Skip to main content

Blog number 949. ಹಬ್ಬಗಳಲ್ಲಿ ಆಚರಿಸುವ ದೇಹ ದಂಡನೆಯ ಉಪವಾಸ ಇತ್ಯಾದಿ ಭಕ್ತಿ ಮಾರ್ಗದಲ್ಲಿ ದೇಹದ ಶುದ್ಧಿ ಕೂಡ ಅಡಗಿದೆ, ಶ್ರಾವಣ ಮಾಸದಲ್ಲಿ ಟೀ-ಕಾಫಿ ಕೂಡ ತ್ಯಜಿಸುವ ನಾನು ಮತ್ತು ಇಡೀ ಮಾಸ ಕೇವಲ ಹಾಲು - ಹಣ್ಣು ಮಾತ್ರ ಸೇವಿಸುವ ನನ್ನ ಮ್ಯಾನೇಜರ್ ಅನಿಲ್ ಮುಂದೆ ನನ್ನ ಆಚರಣೆ ಏನೇನೂ ಅಲ್ಲ.

#ಗಟಾರಿ_ಅಮಾವಸ್ಯೆಗೆ_ಶುರುವಾದ_ಶ್ರಾವಣ_ನಿನ್ನೆ_ಅಮಾವಸ್ಯೆಗೆ_ಮುಕ್ತಾಯ 

#ಪ್ರತಿ_ಶ್ರಾವಣದಲ್ಲಿ_ಒಂದು_ತಿಂಗಳು_ನಾನು_ಕಾಫಿ_ಟೀ_ಕೂಡ_ಕುಡಿಯುವುದಿಲ್ಲ

#ಆದರೆ_ನಮ್ಮ_ಮ್ಯಾನೇಜರ್_ಕೇವಲ_ಹಾಲು_ಹಣ್ಣಿನಲ್ಲೆ_ಶ್ರಾವಣ_ಆಚರಿಸುತ್ತಾರೆ.

