Skip to main content

Blog number 1742. ಬೀಗದ ವ್ಯಾಪಾರದಿಂದ ಮಗನನ್ನ ಇಂಜಿನಿಯರ್ ಮಾಡಿದ ಕಲಂದರ್ ಸಾಹೇಬರ ಸಾದನೆ ಸಮಾಜಕ್ಕೆ ಮಾದರಿ

#ಬಡವರ_ನಿತ್ಯ_ಅನ್ನದ_ಬಟ್ಟಲ_ಹೋರಾಟ

#ಸಮಾಜಕ್ಕೆ_ಇಂತವರು_ಮಾದರಿ

#ಬೀಗಗಳ_ಮಾರಾಟದ_ಶಿವಮೊಗ್ಗ_ಕಲಂದರ್_ಸಾಹೇಬರು

#ಬೀಗದ_ವ್ಯಾಪಾರದಿಂದ_ಮಗನನ್ನು_ಇಂಜಿನಿಯರ್_ಮಾಡಿಸಿದ್ದಾರೆ

#ಪಡಿತರ_ಅಕ್ಕಿ_ಊಟಕ್ಕೆ.

#ಬಗರ್_ಹುಕುಂ_ಜಮೀನಿನಲ್ಲಿ_ಜೋಳ_ಬಿತ್ತಿ_ಹಣ_ಕಳೆದು_ಕೊಂಡಿದ್ದಾರೆ.

#ಈ_ಪ್ರದೇಶದ_ಜನಪರ_ಶಾಸಕಿ_ಶಾರದಾಪೂರ್ಯನಾಯಕರು_ಸಹಾಯ_ಮಾಡಬೇಕು.

#ಬರಪೀಡಿತ_ಜಿಲ್ಲೆ_ಘೋಷಣೆ_ಆದರೆ_ಲಾಭ_ಯಾರಿಗೆ?

#ಬಯಲು_ಸೀಮೆ_ವ್ಯಾಪ್ತಿ_ಮಲೆನಾಡಿನ_ಅಂಚು_ದಾಟಿ_ದಾಪುಗಾಲು_ಹಾಕುತ್ತಿದೆ.

