Skip to main content

Blog number 939. ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಾರ್ಗದ ಮದ್ಯದಲ್ಲಿರುವ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಅಜಿನೋಮೊಟೊ, ಕೃತಕ ಬಣ್ಣ - ಪ್ಲೇವರ್ ಬಳಸದೆ ತಯಾರಿಸುವ ದಕ್ಷಿಣ ಭಾರತೀಯ ಮತ್ತು ಉತ್ತರ ಬಾರತೀಯ ಆಹಾರಗಳು.

#ನಮ್ಮ_ಮಲ್ಲಿಕಾ_ವೆಜ್_ರೆಸ್ಟೋರೆಂಟಲ್ಲಿ_ಒಂದೂವರೆ_ವರ್ಷದ_ನಂತರ_ಪ್ರಾರಂಭ_ಆಗಿದೆ

#ತಂದೂರಿ_ರೋಟಿ_ಉತ್ತರ_ಭಾರತೀಯ_ತಿನಿಸುಗಳು.

#ತಂದೂರಿ_ರೋಟಿ_ಮೂಲ_ಇಂಡಸ್_ಕಣಿವೆಯ_ಮೆಸಪೋಟಾಮಿಯ

#ಇಂಡಿಯನ್_ಬ್ರೆಡ್_ಎಂದೇ_ಪ್ರಖ್ಯಾತ 

Mallika Veg
https://maps.app.goo.gl/zEftqmawuji4AhuX8
 
   2020 ಮಾರ್ಚ್ ನಿಂದ ಎರೆಡು ಬಾರಿ ಕೊರಾನಾ ಲಾಕ್ ಡವನ್ ನಿಂದ ಹೋಟೆಲ್ ಉದ್ಯಮ ತಲ್ಲಣಿಸಿತು, ಅನೇಕ ಹೋಟೆಲ್ ಗಳು ಖಾಯಂ ಆಗಿ ಬಂದ್ ಆಯಿತು, ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮಗಳು ಜೀವ ಹಿಡಿದು ಬದುಕಿದೆ.
  ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮದ್ಯದ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಇದೆ, ನಮಗೆ ಪ್ರವಾಸಿಗಳೇ ಅನ್ನದಾತರು.
   ಕಳೆದ 16 ತಿಂಗಳ ನಂತರ ನಮ್ಮ ರೆಸ್ಟೋರೆಂಟ್ ನಲ್ಲಿ ಉತ್ತರ ಭಾರತೀಯ ತಿನಿಸುಗಳು ತಂದೂರಿ ರೋಟಿ ಪುನಾರಾರಂಭವಾಗಿದೆ ಇದನ್ನು ತಯಾರಿಸುವ ಅನುಭವಿ ಸಿಬ್ಬಂದಿಗಳು ದೂರದ ಪಶ್ಚಿಮ ಬಂಗಾಳದ ರಾಜ್ಯದಿಂದ ಬಂದಿದ್ದಾರೆ.
   ಮದ್ಯಾಹ್ನ ಮತ್ತು ಸಂಜೆ  ಆಶ್ರೀವಾದ ಬ್ರಾಂಡಿನ ಶುದ್ಧ ಗೋದಿ ಹಿಟ್ಟಿನಿಂದ ತಂದೂರಿ ಭಟ್ಟಿಯಲ್ಲಿ ತಂದೂರಿ ರೋಟಿ ಚಾರ್ ಕೋಲಿನಿಂದ, ತಯಾರಿಸುವಾಗ ಹೋಟೆಲ್ ಸುತ್ತ ಪಸರಿಸುವ ಅದರ ಸುವಾಸನೆಯೆ ಚೇತೋಹಾರಿ ಆಗಿರುತ್ತದೆ, ತಂದೂರಿ ರೋಟಿ ಜೊತೆ ಪನೀರ್ - ಕಾಜು-ಮಶ್ರೂಮ್ - ಬೇಬಿಕಾರ್ನ್ - ಆಲೂ- ಮಿಕ್ಸ್ ವೆಜ್ ನ ವಿವಿದ ರೀತಿಯ ಮಸಾಲಾ- ಕಡಾಯಿ - ಕೊಲಾಪುರಿಗಳು ಬಾಯಲ್ಲಿ ನೀರೂರಿಸುತ್ತದೆ.
