Skip to main content

Blog number 939. ಜೋಗ್ ಪಾಲ್ಸ್ ಮತ್ತು ಶಿವಮೊಗ್ಗ ಮಾರ್ಗದ ಮದ್ಯದಲ್ಲಿರುವ ಆನಂದಪುರಂ ಮಲ್ಲಿಕಾ ವೆಜ್ ನಲ್ಲಿ ಅಜಿನೋಮೊಟೊ, ಕೃತಕ ಬಣ್ಣ - ಪ್ಲೇವರ್ ಬಳಸದೆ ತಯಾರಿಸುವ ದಕ್ಷಿಣ ಭಾರತೀಯ ಮತ್ತು ಉತ್ತರ ಬಾರತೀಯ ಆಹಾರಗಳು.

#ನಮ್ಮ_ಮಲ್ಲಿಕಾ_ವೆಜ್_ರೆಸ್ಟೋರೆಂಟಲ್ಲಿ_ಒಂದೂವರೆ_ವರ್ಷದ_ನಂತರ_ಪ್ರಾರಂಭ_ಆಗಿದೆ

#ತಂದೂರಿ_ರೋಟಿ_ಉತ್ತರ_ಭಾರತೀಯ_ತಿನಿಸುಗಳು.

#ತಂದೂರಿ_ರೋಟಿ_ಮೂಲ_ಇಂಡಸ್_ಕಣಿವೆಯ_ಮೆಸಪೋಟಾಮಿಯ

#ಇಂಡಿಯನ್_ಬ್ರೆಡ್_ಎಂದೇ_ಪ್ರಖ್ಯಾತ 

Mallika Veg
https://maps.app.goo.gl/zEftqmawuji4AhuX8
 
   2020 ಮಾರ್ಚ್ ನಿಂದ ಎರೆಡು ಬಾರಿ ಕೊರಾನಾ ಲಾಕ್ ಡವನ್ ನಿಂದ ಹೋಟೆಲ್ ಉದ್ಯಮ ತಲ್ಲಣಿಸಿತು, ಅನೇಕ ಹೋಟೆಲ್ ಗಳು ಖಾಯಂ ಆಗಿ ಬಂದ್ ಆಯಿತು, ಪ್ರವಾಸಿಗರಿಲ್ಲದೆ ಪ್ರವಾಸೋದ್ಯಮಗಳು ಜೀವ ಹಿಡಿದು ಬದುಕಿದೆ.
  ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಶಿವಮೊಗ್ಗ ಮತ್ತು ಜೋಗ್ ಫಾಲ್ಸ್ ಮದ್ಯದ ಆನಂದಪುರಂನ ಯಡೇಹಳ್ಳಿ ವೃತ್ತದಲ್ಲಿ ಇದೆ, ನಮಗೆ ಪ್ರವಾಸಿಗಳೇ ಅನ್ನದಾತರು.
   ಕಳೆದ 16 ತಿಂಗಳ ನಂತರ ನಮ್ಮ ರೆಸ್ಟೋರೆಂಟ್ ನಲ್ಲಿ ಉತ್ತರ ಭಾರತೀಯ ತಿನಿಸುಗಳು ತಂದೂರಿ ರೋಟಿ ಪುನಾರಾರಂಭವಾಗಿದೆ ಇದನ್ನು ತಯಾರಿಸುವ ಅನುಭವಿ ಸಿಬ್ಬಂದಿಗಳು ದೂರದ ಪಶ್ಚಿಮ ಬಂಗಾಳದ ರಾಜ್ಯದಿಂದ ಬಂದಿದ್ದಾರೆ.
   ಮದ್ಯಾಹ್ನ ಮತ್ತು ಸಂಜೆ  ಆಶ್ರೀವಾದ ಬ್ರಾಂಡಿನ ಶುದ್ಧ ಗೋದಿ ಹಿಟ್ಟಿನಿಂದ ತಂದೂರಿ ಭಟ್ಟಿಯಲ್ಲಿ ತಂದೂರಿ ರೋಟಿ ಚಾರ್ ಕೋಲಿನಿಂದ, ತಯಾರಿಸುವಾಗ ಹೋಟೆಲ್ ಸುತ್ತ ಪಸರಿಸುವ ಅದರ ಸುವಾಸನೆಯೆ ಚೇತೋಹಾರಿ ಆಗಿರುತ್ತದೆ, ತಂದೂರಿ ರೋಟಿ ಜೊತೆ ಪನೀರ್ - ಕಾಜು-ಮಶ್ರೂಮ್ - ಬೇಬಿಕಾರ್ನ್ - ಆಲೂ- ಮಿಕ್ಸ್ ವೆಜ್ ನ ವಿವಿದ ರೀತಿಯ ಮಸಾಲಾ- ಕಡಾಯಿ - ಕೊಲಾಪುರಿಗಳು ಬಾಯಲ್ಲಿ ನೀರೂರಿಸುತ್ತದೆ.