https://youtu.be/Et-1a46HrAk?feature=shared 


  ನಮ್ಮ ಸಂಸ್ಥೆಯಲ್ಲಿ 61 ಬೀಗಗಳು ಇವೆ ಇದನ್ನು ಖರೀದಿಸಿದ್ದು ಈ ಖಲಂದರ್ ಸಾಹೇಬರಿಂದ ಬೀಗಗಳು ಮಳೆ ಗಾಳಿಗೆ ಹೊರಗಿರುವುದು ಬೇಗ ಹಾಳಾಗುತ್ತದೆ ಆದ್ದರಿಂದ ಪ್ರತಿ ವರ್ಷ ಹೊಸ ಬೀಗ ಖರೀದಿಸಲೇ ಬೇಕು ಸ್ಟೇರ್ ಆಗಿಯೂ ಕೆಲ ಬೀಗ ದಾಸ್ತಾನಿನಲ್ಲಿ ಇರಲೇ ಬೇಕು.
  ಮೊನ್ನೆ ಖಲಂದರ್ ಸಾಹೇಬರು ಬಂದಾಗ ದೊಡ್ಡ 5 ಬೀಗ ಮತ್ತು ಚಿಕ್ಕದಾದ 10 ಬೀಗ ಖರೀದಿಸಿದೆ ರೂ 980 ಆಯಿತು ಅವರಿಗೆ ಚಹಾ ಕುಡಿಸಿ ಒಂದು ಸಾವಿರ ನೀಡಿದೆ.
  ಹೀಗೆ ಅವರ ಜೊತೆ ಮಾತಾಡಿದಾಗ ಅವರ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಜೋಳ ಬಿತ್ತಿದ್ದು ಎರೆಡು ತಿಂಗಳ ಮುಂಗಾರು ಮಳೆ ಇಲ್ಲದೆ ಪೂರ ನಲವತ್ತು ಸಾವಿರ ಕಳೆದುಕೊಂಡ ದುಃಖ ಹಂಚಿಕೊಂಡರು.
   ಸಾಗರ ತಾಲ್ಲೂಕು ಮತ್ತು ಹೊಸನಗರ ತಾಲ್ಲೂಕುಗಳಲ್ಲಿ ಬಂದಿರುವ ಮಳೆ ಅದರ ಅಂಚಿನ ಶಿವಮೊಗ್ಗ ತಾಲ್ಲೂಕಿನಲ್ಲಿ ಬಂದಿಲ್ಲ ಈ ತಾಲ್ಲೂಕು ಒಂದು ತರ ಬಯಲು ಸೀಮೆ ಅಗುತ್ತಿದೆ ಕೆಲ ವರ್ಷಗಳ ನಂತರ ನಮ್ಮ ತಾಲ್ಲೂಕುಗಳು ಬಯಲು ಸೀಮೆ ಆಗದೆ ಉಳಿಯಲಾರದು.
   ಬೀಗ ವ್ಯಾಪಾರದ ಖಲಂದರ್ ಸಾಹೇಬರು ನಿತ್ಯ 50 ರಿಂದ 100 ಕಿ.ಮಿ. ಬೀಗ ವ್ಯಾಪಾರಕ್ಕಾಗಿ ಅನೇಕ ಊರು ಹಳ್ಳಿ ತಿರುಗುತ್ತಾರೆ ನೂರಾರು ಜನರ ಸಂಪರ್ಕ ಇದೆ ಇದು ಇವರಿಗೆ ದೊಡ್ಡ ಪ್ರಪಂಚ ಜ್ಞಾನ ನೀಡಿದೆ.
   ದೊಡ್ಡ ಮಗ ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಗಿಸಲು ಕೊರಾನಾ ಪ್ರಾರಂಭ ಆಗಿತ್ತು ಕೆಲಸ ಸಿಗುವುದು ಕಷ್ಟ ಆಗಿತ್ತು ಈಗ ದೂರದ ಗುಜರಾತಿನಲ್ಲಿ ಕಂಪನಿ ಒಂದರಲ್ಲಿ ಉದ್ಯೋಗ
ಮಾಡುತ್ತಿದ್ದಾರೆ "ಸಂಬಳ ಕಡಿಮೆ ಆದರೆ ಕೆಲ ವರ್ಷ ಅನುಭವ ಪಡೆದರೆ ಸಂಬಳ ಜಾಸ್ತಿ ಆಗುತ್ತೆ" ಅಂತ ಖಲಂದರ್ ಸಾಹೇಬರೇ ತಮಗೆ ತಾವೇ ಸಮಾದಾನ ಹೇಳಿ ಕೊಳ್ಳುತ್ತಾರೆ.
   ಮಗಳು ಬಿಎಸ್ಪಿ ಅಂತಿಮ ವರ್ಷದಲ್ಲಿ ಮಗ ಬಿಎಸ್ಸಿ ಪ್ರಥಮ ವರ್ಷದಲ್ಲಿ ಓದುತ್ತಿದ್ದಾರೆ ಅವರು ನಿತ್ಯ ಖಾಸಾಗಿ ಬಸ್ಸಿನಲ್ಲಿ ಚಿನ್ಮನೆಯಿಂದ ಆಯನೂರು ತಲುಪಿ ಅಲ್ಲಿಂದ ರಾಜ್ಯ ಸಾರಿಗೆ ಬಸ್ಸಿನಲ್ಲಿ ಶಿವಮೊಗ್ಗ ಕಾಲೇಜಿಗೆ ಹೋಗಬೇಕು ಇದೆಲ್ಲ ತಮ್ಮ ವ್ಯಾಪಾರದಿಂದ ಬರುವ ಆದಾಯದಲ್ಲಿ ಮನೆಯ ನಿತ್ಯ ನಿರ್ವಹಣೆ ಜೊತೆ ಸ೦ಭಾಲಿಸಬೇಕು ಒಂದು ರೀತಿ ತಂತಿ ಮೇಲೆ ಬ್ಯಾಲನ್ಸ್ ಮಾಡಿ ನಡೆದಂತೆ.
