Skip to main content

Blog number 1755. ಹೋಟೆಲ್ ತಂದೂರಿ ಒಲೆ ತಯಾರಿಸಿ ಕೊಡುವ ಹಾರನಳ್ಳಿ ತಿಪ್ಪೇಶಪ್ಪ ಕುಂಬಾರ್.

#ಶಿವಮೊಗ್ಗ_ಜಿಲ್ಲೆಯಲ್ಲಿ_ಹೋಟೆಲಗಳಿಗೆ_ತಂದೂರಿ_ಒಲೆ_ತಯಾರಿಸಿ_ಕೊಡುವ_ಎಕ್ಸಪರ್ಟ್.

#ಹಾರನಳ್ಳಿಯ_ತಿಪ್ಪೇಶಪ್ಪ_ಕುಂಬಾರರು.

#ಕಳೆದ_ಹನ್ನೆರುಡು_ವಷ೯ದಿಂದ_ನಾವು_ಇವರ_ಗ್ರಾಹಕರು

#ಸಂಪ್ರದಾಯಿಕ_ಕುಂಬಾರಿಕೆಯಿಂದ_ಆಧುನಿಕತೆಗೆ_ಬದಲಾದ_ಕುಂಬಾರಿಕೆ

#ಒಂದು_ಕಾಲದಲ್ಲಿ_ಹಾರನಳ್ಳಿಯ_ಕುಂಬಾರರು_ತಯಾರಿಸುತ್ತಿದ್ದ_ಗುಡಾಣಗಳು_ಪ್ರಸಿದ್ದಿ_ಪಡೆದಿತ್ತು.


