Skip to main content

Blog number 1394. ಸ್ತ್ರೀ-ಪುರುಷ ಅನುಪಾತದ ಅಸಮತೋಲನದಿಂದ ಅವಿವಾಹಿತ ಪುರುಷರ ಸಂಖ್ಯೆ ಹೆಚ್ಚುತ್ತಿದೆ.

#ಅವಿವಾಹಿತ_ಯುವಕರ_ಸಂಖ್ಯೆ_ಹೆಚ್ಚುತ್ತಿದೆ

#ವರದಕ್ಷಿಣೆ_ಅಚರಣೆಯಲ್ಲಿ_ಇಲ್ಲವಾಗುತ್ತಿದೆ

#ಅಂತರ್ಜಾತಿ_ವಿವಾಹಕ್ಕೆ_ಸಮಾಜದಲ್ಲಿ_ಸಿಕ್ಕಿದೆ_ಮಾನ್ಯತೆ

#ಸ್ಟರ್ಗದಲ್ಲಿ_ವಿವಾಹ_ಒಂದು_ಹೆಣ್ಣಿಗೆ_ಒಂದು_ಗಂಡು_ಎಂಬ_ಗಾದೆಗಳೂ_ಸುಳ್ಳಾಯಿತು

#ಮು೦ದಿನ_ಕೆಲ_ದಶಕ_ಪುರುಷರಿಗೆ_ವಿವಾಹ_ಬಾಗ್ಯ_ಇರದ_ಕಹಿ_ಸತ್ಯ_ಅರಗಿಸಿ_ಕೊಳ್ಳುವುದು_ಕಷ್ಟ.

#ಶತಮಾನಗಳಿಂದ_ಹೆಣ್ಣನ್ನು_ಮಾರಾಟದ_ಸರಕಿನಂತೆ_ಕಾಣುತ್ತಿದ್ದ_ಪುರುಷ_ಸಮಾಜಕ್ಕೆ_ಶಿಕ್ಷೆಯಾ?

#ಇದಕ್ಕೆ_ಕಾರಣಗಳು_ಏನು?

