Skip to main content

Blog number 1755. ಹೋಟೆಲ್ ತಂದೂರಿ ಒಲೆ ತಯಾರಿಸಿ ಕೊಡುವ ಹಾರನಳ್ಳಿ ತಿಪ್ಪೇಶಪ್ಪ ಕುಂಬಾರ್.

#ಶಿವಮೊಗ್ಗ_ಜಿಲ್ಲೆಯಲ್ಲಿ_ಹೋಟೆಲಗಳಿಗೆ_ತಂದೂರಿ_ಒಲೆ_ತಯಾರಿಸಿ_ಕೊಡುವ_ಎಕ್ಸಪರ್ಟ್.

#ಹಾರನಳ್ಳಿಯ_ತಿಪ್ಪೇಶಪ್ಪ_ಕುಂಬಾರರು.

#ಕಳೆದ_ಹನ್ನೆರುಡು_ವಷ೯ದಿಂದ_ನಾವು_ಇವರ_ಗ್ರಾಹಕರು

#ಸಂಪ್ರದಾಯಿಕ_ಕುಂಬಾರಿಕೆಯಿಂದ_ಆಧುನಿಕತೆಗೆ_ಬದಲಾದ_ಕುಂಬಾರಿಕೆ

#ಒಂದು_ಕಾಲದಲ್ಲಿ_ಹಾರನಳ್ಳಿಯ_ಕುಂಬಾರರು_ತಯಾರಿಸುತ್ತಿದ್ದ_ಗುಡಾಣಗಳು_ಪ್ರಸಿದ್ದಿ_ಪಡೆದಿತ್ತು.


