Skip to main content

Blog number 1743. ಪ್ರಾಥಮಿಕ ಶಾಲಾ ಸಹಪಾಠಿ ಎಡ್ಡಿ ಆಲಿಯಾಸ್ ಎಡ್ವಿಕ್ ಡಿಕಾಸ್ಟಾ .

#ಪ್ರಾಥಮಿಕ_ಶಾಲಾ_ಸಹಪಾಠಿ_ಎಡ್ವಿಕ್_ಡಿಕಾಸ್ಟಾ

#ಎಡ್ಡಿ_ಎಂಬ_ಸ೦ಕ್ಷಿಪ್ತ_ನಾಮದಿಂದ_ಜನಪ್ರಿಯ.

#ದೈರ್ಯವಂತ_ಗೆಳೆಯ

#ಸೈಕಲ್_ಅಪಘಾತದಲ್ಲಿ_ಒಂದು_ದೃಷ್ಟಿ_ಕಳೆದುಕೊಂಡ_ನತದೃಷ್ಟ.

#ಒಂದೇ_ಕಣ್ನಿನಲ್ಲಿ_ವಿಷಪೂರಿತ_ಹಾವು_ಹಿಡಿದು_ಕಾಡಿಗೆ_ಬಿಡುತ್ತಾನೆ.