  ನಾನು ಹೋಟೆಲ್ ವೃತ್ತಿಗೆ ಬಂದ ನಂತರ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರ ತಂದೂರಿ ಭಟ್ಟಿಗೆ ಗಿರಾಕಿ ಆಗಿದ್ದೇನೆ, ಒಂದು ಕಾಲದಲ್ಲಿ ಈ ಹಾರನಳ್ಳಿಯ ಬೃಹತ್ ಗಾತ್ರದ ಮಣ್ಣಿನ ಗುಡಾಣಗಳ ತಯಾರಿಗೆ ಪ್ರಸಿದ್ಧಿ ಪಡೆದಿತ್ತು.
  ಇವರು ತಯಾರಿಸಿದ ಮಣ್ಣಿನ ದೊಡ್ಡ ದೊಡ್ಡ ಗುಡಾಣಗಳನ್ನು ಮುಸ್ಲಿಂ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ಮಲೆನಾಡಿನ ಹಳ್ಳಿಗಳಲ್ಲಿ ಮಾರಾಟ ಮಾಡುತ್ತಿದ್ದರು ಆಗ ಹಣದ ಚಲಾವಣೆ ಕಡಿಮೆ ರೈತರು ಬೆಳೆದ ಬತ್ತ - ರಾಗಿ- ಅಡಿಕೆಗೆ ಕೈ ಬದಲಾಗುತ್ತಿತ್ತು.
   ಈ ಗುಡಾಡಗಳಲ್ಲಿ ರೈತರು ಬೆಳೆದ ಕಾಳು ಕಡಿ ಸಂಗ್ರಹಿಸಿಟ್ಟರೆ ಅದು ಹಾಳಾಗುವುದಿಲ್ಲ.
  ಕಾಲ ಬದಲಾದಂತೆ ಎಲ್ಲವೂ ಬದಲಾಯಿತು ಸಂಪ್ರದಾಯಿಕ ಕುಂಬಾರಿಕೆಗೆ ಬೇಡಿಕೆ ಕಡಿಮೆ ಆಗಿದೆ.
  ಬಸವಣ್ಣರ ಕಾಲದಲ್ಲಿನ ಈ ಹಾರನಳ್ಳಿ ಕುಂಬಾರರು ಲಿಂಗಾಯಿತರು ಈಗ ತಮ್ಮ ಶತಮಾನಗಳ ವಂಶಪಾರಂಪರ್ಯವಾಗಿ ಬಂದ ಕು೦ಬಾರಿಕೆ ತೊರೆದಿದ್ದಾರೆ.
 ಕುಂಬಾರಿಕೆ ವೃತ್ತಿ ಆದುನಿಕ ಕಾಲದ ಅಲ್ಯೂಮಿನಿಯಂ, ಸ್ಟೈನ್ ಲೆಸ್ ಸ್ಟೀಲ್ ಪಾತ್ರೆಗಳಿ೦ದ ನಶಿಸಿ ಹೋಗಿದೆ ಇದರಿಂದ ಕುಂಬಾರಿಕೆಯನ್ನ ತಲ ತಲಾoತರದಿಂದ ಮಾಡಿಕೊಂಡು ಬಂದ ಹಾರನಳ್ಳಿಯ ತಿಪ್ಪೇಶಪ್ಪ ಕುಂಬಾರರರು ಆ ಕುಟುಂಬದ ವೃತ್ತಿಯ ಕೊನೆಯವರು ಏಕೆಂದರೆ ಇವರ ಮಕ್ಕಳು ಇಂಜಿನಿಯರಿಂಗ್ ಓದುತ್ತಿದ್ದಾರೆ.
  ಒಂದು ದಶಕದ ಹಿಂದೆ ನೀರಿನ ಬಾನಿ ಇತ್ಯಾದಿ ತಯಾರಿಸುತ್ತಿದ್ದ ಇವರ ಕುಟುಂಬ ಖರೀದಿದಾರರಿಲ್ಲದೆ ಕಷ್ಟ ಪಡಬೇಕಾದಾಗ ಇವರು ಹೋಟೆಲ್ ಗಳಿಗೆ ಅವಶ್ಯವಿರುವ ತಂದೂರಿ ರೊಟ್ಟಿ ಮಾಡುವ ತಂದೂರಿ ಒಲೆ ತಯಾರಿಸಲು ಪ್ರಾರಂಬಿಸಿದರಂತೆ ಈಗ ಇವರ ತಂದೂರಿ ಒಲೆ ಶಿವಮೊಗ್ಗ, ಹಾಸನ, ದಾವಣಗೆರೆ, ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹೋಟೆಲ್ ಗಳಲ್ಲಿ ಇದೆ.
  ತಿಪ್ಪೇಶಪ್ಪ ಕುಂಬಾರರು ಗುಣಮಟ್ಟದ ತಂದೂರಿ ಭಟ್ಟಿ ತಯಾರಿಸುವುದರಿಂದ ಇವರು ತಯಾರಿಸುವ ಭಟ್ಟಿಗೆ ಬಹು ಬೇಡಿಕೆ.
  ತಂದೂರಿ ಭಟ್ಟಿ ಉತ್ತಮ ಮಣ್ಣಿನಲ್ಲಿ ತಯಾರಿಸಿ ಇವರೇ ತಂದು ಒಲೆ ಕಟ್ಟಿ ಅಳವಡಿಸಿ ಹೋಗುತ್ತಾರೆ.
  2012 ರಿಂದ ನಮ್ಮ ರೆಸ್ಟೋರೆಂಟ್ಗಳಿಗೆ ಇವರಿಂದ 4 ತ೦ದೂರಿ ಭಟ್ಟಿ ಖರೀದಿಸಿದ್ದೇನೆ, ನಿನ್ನೆ ಒಂದು ಭಟ್ಟಿ ಒಡೆದು ಹೋಗಿತ್ತು ಫೋನ್ ಮಾಡಿದ್ದೆ ಬೆಳಿಗ್ಗೆ 6ಕ್ಕೆ ಬಂದು ಹೊಸ ಭಟ್ಟಿ ಅಳವಡಿಸಿ ಹೊಸದಾಗಿ ಒಲೆ ಬೆಳಿಗ್ಗೆ 9ರ ಒಳಗೆ ನಿಮಿ೯ಸಿದ ಕೈ ಚಳಕ ಅವರದ್ದು.
  ಇವರ ವಿಸಿಟಿಂಗ್ ಕಾಡ್೯ ಕೂಡ ಇಲ್ಲಿದೆ ಅವಶ್ಯವಿದ್ದವರು ಸಂಪಕಿ೯ಸಬಹುದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