ಳೆಯ ರಾಜಕಾರಣಿ ಎಂಬ ಹೆಸರು ಪಡೆದಿದ್ದು ನಮಗೆಲ್ಲ ಸಂತೋಷದ ವಿಷಯ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
After preparing the medicine after boiling, a foam layer formed on the medicine after 2 days.Is that normal?
ReplyDelete