Skip to main content

Blog number 1377. ಸಾಗರ ತಾಲೂಕಿನಲ್ಲಿ ಉಲ್ಬಣಗೊಂಡ ಮಂಗನಕಾಯಿಲೆ, ವೃಕ್ಷ ಲಕ್ಷ ಸಂಸ್ಥೆಯ ಮನವಿ ಒಂದು ದಾಖಲೆಯಾಗಿ ಉಳಿಯಲಿದೆ.

#ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಂಗನ ಕಾಯಿಲೆ ಸಮಸ್ಯೆ ಆದರೆ ಸಕಾ೯ರಕ್ಕಿಲ್ಲ ಕರುಣೆ#
ನಾಡಿನ ಸಮಸ್ತ ಜನರಲ್ಲಿ
  ಒಂದು ಮಾನಿವಿಯತೆಯ ಮನವಿ
ಸನ್ಮಾನ್ಯರೇ,

 ಸಾಗರ ತಾಲೂಕ ಕಾರ್ಗಲ್ ಬಳಿ ಅರಲಗೋಡು ಗ್ರಾಮದಲ್ಲಿ ಮಂಗನ ಕಾಲೆ ಕಳೆದ ೩ ತಿಂಗಳಿಂದ ವ್ಯಾಪಕವಾಗಿ ೧೭ ಜನ ಸಾವು ಕಂಡಿದ್ದಾರೆ. ಕಾರ್ಗಲ್‌ನಿಂದ ೧೦ ಕಿ.ಮಿ (ಕಾರ್ಗಲ್ ಭಟ್ಕಳ ರಸ್ತೆ) ದೂರದಲ್ಲಿರುವ ಅರಳಗೋಡ ಪಂಚಾಯತ ವ್ಯಾಪ್ತಿಯ ೧೦ ಹಳ್ಳಿಗಳಲ್ಲಿ ಮಂಗನ ಕಾಯಿಲೆ ಇನ್ನೂ ಹೆಚ್ಚುತ್ತಲೇ ಇದೆ.ಜನರಲ್ಲ್ಮಿಮರಣ ಮೃದಂಗ ಛಾಯೆ ದಿನಾ ಕಾಡುತ್ತಿದೆ. ಈವರೆಗೆ ೮೦೦ ಕ್ಕೂ ಹೆಚ್ಚು ಮಂಗಗಳು ಸತ್ತಿವೆ. ಪ್ರತಿದಿನವೂ ಮಂಗ ಸತ್ತ ಘಟನೆ ನಡೆಯುತ್ತಿದೆ. ಅರಲಗೋಡ ಗ್ರಾಮಕ್ಕೆ ವೃಕ್ಷಲಕ್ಷ ಆಂದೋಲನ ಕಾರ್ಯಕರ್ತರ ತಂಡ ದಿನಾಂಕ೧-೪-೨೦೧೯ ರಂದು ಭೇಟಿ ನೀಡಿತು. ಗ್ರಾಮ ಜನತೆಗೆ ಸಾಂತ್ವನ ಹೇಳಿತು. ಅಲ್ಲಿನ ಗಂಭೀರ ಸ್ಥಿತಿಗತಿಗಳ ಮಾಹಿತಿ ಸಂಗ್ರಹಿಸಿತು. ಧಾಮಿಕ-ಸಾಮಾಜಿಕ ಮುಖಂಡರು, ಸಂಸ್ಥೆಗಳು ಮಲೆನಾಡಿನ ಕಗ್ಗಾಡಿನ ಹಳ್ಳಿಯ ಜನರ ನೆರವಿಗೆ ಬರಬೇಕು ಎಂಬ ಕಳಕಳಿಯನ್ನು ನಮ್ಮ ತಂಡ ವ್ಯಕ್ತ ಮಾಡಿದೆ. ಅದಕ್ಕಾಗಿ ತಮ್ಮಲ್ಲಿ ಮನವಿ ಮಾಡುತ್ತೇವೆ, ವಿವರ ನೀಡುತ್ತಿದ್ದೇವೆ.
