Skip to main content

Blog number 1751. ನನ್ನ ನಿತ್ಯ ವಾಕಿಂಗ್ ಅನುಭವದ ಟಿಪ್ಸ್ ಗಳು.

https://youtube.com/shorts/swtbkP_Yebs?feature=shared

#ನಿತ್ಯ_ವಾಕಿಂಗ್_ನನ್ನ_ಅನುಭವದ_ಟಿಪ್ಸ್

#ಚೌತಿಹಬ್ಬದ_ಮರುದಿನ

#ಬೆಳಿಗ್ಗೆಯೇ_ತುಂತುರು_ಮಳೆ

#ನಾನು_ಮತ್ತು_ನನ್ನ_ಪ್ರೀತಿಯ_ಶಂಭೂರಾಮನ_ವಾಕಿಂಗ್

#ನಮ್ಮಿಬ್ಬರ_ಬೆಳಗಿನ_ಜಗತ್ತು.


    ಬೆಳಗಿನ ಒಂದು ಗಂಟೆಯ ನಡಿಗೆ (ವಾಕಿಂಗ್ ) ನಮ್ಮ ದೇಹವನ್ನು ಬಿಪಿ ಶುಗರ್ ನಿಂದ ನಿಯಂತ್ರಣದಲ್ಲಿಡುವ ಜೊತೆ ಸ್ಥೂಲ ಕಾಯ ನಿವಾರಣೆಗೆ ತುಂಬಾ ಅನುಕೂಲಕರ ಆದರೆ ಬೆಳಿಗ್ಗೆ ಎದ್ದು ವಾಕಿಂಗ್ ಮಾಡಲು ನಮ್ಮ ಮನಸ್ಸು ಮಾತ್ರ ಕುಂಟು ನೆಪ ಹೇಳುವುದರಿಂದ ಅನೇಕರು ಶುರು ಮಾಡುವ ವಾಕಿಂಗ್ ಸ್ವಲ್ಪ ದಿನದಲ್ಲಿ ನಿಲ್ಲಿಸಿ ಬಿಡುತ್ತಾರೆ.
 ಮೊದಲ ದಿನವೇ ಒಂದು ಗಂಟೆ ವಾಕಿಂಗ್ ಯಾವ ಕಾರಣಕ್ಕೂ ಮಾಡ ಬೇಡಿ, 5 ನಿಮಿಷದ ವಾಕಿಂಗ್ ಪ್ರಾರಂಬಿಸಿ ಪ್ರತಿ ಹತ್ತು ದಿನಕ್ಕೆ ದ್ವಿಗುಣ ಮಾಡುತ್ತಾ ಹೋದರೆ ಒಂದು ಗಂಟೆ ವಾಕಿಂಗ್ ಸಾಮರ್ಥ್ಯಕ್ಕೆ ದೇಹ ತಲುಪುತ್ತದೆ ಮತ್ತು ನಿರಂತರ ವಾಕಿಂಗ್ ಮಾಡಲು ಮನಸ್ಸು ದೇಹ ತಯಾರಾಗಿರುತ್ತದೆ.
   ಬೆಳಗಿನ ಮತ್ತು ಸಂಜೆಯ ವಾಕಿಂಗ್ ನಲ್ಲಿ ನನ್ನ ಆಯ್ಕೆ ಬೆಳಗಿನದ್ದು ಇದಕ್ಕಾಗಿ ಸಮಯ ಹೊಂದಿಸುವುದು ಸುಲಭ ನಮ್ಮ ಕೆಲಸ ವ್ಯವಹಾರಗಳಿಗೆ ಬೇಗ ಹೋಗ ಬೇಕಾದರೆ ಒಂದು ಗಂಟೆ ಬೇಗ ಎದ್ದರಾಯಿತು.
  ವಾಕಿಂಗ್ ಮಾಡಲು ರಸ್ತೆ ಆಯ್ಕೆ ಮಾಡಬೇಡಿ ಈಗಿನ ವೇಗದ ವಾಹನಗಳಿಂದ ಅನೇಕ ಪಾದಚಾರಿಗಳು ಅಪಘಾತ ಸಾವುನೋವು ಅನುಭವಿಸಿದ್ದಾರೆ.
