Skip to main content

Blog number 1363.ಸಕ್ಕರೆಗೆ ಬದಲಾಗಿ ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಬಳಸುವ ಪ್ರಯತ್ನ.

#ಸಕ್ಕರೆಗೆ_ಬದಲಾಗಿ_ಡ್ರೈ_ಚಿಕ್ಕು !

#ಇವತ್ತು_ವಿಶೇಷ_ಸ್ವಾದದ_ಚಹಾ

#ಇದು_ಮದುಮೇಹಿಗಳು_ಬಳಸಬಹುದು

#ಸಸ್ಯಹಾರಿ_ಜೀವನ_ಶೈಲಿಯ_ಬದಲಿ_ಸಕ್ಕರೆ 

https://youtu.be/243mMEncDoA

  ನಮ್ಮ ಕುಟ್ಟೀಚನ್ ಯಾರದ್ದೊ ಸಪೋಟಾ ಹಣ್ಣಿನ ಮರಗಳನ್ನು ವಹಿಸಿಕೊಂಡಿರುವುದಾಗಿ ಅದರ ಹಣ್ಣುಗಳು ತುಂಬಾ ಸಿಹಿ ಇದೆ ತಗೊಳ್ಳಿ ಸಾರ್... ಅಂತ ಹೇಳಿದಾಗ ಯುಗಾದಿಗೆ ಒಂದು ವಾರ ಬಾಕಿ ಇತ್ತು.
  ಪ್ರತಿ ಹಬ್ಬಕ್ಕೆ ಬೇಳೆ ಮತ್ತು ಕಾಯಿ ಹೋಳಿಗೆ ತಯಾರಿಸಿ ತುಪ್ಪದ ಜೊತೆ ನಮ್ಮೆಲ್ಲ ಸಂಸ್ಧೆಯ ಸಿಬ್ಬಂದಿ ಮತ್ತು ಸಹಯೋಗಿಗಳಿಗೆ ನೀಡುವ ಸಂಪ್ರದಾಯ ಇರುವುದರಿಂದ ಹೋಳಿಗೆ ಜೊತೆ ಚಿಕ್ಕು ಹಣ್ಣು ಕೊಡುವ ತೀರ್ಮಾನ ಮಾಡಿದೆ.
  ಕುಟ್ಟೀಚನ್ ಗೆ ತರಲು ಹೇಳಿದ್ದು 20 ರಿಂದ 30 ಕೇಜಿ ಆದರೆ ಅವರು ತಂದಿದ್ದು 60 ಕೇಜಿ ಅದು ಕೇಜಿಗೆ 20 ರೂಪಾಯಿ ಬೆಲೆಯ ತಾಜಾ ಹಣ್ಣುಗಳು ಆದ್ದರಿಂದ ಅಷ್ಟೂ ಹಣ್ಣು ಖರೀದಿಸಿದ್ದೆ.
  ಈ ಸಂದರ್ಭದಲ್ಲಿ ಭಾರತೀಯ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನನ್ನ ಬಾವ ಅವರು ರಾಜಸ್ಥಾನದಲ್ಲಿ ಈ ಚಿಕ್ಕೂ ಹಣ್ಣು ಒಣಗಿಸಿ ಚಹಾ ಮಾಡಲು ಬಳಸುತ್ತಾರೆಂಬ ವಿಷಯ ಹೇಳಿದ್ದು ನನಗೂ ಅದನ್ನು ಪ್ರಯೋಗ ಮಾಡಲು ಪ್ರೇರಣೆ ಆಯಿತು.
  ಚಿಕ್ಕು ಹಣ್ಣು ತುಂಡುಗಳಾಗಿಸಿ ಬಿರುಬಿಸಿಲಿನಲ್ಲಿ ಒಣಗಿಸಿ ಅದರ ಪುಡಿ ಮಾಡಿ ನನ್ನ ಮಗ ನನಗೆ ಸಹಾಯ ಮಾಡಿದ, ಇವತ್ತು ಬೆಳಿಗ್ಗೆ ಚಹಾ ಮಾಡಿ ಚಿಕ್ಕು ಹಣ್ಣಿನ ಪುಡಿ ಸೇರಿಸಿಕೊಂಡು ಕುಡಿದಾಗಲೇ ಗೊತ್ತಾಗಿದ್ದು ಈ ಸಕ್ಕರೆ ರಹಿತ ಚಹಾದ ಸ್ವಾದ ನಂಬರ್ ಒನ್ ಅಂತ !
   ಸಂಜೆ ಆಫೀಸಿನಲ್ಲಿ ಸಕ್ಕರೆ ಬದಲು ಚಿಕ್ಕೂ ಪುಡಿ ಬಳಸಿದ್ದು ತಿಳಿಸದೇ ಈ ಚಹಾ ಸವಿದವರಿಗೆ ಅಭಿಪ್ರಾಯ ಕೇಳಿದಾಗ ಅವರು ಈ ಚಹಾ ತುಂಬಾ ಸ್ಪೆಷಲ್ ಆಗಿದೆ ಅಂದರು.
