Skip to main content

Blog number 1728. ಸ್ಥೂಲಕಾಯ ನಿವಾರಣೆಗೆ ಮಿತ ಆಹಾರ ಕೂಡ ಅತಿ ಮುಖ್ಯ, ನನ್ನ ಸ್ವಂತ ಅನುಭವದ ಯಶಸ್ಸಿನ ಕಥೆ ಇಲ್ಲಿದೆ.

#ನನ್ನ_ನಿತ್ಯ_ಉಪಹಾರದ_ತಟ್ಟೆ_ನೋಡಿ.

#ಸ್ಥೂಲಕಾಯ_ನಿವಾರಣೆಗೆ_ಮಿತ_ಆಹಾರ_ಸೇವನೆ

#ನಿತ್ಯ_ವಾಕಿಂಗ್_ನಿರ೦ತರವಾಗಿಡುವಂತೆ_ಮಿತ_ಆಹಾರದ_ಅಭ್ಯಾಸ_ಕೂಡ.

#ನನ್ನ_ಸ್ವಂತ_ಅನುಭವ_ಯಾರಿಗಾದರೂ_ಉಪಯೋಗ_ಆದೀತಾ ....


   ಬದುಕಲಿಕ್ಕಾಗಿ ತಿನ್ನುತ್ತೀಯಾ ಅಥವ ತಿನ್ನಲಿಕ್ಕಾಗಿ ಬದುಕಿತ್ತೀಯ ಎಂಬ ಪ್ರಶ್ನೆ ನನಗೆ ನಾನೆ 140 ಕಿಲೋ ದಾಟಿದ ನನ್ನ ದೇಹದ ತೂಕದಿಂದ ತತ್ತರಿಸಿ ಪ್ರಶ್ನೆ ಮಾಡಿಕೊಳ್ಳುವ ಸಂದರ್ಭ 2019 ರಲ್ಲಿ ಬಂದಿತ್ತು ಈ ಪ್ರಶ್ನೆ ಕೋಳಿಯಿಂದ ಮೊಟ್ಟೆಯಾ ಅಥವ ಮೊಟ್ಟೆಯಿಂದ ಕೋಳಿನಾ ಅಂತ ಪ್ರಶ್ನಿಸಿದ ಹಾಗೆ.
   ಬಾಲ್ಯದಲ್ಲಿ ಯೌವ್ವನದಲ್ಲಿ ಎಷ್ಟು ತಿಂದರೂ ದೇಹ ಅದನ್ನು ಶಕ್ತಿಯಾಗಿ ಪರಿವರ್ತಿಸುತ್ತದೆ ಮತ್ತು ವಯಸ್ಸಿಗೆ ತಕ್ಕ ಹಾಗೆ ನಾವೂ ಕ್ರಿಯಾಶೀಲರಾಗಿರುತ್ತೇವೆ ಆದರೆ 40 ದಾಟಿದಂತೆ ಕ್ರಿಯಾಶೀಲತೆ ಕಡಿಮೆ ಆದಂತೆ ಸೇವಿಸುವ ಹೆಚ್ಚುವರಿ ಆಹಾರವನ್ನು ದೇಹ ಕೊಬ್ಬಾಗಿ ಪರಿವರ್ತಿಸಿ ಸ್ಥೂಲಕಾಯರಾಗಿಸುತ್ತದೆ.
  ಸ್ತ್ರೀಯರಲ್ಲಿ ಹಾರ್ಮೋನ್ ವೈಪರಿತ್ಯದಿಂದ ಕಡಿಮೆ ಆಹಾರ ತಿಂದರೂ ಸ್ಥೂಲಕಾಯರಾಗುತ್ತಾರೆ.
   ನಾನು ಜೀವನದಲ್ಲಿ ಆ ಸಮಯದಲ್ಲಿ ನಿರಾಸಕ್ತಿ ಹೊಂದಿದ್ದೆ ಪುನಃ ಜೀವನೋತ್ಸವ ಪಡೆದದ್ದು ನನ್ನ ನಿತ್ಯ ಜೀವನ ಶೈಲಿ ಬದಲಾಯಿಸಿಕೊಂಡ ನಂತರವೇ.
   