Skip to main content

Blog number 1735. ಕೊಲ್ಹಾರದಲ್ಲಿ ಮಾರಾಟ ಅಗುವ ಗಟ್ಟಿ ಕೆನೆ ಮೊಸರ ಮಣ್ಣಿನ ಕುಡಿಕೆಗಳಿಗೆ ಬಹು ಬೇಡಿಕೆ ಇದರ ರುಚಿ ಮತ್ತು ಘಮ ವಿಶಿಷ್ಟ.

#ಕೊರ್ತಿ_ಕೊಲ್ಹಾರ_ಮೊಸರು

#ಕೆನೆಮೊಸರು_ಮಣ್ಣಿನ_ಕುಡಿಕೆಗಳಲ್ಲಿ

#ವಿಜಯಪುರ_ಜಿಲ್ಲೆ_ಬಸವನಬಾಗೇವಾಡಿ_ವಿಧಾನಸಭಾ_ಕ್ಷೇತ್ರದ_ಕೊಲ್ಹಾರ

#ಈ_ಮೊಸರು_ಜಗತ್ಪ್ರಸಿದ್ದ_ದೇಶ_ವಿದೇಶಗಳ_ಗಣ್ಯರು_ಇದನ್ನು_ಸವಿದಿದ್ದಾರೆ.

#ನಂದಿನಿ_ಡೈರಿ_ಇದನ್ನು_ಮಾರುಕಟ್ಟಿಗೆ_ಬಿಟ್ಟಿದೆ.