https://youtu.be/NrTliYgFcCw?feature=shared 


   ಎಡ್ಡಿ ಅಲಿಯಾಸ್ ಎಡ್ವಿಕ್ ಡಿಕಾಸ್ಟಾ ನನ್ನ ಬಾಲ್ಯದ ಗೆಳೆಯ ,ಬಾಲ್ಯದಲ್ಲೇ ಸಾಹಸಿ, ಆಟದಲ್ಲಿ ಮೊದಲಿಗ, ಚಿಕ್ಕಂದಿನಲ್ಲೇ ಎಡ್ಡಿಗೆ ಪ್ರಕೃತಿ ಜೊತೆ ಸಂಬಂದ ಜಾಸ್ತಿ ಜೊತೆಗೆ ದೈಯ೯ವಂತ ಕೂಡ,ಒಬ್ಬಂಟಿಯಾಗಿ ಕೃಷಿ ಜಮೀನಿನ ಕೊಟ್ಟಿಗೆ ಮನೆಯಲ್ಲಿಯೇ ಬಾಲ್ಯದಲ್ಲಿ ವಾಸವಿರುತ್ತಿದ್ದ.
   ಇವನ ತಂದೆ ಕೆ.ಪಿ.ಸಿ.ಯಲ್ಲಿ ಮ್ಯಾನೇಜರ್ ಆಗಿ ಜೋಗ್ ಫಾಲ್ಸ್ ಮತ್ತು ಚಕ್ರಾದಲ್ಲಿ ಉದ್ಯೋಗದಲ್ಲಿ ಇದ್ದರು, ಎಲ್ಲಾ ಮಕ್ಕಳು ವಿದ್ಯಾಬ್ಯಾಸದಲ್ಲಿ ತೊಡಗಿದ್ದರಿಂದ ಮನೆಯಿಂದ ದೂರದ ಬಸವನಕೊಪ್ಪದ ಇವರ ಜಮೀನಿನ ಜವಾಬ್ದಾರಿ ಬಾಲಕ ಎಡ್ಡಿ ಸ್ವಯಂ ತೆಗೆದು ಕೊಂಡು 4ನೇ ತರಗತಿಗೆ ಶಾಲೆಗೆ ಟಾಟಾ ಹೇಳಿ ಬಿಟ್ಟಿದ್ದರಿಂದ ಎಡ್ಡಿ ಸಂಪರ್ಕ ಕಡಿಮೆ.
  ಮನೆಯಿಂದ ಕೃಷಿ ಜಮೀನಿಗೆ ಸೈಕಲ್ ಮೇಲೆ ವೇಗವಾಗಿ ಹೋಗಿ ಬರುವ ಹವ್ಯಾಸದಲ್ಲಿ ಎಡ್ಡಿ ಕತ್ತಲಲ್ಲಿ ಎದುರಿನಿಂದ ಬಂದ ಸೈಕಲ್ ಗೆ ನೇರವಾಗಿ ಎದುರಾಬದುರಾ ಡಿಕ್ಕಿ ಮಾಡಿಕೊಂಡು ಒಂದು ಕಣ್ಣು ಕಳೆದುಕೊಂಡಿರುವುದು ದುರಂತ.
   ಒಂದು ಕಣ್ಣಿನಲ್ಲೇ ಎಡ್ಡಿ ವಿಷ ಪೂರಿತ ಹಾವು ಹಿಡಿದು ಕಾಡಿಗೆ ಬಿಡುವುದು ಕೂಡ ವಿಶೇಷವೇ ಆಗಿದೆ.
   ಹೆಚ್ಚಾಗಿ ತನ್ನ ಕೃಷಿ ಜಮೀನಿನ ಗದ್ದೆಮನೆಯಲ್ಲೇ ಒಂಟಿಯಾಗಿ ವಾಸವಿರುತ್ತಿದ್ದ ಎಡ್ಡಿ ಯಾವುದೊ ನಿರಾಸೆಯಿಂದ ವಿಷ ಕುಡಿದು ಬಿಟ್ಟಿದ್ದ ಅಲ್ಲಿ ಯಾರೂ ಇರುತ್ತಿರಲಿಲ್ಲ. ವಿಷದ ಪರಿಣಾಮವಾಗಿ ವಿಪರೀತ ವಾಂತಿ ಮಾಡುತ್ತಾ ನಿತ್ರಾಣವಾಗಿ ಪ್ರಜ್ಞೆ ತಪ್ಪಿದಾಗ ಅದೃಷ್ಟವಶಾತ್ ಅಲ್ಲಿಗೆ ಬಂದಿದ್ದ ಹೊಳೆ ಬಸಣ್ಣ ಎಂಬ ದಲಿತ ಕಲಾವಿದರು ಎಡ್ಡಿಯ ಮನೆಯ ಎತ್ತಿನಗಾಡಿಯಲ್ಲೇ ಎಡ್ಡಿಯನ್ನು ಹಾಕಿಕೊಂಡು ಆನಂದಪುರಂ ಆಸ್ಪತ್ರೆಗೆ ದಾಖಲು ಮಾಡಿದ್ದರು, ಎಡ್ಡಿ ಬದುಕುವುದಿಲ್ಲ ಎಂಬ ಸುದ್ದಿ ಆಗಿತ್ತು ಆದರೆ ಅಚಾನಕ್ ಆಗಿ ಎಡ್ಡಿ ಪುನರ್ಜನ್ಮ ಪಡೆದಿದ್ದ.
  ನಮ್ಮ ಊರಿನ ಸಮೀಪದ ಗೇರುಬೀಸಿನಲ್ಲಿ ಎಡ್ಡಿ ತನ್ನ ಸ್ವಂತ ಜಮೀನಲ್ಲಿ ಅಡಿಕೆ ಇತ್ಯಾದಿ ಕೃಷಿ ಮಾಡಿಕೊಂಡು ಸಂಸಾರದ ಜೊತೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ.
  ಈ ಜಮೀನು ನಾನು ರಾಜಕೀಯದಲ್ಲಿದ್ದಾಗ ರಾಜ್ಯದಲ್ಲೇ ಮೊದಲ ಬಗರ್ ಹುಕುಂ ಜಮೀನು ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಮಂಜೂರು ಮಾಡಿದ ದಾಖಲೆ ಮಾಡುವ ಹುಮ್ಮಸ್ಸಿನಲ್ಲಿದ್ದಾಗ ಎಡ್ಡಿಗೂ ಮೂರುವರೆ ಎಕರೆ ಜಮೀನು ಮಂಜೂರು ಮಾಡಿಸಿದ್ದನ್ನು ಎಡ್ಡಿ ಯಾವಾಗಲೂ ಸ್ಮರಿಸುತ್ತಾನೆ.
   ಕರೆಂಟು ನೀರು ದಾರಿ ಇಲ್ಲದ ಈ ಜಮೀನಿನಲ್ಲಿ ಎಡ್ಡಿ ದಂಪತಿಗಳು ಗುಡಿಸಲು ಕಟ್ಟಿಕೊಂಡು ಕಷ್ಟ ಪಟ್ಟು ಜೀವನ ಮಾಡಿದ್ದರು, ಎಲ್ಲಾ ರೀತಿಯ ಪ್ರಯತ್ನಗಳಿಂದ ಈಗ ಈ ಜಮೀನಿನಿಂದ ಉತ್ಪತ್ತಿ ಪಡೆಯುತ್ತಾ ಎಲ್ಲಾ ಸೌಲಭ್ಯ ಪಡೆದಿದ್ದಾರೆ.
  ಇಬ್ಬರು ಗಂಡು ಮಕ್ಕಳು ರಬ್ಬರ್ ಶೀಟುಗಳ ಖರೀದಿಸುವ ಖಾಸಾಗಿ ಸಂಸ್ಥೆಯಲ್ಲಿ ಉದ್ಯೋಗ ಮಾಡುತ್ತಿದ್ದಾರೆ, ಏಕೈಕ ಪುತ್ರಿ ಮದುವೆ ಆಗಿ ದಾರವಾಡದಲ್ಲಿ ನೆಲೆಸಿದ್ದಾಳೆ, ಮಗಳ ಹೆರಿಗೆ ಆನಂದಪುರಂ ಆಸ್ಪತ್ರೆಯಲ್ಲಿ ಆಗಿದ್ದರಿಂದ ಎಡ್ಡಿಯ ಅಳಿಯ ಮತ್ತು ಬೀಗತಿ ದಾರವಾಡದಿಂದ ಬಂದಿದ್ದವರನ್ನು ನಮ್ಮ ಲಾಡ್ಜ್ ನಲ್ಲಿ ಉಳಿಸಿದ್ದರಿಂದ ಬಾಲ್ಯದ ಸಂಗಾತಿ ಪ್ರಾಥಮಿಕ ಶಾಲಾ ಕ್ಲಾಸ್ ಮೇಟ್ ಎಡ್ಡಿ ಪುನರ್ಮಿಲನ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...