  ನಾನು ಹೋಟೆಲ್ ವೃತ್ತಿಗೆ ಬಂದ ನಂತರ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರ ತಂದೂರಿ ಭಟ್ಟಿಗೆ ಗಿರಾಕಿ ಆಗಿದ್ದೇನೆ, ಒಂದು ಕಾಲದಲ್ಲಿ ಈ ಹಾರನಳ್ಳಿಯ ಬೃಹತ್ ಗಾತ್ರದ ಮಣ್ಣಿನ ಗುಡಾಣಗಳ ತಯಾರಿಗೆ ಪ್ರಸಿದ್ಧಿ ಪಡೆದಿತ್ತು.
  ಇವರು ತಯಾರಿಸಿದ ಮಣ್ಣಿನ ದೊಡ್ಡ ದೊಡ್ಡ ಗುಡಾಣಗಳನ್ನು ಮುಸ್ಲಿಂ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು ಆಗ ಹಣದ ಚಲಾವಣೆ ಕಡಿಮೆ ರೈತರು ಬೆಳೆದ ಬತ್ತ - ರಾಗಿ- ಅಡಿಕೆಗೆ ಕೈ ಬದಲಾಗುತ್ತಿತ್ತು.
   ಈ ಗುಡಾಡಗಳಲ್ಲಿ ರೈತರು ಬೆಳೆದ ಕಾಳು ಕಡಿ ಸಂಗ್ರಹಿಸಿಟ್ಟರೆ ಅದು ಹಾಳಾಗುವುದಿಲ್ಲ.
  ಕಾಲ ಬದಲಾದಂತೆ ಎಲ್ಲವೂ ಬದಲಾಯಿತು ಸಂಪ್ರದಾಯಿಕ ಕುಂಬಾರಿಕೆಗೆ ಬೇಡಿಕೆ ಕಡಿಮೆ ಆಗಿದೆ.
  ಬಸವಣ್ಣರ ಕಾಲದಲ್ಲಿನ ಈ ಹಾರನಳ್ಳಿ ಕುಂಬಾರರು ಲಿಂಗಾಯಿತರು ಈಗ ತಮ್ಮ ಶತಮಾನಗಳ ವಂಶಪಾರಂಪರ್ಯವಾಗಿ ಬಂದ ಕು೦ಬಾರಿಕೆ ತೊರೆದಿದ್ದಾರೆ.
 ಕುಂಬಾರಿಕೆ ವೃತ್ತಿ ಆದುನಿಕ ಕಾಲದ ಅಲ್ಯೂಮಿನಿಯಂ, ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳಿ೦ದ ನಶಿಸಿ ಹೋಗಿದೆ ಇದರಿಂದ ಕುಂಬಾರಿಕೆಯನ್ನ ತಲ ತಲಾoತರದಿಂದ ಮಾಡಿಕೊಂಡು ಬಂದ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರರು ಆ ಕುಟುಂಬದ ವೃತ್ತಿಯ ಕೊನೆಯವರು ಏಕೆಂದರೆ ಇವರ ಮಕ್ಕಳು ಇಂಜಿನಿಯರಿಂಗ್ ಓದುತ್ತಿದ್ದಾರೆ.
  ಒಂದು ದಶಕದ ಹಿಂದೆ ನೀರಿನ ಬಾನಿ ಇತ್ಯಾದಿ ತಯಾರಿಸುತ್ತಿದ್ದ ಇವರ ಕುಟುಂಬ ಖರೀದಿದಾರರಿಲ್ಲದೆ ಕಷ್ಟ ಪಡಬೇಕಾದಾಗ ಇವರು ಹೋಟೆಲ್ ಗಳಿಗೆ ಅವಶ್ಯವಿರುವ ತಂದೂರಿ ರೊಟ್ಟಿ ಮಾಡುವ ತಂದೂರಿ ಒಲೆ ತಯಾರಿಸಲು ಪ್ರಾರಂಬಿಸಿದರಂತೆ ಈಗ ಇವರ ತಂದೂರಿ ಒಲೆ ಶಿವಮೊಗ್ಗ, ಹಾಸನ, ದಾವಣಗೆರೆ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೋಟೆಲ್ ಗಳಲ್ಲಿ ಇದೆ.
  ತಿಪ್ಪೇಶಪ್ಪ ಕುಂಬಾರರು ಗುಣಮಟ್ಟದ ತಂದೂರಿ ಭಟ್ಟಿ ತಯಾರಿಸುವುದರಿಂದ ಇವರು ತಯಾರಿಸುವ ಭಟ್ಟಿಗೆ ಬಹು ಬೇಡಿಕೆ.
  ತಂದೂರಿ ಭಟ್ಟಿ ಉತ್ತಮ ಮಣ್ಣಿನಲ್ಲಿ ತಯಾರಿಸಿ ಇವರೇ ತಂದು ಒಲೆ ಕಟ್ಟಿ ಅಳವಡಿಸಿ ಹೋಗುತ್ತಾರೆ.
  2012 ರಿಂದ ನಮ್ಮ ರೆಸ್ಟೋರೆಂಟ್ಗಳಿಗೆ ಇವರಿಂದ 4 ತ೦ದೂರಿ ಭಟ್ಟಿ ಖರೀದಿಸಿದ್ದೇನೆ, ನಿನ್ನೆ ಒಂದು ಭಟ್ಟಿ ಒಡೆದು ಹೋಗಿತ್ತು ಫೋನ್ ಮಾಡಿದ್ದೆ ಬೆಳಿಗ್ಗೆ 6ಕ್ಕೆ ಬಂದು ಹೊಸ ಭಟ್ಟಿ ಅಳವಡಿಸಿ ಹೊಸದಾಗಿ ಒಲೆ ಬೆಳಿಗ್ಗೆ 9ರ ಒಳಗೆ ನಿಮಿ೯ಸಿದ ಕೈ ಚಳಕ ಅವರದ್ದು.
  ಇವರ ವಿಸಿಟಿಂಗ್ ಕಾಡ್೯ ಕೂಡ ಇಲ್ಲಿದೆ ಅವಶ್ಯವಿದ್ದವರು ಸಂಪಕಿ೯ಸಬಹುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...