Skip to main content

Blog number 1744. ಸ್ಥೂಲ ಕಾಯ ನಿವಾರಣೆಯಲ್ಲಿ ದೇಹದ ಮೆಟಬಾಲಿಸಂ -ಹಾರ್ಮೋನ್ -ಮೆದಳು ಸ್ನಾಯುಗಳ ಬೆಳವಣಿಗೆಗೆ ದೇಹದ ತೂಕ ಸೆಟ್ ಪಾಯಿಂಟ್ ಮಾಡಿ ಬಿಡುತ್ತದೆ ಈ ಹಂತದಲ್ಲಿ ನಿರಾಶರಾಗ ಬೇಕಿಲ್ಲ

#ಶ್ರಾವಣ_ಮಾಸ_ಮುಕ್ತಾಯ

#ಈ_ವರ್ಷ_ಅಧಿಕ_ಶ್ರಾವಣ_ಸೇರಿ_ಎರೆಡು_ತಿಂಗಳು_ಆಚರಣೆ

#ನನ್ನ_ಸ್ಥೂಲ_ಕಾಯ_ನಿವಾರಣೆಯಲ್ಲಿ_ಶ್ರಾವಣ_ಮುಖ್ಯ_ಪಾತ್ರದಲ್ಲಿ

#ಇದರಿಂದ_ತೂಕ_ಇಳಿದಿದ್ದು_ಎಷ್ಟು ?

#ದೇಹದ_ತೂಕ_ಸೆಟ್_ಪಾಯಿಂಟನಿಂದ_ಕೆಳಗೆ_ಇಳಿಯುವುದಿಲ್ಲ_ಯಾಕೆ?

#ಇಲ್ಲಿದೆ_ಅದಕ್ಕೆ_ಉತ್ತರ..