   ವಾಕಿಂಗ್ ಮಾಡಲು ನಿಮ್ಮ ಮನೆಯ ಹತ್ತು ಹೆಜ್ಜೆಯ ಅಂಗಳ ಸಾಕು, ಅದಕ್ಕಾಗಿ ದುಭಾರಿ ಟ್ರಾಕಿಂಗ್ ಸೂಟ್ ಬೂಟು ಬೇಕೇ ಬೇಕು ಅಂತೇನಿಲ್ಲ ನಿಮ್ಮ ನಿತ್ಯದ ಉಡುಗೆ ಜೊತೆ ಕನಿಷ್ಟ ದರದ ಕ್ಯಾನ್ವಾಸ್ ಶೂ ಸಾಕು. (ಮದುಮೇಹಿಗಳಿಗೆ ಕ್ಯಾನ್ವಾಸ್ ಶೂ ಕಡ್ಡಾಯ).
   ನೀವು ಪ್ರಾಣಿ ಪ್ರಿಯರಾಗಿದ್ದರೆ ನಿಮ್ಮ ಸಾಕು ನಾಯಿ ನಿಮ್ಮ ಜೊತೆ ಇರಲಿ ಅದು ನಿಮ್ಮ ಒಂದು ಗಂಟೆಯ ವಾಕಿಂಗ್ ಆಯಾಸವನ್ನು ಅವರ ಒಡನಾಟ ನಿರಾಯಾಸ ಮಾಡುತ್ತದೆ.
  ನಿತ್ಯ ವಾಕಿಂಗ್ ಮಾಡುವ ನಿಮ್ಮ ಮನೆ ಅಂಗಳದ ದಾರಿ ಇಕ್ಕೆಲದಲ್ಲಿ ಹೂವಿನ ಕುಂಡಗಳನ್ನು ಇಟ್ಟು ಅವುಗಳ ನಿತ್ಯ ನಿರ್ವಹಣೆ ನೀವೇ ಮಾಡಿ ಇದು ವಾಕಿಂಗ್ ಜೊತೆ ಸುಂದರ ಅಂಗಳ ನಮಗೆ ಅರಿವಿಲ್ಲದೇ ತಯಾರಾಗಿ ನಮ್ಮ ನಡಿಗೆಯ ಕಂಪನದ ಜೊತೆ ಸಂವಹನ ಮಾಡುತ್ತದೆ.
   ನಾನು ನನ್ನ ನಿತ್ಯದ ಜೊತೆಗಾರ ಶಂಭೂರಾಮನ ಜೊತೆ ನನ್ನ ಮನೆ ಹಿಂಬಾಗ ಮತ್ತು ನಮ್ಮ ಲಾಡ್ಜ್ ನ ಒಂದು ಪಾರ್ಶ್ವದ ಮಧ್ಯದ 90 ಅಡಿ ಉದ್ದದ ಮತ್ತು 10 ಅಡಿ ಅಗಲದ ಜಾಗವನ್ನು ಪೇವರ್ಸ ಅಳವಡಿಸಿ(ಟ್ರೆಡ್ ಮಿಲ್ ಖರೀದಿಸಬೇಕೆಂದಿದ್ದ ಹಣದಿಂದ) ವಾಕಿಂಗ್ ಟ್ರಾಕ್ ಮಾಡಿಕೊಂಡಿದ್ದೇನೆ.
   ಇಕ್ಕೆಲದಲ್ಲಿ ಹೂವಿನ ಪಾಟ್ ಇಟ್ಟು ಚಿಕ್ಕ ಉದ್ಯಾನವನ ಮಾಡಿಕೊಂಡು ಪ್ರಾಥಃ ಕಾಲದ ಒಂದು ಗಂಟೆ ವಾಕಿಂಗ್ ಮಾಡುತ್ತೇನೆ.
   ಇವತ್ತು ಬೆಳಿಗ್ಗೆ ನಮ್ಮಲ್ಲಿ  ತುಂತುರು ಮಳೆ ಆದ್ದರಿಂದ ಹೂವಿನ ಕುಂಡಗಳಿಗೆ ನೀರು ಉಣಿಸುವ ಕೆಲಸಕ್ಕೆ ರಜೆ 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...