Skip to main content

Blog number 1734. ಸಿರಸಿಯ ಸುಯೋಗಾಶ್ರಯ ಅನಾಥ ವೃದ್ಧಾಶ್ರಮ ನಡೆಸುತ್ತಿರುವ ಸುಶಿಕ್ಷಿತ ದಂಪತಿಗಳಾದ ಶ್ರೀಮತಿ ಲತೀಕಾಭಟ್ ಮತ್ತು ಗಣಪತಿ N ಭಟ್ಟರು.

#ಶಿರಸಿಯ_ಸುಯೋಗಾಶ್ರಯ_ವೃದ್ಧಾಶ್ರಮ

#ಶ್ರೀಮತಿ_ಲತೀಕಾಭಟ್_ದಂಪತಿಗಳು_ನನ್ನ_ಅತಿಥಿಗಳು.

#ಸುಲಭವಲ್ಲದ_ಸಮಾಜಸೇವಾ_ನಿರತ_ದಂಪತಿಗಳು.


  ಶ್ರೀಮತಿ ಲತೀಕಾ ಭಟ್ಟರು ಸಾಮಾಜಿಕ ಜಾಲ ತಾಣದಿಂದ ಪರಿಚಯ, ಲೇಖಕರಾದ ಜಯಪ್ರಕಾಶ್ ಹಬ್ಬು ಮತ್ತು ಅವರ ಸಹೋದರ ಕಾರವಾರದ ರಾಮಚಂದ್ರ ಹಬ್ಬು ಅವರು ಇವರ ಸಮಾಜ ಸೇವೆ ಬಗ್ಗೆ ಹೇಳಿದ್ದರು.
   ನಾನು ನಿತ್ಯ ಬೆಳಿಗ್ಗೆ ಏಳುವಾಗ ನಿತ್ಯ ಇವರು ಹಾಕುವ ದೇವರ ಸ್ಮರಣೆ ಮತ್ತು ದಿನಕ್ಕೊಂದು ದೇವರ ಪಟ ತಪ್ಪದೆ ನೋಡುತ್ತೇನೆ.
   ಅನೇಕ ಬಾರಿ ಈ ಮಾರ್ಗದಲ್ಲಿ ಸಾಗಿದರೆ ನಿಮ್ಮಲ್ಲಿಗೆ ಒಮ್ಮೆ ಬೇಟಿ ನೀಡಬೇಕು ಎಂದು ಶ್ರೀಮತಿ ಲತೀಕಾ ಭಟ್ಟರು ಹೇಳಿದ್ದರು ನಾನು ಕೂಡ ಬರುವ ಮೊದಲು ತಿಳಿಸಿ ಬನ್ನಿ ಅಂತ ಸ್ವಾಗತಿಸಿದ್ದೆ.
  ಮೊನ್ನೆ ಸೋಮವಾರ 3- ಸೆಪ್ಟೆಂಬರ್ - 2023 ರಂದು ಈ ಮಾರ್ಗದಲ್ಲಿ ಶಿವಮೊಗ್ಗ ಹೋಗಲಿದೆ ನಿಮ್ಮಲ್ಲಿಗೆ ಬೇಟಿ ನೀಡಿ ಹೋಗುವುದಾಗಿ ತಿಳಿಸಿದ್ದರು.
   ಮದ್ಯಾಹ್ನ ಅವರ ಆಗಮನ ಆಯಿತು, ಅವರ ಪತಿಯ ಜೊತೆ ... ಬನ್ನಿ ಬನ್ನಿ ಅಂತ ಸ್ವಾಗತಿಸಿದೆ ಆಗ " ಇವರು ಗೊತ್ತಾ ನನ್ನ ಪತಿ " ಅಂತ ಪರಿಚಯಿಸಿದಾಗ ನೆನಪಿನ ಸರಳಿ ಬಿಚ್ಚಿತು " #ಗಣಪತಿ_ಎನ್_ಭಟ್ಟಿರು_ಶಿವಮೊಗ್ಗ_ಜಿಲ್ಲಾ_LIC_ಮಾರ್ಕೆಟಿಂಗ್_ಮ್ಯಾನೇಜರ್ " ಅಂದೆ.
   ಗಣಪತಿ N ಭಟ್ಟರು ಕೆಲ ತಿಂಗಳ ಹಿಂದೆ ನಮ್ಮ ಸಂಸ್ಥೆಗೆ ವ್ಯವಹಾರಿಕವಾಗಿ ಬೇಟಿ ಮಾಡಿದ್ದರು.
