Skip to main content

Blog number 1742. ಬೀಗದ ವ್ಯಾಪಾರದಿಂದ ಮಗನನ್ನ ಇಂಜಿನಿಯರ್ ಮಾಡಿದ ಕಲಂದರ್ ಸಾಹೇಬರ ಸಾದನೆ ಸಮಾಜಕ್ಕೆ ಮಾದರಿ

#ಬಡವರ_ನಿತ್ಯ_ಅನ್ನದ_ಬಟ್ಟಲ_ಹೋರಾಟ

#ಸಮಾಜಕ್ಕೆ_ಇಂತವರು_ಮಾದರಿ

#ಬೀಗಗಳ_ಮಾರಾಟದ_ಶಿವಮೊಗ್ಗ_ಕಲಂದರ್_ಸಾಹೇಬರು

#ಬೀಗದ_ವ್ಯಾಪಾರದಿಂದ_ಮಗನನ್ನು_ಇಂಜಿನಿಯರ್_ಮಾಡಿಸಿದ್ದಾರೆ

#ಪಡಿತರ_ಅಕ್ಕಿ_ಊಟಕ್ಕೆ.

#ಬಗರ್_ಹುಕುಂ_ಜಮೀನಿನಲ್ಲಿ_ಜೋಳ_ಬಿತ್ತಿ_ಹಣ_ಕಳೆದು_ಕೊಂಡಿದ್ದಾರೆ.

#ಈ_ಪ್ರದೇಶದ_ಜನಪರ_ಶಾಸಕಿ_ಶಾರದಾಪೂರ್ಯನಾಯಕರು_ಸಹಾಯ_ಮಾಡಬೇಕು.

#ಬರಪೀಡಿತ_ಜಿಲ್ಲೆ_ಘೋಷಣೆ_ಆದರೆ_ಲಾಭ_ಯಾರಿಗೆ?

#ಬಯಲು_ಸೀಮೆ_ವ್ಯಾಪ್ತಿ_ಮಲೆನಾಡಿನ_ಅಂಚು_ದಾಟಿ_ದಾಪುಗಾಲು_ಹಾಕುತ್ತಿದೆ.