  ಜೊತೆಗೆ ಹೂ ಕೋಸಿನಿಂದ ಮಾತ್ರ ಮಾಡುವ ಮಂಚೂರಿ - ಚಿಲ್ಲಿಗಳು ಕೂಡ ಇದರ ಜೊತೆ ಪನೀರ್ - ಬೇಬಿ ಕಾರ್ನ್ - ಮಶ್ರೂಮ್ ನಿಂದ ವಿವಿದ ವೆಜ್ ಬಿರಿಯಾನಿಗಳು, ಪ್ರೈಯಡ್ ರೈಸ್, ಸೂಪ್, ನೂಡಲ್ಸ್ ಮುಂತಾದ ತರಹಾವರಿ ತಿನಿಸುಗಳು ಮಧ್ಯಾಹ್ನ 12ರಿಂದ ರಾತ್ರಿ 10 ರ ತನಕ ಲಭ್ಯವಿದೆ.
  ಒಂದು ವಿಶೇಷ ಅಂದರೆ ನಮ್ಮ ಹೃದಯದ ಅಪಧಮನಿಗಳನ್ನು ನಿರ್ಬಂದಿಸುವ ಟೀಸ್ಟಿಂಗ್ ಪೌಡರ್ ಗಳಾದ ಅಜಿನೋಮೋಟೋ ಅಥವ ಮೋನೋ ಸೋಡಿಯಂ ಗ್ಲುಟಮೇಟ್ ಯಾವ ಕಾರಣಕ್ಕೂ ನಮ್ಮ ಕಿಚನ್ ಗೆ ಪ್ರವೇಶ ಇಲ್ಲ, ಕಲಬೆರೆಕೆ ಪದಾರ್ಥಗಳು ಬ್ರಾಂಡೆಡ್ ಅಲ್ಲದ ವಸ್ತಗಳಿಗೂ ಅವಕಾಶ ಇಲ್ಲ, ಕೃತಕ ಬಣ್ಣ ಪ್ಲೇವರ್ ಕೂಡ ಬಳಸದೇ ತಯಾರಿಸುವ ಆಹಾರಗಳು ನಮ್ಮದು.
  ಹಾಲು - ಬೆಣ್ಣೆ - ತುಪ್ಪ ಮತ್ತು ಪನೀರ್ ಗಳು, ಗೇರು ಬೀಜ, ಮಸಾಲ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ ಆದರೂ ಪರಿಶುದ್ಧ ರುಚಿಕರ ಆಹಾರ ಗ್ರಾಹಕರಿಗೆ ಕಳೆದ ಹತ್ತು ವರ್ಷದಿಂದ ನಿರಂತರವಾಗಿ ನೀಡುವಂತೆ ಮುಂದುವರಿಸಿದ್ಧೇವೆ.
  ಬೆಳಗಿನ ಉಪಹಾರಕ್ಕೆ ಮಲೆನಾಡಿನ ಹಲಸಿನ ಎಲೆ ಕೊಟ್ಟೆ ಕಡುಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ,ಕೊಯಮುತ್ತೂರಿನ ಪೋಡಿ ಇಡ್ಲಿ, ತಟ್ಟೆ ಇಡ್ಲಿ ಜೊತೆಗೆ ಎಲ್ಲಾ ರೀತಿಯ ದೋಸೆ, ವಡಾ, ಪಲಾವ್, ಬಿಸಿಬೇಳೆಬಾತ್, ದಾರವಾಡದ ಪ್ರಖ್ಯಾತ ಗಿರ್ಮಿಟ್ ಮಿರ್ಚಿ ಬಜೆ, ಶುದ್ಧ ಹಾಲಿನಿಂದ ತಯಾರಿಸುವ ಪ್ರಸಿದ್ಧ ಬ್ರಾಂಡ್ ಕೊಥಾಸ್ ಕಾಫಿ ಪುಡಿಯಿಂದ ಪಿಲ್ಟರ್ ಕಾಫಿ, ಶುದ್ಧ ಹಾಲಿನಿಂದ ಲಿಪ್ಟನ್ ರವರ 3 Rose ಟೀಪುಡಿಯ ಚಹಾ, ದಕ್ಷಿಣ ಭಾರತದ ಊಟ ಹೀಗೆ ದೊಡ್ಡ ಪಟ್ಟಿ ಪ್ರತಿದಿನ ಬರುವ ಗ್ರಾಹಕರ ಹಸಿವು ತಣಿಸುವ ಕೆಲಸ ಮಾಡುತ್ತಿದೆ.