   ಎಲ್ಲಾ ಲಭ್ಯ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಸಕ್ಕರೆ ಬದಲಾಗಿ ಉಪಯೋಗಿಸಬಹುದು, ಒಣ ಹಣ್ಣಗಳ ಸೇವನೆಯಿಂದ ಕೊಲೆಸ್ಟ್ರಾಲ್ ನಿಯಂತ್ರಣ, ರಕ್ತದ ಒತ್ತಡ ನಿಯಂತ್ರಣ, ಡಯಾಬಿಟೀಸ್ ನಿಯಂತ್ರಣ, ಕ್ಯಾನ್ಸರ್ - ಹೃದಯ ಸಂಬಂದಿಕಾಯಿಲೆ - ಮೆದಳು ಸಂಬಂದಿ ಕಾಯಿಲೆಗಳು ದೂರವಾಗುತ್ತದೆಂಬ ವರದಿಗಳು ಇದೆ.
   ಡಯಾಬಿಟೀಸ್ ಇದ್ದವರು ಸಕ್ಕರೆ ಬಳಸುವ೦ತಿಲ್ಲ ಆದರೆ ಡ್ರೈ ಪ್ರೂಟ್ ಗಳನ್ನು ಪುಡಿ ಮಾಡಿ ಸಕ್ಕರೆ ಬದಲಿಗೆ ಬಳಸಬಹುದು, ಇದರಲ್ಲಿ ಗ್ಲೂಕೋಸ್ ಮತ್ತು ಪ್ರಾಕ್ಟೋಸ್ ಇರುತ್ತದೆ ಇದು ನೈಸರ್ಗಿಕ ಹಣ್ಣಿನ ಸಾರ ಕೇಂದ್ರಿಕೃತವಾದ ಒಣಗಿದ ಹಣ್ಣು ಮತ್ತು ಸಸ್ಯಹಾರಿ ಶೈಲಿಯ ಸಕ್ಕರೆ ಇದು.
  1901 ರಲ್ಲಿ ಭಾರತಕ್ಕೆ ಮದ್ಯ ಅಮೇರಿಕಾದಿಂದ ಬಂದ ಈ ಚಿಕ್ಕು ಅಥವ ಸಪೋಟದ ವೈಜ್ಞಾನಿಕ ಹೆಸರು Manilkara zapota, ನಮ್ಮ ದೇಶದಲ್ಲಿ ಗುಜರಾತ್, ಆಂದ್ರ, ಮಹಾರಾಷ್ಟ್, ಕರ್ನಾಟಕ, ಪಶ್ಚಿಮ ಬಂಗಾಳ, ತಮಿಳುನಾಡು, ತೆಲಾಂಗಣ , ಒರಿಸ್ಸಾ ಮತ್ತು ಮಧ್ಯ ಪ್ರದೇಶದಲ್ಲಿ ವಾರ್ಷಿಕ ಎರೆಡು ಪಸಲು ನೀಡುತ್ತದೆ.
  ಪಶ್ಚಿಮ ಘಟ್ಟಗಳಲ್ಲಿ ಲಭ್ಯವಿರುವ ಎಲ್ಲಾ ಹಣ್ಣುಗಳನ್ನು ಒಣಗಿಸಿ ಪುಡಿ ಮಾಡಿ ಸಕ್ಕರೆ ಬದಲು ಬಳಸುವ ಮೂಲಕ ಹಣ್ಣುಗಳ ಮೌಲ್ಯವರ್ಧನೆ ಸಾಧ್ಯವಿದೆ ಆಸಕ್ತರು ಈ ನಿಟ್ಟಿನಲ್ಲಿ ಪ್ರಯೋಗ ಮಾಡಬಹುದಾಗಿದೆ.
 ಚಿಕ್ಕೂ ಹಣ್ಣಿನ ಸಿಪ್ಪೆ, ಬೀಜ ಮತ್ತು ಹಣ್ಣಿನ ಮಧ್ಯದಲ್ಲಿ ತಿರುಳಿನಂತೆ ಇರುವ ಬಿಳಿ ಮೇಣ ತೆಗೆದು ಸೂಯ೯ನ ಬಿಸಿಲಲ್ಲಿ ದೂಳು ಬರದಂತೆ ತೆಳು ಬಟ್ಟೆ ಮುಚ್ಚಿ ಎರೆಡು ದಿನ ಒಣಗಿಸಿ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿದರೆ ತಯಾರಾಯಿತು ಚಿಕ್ಕೂ ಪೌಡರ್

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...