https://youtu.be/Et-1a46HrAk?feature=shared 


  ನಮ್ಮ ಸಂಸ್ಥೆಯಲ್ಲಿ 61 ಬೀಗಗಳು ಇವೆ ಇದನ್ನು ಖರೀದಿಸಿದ್ದು ಈ ಖಲಂದರ್ ಸಾಹೇಬರಿಂದ ಬೀಗಗಳು ಮಳೆ ಗಾಳಿಗೆ ಹೊರಗಿರುವುದು ಬೇಗ ಹಾಳಾಗುತ್ತದೆ ಆದ್ದರಿಂದ ಪ್ರತಿ ವರ್ಷ ಹೊಸ ಬೀಗ ಖರೀದಿಸಲೇ ಬೇಕು ಸ್ಟೇರ್ ಆಗಿಯೂ ಕೆಲ ಬೀಗ ದಾಸ್ತಾನಿನಲ್ಲಿ ಇರಲೇ ಬೇಕು.
  ಮೊನ್ನೆ ಖಲಂದರ್ ಸಾಹೇಬರು ಬಂದಾಗ ದೊಡ್ಡ 5 ಬೀಗ ಮತ್ತು ಚಿಕ್ಕದಾದ 10 ಬೀಗ ಖರೀದಿಸಿದೆ ರೂ 980 ಆಯಿತು ಅವರಿಗೆ ಚಹಾ ಕುಡಿಸಿ ಒಂದು ಸಾವಿರ ನೀಡಿದೆ.
  ಹೀಗೆ ಅವರ ಜೊತೆ ಮಾತಾಡಿದಾಗ ಅವರ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಜೋಳ ಬಿತ್ತಿದ್ದು ಎರೆಡು ತಿಂಗಳ ಮುಂಗಾರು ಮಳೆ ಇಲ್ಲದೆ ಪೂರ ನಲವತ್ತು ಸಾವಿರ ಕಳೆದುಕೊಂಡ ದುಃಖ ಹಂಚಿಕೊಂಡರು.
   ಸಾಗರ ತಾಲ್ಲೂಕು ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಬಂದಿರುವ ಮಳೆ ಅದರ ಅಂಚಿನ ಶಿವಮೊಗ್ಗ ತಾಲ್ಲೂಕಿನಲ್ಲಿ ಬಂದಿಲ್ಲ ಈ ತಾಲ್ಲೂಕು ಒಂದು ತರ ಬಯಲು ಸೀಮೆ ಅಗುತ್ತಿದೆ ಕೆಲ ವರ್ಷಗಳ ನಂತರ ನಮ್ಮ ತಾಲ್ಲೂಕುಗಳು ಬಯಲು ಸೀಮೆ ಆಗದೆ ಉಳಿಯಲಾರದು.
   ಬೀಗ ವ್ಯಾಪಾರದ ಖಲಂದರ್ ಸಾಹೇಬರು ನಿತ್ಯ 50 ರಿಂದ 100 ಕಿ.ಮಿ. ಬೀಗ ವ್ಯಾಪಾರಕ್ಕಾಗಿ ಅನೇಕ ಊರು ಹಳ್ಳಿ ತಿರುಗುತ್ತಾರೆ ನೂರಾರು ಜನರ ಸಂಪರ್ಕ ಇದೆ ಇದು ಇವರಿಗೆ ದೊಡ್ಡ ಪ್ರಪಂಚ ಜ್ಞಾನ ನೀಡಿದೆ.
   ದೊಡ್ಡ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಲು ಕೊರಾನಾ ಪ್ರಾರಂಭ ಆಗಿತ್ತು ಕೆಲಸ ಸಿಗುವುದು ಕಷ್ಟ ಆಗಿತ್ತು ಈಗ ದೂರದ ಗುಜರಾತಿನಲ್ಲಿ ಕಂಪನಿ ಒಂದರಲ್ಲಿ ಉದ್ಯೋಗ
ಮಾಡುತ್ತಿದ್ದಾರೆ "ಸಂಬಳ ಕಡಿಮೆ ಆದರೆ ಕೆಲ ವರ್ಷ ಅನುಭವ ಪಡೆದರೆ ಸಂಬಳ ಜಾಸ್ತಿ ಆಗುತ್ತೆ" ಅಂತ ಖಲಂದರ್ ಸಾಹೇಬರೇ ತಮಗೆ ತಾವೇ ಸಮಾದಾನ ಹೇಳಿ ಕೊಳ್ಳುತ್ತಾರೆ.
   ಮಗಳು ಬಿಎಸ್ಪಿ ಅಂತಿಮ ವರ್ಷದಲ್ಲಿ ಮಗ ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ ಅವರು ನಿತ್ಯ ಖಾಸಾಗಿ ಬಸ್ಸಿನಲ್ಲಿ ಚಿನ್ಮನೆಯಿಂದ ಆಯನೂರು ತಲುಪಿ ಅಲ್ಲಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿ ಶಿವಮೊಗ್ಗ ಕಾಲೇಜಿಗೆ ಹೋಗಬೇಕು ಇದೆಲ್ಲ ತಮ್ಮ ವ್ಯಾಪಾರದಿಂದ ಬರುವ ಆದಾಯದಲ್ಲಿ ಮನೆಯ ನಿತ್ಯ ನಿರ್ವಹಣೆ ಜೊತೆ ಸ೦ಭಾಲಿಸಬೇಕು ಒಂದು ರೀತಿ ತಂತಿ ಮೇಲೆ ಬ್ಯಾಲನ್ಸ್ ಮಾಡಿ ನಡೆದಂತೆ.