https://youtu.be/mBfGIesUXOM?feature=shared 


  ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂ ನಿರ್ಮಾಣಕ್ಕೆ ಮೊದಲು ಹುಮನಾಬಾದ್ ಹುಬ್ಬಳ್ಳಿ ರಸ್ತೆ ಪಕ್ಕದ ಕೊಲ್ಹಾರ ಊರು ಮುಳುಗಡೆಯಿಂದ ಸ್ಥಳಾಂತರವಾಗಿದೆ ಈಗ ತಾಲ್ಲೂಕು ಕೇಂದ್ರವಾಗಿರುವ ಕೊಲ್ಹಾರದಲ್ಲಿನ ಕೃಷ್ಣ ಮೇಲ್ದಂಡೆ ವೃತ್ತದಲ್ಲಿ ಇಲ್ಲಿನ ಸಿಗ್ನೇಚರ್ ಬ್ರಾಂಡ್ ಕೆನೆ ಮೊಸರು ಮಣ್ಣಿನ ಕುಡಿಕೆಗಳಲ್ಲಿ ಭರಪೂರ ವ್ಯಾಪಾರ ವಹಿವಾಟು ನಡೆಸುತ್ತಿದೆ.
   ಮುಳುಗಡೆ ಆದ ಮೂಲ ಕೊಲ್ಹಾರದಲ್ಲಿ ಅನೇಕ ದಶಕಗಳಿಂದ ಈ ಭಾಗದ ರೈತ ಮಹಿಳೆಯರು ಬುಟ್ಟಿಗಳಲ್ಲಿ ಮೊಸರಿನ ಕುಡಿಕೆಗಳನ್ನು ಜೊಡಿಸಿ ಕೊಂಡು ತಲೆ ಮೇಲೆ ಹೊತ್ತು ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಸಾಗಾಣಿಕೆ ಲಾರಿಗಳ ಡ್ರೈವರ್ ಗಳಿಗೆ ಮಾರಾಟ ಮಾಡಿ ದಿನದ ಸಂಪಾದನೆ ಮಾಡುತ್ತಿದ್ದರು.
  ವಿಜಯನಗರ ಜಿಲ್ಲೆಯ ಬಸವನ ಬಾಗೇವಾಡಿ ವಿಧಾನಸಭಾ ಕ್ಷೇತ್ರದ ಕೊಲ್ಹಾರ ತಾಲ್ಲೂಕು ಕೇಂದ್ರ ಇಲ್ಲಿನ ಸುಮಾರು 3500 ಎಮ್ಮೆಗಳಿಂದ ಅಂದಾಜು 500 ಕುಟುಂಬಗಳು ಈ ಮೊಸರು ಉತ್ಪಾದನೆಯಲ್ಲಿ ತೊಡಗಿದೆ ಇವರಿಗಾಗಿಯೇ ಮಣ್ಣಿನ ಕುಡಿಕೆ ತಯಾರಿಸಿ ಕೊಡುವ ನೂರಾರು ಕುಂಬಾರ ಕುಟುಂಬಗಳು ಇದೆ.
  ಕೃಷ್ಣಾ ನದಿ ತಟದ ಮೇವು ತಿನ್ನುವ ಎಮ್ಮೆಗಳು ನೀಡುವ ಹೆಚ್ಚು ಕೊಬ್ಬಿನ ಅಂಶದ ಹಾಲಿಗೆ ನೀರು ಸೇರಿಸದೆ ಗಟ್ಟಿ ಹಾಲು ಕಟ್ಟಿಗೆ ಒಲೆಯಲ್ಲಿ ಕುದಿಸಿ ಅದನ್ನು ಕೊಂಚ ಬೆಚ್ಚಗೆ ಇರುವಾಗಲೇ ಮೊಸರಿನ ಹೆಪ್ಪಿನ ಹನಿ ಸೇರಿಸಿ ಮಣ್ಣಿನ ಕುಡಿಕೆಗಳಲ್ಲಿ ಹಾಕಿಟ್ಟರೆ ಎರೆಡು ಗಂಟೆಗಳಲ್ಲಿ ಅದು ಗಟ್ಟಿ ಮೊಸರಾಗುತ್ತದೆ.
   ಕೆಲವರು ಈ ಮಣ್ಣಿನ ಕುಡಿಕೆಯಲ್ಲಿ ಹೆಪ್ಪು ಹಾಕಿದ ನಂತರ ಪ್ರತಿ ಮಡಿಕೆಯನ್ನು ಕಟ್ಟಿಗೆ ಒಲೆಯಲ್ಲಿ ಸಣ್ಣ ಬೆಂಕಿಯಲ್ಲಿ ಕೆನೆ ಆಗುವ ತನಕ ಇಟ್ಟು ತೆಗೆಯುತ್ತಾರೆ ಇದರಿಂದ ಗಟ್ಟಿ ಕೆನೆ ಮೊಸರು ಆಗುತ್ತದೆ.
   ಕೊಲ್ಹಾರದ ಗಟ್ಟಿ ಕೆನೆ ಮೊಸರಿನ ರುಚಿ ಮತ್ತು ಘಮ ವಿಶಿಷ್ಟವಾಗಿರಲು ಕಾರಣ ಇಲ್ಲಿನ ಹವಾಮಾನ, ಕೃಷ್ಣಾ ನದಿ ತೀರದ ಮೇವು, ಮೊಸರಿನ ನೀರಿನಂಶ ಹೀರಿ ಗಟ್ಟಿ ಮೊಸರು ಮಾಡುವ ಮಣ್ಣಿನ ಮಡಿಕೆಗಳು ಕಾರಣವಾಗಿದೆ.
   ಈಗ ಪ್ರದೇಶದಲ್ಲಿ ಜಾನುವಾರ ಮೇವುಗಳ ಕೊರತೆ ಹೆಚ್ಚಾಗಿದೆ ಈ ಕಾರಣದಿಂದ ಕ್ರಮೇಣ ಈ ಪ್ರಸಿದ್ಧ ಕೊಲ್ಹಾರದ ಮೊಸರ ಉತ್ಪಾದನೆ ಕಡಿಮೆ ಆಗುತ್ತಿದೆಯಂತೆ.
  ಕೆ.ಎಂ.ಎಫ್ ಕೊಲ್ಹಾರ ಮೊಸರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಿದೆ ಆದರೂ ಈ ಊರಿಗೆ ಬಂದು ಮಣ್ಣಿನ ಮಡಿಕೆಯಲ್ಲಿ ಮಾರಾಟ ಆಗುವ ಗಟ್ಟಿ ಕೆನೆ ಮೊಸರು ಸವಿಯುವ ಮೋಜೇ ಬೇರೆ.
 ಯಾವಾಗಾದರೂ ಈ ಮಾರ್ಗದಲ್ಲಿ ಹುಮನಾಬಾದ್- ಹುಬ್ಬಳ್ಳಿ ರಾ.ಹೆ. 218ರಲ್ಲಿ ಪ್ರಯಾಣಿಸಿದಾಗ ವಿಜಯಪುರ ಜಿಲ್ಲಾ ಕೇಂದ್ರದಿಂದ 40 ಕಿ.ಮಿ.ದೂರದಲ್ಲಿರುವ ಕೊಲ್ಹಾರದಲ್ಲಿನ UKP ವೃತ್ತದಲ್ಲಿ ರೈತರು ಮಾರಾಟ ಮಾಡುವ ಗಟ್ಟಿ ಕೆನೆ ಮೊಸರ ಮಣ್ಣಿನ ಕುಡಿಕೆ ಖರೀದಿಸಿ ರುಚಿ ನೋಡದೆ ಇರಬೇಡಿ.
   ಕಳೆದ ಮಂಗಳವಾರ ವಿಜಯಪುರ ಜಿಲ್ಲೆ ಅಪ್ಜಲ್ಪುರಕ್ಕೆ ಹೋಗಿ ಬರುವಾಗ ಎರೆಡು ಕೊಲ್ಹಾರ ಗಟ್ಟಿ ಕೆನೆ ಮೊಸರು ಸವಿಯುವ ಭಾಗ್ಯ ನನ್ನದಾಗಿತ್ತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...