Skip to main content

Blog number 1388. ಚುನಾವಣಾ ರ್ಯಾಲಿಗಳೆಂಬ ಇವೆಂಟ್ ಮ್ಯಾನೇಜ್ಮೆಂಟ್

#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅ೦ಕಣ ಭಾಗ -4.
(ಕೆ.ಆರುಣ್ ಪ್ರಸಾದ್ 9 ಏಪ್ರಿಲ್ 2019)

ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಚುನಾವಣಾ ಚಾಕ ಚಕ್ಯತೆ.
ಚುನಾವಣಾ ಪ್ರಚಾರದಲ್ಲಿ ಹೈಟೆಕ್ ಭರಾಟೆ.

  ಮೊದಲೆಲ್ಲ ಚುನಾವಣಾ ಪ್ರಚಾರದಲ್ಲಿ ಮೈಕ್ ಕಟ್ಟಿದ ವಾಹನದಲ್ಲಿ ಪ್ರಚಾರ, ಪೋಸ್ಟ್ ರ್ ಅಂಟಿಸುವುದು, ತಾಲ್ಲೂಕ್ ಹೋಬಳಿ ಕೇಂದ್ರದಲ್ಲಿ ಅಭ್ಯಥಿ೯ ಎತ್ತರದ ಅಟ್ಟಣಿಗೆ ಅಂತ ಜಾಗದಲ್ಲಿ ಬಾಷಣ ಅದಕ್ಕೆ ಒಂದು ಮೈಕ್ ವ್ಯವಸ್ಥೆ.
  ಅಭ್ಯಥಿ೯ಗೆ ಮಾತ್ರ ಕಾರು ನಂತರದ ದಿನದಲ್ಲಿ ಒಂದೊ೦ದು ಕ್ಷೇತ್ರದಲ್ಲಿ ನೂರಾರು ಬಾಡಿಗೆ ಕಾರು, ಪ್ಲೆಕ್ಸ್ ಗಳು ರಾರಾಜಿಸಲು ಪ್ರಾರಂಭವಾಯಿತು.
  ಈಗ ಚುನಾವಣಾ ಆಯೋಗದ ಕಠಿಣ ನಿಧಾ೯ರಗಳಿಂದ ಪ್ರಚಾರಕ್ಕೆ ನಿಯಮಿತ ವಾಹನ, ಸಭೆಯ ಸಮಯಕ್ಕೆ ಮಾತ್ರ ಪ್ರಚಾರ ಸಾದನ ಅವಕ್ಕೆಲ್ಲ ಸ್ಲಾಬ್ ಮಾದರಿ ಚುನಾವಣಾ ವೆಚ್ಚದ ಲೆಖ್ಖ ಅಭ್ಯಥಿ೯ಯ ಖಾತೆಗೆ ಸೇರುತ್ತದೆ.
 ಈಗಿನ ಪ್ರತಿ ಚುನಾವಣಾ ಸಭೆಯು  ಇವೆಂಟ್ ಮ್ಯಾನೇಜ್ ಮೆಂಟ್ ಗೆ ಒಳಪಟ್ಟಿ ನಡಿಯುತ್ತಿದೆ.
  ವಿಶಾಲ ಎತ್ತರದ ವೇದಿಕೆ, ಪತ್ರಕತ೯ರಿಗೆ ಪ್ರತ್ಯೇಕ ಬಾಕ್ಸ್ ಅಲ್ಲಿಗೆ ಸುಲಭ ಪ್ರವೇಶ, ಅದೇ ರೀತಿ ಲೈವ್ ವಿಡಿಯೋಗಾಗಿ ಪ್ರತ್ಯೇಕ ವೇದಿಕೆ, ಡ್ರೋನ್ ಚಿತ್ರಿಕರಣ, ಅರಮಾದಾಯಕ ಅಸನಗಳು, ವೇದಿಕೆ ಹವಾನಿಯ೦ತ್ರಿತ, ಹಿಂಬಾಗದಲ್ಲಿ ಗಣ್ಯರಿಗೆ ಮೊಬೈಲ್ ಟಾಯಿಲೆಟ್, ವಿ.ಐ.ಪಿಗಳಿಗೆ, ಪ್ರಮುಖರಿಗೆ, ವಿಶೇಷ ಆಹ್ವಾನಿತರಿಗೆ, ಜನಪ್ರತಿನಿಧಿಗಳಿಗಾಗಿ ಪ್ರತ್ಯೇಕ ಗ್ಯಾಲರಿ ಅದರ ಹಿಂದೆ ಜನಸಾಮಾನ್ಯರಿಗೆ.
  ಎಲ್ಲರಿಗೂ ಆಸನ ವ್ಯವಸ್ಥೆ, ಸಭಾಂಗಣದ ಪ್ರತಿ ಮೂಲೆಗೂ ಯಾವುದೇ ಅಡೆತಡೆ ಇಲ್ಲದೆ ಮುಟ್ಟುವ೦ತ ಸ್ಪೀಕರ್ ಗಳ ವ್ಯವಸ್ತೆ.