  ಇದ್ದಿಲಿನ (ಚಾರ್ಕೋಲ್) ಬೆಂಕಿಯಿಂದ ಮಣ್ಣಿನ ಮಡಕೆಯಂತ ತಂದೂರ್ ಭಟ್ಟಿಯಲ್ಲಿ ತಯಾರಿಸುವ ಶುದ್ಧ ಗೋದಿ ಹಿಟ್ಟಿನ (ಅಟ್ಟಾದಿಂದ) ತಂದೂರಿ ರೋಟಿ ತುಂಬಾ ಪುರಾತನ ಆಹಾರ ಮತ್ತು ಅದರ ಮೂಲ ಇಂಡಸ್ ವ್ಯಾಲಿಯ ಮೆಸಪೋಟಾಮಿಯಾ ಆದ್ದರಿಂದ ಇಂಡಿಯನ್ ಬ್ರಿಡ್ ಹೆಸರಲ್ಲಿ ಈಗಲೂ ಭಾರತದ ನಾರ್ತ್ ವೆಸ್ಟ್ ಇಂಡಿಯ, ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್ ಗಳಲ್ಲಿ ನಿತ್ಯದ ಆಹಾರ ಆಗಿದೆ.
  330 ರಿಂದ 450 ಡಿಗ್ರಿ ಸೆಲ್ಸಿಯಸ್‌ ಬಿಸಿಯಲ್ಲಿ ಈ ತಂದೂರಿ ರೋಟಿ ತಯಾರಾಗುತ್ತದೆ.
  ಕೆಲ ಹೋಟೆಲ್ ಗಳು ಗೋದಿ ಹಿಟ್ಟಿಗೆ ಮೈದಾ ಸೇರಿಸುತ್ತಾರೆ ಮತ್ತು ಎಲ್ಲಾ ಆಹಾರಗಳಿಗೆ ಟೀಸ್ಟಿಂಗ್ ಪೌಡರ್, ಕಲರ್ ಗಳನ್ನು ಸೇರಿಸುವುದರಿಂದ ಕಡಿಮೆ ಬೆಲೆಗೆ ರುಚಿಕರ ಆಹಾರ ದೊರೆಯುತ್ತದೆ ಆದರೆ ಅದು ಆರೋಗ್ಯಕ್ಕೆ ಮಾರಕ ಎಂದು ಹೆಚ್ಚಿನ ಗ್ರಾಹಕರು ತಿಳಿದಿರುವುದರಿಂದ ಹೋಟೆಲ್ ಮಾಲಿಕರುಗಳು ಇದನ್ನು ಆಹಾರ ತಯಾರಿಕೆಯಲ್ಲಿ ಯಾವ ಕಾರಣಕ್ಕೂ ಬಳಸಬಾರದು ಇದರಿಂದ ಆಹಾರದ ಗುಣಮಟ್ಟ ಕಳೆದುಕೊಂಡು ಹೋಟೆಲ್ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ ಮತ್ತು ಅನೇಕ ಗ್ರಾಹಕರಿಗೆ ವಿಷ ಉಣಿಸಿದ ಪಾಪ ಗಳಿಸುತ್ತೇವೆ.
 ಈಗ ನಾನು ಹೋಟೆಲ್ ಉದ್ಯಮದಲ್ಲಿ ಹೊಸ ಸಾಹಸಕ್ಕೆ ತಯಾರಾಗುತ್ತಿದ್ದೇನೆ, ಅದು ನನ್ನ ಕನಸಿನ ಉದ್ಯಮ ಎಲ್ಲವೂ ಸರಿಯಾದರೆ ಉದ್ಯಮ ಅನೇಕ ಊರಿಗೆ ತಲುಪಲಿದೆ ಅನೇಕರು ನಮ್ಮ ಜೊತೆ ಕೈ ಜೋಡಿಸಬಹುದು, ಅನೇಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವೂ ಲಭಿಸಲಿದೆ ಇದಕ್ಕಾಗಿ ಪಕ್ಕಾ ಅನುಭವಿ ವಿದೇಶಿ ಸಂಸ್ಥೆಗಳ ಸಲಹೆ ಪಡೆಯುತ್ತಿದ್ದೇನೆ ಅವರ ಜೊತೆಗೆ ಪರಿಣಿತರ ತಂಡಗಳು ಯೋಜನೆ ಕಾರ್ಯಗತ ಮಾಡಲು ಜೊತೆಯಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...