ಹತ್ತು ಹೆಜ್ಜೆ ನಡೆಯಲಾರದವನು ಈಗ ದಿನ ಒಂದು ಗಂಟೆ ವಾಕಿಂಗ್ ಸಲೀಸಾಗಿ ಮಾಡುವುದು, ರಾತ್ರಿ ಊಟ ನಿಲ್ಲಿಸಿ ಮುಂದಿನ ಶಿವರಾತ್ರಿಗೆ ನಾಲ್ಕು ವರ್ಷ ಆಗಲಿದೆ ಮತ್ತು ನಿತ್ಯ ಬೆಳಗಿನ ಉಪಹಾರವೂ ತೃಜಿಸಬೇಕೆಂದಿದ್ದೆ ಆದರೆ ನಮ್ಮ ಮಲ್ಲಿಕಾ ವೆಜ್ ರೆಸ್ಟೋರೆಂಟ್ ನ ಉಪಹಾರದ ರುಚಿ ಪರಿಶೀಲಿಸುವ ನನ್ನ ಕೆಲಸ ತಪ್ಪಿಸುವಂತಿಲ್ಲವಾದ್ದರಿಂದ ನಾನು ಅನಿವಾರ್ಯವಾಗಿ ನನ್ನ ಉಪಹಾರದ ತಟ್ಟೆಯಲ್ಲಿ ಅರ್ಧ ಇಡ್ಲಿ, ಅರ್ದ ವಡಾ, ಬಿಸಿಬೇಳೆ ಬಾತ್, ಪಲಾವ್, ಕೇಸರಿ ಬಾತ್ ಉಪ್ಪಿಟ್ಟು ತಲಾ ಒಂದು ಟೇಬಲ್ ಸ್ಪೂನ್ ಗೆ ನಿಯಂತ್ರಿಸಿ ಎರೆಡು ವರ್ಷ ಆಯಿತು.
   ಮಧ್ಯಾಹ್ನ ಊಟ ನನ್ನಿಷ್ಟದಂತೆ ಬೇಕಾದಷ್ಟು ಅಂತ ನಿರ್ಧರಿಸಿದ್ದೆ ಆದರೆ ರಾತ್ರಿ ಊಟ ತ್ಯಜಿಸಿದ್ದರಿಂದ ಬೆಳಗಿನ ಉಪಹಾರ ನಿಯಂತ್ರಿಸಿದ್ದರಿಂದ ಮಧ್ಯಾಹ್ನದ ಊಟ ಹೆಚ್ಚು ಮಾಡಲು ಸಾದ್ಯವಿಲ್ಲ ದೇಹ ಅದಾಗಿಯೇ ಮಿತಿಗೊಳಿಸಿದೆ.
  ಇದೆಲ್ಲ ಒಂದೇ ದಿನದಲ್ಲಿ ಅಳವಡಿಸಲು ಸಾಧ್ಯವಿಲ್ಲ 5 ನಿಮಿಷದ ವಾಕಿಂಗ್ ಅನೇಕ ದಿನ ಅಭ್ಯಾಸ ಮಾಡಿ ನಂತರ ಅದೇ ರೀತಿ 10 ನಿಮಿಷ ಅದನ್ನೂ ತಿಂಗಳುಗಟ್ಟಲೆ ಮಾಡಿ ಕ್ರಮೇಣ ಒಂದು ಗಂಟೆ ವಾಕಿಂಗ್ ಗೆ ಬಂದಂತೆ ಈ ಆಹಾರ ಪದ್ದತಿ ನಿಯಂತ್ರಣ ಕೂಡ ಹಂತ ಹಂತವಾಗಿ ತಲುಪಿದ್ದೇನೆ.
   ಅನೇಕರು ಮೊದಲ ದಿನವೇ ಒಂದು ಗಂಟೆ ವಾಕಿಂಗ್ ಮಾಡುತ್ತಾರೆ ದಿನ ಪೂರ್ತಿ ಉಪವಾಸ ಮಾಡುತ್ತಾರೆ ಮರುದಿನ ಅವರಿಗೆ ಮನಸ್ಸಿದ್ದರೂ ದೇಹ ಅವರಿಗೆ ಏಳದಂತೆ ಮಲಗಿಸಿ ಬಿಡುತ್ತದೆ ನಂತರ ಸ್ಥೂಲಕಾಯ ನಿವಾರಣೆಯ ಸಂಕಲ್ಪ ಕಳೆದು ಹೋಗುತ್ತದೆ.
  ಇದನ್ನು ಒಂದು ತಪಸ್ಸಿನಂತೆ ಅಭ್ಯಾಸ ಮಾಡಿದರೆ ಖಂಡಿತಾ ಸ್ಥೂಲಕಾಯ ನಿವಾರಣೆ ಸಾದ್ಯವಿದೆ ಇದಕ್ಕೆ ನಾನೇ ಉದಾಹರಣೆ 140 ಕಿಲೋದಿಂದ 107 ಕಿಲೋಗೆ 3 ವರ್ಷದಲ್ಲಿ ಇಳಿಸಿದ್ದೇನೆ.
   ಯಾವ ಆಹಾರವೂ ತ್ಯಜಿಸದೆ ಇದರಿಂದ ಗೊರಕೆ - ಮದುಮೇಹ - ರಕ್ತದ ಒತ್ತಡ ನನಗೆ ಗೊತ್ತಿಲ್ಲದೆ ನಿಯಂತ್ರಣವಾಗಿದ್ದು ಬೋನಸ್.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...