  ಮೊದಲೆಲ್ಲ ಸ್ಥಳಿಯ ಪಕ್ಷದ ಪ್ರಮುಖರು ಈ ವ್ಯವಸ್ಥೆಗೆ ಒದ್ದಾಡ ಬೇಕಿತ್ತು ಆದರೆ ಈಗ ನಿಮ್ಮ ಆಡ೯ರ್ ಪಡೆದು ಮರುದಿನವೆ ಇಂದ್ರಲೋಕ ಸೃಷ್ಠಿಸುವ ಏಜೆನ್ಸಿಗಳಿದೆ, 50 ಸಾವಿರದಿಂದ 50 ಲಕ್ಷದ ತನಕ ಖಚು೯ ಮಾಡಿದರಾಯಿತು.
  ರಾಜಕೀಯ ನಾಯಕರು, ಅಭ್ಯಥಿ೯ಗಳು ಮಾಡುವ ಭಾಷಣ ಕೇಳಲು ಜನ ಬೇಕಲ್ಲ! ಅದನ್ನು ಸರಭರಾಜು ಮಾಡುವ ಏಜೆನ್ಸಿಗಳಿದೆ, ಆ ಸಂದಭ೯ಕ್ಕೆ ಬೇಕಾದ ಶಾಲು, ಟೋಪಿಗಳನ್ನ ಮುದ್ರಿಸಿ ನೀಡುವ ವ್ಯವಸ್ಥೆ ಕೂಡ.
  ಇವಾರಾರು ಮತದಾರರಲ್ಲ, ಪಕ್ಷದ ಕಾಯ೯ಕತ೯ರೂ ಅಲ್ಲ ಆದರೆ ನಿಮ್ಮ ಸಭೆಯ ಆ ದಿನದ ಸಭಾoಗಣ ತುಂಬಿಸಿ, ಮಯಾ೯ದೆ ಉಳಿಸುವ ಕೂಲಿ ಕಾಯ೯ಕತ೯ರು ಇವರೆಲ್ಲ.
 ಕೋಟ್ಯಾಂತರ  ಹಣ ಪೀಕಿ  ಅಭ್ಯಥಿ೯ ಆದವನು ಇದೆಲ್ಲ ಚುನಾವಣೆಗಾಗಿ ಮಾಡಬೇಕಾದ ಅನಿವಾಯ೯ ಕೆಲಸ.
  ಇ೦ತದ್ದನ್ನೆಲ್ಲ ಸರಿಯಾಗಿ ನಿವ೯ಹಿಸಿದರೆ ಮಾತ್ರ ಪಕ್ಷ ಅವರನ್ನ ದಕ್ಷ ಎಂದು ಪರಿಗಣಿಸುತ್ತದೆ, ಪತ್ರಿಕೆಗಳು ಮರುದಿನ ಬಾರಿ ಜನಸ್ತೊಮ ಸೇರಿತ್ತು ಅಂತ ಬರೆಯುತ್ತೆ, ಸಭೆಯ ಲೈವ್ ಚಿತ್ರಿಕರಣ, ಡ್ರೋಣ್ ಕೈ ಚಳಕ, ಸಂಗೀತ, ಮ್ಯೂಸಿಕ್ ಗಳ ಮಿಕ್ಸಿOಗ್, ಪಂಚಿ೦ಗ್ ಡಯ್ ಲಾಗ್ ಗಳ Highlight ಮಾಡಿ ಸೋಷಿಯಲ್ ಮೀಡಿಯಾಗಳಲ್ಲಿ ಲೈವ್ ಟಿಲಿಕಾಸ್ಟ್ ಹೀಗೆ ಇವತ್ತಿನ ಚುನಾವಣೆಗಳು ನೂರಾರು ಕೋಟಿಯ ವ್ಯವಹಾರವಾಗಿದೆ.
 ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ರಾಜಕೀಯ ಪಕ್ಷಗಳು ರಂಗೋಲೆ ಕೆಳಗೆ ನುಸುಳುವ ಕರಾಮತ್ತು ಕಲಿತಿದೆ.
 ಇದೆಲ್ಲ ಅಂತಿಮವಾಗಿ ಕೆಲವೇ ಲಕ್ಷದಲ್ಲಿ ನಡೆದ ಚುನಾವಣೆ ಅಂತ ಚುನಾವಣಾ ಆಯೋಗ ಕೂಡ ಅಭ್ಯಥಿ೯ಯ ಚುನಾವಣಾ ವೆಚ್ಚವನ್ನ ಒಪ್ಪಿ ತನ್ನ ಅಧಿಕೃತ ಮೊಹರನ್ನ ಒತ್ತುತ್ತದೆ.
 ಇದು ಬೃಹತ್ ಬಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಚುನಾವಣೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...