  ನಾನು ನನ್ನ ಸ್ಥೂಲಕಾಯ ನಿವಾರಣೆಯಲ್ಲಿ ಧಾರ್ಮಿಕ ಆಚರಣೆಯ ದಿನಗಳನ್ನು ಬಳಸುತ್ತೇನೆ ಕಾರಣ ವರ್ಷದಿಂದ ವರ್ಷಕ್ಕೆ ತುಲನೆ ಮಾಡಲು ಇದು ಉಪಯುಕ್ತ.      ಉದಾಹರಣೆ 2024ರ ಶಿವರಾತ್ರಿ ಬಂದರೆ ನಾನು ರಾತ್ರಿ ಊಟ ತ್ಯಜಿಸಿ ನಾಲ್ಕು ವರ್ಷ ಅಂತ ಗೊತ್ತಾಗುತ್ತದೆ.
  ಪ್ರತಿ ವರ್ಷ ಶ್ರಾವಣ ಮಾಸ ಪ್ರಾರಂಭವಾದಾಗ ನಾನು ವರ್ಷ ಪೂರ್ತಿ ಸೇವಿಸುವ ಕಾಫಿ-ಟೀ ಕುಡಿಯುವುದಿಲ್ಲ ಇದರಿಂದ ಕಾಫಿ ಟೀ ಚಟವಾಗಿರುವುದು ನಿವಾರಣೆ ಆಗುತ್ತದೆ ಅನೇಕರು ಇದನ್ನು ಧಾರ್ಮಿಕ ಆಚರಣೆ ಭಾಗವಾಗಿ ಮಾಂಸ ಮಧ್ಯಪಾನ ದೂಮಪಾನ ತಂಬಾಕು ಕೂಡ ಈ ಮಾಸದಲ್ಲಿ ತ್ಯಜಿಸುತ್ತಾರೆ ಇದರಿಂದ ದೇಹ ಡಿಟಾಕ್ಸಿಕ್ ಮಾಡಿದಂತೆ ಮತ್ತು ಚಟಗಳ ನಿಯಂತ್ರಣದ ಸಂಯಮ ಸಿದ್ಧಿಸುತ್ತದೆ ಇದು ಆರೋಗ್ಯ ವೃದ್ಧಿಗೆ ಕಾರಣವಾಗುತ್ತದೆ.
  ಮದ್ಯಪಾನ ಒಂದು ತಿಂಗಳು ಸ್ವಯಂ ಸಂಯಮದಿಂದ ನಿಶೇದ ಮಾಡಿದರೆ ಮನುಷ್ಯನ ದೇಹದ ಲಿವರ್ ಕಿಡ್ನಿ ಸ್ವಯ೦ ದುರಸ್ತಿ ಆಗುವುದು ಸುಳ್ಳಲ್ಲ.
  ನನ್ನ ಅಳಿಯ ಮೂರು ವರ್ಷದ ಹಿಂದೆ ತಂದು ಕೊಟ್ಟ weighing machine ನನಗೆ ತುಂಬಾ ಉಪಯೋಗಕ್ಕೆ ಬಂದಿದೆ.
   ನಾನು ಈ ವಷ೯ ಜುಲೈ 16 ರಿಂದ ಶ್ರಾವಣ ಮಾಸ ಪ್ರಾರಂಭದಲ್ಲಿ ನನ್ನ ತೂಕ ನೋಡಿದ್ದೆ 108 ಕೇಜಿ ಇತ್ತು (2019 ರಲ್ಲಿ 140 ಕೇಜಿ ದಾಟಿತ್ತು) ಇವತ್ತು ಬೆಳಿಗ್ಗೆ  ಸುಮಾರು 60 ದಿನದ ನಂತರ ತೂಕ 107 ಕೇಜಿ 750 ಗ್ರಾಂ ಅಂದರೆ ಕೇವಲ 250 ಗ್ರಾಂ ಇಳಿದಿದ್ದು ನೋಡಿದೆ!? ಇದನ್ನು ಓದಿದವರಿಗೆ ಖಂಡಿತಾ ಬೇಸರ ಆಗಿರುತ್ತದೆ ಏಕೆಂದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿದ 60 ದಿನದಲ್ಲಿ ಕೇವಲ 250 ಗ್ರಾಂ ಇಳಿದಿದೆ ಅಂದರೆ ಈ ಡಯಟ್ ಬೇಕಾ? ಅನ್ನಿಸುವುದು ಸಹಜ.
   ಆದರೆ ನನಗೆ ಖಂಡಿತಾ ಬೇಸರ ನಿರಾಶೆ ಇಲ್ಲ... ಯಾಕೆಂದರೆ ಸ್ಥೂಲಕಾಯದ ನಿವಾರಣೆಯಲ್ಲಿ ಕೊಬ್ಬು ಖಂಡಿತಾ ಕರಗುತ್ತಿರುತ್ತದೆ, ಸೊಂಟದ ಸುತ್ತಳತೆ ಕಡಿಮೆ ಆಗಿರುತ್ತದೆ, ಉತ್ಸಾಹ ಚಟುವಟಿಕೆ ಹೆಚ್ಚಾಗಿರುತ್ತದೆ, ಬಿಪಿ ಶುಗರ್ ನಾರ್ಮಲ್ ಆಗಿರುತ್ತದೆ ಆದರೆ ತೂಕ ಯಾಕೆ ಕಡಿಮೆ ಆಗಲಿಲ್ಲ?.... 140 ಕೇಜಿಯಿಂದ 110 ಕೇಜಿ ತೂಕ ಇಳಿದಿದ್ದ ವೇಗದಲ್ಲಿ 110 ಕೇಜಿಯಿಂದ ತೂಕ ಯಾಕೆ ಇಳಿಯುತ್ತಿಲ್ಲ ಎಂಬ ನನ್ನ ಸ್ವಂತ ಅನುಭವದಂತೆ ಅನೇಕರ ಅನುಭವದಲ್ಲಿ ಈ ಪ್ರಶ್ನೆ ಸಹಜ.
