Skip to main content

Blog number 1764. ಹೆಂಗಿದ್ದ ಹೆಂಗಾದ ಗೊತ್ತಾ ನಮ್ಮ ಶಂಭೂರಾಮ ಎನ್ನೋ ಚಿನ್ನಾರಿ ಮುತ್ತಾ.

https://youtube.com/shorts/tvT9DfFTKXQ?feature=shared 

#ಹೆಂಗಿದ್ದ_ಹೆಂಗಾದ_ಗೊತ್ತಾ

#ನಮ್ಮ_ಚಿನ್ನಾರಿ_ಮುತ್ತಾ

#ಶಂಭೂರಾಮ 


  2021ರ ಸೆಪ್ಟೆಂಬರ್ 26 ರಾತ್ರಿ ಬೆಂಗಳೂರಿಂದ ನನ್ನ ಮನೆ ತಲುಪಿದಾಗ ನನ್ನ ಅತ್ಯಾಸೆ ಆಗಿದ್ದ ರಾಟ್ ವೀಲರ್ ಸಾಕುವುದು ಈಡೇರಿತ್ತು,ಇವನಿಗೆ ಒಂದು ತಿಂಗಳು ನಂತರ ಆರು ತಿಂಗಳು ಮಗುವಿನಂತೆ ಆರೈಕೆ ಮಾಡಿದ್ದು ನನ್ನ ಮಗ, ಮದ್ಯ ರಾತ್ರಿ ಕೂಡ ಎದ್ದು ಅವನ ಕೇಜ್ ಕ್ಲೀನ್ ಮಾಡಿ ಒರೆಸಿ ಇವನಿಗೆ ಮಲಗಿಸಬೇಕಿತ್ತು.
  ನಂತರದ ದಿನಗಳಲ್ಲಿ ಪ್ರಾಥಮಿಕ ಪಾಠ ಕಲಿಸಲು ತುಂಬಾ ತಾಳ್ಮೆ ಬೇಕು, ಸ್ಲೋ ಪೀಡಿಂಗ್ ತರಬೇತಿ ಆಗಬೇಕು ಹೀಗೆ ಸಾಕು ನಾಯಿಯ ತರಬೇತಿಯ ಮಾರ್ಗದರ್ಶಕವಾದ ವಿಡಿಯೋಗಳು Youtube ನಲ್ಲಿದೆ.
   ಪಟ್ಟಣಗಳಲ್ಲಿ ಇದಕ್ಕಾಗಿ ತರಬೇತಿ ನೀಡುವವರೇ ಇದ್ದಾರೆ ಆದರೆ ಹಳ್ಳಿಗಳಲ್ಲಿ ನಾವೇ ತರಬೇತುದಾರರು ಮತ್ತು ನಮಗೆ Youtube ಒಂದೇ ಮಾರ್ಗದರ್ಶಕ.
  ಅದರಲ್ಲೂ ರಾಟ್ ವೀಲರ್ ಸಾಕುವ ಬಗ್ಗೆ ಅನೇಕ ರೀತಿಯ ಭಯ ಹುಟ್ಟುವಂತ ಸತ್ಯ ಕಥೆಗಳು ಸಾಮಾಜಿಕ ಜಾಲ ತಾಣದಲ್ಲಿತ್ತು ಅಷ್ಟೇ ಅಲ್ಲ ನಮ್ಮ ಮನೆಗೆ ನಿತ್ಯ ನಂದಿನಿ ಹಾಲು ಹಾಕುವವರು ಅಡಾಪ್ಟ್ ಮಾಡಿಕೊಂಡಿದ್ದ ರಾಟ್ ವೀಲರ್ ಅವರ ಪಕ್ಕದ ಮನೆಯ ಎಮ್ಮೆಕರುವನ್ನೆ ಸಿಗಿದು ಹಾಕಿದ್ದು ಅವರ ಬಾಯಲ್ಲೇ ಕೇಳಿದ್ದೆ.
   ರಾಟ್ ವೀಲರ್ ಸಾಕಿದವರ ಮನೆ ಗೆಸ್ಟ್ ಪ್ರೆಂಡ್ಲಿ ಮನೆ ಆಗುವುದಿಲ್ಲ ಎಂಬುದು ಗೊತ್ತಿತ್ತು ಆದರೆ ಯಾರು ಏನಾದರೂ ಹೇಳಲಿ ಈ ತಳಿ ಸಾಕಲೇ ಬೇಕೆಂದು ತೀರ್ಮಾನ ಮಾಡಿ ಆಗಿತ್ತು.
  ಇವತ್ತಿಗೆ ಶಂಭೂ ರಾಮನಿಗೆ 30 ತಿಂಗಳು (ಎರೆಡೂವರೆ ವರ್ಷ) ತುಂಬಿದೆ ಮನೆಯವರಲ್ಲಿ ನಮ್ಮವರಲ್ಲೇ ಒಬ್ಬನಾಗಿದ್ದಾನೆ, ಮಗ ನೀಡಿದ ತರಬೇತಿ ಅತ್ಯುತ್ತಮ ಆಗಿದೆ, ಅದರಂತೆ ನಮಗೆ ಯಾವುದೇ ಕಿರಿ ಕಿರಿ - ಹಪಾಹಪಿ - ತುಂಟಾಟಗಳಿಲ್ಲದೆ ಪ್ರೌಡನಾಗಿ ಜೊತೆಗಿದ್ದಾನೆ.
  ಮನೆಯವರನ್ನ ಬಿಟ್ಟು ಬೇರೆಯವರು ಅವನಿಗೆ ಆಗಿಬರುವುದಿಲ್ಲ ಅದು ಅವನ ಹುಟ್ಟು ಗುಣ, ಯಾವ ಕ್ಷಣದಲ್ಲೂ ಅಪರಿಚಿತರಿಗೆ ಅಪಾಯ ಎಂದು ವೈದ್ಯರು ಎಚ್ಚರಿಸುವುದರಿಂದ ಮನೆಯ ಗೇಟ್ ಯಾವಾಗಲೂ ಲಾಕ್ ಆಗಿ ಇಡುತ್ತೇನೆ, ನನ್ನ ಬೇಟಿಗೆ ಬಂದವರಿಗೆ ಹೇಗೂ ನನ್ನ ಕಛೇರಿ ಇದ್ದೇ ಇದೆ ಜೊತೆಗೆ ಮನೆಗೆ ಕರೆಯುವುದಿಲ್ಲ ಅನ್ನುವ ಆಪಾದನೆ ಗೆಳೆಯರ ಬಂದುಗಳ ವಲಯದಲ್ಲಿ ಹಿಂದಿನಿಂದ  ಪರೋಕ್ಷವಾಗಿ ಪಿಸು ಮಾತೂ ಕೂಡ ನನ್ನ ಪ್ರೀತಿಯ ಶಂಭೂರಾಮನ ಬಳವಳಿ ಆಗಿದೆ.
  ಮುಂದಿನ ವರ್ಷ ಶಂಭೂರಾಮನ ಕುಲದ ಗೆಳೆಯ ಅಥವ ಗೆಳತಿ ಶಂಭೂರಮನ ಜೊತೆ ಮಾಡುವ ಯೋಜನೆ ಮಗನದ್ದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...