  ದೇಹ ದಂಡನೆಯ ಮೂಲಕ ದೇವರ ಆರಾದನೆ ಎಲ್ಲಾ ದರ್ಮಿಯರಲ್ಲೂ ಇದೆ ಇದು ಭಕ್ತಿ ಮಾರ್ಗವೂ ಹೌದು ಇನ್ನೊಂದು ಇದರಿಂದ ದೇಹದ ಆರೋಗ್ಯ ಕೂಡ ಉತ್ತಮಗೊಳಿಸುವ ವ್ಯವಸ್ಥೆ.
  ನಾನು ನಮ್ಮ ಹಬ್ಬದ ದಿನಗಳನ್ನೆ ನನ್ನ ಆರೋಗ್ಯಕ್ಕಾಗಿ ನಿಗದಿ ಮಾಡುತ್ತೇನೆ ಇದರಿಂದ ದಿನಗಳು ಲೆಖ್ಖ ಮಾಡಲು ಸುಲಭ ಮತ್ತು ಹಬ್ಬ ನನ್ನ ಆಚರಣೆಗೆ ಮಹತ್ವ ನೀಡುವುದರಿಂದ ಆಯ್ಕೆ ಮಾಡಿಕೊಳ್ಳುತ್ತೇನೆ ಉದಾಹರಣೆಗೆ  2020 ರ ಶಿವರಾತ್ರಿಯಂದು ನಾನು ನನ್ನ ರಾತ್ರಿ ಊಟ ತ್ಯಜಿಸಿದೆ ಮುಂದಿನ 2023ರ ಶಿವರಾತ್ರಿಗೆ ಮೂರು ವರ್ಷ.
   ಪ್ರತಿ ಶ್ರಾವಣ ಮಾಸದಲ್ಲಿ ಒಂದು ತಿಂಗಳು ನಾನು ಬೇರೆಲ್ಲ ಆಹಾರ ನಿಯಮದ ಜೊತೆ ಕಾಫಿ ಮತ್ತು ಟೀ ಕೂಡ ತ್ಯಜಿಸುತ್ತೇನೆ ಇದರಿಂದ ಸ್ವಯ೦ ನಿಯಂತ್ರಣ ಸಾಬೀತು ಮತ್ತು ದೇಹಕ್ಕೆ ಆಡಿಕ್ಟ್ ಆದ ಕೆಫಿನ್ ನಿಂದ ಹೊರಬರಲು ಒಂದು ಪ್ರಯತ್ನ ಕೂಡ.
    ಶ್ರಾವಣದ ಮೊದಲ ಒಂದು ವಾರ ಕಾಫಿ-ಟೀ ಬಿಟ್ಟ ಪರಿಣಾಮ ಕೆಫಿನ್ ಇಲ್ಲದ ದೇಹ ಉಲ್ಲಾಸ ಮತ್ತು ಉತ್ಸಾಹ ಕಳೆದುಕೊಳ್ಳುತ್ತದೆ,ಕ್ರಮೇಣ ಹೊಂದಿಕೊಳ್ಳುತ್ತದೆ ಶ್ರಾವಣದ ಮೊದಲ ದಿನ ಪುನಃ ಕಾಫಿ ಕುಡಿದಾಗ ಈ ವ್ಯತ್ಯಾಸ ಗಮನಕ್ಕೆ ಬರುತ್ತದೆ.
   ದಾರ್ಮಿಕ ಆಚರಣೆಯಲ್ಲಿ ಮಹಾರಾಷ್ಟ್ರೀಯರು ತು೦ಬಾ ಕಠೋರ ನಿಯಮ ಪಾಲಕರು, ನನ್ನ ಮ್ಯಾನೇಜರ್ ಅನಿಲ್ ಮಹಾರಾಷ್ಟ್ರದ ಕೊಂಕಣದ ರತ್ನಗಿರಿ ಸಮುದ್ರ ಕಿನಾರೆಯವರು.
   ಈ ವಷ೯ದ ಮುಂಗಾರು ಸಮುದ್ರ ಇವರ ಊರಿನ ಸಮುದ್ರ ತೀರದ ಮನೆಗಳನ್ನು ಆಪೊಷನಗೊಳಿಸಿದ್ದರಿಂದ ಇವರ ಹಳ್ಳಿಯ ಅಂಬಾ ಭವಾನಿ ದೇವಾಲಯದಲ್ಲಿ ಒಂದು ಹರಕೆ ಹೊತ್ತಿದ್ದಾರೆ ಅದೇನೆಂದರೆ ಇಡೀ ಹಳ್ಳಿಯ ಜನ ಶ್ರಾವಣ ಮಾಸ ಪೂರ್ಣ ಹಾಲು ಹಣ್ಣು ಮಾತ್ರ ಸೇವಿಸಬೇಕು, ಕ್ಷೌರ ಮಾಡಬಾರದು ಮತ್ತು ನವರಾತ್ರಿ 9 ದಿನ ನೀರು ಮಾತ್ರ ಸೇವನೆ ಮಾಡಬೇಕು,ಶ್ರಾವಣ ಮಾಸದಿಂದ ನವರಾತ್ರಿ ಮುಗಿಯುವವರೆಗೆ ಪಾದರಕ್ಷೆ ಧರಿಸಬಾರದು.
  ಭೀಮನ ಅಮಾವಸ್ಯೆಗೆ ಮಹಾರಾಷ್ಟ್ರದಲ್ಲಿ ಹಾಸ್ಯಕ್ಕಾಗಿ ಗಟಾರಿ ಅಮಾವಸ್ಯೆ ಅನ್ನುತ್ತಾರೆ ಅದರ ಮರುದಿನ ಶ್ರಾವಣ ಪ್ರಾರಂಭ ಆಗುವುದರಿಂದ ಈ ಅಮಾವಸ್ಯೆಗೆ ಮಾಂಸಹಾರ ಮಧ್ಯಪಾನ ಸೇವನೆಯ ಅಂತಿಮ ಅಂತ ದೊಡ್ಡ ಸೆಲೆಬ್ರೇಷನ್ ನಡೆಯುತ್ತದೆ ಕುಡಿದು ಚರಂಡಿಗೆ ಬೀಳುತ್ತಾರೆಂಬ ಹಾಸ್ಯಕ್ಕೆ ಈ ಹೆಸರು ಇದನ್ನು  ಬಾರ್ ರೆಸ್ಟೊರೆಂಟ್ ಪ್ರಚಾರಕ್ಕೆ ಬಳಸುತ್ತದೆ.
  ನಮ್ಮ ಸಂಸ್ಥೆಯ ನಿತ್ಯ ಕೆಲಸ ನಿರ್ವಹಿಸುತ್ತಾ ಶ್ರಾವಣ ಮಾಸದ ಅವರ ಮನ್ನತ್ (ಹರಕೆ) ನಿಯಮಾನುಸಾರ ಕೇವಲ ಹಾಲು ಹಣ್ಣು ಸೇವನೆಯಲ್ಲಿ ಮುಗಿಸಿ ನಿನ್ನೆ ಮಧ್ಯಾಹ್ನ ಊಟ ಮಾಡಿದ್ದಾರೆ ನಿಜಕ್ಕೂ ಅವರ ಈ ನಿಷ್ಟೆ ನನಗೆ ಖುಷಿ ಆಯಿತು ಅವರ ದೇಹ ದಂಡನೆಯ ಈ ಭಕ್ತಿ ಮಾರ್ಗದ ಪ್ರಾರ್ಥನೆ ದೇವರು ದಯಪಾಲಿಸಲಿ ಎಂದು ಅವರನ್ನ ಅಭಿನಂದಿಸಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...