  ಶ್ರೀಮತಿ ಲತೀಕಾ ಭಟ್ ದಂಪತಿಗಳು ಹೊನ್ನಾವರ ಮೂಲದವರು ಪತಿ ಗಣಪತಿ ಭಟ್ಟರು LIC ಉದ್ಯೋಗಿ ಆಗಿ ಎಲ್ಲೆಲ್ಲಿ ಹೋಗುತ್ತಾರೆ ಅಲ್ಲಿನ ಖಾಸಾಗಿ ಶಾಲೆಗಳಲ್ಲಿ ಶಿಕ್ಷಕಿಯಾಗಿ ನಂತರ ಪ್ರಾಂಶುಪಾಲರಾಗಿ ಶ್ರೀಮತಿ ಲತೀಕಾಭಟ್ಟರು ಉದ್ಯೋಗ ಮಾಡುತ್ತಿದ್ದರಂತೆ.
   ತಮ್ಮ 40 ನೇ ಹುಟ್ಟುಹಬ್ಬದಂದು ಇವರು ಮಾಡಿದ ಸಂಕಲ್ಪ ತಮ್ಮ ಜೀವಮಾನ ಪೂರ್ತಿ ಅನಾಥ ವ್ಯದ್ದರಿಗಾಗಿ ಸೇವೆ ಮಾಡಬೇಕೆಂಬ ಅಚಲ ನಿರ್ಧಾರ ಇದಕ್ಕೆ ಇವರ ಪತಿ ಗಣಪತಿ ಭಟ್ಟರು ಬೆನ್ನೆಲುಬಾಗಿ ನಿಲ್ಲುವ ವಚನ ನೀಡುತ್ತಾರೆ ಅದೇ ಸುಯೋಗಾಶ್ರಯ ವೃದ್ಧಾಶ್ರಮ ಅದು ದಾರವಾಡದಲ್ಲಿ ಪ್ರಾರಂಭವಾಗಿ ಗಣಪತಿ ಭಟ್ಟರು ವರ್ಗವಾದ ಊರುಗಳಿಗೆ ಸ್ಥಳಾಂತರವಾಗಿ ಈಗ ಸಿರಸಿಯ ಅಬ್ರಿಮನೆಯಲ್ಲಿ ಶಾಶ್ವತವಾಗಿ ಸ್ವಂತದ್ದಾದ 3 ಎಕರೆ ಜಾಗದಲ್ಲಿ ಸಣ್ಣ ಗುಡಿಸಲಲ್ಲಿ ಪ್ರಾರಂಭವಾಗಿ ಸುಸಜ್ಜಿತ ಕಟ್ಟಡದಲ್ಲಿ 52 ಜನ ಅನಾಥ ವೃದ್ಧರಿಗೆ ಆಶ್ರಯ ನೀಡಿದೆ.
  ಆಶ್ರಮ ವಾಸಿಗಳಿಗೆ ಇವರು ನೀಡುವ ಪೌಷ್ಟಿಕವಾದ ಮತ್ತು ಆರೋಗ್ಯಕರವಾದ ಊಟ - ಉಪಹಾರದ ತಟ್ಟೆ ನೋಡಿದರೆ ಅರ್ಥವಾಗುತ್ತದೆ ಇವರ ನಿಸ್ವಾರ್ಥ ಸಮಾಜಸೇವೆ.
   ಪ್ರತಿ ತಿಂಗಳಿಗೆ ಎರೆಡು ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸುತ್ತಾರೆ ಈ ಹಣಕ್ಕಾಗಿ ಯಾರನ್ನೂ ಒತ್ತಾಯಿಸುವುದಿಲ್ಲ ಹೆಚ್ಚಿನ ತಿಂಗಳು ಪತಿಯ ಆದಾಯ ಇದಕ್ಕೆ ಬಳಕೆ ಆಗುತ್ತದೆ.
   ಇವರ ಅಂದು ಬಂದುಗಳು ಇವರಿಗೆ ಇದೆಂತಾ ಹುಚ್ಚು ಸುಖವಾಗಿ ಇರಬಹುದು ಬಿಟ್ಟು ಈ ಕಷ್ಟ ಪಡುವ ಸಮಾಜ ಸೇವೆ ಬೇಕಾ? ಅಂತಲೂ... ದೊಡ್ಡ ಹುದ್ದೆಯ ಗಣಪತಿ ಭಟ್ಟರ ದೊಡ್ಡ ಮೊತ್ತದ ಸಂಬಳ ಎಲ್ಲಾ ಹೀಗೆ ಹಾಳು ಮಾಡುತ್ತಾರೆಂಬ ಮಾತುಗಳು ಸಹಜವಾದರೂ ಈ ದಂಪತಿಗಳು ಈ ಸಮಾಜ ಸೇವೆಯಲ್ಲಿ ಯಾವುದೇ ಸ್ವಾರ್ಥ - ಲಾಭಗಳ ನಿರೀಕ್ಷೆಗಳಿಲ್ಲದೆ ಸ್ವಯಂ ತೊಡಗಿಸಿಕೊಂಡಿದ್ದಾರೆ ಮತ್ತು ಈ ದಾರಿಯಲ್ಲಿ ಬಹು ದೂರ ಸಾಗಿದ್ದಾರೆ.
