Skip to main content

Blog number 1450. ಮಂಕಿ ಪ್ರೂಟ್ ಎಂಬ ಹೆಸರಲ್ಲಿ ಕರೆಯುವ ಮಂಗಗಳ ಪ್ರಿಯವಾದ ವಾಟೆ ಹಣ್ಣಿನಿಂದ ಮಾಡುವ ವಾಟೆ ಹುಳಿ ಎಂಬ ಸಂಪ್ರದಾಯಿಕ ಬಳಕೆಯ ಹುಳಿ

https://youtu.be/yK5HJ6YhpmU

#ಈ_ವರ್ಷದ_ಬಳಕೆಗೆ_ವಾಟೆ_ಹುಳಿ_ಬಂದಿದೆ.

#ವಾಟೆಹುಳಿಗೆ_Monkeyjack_Monkeyfruit_ಅಂತಲು_ಕರೆಯುತ್ತಾರೆ

#ಮಂಗಗಳಿಗೆ_ವಾಟೆಹಣ್ಣು_ತುಂಬಾ_ಇಷ್ಟದ್ದು

#ಟೊಮಾಟಾ_ವಿನೆಗರ್_ಬಳಕೆಯಿಂದ_ಸಂಪ್ರದಾಯಿಕ_ಹುಳಿಗಳು_ಅಪರಿಚಿತವಾಗುತ್ತಿದೆ.

#ಮ೦ಗಗಳ_ಕಾಟ_ನಿವಾರಿಸಲು_ವಾಟೆಮರ_ಅರಣ್ಯಗಳಲ್ಲಿ_ತೋಟದ_ಅಂಚಿನಲ್ಲಿ_ಬೆಳೆಸಿದರೆ_ಪರಿಹಾರ_ಸಿಗಬಹುದಾ?