೧) ಶರಾವತಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಅರಲಗೋಡ ನೆಲ್ಲಿಮಕ್ಕಿ, ಮರಬಿಡಿ, ಮರಾಠಿಕೇರಿ, ಜೀಗಳ, ಸಂಪ, ಬಣ್ಣುಮನೆ, ಕಾಳಮಂಜಿ, ಇಟಿಗೆ, ಐತುಮನೆ, ದೊಂಬೆಕೈ ಹಳ್ಳಿಗಳ ೧೮೦ ಕುಟುಂಬಗಳು, ಸುಮಾರು ೧೮೦೦ ರೈತರು, ಮಹಿಳೆಯರು, ವನವಾಸಿಗಳು ಮಂಗನ ಕಾಯಿಲೆಯ ಸಂತ್ರಸ್ತರಾಗಿದ್ದಾರೆ.
೨) ಅರಲಗೊಡಿನ ಮಂಗಲ ಕಾಯಿಲೆ ಆಸ್ಪತ್ರೆ (ಪ್ರಾಥಮಿಕ ಆರೋಗ್ಯ ಕೇಂದ್ರ) ಯಲ್ಲಿ ಈಗಲೂ ಹಳ್ಳಿಗಳ ಜನ ತಪಾಸಣೆಗೆ ಕ್ಯೂ ನಿಂತಿದ್ದಾರೆ.
೩) ಮಣಿಪಾಲಕ್ಕೆ ಹೋಗಿ, ಮೆಗ್ಗಾನ್ ಆಸ್ಪತ್ರೆ ಶಿವಮೊಗ್ಗಾಕ್ಕೆ ಹೋಗಿ ಜ್ವರ ಕಡಿಮೆ ಆಗಿ ಅರಲಗೋಡ ಗ್ರಾಮಕ್ಕೆ ಹಿಂತಿರುಗಿದ ನೂರಾರು ಜನ ಎದ್ದು ಓಡಾಡುವ ಸ್ಥಿತಿಯಲ್ಲಿ ಇಲ್ಲ.
೪) ಈ ಹಳ್ಳಿಗಳ ರೈತರು ಬೆಳೆ ಕೊಯ್ಯಲೂ ಆಗಿಲ್ಲ, ಕೃಷಿಕೆಲಸ ಪೂರ್ಣ ನಿಂತು ಹೋಗಿದೆ.
೫) ಮಕ್ಕಳು, ಮಹಿಳೆಯರು, ಗಂಡಸರು ಸೇರಿ ೨೫% ಜನ ಸದ್ಯ ಊರು ತೊರೆದು ದೂರದ ಹಳ್ಳಿಗಳಲ್ಲಿ ಇದ್ದಾರೆ. ಇವರ್ಯಾಳರಿಗೂ ಮಂಗನ ಕಾಯಿಲೆ ಬಂದಿಲ್ಲ ಎಂಬುದನ್ನು ಗಮನಿಸಬೇಕಿದೆ.
೬) ಜಾನುವಾರು, ದನಕರು, ಇದ್ದ ಸ್ವಲ್ಪ ಗದ್ದೆ, ತೊಟ, ಮನೆ ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಅತಂತ್ರ ಸ್ಥಿತಿಯಲ್ಲಿ ಜನರಿದ್ದಾರೆ. ಊರಲ್ಲೇ ಇದ್ದರೆ ಮಂಗನ ಕಾಯಿಲೆ ಬಂದು ಸಾಯುತ್ತೇವೆ ಎಂಬ ಅರಿವಿದ್ದರೂ ಬಿಟ್ಟು ಎಲ್ಲಿಗೆ ಹೋಗುವುದು ಎಂಬ ಪ್ರಶ್ನೆ.