   ಈಗ ಮಗನ ಆದಾಯ ಸ್ವಲ್ಪ ಮಟ್ಟಿಗೆ ಖಲಂದರ್ ಸಾಹೇಬರಿಗೆ ಜೀವನದಲ್ಲಿ ಆದಾರವಾಗಿದೆ ಇವರ ಸ್ವಂತದ್ದಾದ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಕಳೆದ ವರ್ಷ ಖರ್ಚು ಕಳೆದು ಸುಮಾರು 30 ಸಾವಿರ ಜೋಳದ ಬೆಳೆಯಲ್ಲಿ ಆದಾಯ ಪಡೆದಿದ್ದರು ಅದೇ ಉತ್ಸಾಹಲ್ಲಿ ಸುಮಾರು ನಲವತ್ತು ಸಾವಿರ ವಿನಿಯೋಗಿಸಿ ಜೋಳ ಬಿತ್ತಿ ಕೃಷಿ ಮಾಡಿದ್ದರು ಆದರೆ ಕಳೆದ ಎರೆಡು ತಿಂಗಳು ಮಳೆ ಇಲ್ಲದೆ ಬೆಳೆ ಸುಟ್ಟು ಹೋಗಿದೆ ಖರ್ಚು ಮಾಡಿದ 40 ಸಾವಿರ ಕೂಡ ಇದು ಬಡವರ ಕೂಳಿನ ಹೋರಾಟವೂ ಹೌದು.
   ಶ್ರೀಮಂತ ಎಂದರೆ ಯಾರು? ಹಣ ಮಾತ್ರ ಇರುವವರಾ? ನೆಮ್ಮದಿ ಆರೋಗ್ಯ ಸಂಸ್ಕಾರ ಇರುವವರಾ?.
   ಇವರ ಜಮೀನು ಅರಣ್ಯ ಭೂಮಿ ಅಂತ ಬಗರ್ ಹುಕುಂ ಹಕ್ಕು ಪತ್ರ ದೊರೆತಿಲ್ಲ ಇನ್ನು ಬರಪೀಡಿತ ಪ್ರದೇಶ ಘೋಷಣೆ ಆದರೂ ಇವರಿಗೆ ಪರಿಹಾರ ಸಿಗಲಾರದು ಅಷ್ಟಕ್ಕೂ ಬರ ಪರಿಹಾರ ಖುಷ್ಕಿ ಜಮೀನಿಗೆ ಎಕರೆಗೆ ಆರು ಸಾವಿರ ಮಾತ್ರ ಅದು ರೈತನಿಗೆ ಸಿಗಲು ಮದ್ಯವರ್ತಿಗಳ ಪಾಲಿನ ಹಣ ಪೀಕಬೇಕು.
  ತಿಂಗಳಿಗೆ 25 ಕೇಜಿ ಪಡಿತರ ಅಕ್ಕಿ ಈ ಕುಟುಂಬಕ್ಕೆ ಆಸರೆ ಆಗಿದೆ, ಸಿದ್ದರಾಮಯ್ಯರ ಸರ್ಕಾರದ ಬಾಗ್ಯಲಕ್ಷ್ಮೀ ಯೋಜನೆ ಯ ಎರೆಡು ಸಾವಿರ ಸಿಕ್ಕರೆ ಇವರ ಕುಟುಂಬಕ್ಕೆ ದೊಡ್ಡ ಆಸರೆ ಆಗಲಿದೆ.
   ಕೆಲವು ವರ್ಷಗಳಲ್ಲಿ ಎಲ್ಲಾ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಕಂಡುಕೊಂಡು ಅವರ ಕಾಲ ಮೇಲೆ ನಿಂತರೆ ತಮ್ಮಷ್ಟು ಸುಖಿ ಯಾರಿಲ್ಲ ಎಂಬ ಆಶಾ ಭಾವನೆಯ ಕನಸುಗಳು ಅವರ ಕಣ್ಣಿನಲ್ಲಿದೆ.
    ದೇವರು ಈ ಕುಟುಂಬಕ್ಕೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಿ ಎಂದು ಹಾರೈಸುತ್ತೇನೆ.
   ಸಣ್ಣ ಬೀಗದ ವ್ಯಾಪಾರದಿಂದ ಕುಟುಂಬ ಸಲುಹುತ್ತಾ ಮಕ್ಕಳನ್ನು ವಿದ್ಯಾವಂತರಾಗಿಸಿ ಅವರ ಭವಿಷ್ಯ ಉಜ್ವಲಗೊಳಿಸುತ್ತಿರುವ ಖಲಂದರ್ ಸಾಹೇಬರು ಸಮಾಜಕ್ಕೆ ಮಾದರಿ ಆಗಿದ್ದಾರೆ ಈ ಪ್ರದೇಶದ ಶಾಸಕಿ ಆಗಿರುವ ಶ್ರೀಮತಿ ಶಾರದಾ ಪೂರ್ಯಾ ನಾಯಕರು ಇವರಿಗೆ ಸಹಾಯ ಮಾಡಬಹುದಾ?.
 ಬೀಗದ ವ್ಯಾಪಾರಿ ಖಲಂದರ್‌ ಸಾಹೇಬರ ಸಂಪರ್ಕ ಸಂಖ್ಯೆ 994-521-1406.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...