   ಈಗ ಮಗನ ಆದಾಯ ಸ್ವಲ್ಪ ಮಟ್ಟಿಗೆ ಖಲಂದರ್ ಸಾಹೇಬರಿಗೆ ಜೀವನದಲ್ಲಿ ಆದಾರವಾಗಿದೆ ಇವರ ಸ್ವಂತದ್ದಾದ ಎರೆಡೂವರೆ ಎಕರೆ ಖುಷ್ಕಿ ಜಮೀನಿನಲ್ಲಿ ಕಳೆದ ವರ್ಷ ಖರ್ಚು ಕಳೆದು ಸುಮಾರು 30 ಸಾವಿರ ಜೋಳದ ಬೆಳೆಯಲ್ಲಿ ಆದಾಯ ಪಡೆದಿದ್ದರು ಅದೇ ಉತ್ಸಾಹಲ್ಲಿ ಸುಮಾರು ನಲವತ್ತು ಸಾವಿರ ವಿನಿಯೋಗಿಸಿ ಜೋಳ ಬಿತ್ತಿ ಕೃಷಿ ಮಾಡಿದ್ದರು ಆದರೆ ಕಳೆದ ಎರೆಡು ತಿಂಗಳು ಮಳೆ ಇಲ್ಲದೆ ಬೆಳೆ ಸುಟ್ಟು ಹೋಗಿದೆ ಖರ್ಚು ಮಾಡಿದ 40 ಸಾವಿರ ಕೂಡ ಇದು ಬಡವರ ಕೂಳಿನ ಹೋರಾಟವೂ ಹೌದು.
   ಶ್ರೀಮಂತ ಎಂದರೆ ಯಾರು? ಹಣ ಮಾತ್ರ ಇರುವವರಾ? ನೆಮ್ಮದಿ ಆರೋಗ್ಯ ಸಂಸ್ಕಾರ ಇರುವವರಾ?.
   ಇವರ ಜಮೀನು ಅರಣ್ಯ ಭೂಮಿ ಅಂತ ಬಗರ್ ಹುಕುಂ ಹಕ್ಕು ಪತ್ರ ದೊರೆತಿಲ್ಲ ಇನ್ನು ಬರಪೀಡಿತ ಪ್ರದೇಶ ಘೋಷಣೆ ಆದರೂ ಇವರಿಗೆ ಪರಿಹಾರ ಸಿಗಲಾರದು ಅಷ್ಟಕ್ಕೂ ಬರ ಪರಿಹಾರ ಖುಷ್ಕಿ ಜಮೀನಿಗೆ ಎಕರೆಗೆ ಆರು ಸಾವಿರ ಮಾತ್ರ ಅದು ರೈತನಿಗೆ ಸಿಗಲು ಮದ್ಯವರ್ತಿಗಳ ಪಾಲಿನ ಹಣ ಪೀಕಬೇಕು.
  ತಿಂಗಳಿಗೆ 25 ಕೇಜಿ ಪಡಿತರ ಅಕ್ಕಿ ಈ ಕುಟುಂಬಕ್ಕೆ ಆಸರೆ ಆಗಿದೆ, ಸಿದ್ದರಾಮಯ್ಯರ ಸರ್ಕಾರದ ಬಾಗ್ಯಲಕ್ಷ್ಮೀ ಯೋಜನೆ ಯ ಎರೆಡು ಸಾವಿರ ಸಿಕ್ಕರೆ ಇವರ ಕುಟುಂಬಕ್ಕೆ ದೊಡ್ಡ ಆಸರೆ ಆಗಲಿದೆ.
   ಕೆಲವು ವರ್ಷಗಳಲ್ಲಿ ಎಲ್ಲಾ ಮಕ್ಕಳು ವಿದ್ಯಾಬ್ಯಾಸ ಮುಗಿಸಿ ಉದ್ಯೋಗ ಕಂಡುಕೊಂಡು ಅವರ ಕಾಲ ಮೇಲೆ ನಿಂತರೆ ತಮ್ಮಷ್ಟು ಸುಖಿ ಯಾರಿಲ್ಲ ಎಂಬ ಆಶಾ ಭಾವನೆಯ ಕನಸುಗಳು ಅವರ ಕಣ್ಣಿನಲ್ಲಿದೆ.
    ದೇವರು ಈ ಕುಟುಂಬಕ್ಕೆ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಿ ಎಂದು ಹಾರೈಸುತ್ತೇನೆ.
   ಸಣ್ಣ ಬೀಗದ ವ್ಯಾಪಾರದಿಂದ ಕುಟುಂಬ ಸಲುಹುತ್ತಾ ಮಕ್ಕಳನ್ನು ವಿದ್ಯಾವಂತರಾಗಿಸಿ ಅವರ ಭವಿಷ್ಯ ಉಜ್ವಲಗೊಳಿಸುತ್ತಿರುವ ಖಲಂದರ್ ಸಾಹೇಬರು ಸಮಾಜಕ್ಕೆ ಮಾದರಿ ಆಗಿದ್ದಾರೆ ಈ ಪ್ರದೇಶದ ಶಾಸಕಿ ಆಗಿರುವ ಶ್ರೀಮತಿ ಶಾರದಾ ಪೂರ್ಯಾ ನಾಯಕರು ಇವರಿಗೆ ಸಹಾಯ ಮಾಡಬಹುದಾ?.
 ಬೀಗದ ವ್ಯಾಪಾರಿ ಖಲಂದರ್‌ ಸಾಹೇಬರ ಸಂಪರ್ಕ ಸಂಖ್ಯೆ 994-521-1406.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