೭) ಸರ್ಕಾರ ವೈದ್ಯಕೀಯ ಸೌಲಭ್ಯ ನಿಡಿದೆ. ಆದರೆ ಪರಿಹಾರ ನೀಡಿಲ್ಲ. ಚುನಾವಣೆ, ನೀತಿಸಂಹಿತೆ ಇತ್ಯಾದಿ ಕಾರಣಗಳಿಂದ ಜೂನವರೆಗೆ ಸರ್ಕಾರದ ಸಹಾಯವೂ ಇಲ್ಲ.
೮) ಮಳೆ ಬಿದ್ದರೆ ಮಂಗನ ಕಾಲೆ ನಿಲ್ಲಬಹುದು ಎಂದು ತಜ್ಞರು ಹೇಳುತ್ತಾರೆ. ಆದರೆ ಮಳೆ ಬಂದೇ ಇಲ್ಲ. ಜೂನ್‌ವರೆಗೆ ೨ ತಿಂಗಳು ಇದೇ ರೀತಿ ಮಂಗ ಸಾಯುವುದು, ಕಾಲೆ ಜನ ಸಾಯುವುದು ಎಂಬ ಸ್ಥಿತಿ ಇದೆ. 

ಈ ಹಿನ್ನೆಲೆಯಲ್ಲಿ ನಾಡಿನ ಸಂಘ, ಸಂಸ್ಥೆ, ಧಾಮಿಕ ಮುಖಂಡರು, ಅರಲಗೋಡ ಗ್ರಾಮದ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದು ಕೋರುತ್ತೇವೆ.
೧) ಅರಲಗೋಡ ಪ್ರದೇಶದ ಮಂಗನ ಕಾಯಿಲೆಂದ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ಒದಗಿಸಲು ಕೋರುತ್ತೇವೆ. 
೨) ಮಂಗನ ಕಾಯಿಲೆ ಜ್ವರಕ್ಕೆ ತುತ್ತಾಗಿ, ಸಾಯದೇ ಉಳಿದ ಜನರ ಪರಿಸ್ಥಿತಿ ಸಹಾ ಗಂಭೀರವೇ ಆಗಿದೆ. ಈ ಕುಟುಂಬಗಳಿಗೂ ನೆರವು ನೀಡಬೇಕಾದ ತೀರಾ ಅವಶ್ಯಕತೆ ಇದೆ.
೩) ಈ ಹಳ್ಳಿಗಳ ಸುಮಾರು ೧೩೦೦ ಜಾನುವಾರು, ದನ, ಕರುಗಳನ್ನು ಪ್ರತ್ಯೇಕ ಗೋಶಾಲೆ ನಿಮಿಸಿ ಕಟ್ಟಿ ಸಾಕಬೇಕಾದ ಅನಿವಾರ್ಯತೆ ಇದೆ. ಇದಕ್ಕೂ ಧಾಮಿಕ ಮುಖಂಡರು, ಸಾಮಾಜಿಕ ಸಂಸ್ಥೆಗಳು ಅಭಯ ಹಸ್ತ ನೀಡಲು ಕೋರುತ್ತೆವೆ.
೪) ಇಷ್ಟೆಲ್ಲಾ ಸಾವು, ಯಾತನೆ, ರೋಗ ಭಯದಲ್ಲೇ ಇರುವ ಅರಲಗೋಡ ಜನತೆಗೆ ಧಾಮಿಕ ಮುಖಂಡರು ಆಗಮಿಸಿ ಧೈರ್ಯ ತುಂಬುವ ಕೆಲಸ ಆಗಬೇಕಿದೆ. ಈ ಕುರಿತೂ ಮನವಿ ಮಾಡುತ್ತೇವೆ.
೫) ಅರಲಗೋಡ ಗ್ರಾಮ ಬಿಟ್ಟು ಬೇರೆಡೆ ೨ ತಿಂಗಳು ವಾಸ ಮಾಡಲು ತಾತ್ಕಾಲಿಕ ಪುನರ್ ವಸತಿ ಕೇಂದ್ರದ ಅವಶ್ಯಕತೆ ತುರ್ತಾಗಿದೆ. ಮಠ, ಆಶ್ರಮ, ಮನೆಗಳಲ್ಲಿ ಉಳಿದುಕೊಳ್ಳಲು ಅಗತ್ಯ ವ್ಯವಸ್ಥೆ ಕಲ್ಪಿಸಲು ಕೋರುತ್ತೇವೆ. 