   ಹುಣುಸೆ ಹಣ್ಣು, ಮಾವಿನ ಹುಳಿ, ಉಪ್ಪಾಗೆ ಹುಳಿ, ಕವಳಿಕಾಯಿ ಹುಳಿ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಪಶ್ಚಿಮ ಘಟ್ಟದ ಮಲೆನಾಡಿನಲ್ಲಿ ಹೆಚ್ಚು ಬಳಕೆ ಮಾಡುವ ಸಂಪ್ರದಾಯಿಕ ಹುಳಿಗಳಾಗಿದೆ.
  ಕೊಡಗಿನ ಪುನರ್ಪುಳಿ ಹುಳಿ ಅಲ್ಲಿನ ಸ್ಥಳೀಯ ಸಿಗ್ನೇಚರ್ ಪುಡ್ ಪಂದಿ ಕರಿಯಲ್ಲಿ ಬಳಸುವುದರಿಂದ ಅಲ್ಲಿನ ಪುನರ್ಪುಳಿಯ ಸಾಸ್ ಗೆ ದೇಶ ವಿದೇಶಗಳಲ್ಲಿ ಬೇಡಿಕೆ ಬಂದಿದೆ.
   ಸಾಮಾನ್ಯವಾಗಿ ಬಯಲು ಸೀಮೆಯ ಉಷ್ಣ ಪ್ರದೇಶದ ಹುಣಸೇ ಹಣ್ಣು ಹೆಚ್ಚು ಬಳಕೆಗೆ ಸುಲಭವಾಗಿ ದೊರೆಯುವ ಹುಳಿ ಆಗಿದೆ.
  ಆದುನಿಕ ಪಾಕ ವಿಧಾನಗಳಲ್ಲಿ ಟೊಮೊಟಾ, ವಿನಿಗರ್ ಬಳಕೆಯಿಂದ ಸಂಪ್ರದಾಯಿಕ ಹುಳಿಗಳ ಬಳಕೆ ತುಂಬಾ ಕಡಿಮೆ ಆಗಿದೆ.
   ಮಲೆನಾಡಿನಲ್ಲಿ ಯಥೇಚವಾಗಿ ನೈಸರ್ಗಿಕವಾಗಿ ಬೆಳೆಯುತ್ತಿದ್ದ ಮಾವಿನಕಾಯಿ ಸಿಪ್ಪೆ ತೆಗೆದು ಉದ್ದದ ಹೋಳುಗಳನ್ನು ಒಣಗಿಸಿ ವರ್ಷ ಪೂರ್ತಿ ಅಡುಗೆಗೆ ಬಳಸುತ್ತಿದ್ದರು ಇದೇ ರೀತಿ ಉಪ್ಪಾಗೆ, ಮುರುಗನ ಹುಳಿ ಮತ್ತು ವಾಟೆ ಹುಳಿಗಳು ಬಳಸುತ್ತಿದ್ದ ಕಾಲ ಈಗ ಇಲ್ಲ.
   ನಾನು ಪ್ರತಿ ವರ್ಷ ಸ್ವಲ್ಪ ವಾಟೆ ಹುಳಿ ಖರೀದಿಸುತ್ತೇನೆ ಆದರೆ ವಾಟೆ ಹಣ್ಣಿನ ಮರಗಳು ನಮ್ಮ ಭಾಗದಲ್ಲಿ ಅತಿ ವಿರಳವಾಗಿದೆ ಕೆಲವೆ ಕೆಲವರ ಮನೆಗಳಲ್ಲಿ ಇದೆ ಆದರೂ ವೇಗದ ಜೀವನ ಶೈಲಿಯಲ್ಲಿ ವಾಟೆ ಕಾಯಿ ಸ೦ಗ್ರಹಿಸಿ ತೆಳುವಾಗಿ ಹೋಳಿನ ಬಾಗಗಳಾಗಿ ಕತ್ತರಿಸಿ ಅದರ ಬೀಜಗಳನ್ನು ತೆಗೆದು, ಉಪ್ಪಿನ ನೀರಲ್ಲಿ ಮುಳುಗಿಸಿ ಅನೇಕ ದಿನ ಸೂರ್ಯನ ಬಿಸಿಲಲ್ಲಿ ಒಣಗಿಸುವ ವ್ಯವದಾನ ಇರುವುದಿಲ್ಲ ಅಥವ ಹೆಚ್ಚು ಮಾನವ ದಿನದ ಶ್ರಮದ ಲೆಖ್ಖದಿಂದ ಇದು ದುಭಾರಿ ಆಗುವುದೂ ಒಂದು ಕಾರಣವಾಗಿರಬಹುದು.
  ವಾಟೆ ಹುಳಿಯಲ್ಲಿ ಅನೇಕ ಆರೋಗ್ಯ ಸಂಬಂದಿ ಔಷದದ ಗುಣವಿದೆ, ಕಾಳು ಮೆಣಸು ಮತ್ತು ವಾಟೆ ಹುಳಿ ಶೀಥ ಕೆಮ್ಮು ನಿವಾರಕವಾಗಿ ಬಳಸುತ್ತಾರೆ.
   ವಾಟೆ ಹುಳಿಗೆ ಮಂಗನ ಹಣ್ಣು ಎಂದೇ ಕರೆಯುವ ವಾಡಿಕೆ ಇದೆ ಕಾರಣ ಇದು ಮಂಗಗಳಿಗೆ ಅತ್ಯಂತ ಪ್ರಿಯವಾದ ಹಣ್ಣು, ಅರಣ್ಯ ಇಲಾಖೆ ಮತ್ತು ಕೃಷಿಕರು ಹೆಚ್ಚು ಹೆಚ್ಚು ವಾಟೆ ಮರಗಳನ್ನು ಬೆಳೆಸುವ ಮೂಲಕ ಮ೦ಗಗಳು ಕೃಷಿ ಪಸಲು ಲೂಟಿ ಮಾಡುವುದನ್ನು ತಡೆಯಲು ಸಾದ್ಯವಾ? ಪರಿಣಿತರು ಈ ಬಗ್ಗೆ ಚಿಂತಿಸಬೇಕಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...