    ಎಲ್ಲಾ ಜಾತಿ ದರ್ಮಗಳಲ್ಲೂ ಅವಿವಾಹಿತ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ, ಮುಂದಿನ ದಿನಗಳಲ್ಲಿ ಇದೊಂದು ಸಾಮಾಜಿಕ ಸಮಸ್ಯೆ ಆಗಿ ಪರಿಗಣಿಸಲೂ ಬಹುದು, ಇದಕ್ಕೆ ಕಾರಣ ಏನು?.
   ಮೊದಲೆಲ್ಲ ಅವಿವಾಹಿತ ಯುವತಿಯರ ಸಂಖ್ಯೆ ಹೆಚ್ಚಾಗಿತ್ತು, ಆಗ ವಿವಾಹ ಆಗುವ ಯುವಕರು ವರದಕ್ಷಿಣೆ, ಬ೦ಗಾರ, ಬೈಕ್, ಕಾರ್ ಗಳ ವಿಪರೀತ ಬೇಡಿಕೆ ಇಡುತ್ತಿದ್ದರು.
   ವರದಕ್ಷಿಣೆ ಪಡೆಯುವುದು ಮತ್ತು ನೀಡುವುದು ಎರೆಡೂ ಆ ಕಾಲದಲ್ಲಿ ಪ್ರತಿಷ್ಟಿತ ಗೌರವದ ವಿಷಯಗಳಾಗಿತ್ತು ಅಲ್ಲದೆ ವರದಕ್ಷಿಣೆ ಪಡೆಯದೇ ವಿವಾಹ ಆದ ಯುವಕನನ್ನ ಅನುಮಾನದಿಂದ ಏನೋ ಹುಡುಗನಲ್ಲಿ ಐಬಿದೆ ಎಂದು ನೋಡುವ ಕಾಲವಿತ್ತು.
   ಮೊದ ಮೊದಲು ಪುರೋಹಿತರಿಗೆ ಮಾತ್ರ ಮದುವೆ ಆಗಲು ಕನ್ಯೆ ಸಿಗುತ್ತಿಲ್ಲ ಎಂಬುದು ಈಗ ಎಲ್ಲಾ ಜಾತಿಯಲ್ಲೂ  ಕನ್ಯೆ ಸಿಗುವುದಿಲ್ಲ ಎಂಬಲ್ಲಿಗೆ ತಲುಪಿದೆ.
   ಕೃಷಿ, ವ್ಯವಹಾರ, ಸ್ವಯಂ ಉದ್ಯೋಗದ ಯುವಕರಿಗೆ, ಗ್ರಾಮೀಣ ಪ್ರದೇಶದ ವಾಸಿಗಳಿಗೆ, ಅಪ್ಪ-ಅಮ್ಮಂದಿರ ಸೇವೆ ಮಾಡುವ ಯುವಕರಿಗೆ ಕನ್ಯೆಯರ ಹುಡುಕುವುದು ತುಂಬಾ ಕಷ್ಟವೇ ಆಗಿದೆ.
   ಐಟಿ -ಬಿಟಿ ಕ್ಷೇತ್ರದಲ್ಲಿರುವವರಿಗೆ, ವಿದೇಶದಲ್ಲಿರುವವರಿಗೆ, ಪಟ್ಟಣವಾಸಿಗಳಿಗೆ ಈಗ ಮದುವೆ ಸರಾಗವಾಗುತ್ತದೆ ಕಾರಣ ಈಗಿನ ಯುವತಿಯರ ಆಯ್ಕೆಯ ಮೊದಲ ಪ್ರಾಶಸ್ತ್ಯ ಇಂತ ಯುವಕರೇ ಆಗಿರುವುದರಿಂದ.
   ಕಟ್ಟರ್ ಜಾತಿವಾದಿಗಳೂ ಈಗ ಯಾವುದೇ ಜಾತಿಯ ಕನ್ಯೆಯನ್ನು ತಾವೇ ಖರ್ಚು ಮಾಡಿ ಅಂತರ್ಜಾತಿ ವಿವಾಹವಾಗುತ್ತಿದ್ದಾರೆ ಇದಕ್ಕೆ ಅವರ ಕುಟುಂಬಗಳಲ್ಲಿದ್ದ ಹಿಂದಿನ ಪ್ರತಿರೋದ ಈಗ ಇಲ್ಲವಾಗಿದೆ. 
    ಈಗ ಅಲ್ಲೂ ಇದು ಕಷ್ಟವಾಗಿದೆ, ಯುವಕರು ತಯಾರಿದ್ದರೂ ಕನ್ಯೆಯರು ಅವರ ಆಯ್ಕೆ ಕಾದಿರಿಸುವುದರಿಂದ ಅವಿವಾಹಿತ ಯುವಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ ಮುಂದಿನ ದಿನಗಳಲ್ಲಿ ಇದು ಸಮಾಜದಲ್ಲಿ ಏನೆಲ್ಲ ಪರಿಣಾಮಕ್ಕೆ ಕಾರಣವಾಗುವುದೋ ಗೊತ್ತಿಲ್ಲ.
     ಸ್ತ್ರೀ-ಪುರುಷ ಅನುಪಾತದ ಅಸಮತೋಲನೆಯಿಂದ ಸ್ತ್ರಿಯರಿಗೆ ಆಯ್ಕೆ ಹಕ್ಕು ಜಾಸ್ತಿ ಆಯಿತು ಇದರಲ್ಲಿ ವಿಕೃತಿ-ಸುಕೃತಿಗಳು ಪ್ರಾರಂಭ ಆಯಿತು, ಅತ್ತೆ ಸೊಸೆ ಜಗಳ-ವರದಕ್ಷಿಣೆ ಹಿಂಸೆ ಇತ್ಯಾದಿಗಳ ಸೇಡು ತೀರಿಸಿ ಕೊಳ್ಳುವ  ರೀತಿಯಲ್ಲಿ ಈಗೆಲ್ಲ ಅದು ಇಲ್ಲದಿದ್ದರೂ ಆ ಕಾರಣಗಳಿಗೆ ನಮ್ಮ ಈ ಕರಾರು ಎಂಬ ಡಿಫೆನ್ಸ್ ಅಗೋಚರವಾಗಿ ಪಾಲು ತೆಗೆದುಕೊಂಡಿದೆ.
  ಇದರ ಜೊತೆ ಕನ್ಯೆಯರ ಕೊರತೆಗೆ ಪೇಟೆ ಜೀವನದ ಆಕಷ೯ಣೆ, ಮೈಕ್ರೋ ಪ್ಯಾಮಿಲಿಯಲ್ಲಿನ ಅನುಕೂಲ, ಕೃಷಿ ವಾಣಿಜ್ಯವಾಗಿ ಬದಲಾಗಿದ್ದು ಮತ್ತು ಈಗಿನ ಯುವ ಜನಾಂಗದ ಸಿನಿಕತೆಗಳು ಕಾರಣವಾಗಿರಬಹುದು.
  ಇದರಿಂದ ಒಂದು ಹೆಣ್ಣಿಗೆ ಒಂದು ಗಂಡು, ಸ್ಟರ್ಗದಲ್ಲಿ ಮದುವೆ, ಹೆಣ್ಣು ಸಂಸಾರದ ಕಣ್ಣು ಎಂಬ ಗಾದೆಗಳೂ ಸುಳ್ಳಾಯಿತು.
   ಒಂದು ಕಾಲದಲ್ಲಿದ್ದ ನಂಬಿಕೆಗಳಾದ ಕೃಷಿ ಭೂಮಿ ಇದ್ದಲ್ಲಿ ವಿವಾಹ ಮಾಡಿದರೆ ಉಪವಾಸ ಇರುವುದಿಲ್ಲ, ಆಸ್ತಿ ಇದ್ದಲ್ಲಿ ಕೊಟ್ಟರೆ ಜೀವಮಾನ ಎಲ್ಲಾ ಸುಖವಾಗಿರುತ್ತಾರೆ೦ಬುದೆಲ್ಲಕ್ಕೆ ತೆರೆಬಿದ್ದಿದೆ.
   ಒಂದು ಕಾಲಘಟ್ಟದಲ್ಲಿ ವರದಕ್ಷಿಣೆ - ಬಡತನ - ಜಾತಿ-ಸೌಂದರ್ಯ ಇತ್ಯಾದಿ ಕಾರಣದಿಂದ ಅನೇಕ ಮಹಿಳೆಯರು ವಿವಾಹ ಆಗಲು ಆಗಲೇ ಇಲ್ಲ ಈಗ ಅದಾವುದು ಇಲ್ಲದಿದ್ದರೂ ಕೆಲವು ದಶಕಗಳು ಪುರುಷರಿಗೆ ವಿವಾಹ ಬಾಗ್ಯ ಇರುವುದಿಲ್ಲ ಎಂಬ ಕಹಿ ಸತ್ಯ ಅರಗಿಸಿಕೊಳ್ಳಲು ಕಷ್ಟವಾದರೂ ಅನುಭವಿಸಲೇ ಬೇಕಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...