  ಜೊತೆಗೆ ಹೂ ಕೋಸಿನಿಂದ ಮಾತ್ರ ಮಾಡುವ ಮಂಚೂರಿ - ಚಿಲ್ಲಿಗಳು ಕೂಡ ಇದರ ಜೊತೆ ಪನೀರ್ - ಬೇಬಿ ಕಾರ್ನ್ - ಮಶ್ರೂಮ್ ನಿಂದ ವಿವಿದ ವೆಜ್ ಬಿರಿಯಾನಿಗಳು, ಪ್ರೈಯಡ್ ರೈಸ್, ಸೂಪ್, ನೂಡಲ್ಸ್ ಮುಂತಾದ ತರಹಾವರಿ ತಿನಿಸುಗಳು ಮಧ್ಯಾಹ್ನ 12ರಿಂದ ರಾತ್ರಿ 10 ರ ತನಕ ಲಭ್ಯವಿದೆ.
  ಒಂದು ವಿಶೇಷ ಅಂದರೆ ನಮ್ಮ ಹೃದಯದ ಅಪಧಮನಿಗಳನ್ನು ನಿರ್ಬಂದಿಸುವ ಟೀಸ್ಟಿಂಗ್ ಪೌಡರ್ ಗಳಾದ ಅಜಿನೋಮೋಟೋ ಅಥವ ಮೋನೋ ಸೋಡಿಯಂ ಗ್ಲುಟಮೇಟ್ ಯಾವ ಕಾರಣಕ್ಕೂ ನಮ್ಮ ಕಿಚನ್ ಗೆ ಪ್ರವೇಶ ಇಲ್ಲ, ಕಲಬೆರೆಕೆ ಪದಾರ್ಥಗಳು ಬ್ರಾಂಡೆಡ್ ಅಲ್ಲದ ವಸ್ತಗಳಿಗೂ ಅವಕಾಶ ಇಲ್ಲ, ಕೃತಕ ಬಣ್ಣ ಪ್ಲೇವರ್ ಕೂಡ ಬಳಸದೇ ತಯಾರಿಸುವ ಆಹಾರಗಳು ನಮ್ಮದು.
  ಹಾಲು - ಬೆಣ್ಣೆ - ತುಪ್ಪ ಮತ್ತು ಪನೀರ್ ಗಳು, ಗೇರು ಬೀಜ, ಮಸಾಲ ಪದಾರ್ಥಗಳ ಬೆಲೆ ಗಗನಕ್ಕೆ ಏರಿದೆ ಆದರೂ ಪರಿಶುದ್ಧ ರುಚಿಕರ ಆಹಾರ ಗ್ರಾಹಕರಿಗೆ ಕಳೆದ ಹತ್ತು ವರ್ಷದಿಂದ ನಿರಂತರವಾಗಿ ನೀಡುವಂತೆ ಮುಂದುವರಿಸಿದ್ಧೇವೆ.
  ಬೆಳಗಿನ ಉಪಹಾರಕ್ಕೆ ಮಲೆನಾಡಿನ ಹಲಸಿನ ಎಲೆ ಕೊಟ್ಟೆ ಕಡುಬು, ಅಕ್ಕಿ ರೊಟ್ಟಿ, ರಾಗಿ ರೊಟ್ಟಿ,ಕೊಯಮುತ್ತೂರಿನ ಪೋಡಿ ಇಡ್ಲಿ, ತಟ್ಟೆ ಇಡ್ಲಿ ಜೊತೆಗೆ ಎಲ್ಲಾ ರೀತಿಯ ದೋಸೆ, ವಡಾ, ಪಲಾವ್, ಬಿಸಿಬೇಳೆಬಾತ್, ದಾರವಾಡದ ಪ್ರಖ್ಯಾತ ಗಿರ್ಮಿಟ್ ಮಿರ್ಚಿ ಬಜೆ, ಶುದ್ಧ ಹಾಲಿನಿಂದ ತಯಾರಿಸುವ ಪ್ರಸಿದ್ಧ ಬ್ರಾಂಡ್ ಕೊಥಾಸ್ ಕಾಫಿ ಪುಡಿಯಿಂದ ಪಿಲ್ಟರ್ ಕಾಫಿ, ಶುದ್ಧ ಹಾಲಿನಿಂದ ಲಿಪ್ಟನ್ ರವರ 3 Rose ಟೀಪುಡಿಯ ಚಹಾ, ದಕ್ಷಿಣ ಭಾರತದ ಊಟ ಹೀಗೆ ದೊಡ್ಡ ಪಟ್ಟಿ ಪ್ರತಿದಿನ ಬರುವ ಗ್ರಾಹಕರ ಹಸಿವು ತಣಿಸುವ ಕೆಲಸ ಮಾಡುತ್ತಿದೆ.
