Skip to main content

Blog number 1767. ಚಳಿಗಾಲದಲ್ಲಿ ಪಾದಗಳ ಸಂರಕ್ಷಣೆ

#ಚಳಿಗಾಲದಲ್ಲಿ_ಪಾದದ_ಹಿಮ್ಮುಡಿ_ಸಂರಕ್ಷಣೆ_ಅತಿ_ಮುಖ್ಯ

#ಪಾದದ_ರಕ್ಷಣೆಗೆ_ನಿರ್ಲಕ್ಷ್ಯ_ಮಾಡಿದರೆ_ಹಿಮ್ಮುಡಿ_ಸೀಳಿ_ಹೆಚ್ಚು_ಬಾದಿಸುತ್ತದೆ.

#ಚಳಿಗಾಲದ_ಪ್ರಾರಂಬಕ್ಕೆ_ಮೊದಲೇ_ಪಾದಗಳ_ಜಾಗೃತೆ_ಮಾಡಿ.

#ಸ್ಕ್ರಬ್ಬರ್_ಬಳಸುವುದು_ಸುರಕ್ಷಿತ.

https://youtu.be/ci2fkKg9MJQ?feature=shared


 ಪುರುಷರು ತಮ್ಮ ಮೈಕಾಂತಿಯ ಸೌಂದರ್ಯ ಪ್ರಜ್ಞೆ ಬಗ್ಗೆ ಹೆಚ್ಚಿನ ಆಸಕ್ತಿ ಮತ್ತು ಗಮನವಹಿಸುವುದಿಲ್ಲ ಈ ವಿಚಾರದಲ್ಲಿ ಮಹಿಳೆಯರಿಗಿಂತ ಕಡಿಮೆ ಸೌಂದರ್ಯ ಪ್ರಜ್ಞೆ ಪುರುಷರಲ್ಲಿದೆ ಆದರೆ ಪುರುಷ ಪ್ರಧಾನ ಸಮಾಜದಲ್ಲಿ ಇದನ್ನು ಮಹಿಳೆಯರು ಪುರುಷರಿಗೆ ವಿವರಿಸುವುದಲ್ಲಿ ಆಸಕ್ತಿ ಇರುವುದಿಲ್ಲ.
   ಪುರುಷರ ಅಂಗಾಲ ಹಿಮ್ಮಡಿಯ ತ್ವಚೆ ಚಳಿಗಾಲದಲ್ಲಿ ಒಡೆದು ಬಿರುಕು ಬಿಡುವುದು ಒಂದು ಆದರೆ ಇದನ್ನು ಪುರುಷರು ಚಳಿಗಾಲದ ಮೊದಲೇ ಮುಂಜಾಗೃತೆ ವಹಿಸಿದರೆ ವರ್ಷಪೂರ್ತಿ ಆರೋಗ್ಯವಂತ ಅಂಗಾಲ ಹಿಮ್ಮುಡಿ ತ್ವಚೆ ಒಡೆಯದಂತೆ ನೋಡಿ ಕೊಳ್ಳಬಹುದು.
   ಚಳಿಗಾಲ ದೂರವಿದೆ ಈಗಲೇ ಅವಸರ ಏಕೆ? ಅನ್ನುತ್ತಾ ನಿರ್ಲಕ್ಷ್ಯವಹಿಸಿದರೆ ಅಂಗಾಲ ಹಿಮ್ಮಡಿ ಬಿರುಕು ಬಾದಿಸದೇ ಬಿಡದು.
   ವರ್ಷದ ಮಳೆಗಾಲ ಮುಕ್ತಾಯ ಮತ್ತು ಚಳಿಗಾಲದ ಮೊದಲೆ ನಮ್ಮ ಪಾದಗಳ ಆರೈಕೆಗೆ ತಯಾರಿ ಮಾಡಬೇಕು, ಪಾದಗಳ ಡೆಡ್ ಸ್ಕಿನ್ ಗಳನ್ನು ಸ್ಕ್ರಬ್ಬರ್ ಗಳನ್ನು ಬಳಸಿ ನಿವಾರಿಸಬೇಕು (ಇದು ಕಾರ್ಪೆಂಟರ್ ಗಳು ಮರದ ಪೀಠೋಪಕರಣಗಳ ಮೇಲ್ಮೈ ನುಣುಪು ಮಾಡಲು ಉಪ್ಪು ಕಾಗದ ಬಳಸುವಂತೆ) ಒಣ ಪಾದಗಳ ಬಿರುಕುಗಳ ಚರ್ಮಗಳನ್ನು ಸ್ಕೃಬ್ಬರ್ ಗಳಿಂದ ತಿಕ್ಕಿ ಪಾದವನ್ನು ನುಣುಪಾಗಿಸ ಬೇಕು.
   ಚಳಿಗಾಲ ಪ್ರಾರಂಭದ ನಂತರ ಪ್ರತಿ ದಿನ ಪಾದಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ಎಣ್ಣೆ ಅಥವಾ ವ್ಯಾಸಲಿನ್ ಸವರಬೇಕು, 
  ಒಣ ಚರ್ಮ ಹೊಂದಿರುವ ಮತ್ತು ಹೆಚ್ಚು ಹಿಮ್ಮಡಿ ಚರ್ಮ ಸೀಳು ಒಡೆಯಿಂದ ಬಾದೆ ಪಡುವವರು  ರಾತ್ರಿ ಬಿಸಿನೀರಿನ ಬಕೇಟನಲ್ಲಿ ಸೋಪು ಅಥವ ಶಾಂಪೂ ಮತ್ತು ಮುಷ್ಟಿ ಉಪ್ಪು ಸೇರಿಸಿ ಎರಡೂ ಅಂಗಾಲು ಅದರಲ್ಲಿ ಕಾಲು ಗಂಟೆ ನೆನಸಿ ಬ್ರಷ್ ನಿಂದ ಅಂಗಾಲು ಹಿಮ್ಮುಡಿ ತಿಕ್ಕಿ ತೊಳೆದು ನಂತರ ಶುಭ್ರ ಬಟ್ಟೆಯಿಂದ ಒರೆಸಿ ಎಣ್ಣೆ ಅಥವ ವ್ಯಾಸಲಿನ್ ಹಚ್ಚಬೇಕು ಇದರಿಂದ ಪಾದದ ಹಿಮ್ಮಡಿ ಒಡೆಯುವುದು ನಿಲ್ಲುತ್ತದೆ.
  ಒಣ ಚಮ೯ದವರು ಚಳಿಗಾಲದಲ್ಲಿ ಚಪ್ಪಲಿಗಿಂತ ಬೂಡ್ಸ್ ಬಳಸುವುದು ಉತ್ತಮ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...