   ಮಾತಾಡುವಾಗ ಲತೀಕಾ ಭಟ್ಟರು ನಾನು ಬರೆದ ಒಂದು ಲೇಖನದಿಂದ ಪ್ರಭಾವಿತರಾಗಿ ಅವರ ಆಶ್ರಮದ ತಗಡಿನ ಮೇಲ್ಚಾವಣಿಗೆ ಸಣ್ಣ ಮೈಕ್ರೋ ಸ್ಪಿಂಕ್ಲರ್ ಅಳವಡಿಸಿ ಬೇಸಿಗೆಯಲ್ಲಿ ಕೊಠಡಿಗಳಲ್ಲಿ  ಹವಾನಿಯಂತ್ರಣ ವ್ಯವಸ್ಥೆ ಮಾಡಿದ್ದು ಕೇಳಿ ಆಶ್ಚರ್ಯ ಆಯಿತು ಏಕೆಂದರೆ ಇದು ಸಾಮಾಜಿಕ ಜಾಲ ತಾಣದ ಶಕ್ತಿ.
    ದಂಪತಿಗಳಿಗೆ ನಮ್ಮ ಮಲ್ಲಿಕಾ ವೆಜ್ ನಲ್ಲಿ ತಂದೂರಿ ರೊಟ್ಟಿ, ಪನೀರ್ ಬಟರ್ ಮಸಾಲ, ದಾಲ್ ನ ಮಧ್ಯಾಹ್ನದ ಊಟ ಮಾಡಿಸಿ ಒಮ್ಮೆ ಸಿರಸಿಗೆ ಅವರ ವೃದ್ದಾಶ್ರಮ ನೋಡಲು ಬರುವುದಾಗಿ ತಿಳಿಸಿ ಟಿಪ್ಪೂ ಸುಲ್ತಾನರ ಮರಿ ಮಗಳು ಹಿಟ್ಲರ್‌ ವಿರುದ್ದ ಬೇಹುಗಾರಿಕೆ ಮಾಡಿದ ಯುರೋಪಿನಲ್ಲಿ ಈಗಲೂ ಸ್ಮರಣೀಯ ಧೀರ ಮಹಿಳೆ ಆಗಿರುವ ನೂರ್ ಪುಸ್ತಕ ನೀಡಿ ಬೀಳ್ಕೊಡುವಾಗ ಗೊತ್ತಾಗಿದ್ದು ಗಣಪತಿ ಭಟ್ಟರು ಶಿವಮೊಗ್ಗಕ್ಕೆ ವರ್ಗಾವಾಗಿ ಅನೇಕ ತಿಂಗಳ ನಂತರ ಇದೇ ಮೊದಲ ಬಾರಿ ಶ್ರೀಮತಿ ಲತೀಕಾ ಭಟ್ಟರು ಪತಿಯ ಮನೆ ನೋಡಲು ಹೊರಟಿದ್ದಾರೆ.
   ಯಾವುದೇ ಸೇವೆಯ ಸಂಕಲ್ಪ ಸುಲಭವಲ್ಲ ಅದಕ್ಕೆ ಜೀವನ ಪರ್ಯಂತ ಸಾಧನೆ ಮಾಡಿದರೆ ಮಾತ್ರ ಸಾಧ್ಯ ಈ ಮಾರ್ಗದಲ್ಲಿ ಅನೇಕ ಸುಖಗಳನ್ನು ಕಳೆದುಕೊಳ್ಳಲೇ ಬೇಕು ಈ ಸುಶಿಕ್ಷಿತರಾದ ದಂಪತಿಗಳು ಪ್ರಚಾರ ಸನ್ಮಾನಗಳಿಂದ ದೂರದಲ್ಲಿದ್ದು #ಸಿರಸಿಯ_ಸುಯೋಗಾಶ್ರಯ_ವೃದ್ದಾಶ್ರಮ ನಡೆಸುತ್ತಿರುವುದು ಸಣ್ಣ ಕೆಲಸವಲ್ಲ ಈ ದಂಪತಿಗಳಿಗೆ ಅಭಿನಂದಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...