  ಇದ್ದಿಲಿನ (ಚಾರ್ಕೋಲ್) ಬೆಂಕಿಯಿಂದ ಮಣ್ಣಿನ ಮಡಕೆಯಂತ ತಂದೂರ್ ಭಟ್ಟಿಯಲ್ಲಿ ತಯಾರಿಸುವ ಶುದ್ಧ ಗೋದಿ ಹಿಟ್ಟಿನ (ಅಟ್ಟಾದಿಂದ) ತಂದೂರಿ ರೋಟಿ ತುಂಬಾ ಪುರಾತನ ಆಹಾರ ಮತ್ತು ಅದರ ಮೂಲ ಇಂಡಸ್ ವ್ಯಾಲಿಯ ಮೆಸಪೋಟಾಮಿಯಾ ಆದ್ದರಿಂದ ಇಂಡಿಯನ್ ಬ್ರಿಡ್ ಹೆಸರಲ್ಲಿ ಈಗಲೂ ಭಾರತದ ನಾರ್ತ್ ವೆಸ್ಟ್ ಇಂಡಿಯ, ಪಾಕಿಸ್ತಾನ, ಅಪಘಾನಿಸ್ತಾನ, ಇರಾನ್ ಗಳಲ್ಲಿ ನಿತ್ಯದ ಆಹಾರ ಆಗಿದೆ.
  330 ರಿಂದ 450 ಡಿಗ್ರಿ ಸೆಲ್ಸಿಯಸ್‌ ಬಿಸಿಯಲ್ಲಿ ಈ ತಂದೂರಿ ರೋಟಿ ತಯಾರಾಗುತ್ತದೆ.
  ಕೆಲ ಹೋಟೆಲ್ ಗಳು ಗೋದಿ ಹಿಟ್ಟಿಗೆ ಮೈದಾ ಸೇರಿಸುತ್ತಾರೆ ಮತ್ತು ಎಲ್ಲಾ ಆಹಾರಗಳಿಗೆ ಟೀಸ್ಟಿಂಗ್ ಪೌಡರ್, ಕಲರ್ ಗಳನ್ನು ಸೇರಿಸುವುದರಿಂದ ಕಡಿಮೆ ಬೆಲೆಗೆ ರುಚಿಕರ ಆಹಾರ ದೊರೆಯುತ್ತದೆ ಆದರೆ ಅದು ಆರೋಗ್ಯಕ್ಕೆ ಮಾರಕ ಎಂದು ಹೆಚ್ಚಿನ ಗ್ರಾಹಕರು ತಿಳಿದಿರುವುದರಿಂದ ಹೋಟೆಲ್ ಮಾಲಿಕರುಗಳು ಇದನ್ನು ಆಹಾರ ತಯಾರಿಕೆಯಲ್ಲಿ ಯಾವ ಕಾರಣಕ್ಕೂ ಬಳಸಬಾರದು ಇದರಿಂದ ಆಹಾರದ ಗುಣಮಟ್ಟ ಕಳೆದುಕೊಂಡು ಹೋಟೆಲ್ ಉದ್ಯಮಕ್ಕೆ ಕೆಟ್ಟ ಹೆಸರು ಬರುತ್ತದೆ ಮತ್ತು ಅನೇಕ ಗ್ರಾಹಕರಿಗೆ ವಿಷ ಉಣಿಸಿದ ಪಾಪ ಗಳಿಸುತ್ತೇವೆ.
 ಈಗ ನಾನು ಹೋಟೆಲ್ ಉದ್ಯಮದಲ್ಲಿ ಹೊಸ ಸಾಹಸಕ್ಕೆ ತಯಾರಾಗುತ್ತಿದ್ದೇನೆ, ಅದು ನನ್ನ ಕನಸಿನ ಉದ್ಯಮ ಎಲ್ಲವೂ ಸರಿಯಾದರೆ ಉದ್ಯಮ ಅನೇಕ ಊರಿಗೆ ತಲುಪಲಿದೆ ಅನೇಕರು ನಮ್ಮ ಜೊತೆ ಕೈ ಜೋಡಿಸಬಹುದು, ಅನೇಕರಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗವೂ ಲಭಿಸಲಿದೆ ಇದಕ್ಕಾಗಿ ಪಕ್ಕಾ ಅನುಭವಿ ವಿದೇಶಿ ಸಂಸ್ಥೆಗಳ ಸಲಹೆ ಪಡೆಯುತ್ತಿದ್ದೇನೆ ಅವರ ಜೊತೆಗೆ ಪರಿಣಿತರ ತಂಡಗಳು ಯೋಜನೆ ಕಾರ್ಯಗತ ಮಾಡಲು ಜೊತೆಯಾಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