   ಅದಕ್ಕೆ ವಿಜ್ಞಾನಿಗಳ ಉತ್ತರವಿದೆ ಏನೆಂದರೆ ನಿರ್ದಿಷ್ಟ ತೂಕ ಇಳಿದ ಮೇಲೆ  ದೇಹದ ಕೊಬ್ಬು ಇಳಿದಂತೆ ದೇಹದ ಸ್ನಾಯುಗಳು ಬೆಳೆಯಲು ಪ್ರಾರಂಭವಾಗುತ್ತದೆ ಆಗ ದೇಹದ ತೂಕ ನಿರ್ದಿಷ್ಟವಾಗಿ ಸೆಟ್ ಪಾಯಿಂಟ್ ನಲ್ಲಿ ಹೆಚ್ಚು ಆಗದೆ ಕಡಿಮೆ ಆಗದೆ ನಿಂತು ಬಿಡುತ್ತದೆ.
  ದೇಹದ ಮೆಟಬಾಲಿಸಂ,ಹಾರ್ಮೋನು ಮತ್ತು ಮೆದಳು ದೇಹದ ನಿರ್ದಿಷ್ಟ ತೂಕಕ್ಕೆ ಸೆಟ್ ಮಾಡಿ ಬಿಡುತ್ತದೆ ಇದರಿಂದ ತೂಕ ಇಳಿಕೆಯ ವೇಗ ಸ್ಥಗಿತವಾಗಿ ದೇಹದ ಸ್ನಾಯುಗಳ ಬೆಳವಣಿಗೆಗೆ ಕಾರಣವಾಗುತ್ತದೆ.
  ಈ ರೀತಿಯಲ್ಲಿ ಸ್ನಾಯುಗಳು ಬೆಳವಣಿಗೆ ಪೂರಕವಾಗಿ ಆದನಂತರ ಪುನಃ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು ದೇಹದ ತೂಕ ಇಳಿಸಲು ಸಂದೇಶ ನೀಡುತ್ತದೆ ಇದು ಕೆಲ ತಿಂಗಳಿಂದ ಕೆಲ ವರ್ಷಗಳ ಕಾಲ ನಿರ್ದಿಷ್ಟ ತೂಕ (set point) ನಿಂತಲ್ಲೇ ನಿಂತಿರುತ್ತದೆ.
   ಈ ಕಾರಣದಿಂದ ಈ ಹಂತದಲ್ಲೇ ಅನೇಕರು ತಮ್ಮ ಸ್ಥೂಲಕಾಯ ನಿವಾರಣೆಯ ಪ್ರಯತ್ನದಿಂದ ಹತಾಶರಾಗಿ ನಿರಾಸೆಯಿಂದ ವಾಕಿಂಕ್ ವ್ಯಾಯಾಮ ಡಯಟ್ ಬಿಟ್ಟುಬಿಡುತ್ತಾರೆ, ಏನು ಮಾಡಿದರೂ ಪ್ರಯೋಜನ ಆಗಲಿಲ್ಲ ಎಂದು ಸಮರ್ಥನೆಗೆ ಇಳಿದು ಬಿಡುತ್ತಾರೆ.
   ಇವತ್ತು 60 ದಿನದ ಶ್ರಾವಣ ಮಾಸದ ನನ್ನ ಡಯಟ್ ಕೇವಲ 250 ಗ್ರಾಂ ತೂಕ ಮಾತ್ರ ಕಡಿಮೆ ಮಾಡಿದ್ದಕ್ಕೆ ನನಗೆ ಇದೆಲ್ಲ ಮಾಹಿತಿ ಗೊತ್ತಿದ್ದರಿಂದ ನಿರಾಸೆ ಬೇಸರ ಆಗಲೇ ಇಲ್ಲ ನನ್ನ ದೇಹದ ಮೆಟಬಾಲಿಸಂ, ಹಾರ್ಮೋನು ಮತ್ತು ಮೆದಳು  108 ಕಿಲೋಗೆ ಸೆಟ್ ಪಾಯಿಂಟ್ ನಿರ್ದಿಷ್ಟಗೊಳಿಸಿದೆ ಸೊಂಟದ ಅಳತೆ 80 ಸೆ.ಮಿ.ಗೆ ಇಳಿದಿದೆ ಅಂದರೆ ದೇಹಕ್ಕೆ ಬೇಡವಾದ ಕೊಬ್ಬು ಇಳಿಯುತ್ತಿದೆ ಮತ್ತು ನನ್ನ ದೇಹದ ಸ್ನಾಯುಗಳು ಬೆಳೆಯುತ್ತಿದೆ ಅಂತ ಅರ್ಥ ಹಾಗೆಯೇ ನಾನು ಮುಂದಿನ ತೂಕ ಇಳಿಕೆಗೆ ದೇಹದ ಆಜ್ಞೆಗೆ ತಾಳ್ಮೆಯಿಂದ ಕಾಯಬೇಕು ಎಂಬ ಸೂಚನೆ ಇದಾಗಿದೆ.
  60 ದಿನದ ನಂತರ ಇವತ್ತು ಮೊದಲ ಕಾಫಿ ಲೋಟ ಕೈಗೆತ್ತಿಕೊಂಡಾಗ ಇದನ್ನು ನಿಮ್ಮ ಜೊತೆ ಹಂಚಿಕೊಳ್ಳುವ ಮನಸ್ಸಾಯಿತು ಇದು ನನ್ನ ರೀತಿ ಸ್ಥೂಲ ಕಾಯ ನಿವಾರಣೆಯ ಪ್ರಯತ್ನದಲ್ಲಿರುವವರಿಗೆ ಸಹಾಯವೂ ಆಗಬಹುದೆಂದು ಇಲ್ಲಿ ದಾಖಲಿಸಿದ್ದೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