 ತಮ್ಮ ಪೂರ್ಣ ಸಹಾಯಕ್ಕೆ ಪ್ರಾರ್ಥಿಸುತ್ತೇವೆ.
 ವಂದನೆಗಳು,
ತಮ್ಮ ವಿಶ್ವಾಸಿಗಳು
ಅನಂತ ಹೆಗಡೆ ಅಶೀಸರ 
ಅಧ್ಯಕ್ಷರು ವೃಕ್ಷಲಕ್ಷ ಆಂದೋಲನ, : 9481135153 ,: 08384-279445
ಕೆ. ವೆಂಕಟೇಶ,ಕವಲಕೋಡು
ಕಾರ್ಯದರ್ಶಿ ಗ್ರಾಮಾಂತರ ಸಮುದಾಯ ವಿಜ್ಞಾನ ಕೇಂದ್ರ ಸಾಗರ, ಮೊ: 9844277772
ಮಹಾಬಲ ಗಿರಿ ಅರಲಗೋಡು, ಮೊ:  9481091503
ಆನೆಗೊಳಿ ಸುಬ್ಬರಾವ್,ಗಿಡಮೂಲಿಕ ಪಂಡಿತರು 
ಬಿ. ಹೆಚ್. ರಾಘವೇಂದ್ರ ,ಸಹಕಾರಿಗಳು
ಮಂಜಯ್ಯ ಜೈನ್ ಅರಲಗೋಡು,ಗ್ರಾಮದ ಹಿರಿಯರು
ಹೊ.ಭಾ.ಅಶೋಕ,ಸಾಮಾಜಿಕ ಕಾರ್ಯಕರ್ತರು, ಕಾರ್ಗಲ್, 9481253463  
**************************************************************************************

ಅರಲಗೋಡ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ ಸಾವಿಗೀಡಾದ ವ್ಯಕ್ತಿಗಳ ಹೆಸರು
೧) ಪಾರ್ಶ್ವನಾಥ ಮಂಡವಳ್ಳಿ
೨) ಕೃಷ್ಣಪ್ಪ ವಾಟೆಮಕ್ಕಿ 
೩) ಮಂಜುನಾಥ ಕಂಚಿಕೈ 
೪) ಲೋಕರಾಜ ಮರಗುಡಿ
೫) ರಾಯಮ್ಮ ಕಂಚಿಕೈ
೬) ಶ್ವೇತಾ ಜೈನ್- ಜೇಗಳ 
೭) ಸವಿತಾ ವಾಟೆಮಕ್ಕಿ ಹಸ್ಲರ್
೮) ಲಕ್ಷ್ಮೀದೇವಿ ದೊಂಬೆಕೈ 
೯) ಪಾರ್ಶ್ವನಾಥ ಕುಳಕಾರು
೧೦) ಪೂರ್ಣಿಮಾ ಕೃಷ್ಣಮೂರ್ತಿ
೧೧) ಸೀತಮ್ಮ ಕೊಪ್ಪರಿಗೆ ಪೂಜಾರಿ
೧೨) ಚಂದ್ರಪ್ಪ ಹಸ್ಲರ್- ಬಣ್ಣುಮನೆ
೧೩) ಕನ್ನಮ್ಮ ಕಾಳಮಂಜಿ ಹಸ್ಲರ್
೧೪) ಹಾಲಪ್ಪ ಕಂಬಿಕೈ ಹಸ್ಲರ್
೧೫) ಮಂಜಪ್ಪ ಕುಳಕಾರ್
೧೬) ಸಿದ್ಧಾರ್ಥ ಗೌಡ್ರು ಜೇಗಳ
೧೭) ಕೃಷ್ಣ ವಾಟೆಮಕ್ಕಿ ಉಪ್ಪಾರ

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...