Skip to main content

Blog number 1770. ಪರಿಶುದ್ಧ ಅರಿಶಿಣದ ಹೆಸರಲ್ಲಿ ವಿಷಕಾರಿ ರಾಸಾಯ ಬಣ್ಣ ಮೆಟಾನಿಲ್ ಯೆಲ್ಲೋ ಸೀಮೆ ಸುಣ್ಣದ ಪುಡಿಯ ಕಲಬೆರಕೆ ಅರಿಶಿಣ ಪುಡಿ ಮಾರಾಟ ಮತ್ತು ಬಳಕೆಯಲ್ಲಿದೆ.

https://youtube.com/shorts/YTpObN0dRcA?feature=shared

#ಕಲಬೆರಕೆ_ಅರಿಶಿಣ_ಪರೀಕ್ಷೆಯ_ಸುಲಭ_ವಿಧಾನ_ಇಲ್ಲಿದೆ

#ಅರಿಶಿಣಪುಡಿಯಿಂದ_ಆರೋಗ್ಯ_ಆದರೆ

#ಮಾರುಕಟ್ಟೆಯಲ್ಲಿರುವುದು_ಕಲಬೆರಕೆ_ಅರಿಶಿಣಪುಡಿ

#ಸೀಮೆಸುಣ್ಣದ_ಪುಡಿ_ಮೆಟಾನಿಲ್_ಯಲ್ಲೋ_ಸೇರಿಸಿದ_ಅರಿಶಿಣಪುಡಿ_ಬಳಕೆಯಲ್ಲಿದೆ.

#ನಾವು_ನಮ್ಮ_ಮಲ್ಲಿಕಾವೆಜ್_ರೆಸ್ಟೋರೆಂಟನಲ್ಲಿ_ಬಳಸುವುದು_ಪರಿಶುದ್ಧ_ಅರಿಶಿಣಪುಡಿ.

#ಅರಿಶಿಣಪುಡಿ_ತುಪ್ಪ_ಬೆಲ್ಲ_ಮಿಶ್ರಿತ_ಗೋಲ್ಡನ್_ವಿಶ್ವವಿಖ್ಯಾತವಾಗಿದೆ.

  ಭಾರತೀಯ ಆಹಾರೋದ್ಯಮದಲ್ಲಿ ಕಲಬೆರಕೆ ಸಂಪೂರ್ಣ ನಿಷೇದ ಯಾವ ಕಾಯಿದೆಯಿಂದಲೂ ಸಾಧ್ಯವಿಲ್ಲ ಎಂಬುದು ನನ್ನ ಅಭಿಪ್ರಾಯ ಯಾಕೆಂದರೆ ನಾವು ಬೆಳೆಯುವ ಬೆಳೆಯಲ್ಲಿ ಸೇರುವ ಔಷದ ಮತ್ತು ಗೊಬ್ಬರದ ವಿಷ ಒಂದು ಕಡೆ ಆದರೆ ಮಾರಾಟಗಾರರು ಮಾರುವ ಸಿದ್ದಪಡಿಸಿದ ಆಹಾರ ಉತ್ಪನ್ನಗಳಲ್ಲಿ ಮಾಡುವ ಕಲಬೆರಕೆ ಇನ್ನೊಂದು ವಿಷದ್ದು ಇದನ್ನು ಬಳಸುವ ಗ್ರಾಹಕನಿಗೆ ಡಬಲ್ ವಿಷದ ದಮಾಕಾ!!...
   ಇವತ್ತು ಹೋಟೆಲ್ ಮಾಲಿಕರುಗಳ ಮೇಲೆ ಗ್ರಾಹಕರು ಕಡಿಮೆ ಬೆಲೆಯಲ್ಲಿ ಆಹಾರ ನೀಡಲಿ ಎಂಬ ಒತ್ತಡ ಮತ್ತು ಹೋಟೆಲ್ ಮಾಲಿಕರುಗಳು ದುರಾಸೆಯಿಂದ ಕಡಿಮೆ ಬೆಲೆಯ  ಎಣ್ಣೆ, ಚಹಾಪುಡಿ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್, ಮಸಾಲೆ ಪುಡಿಯನ್ನು ಬಳಸುತ್ತಾರೆ ಕಡಿಮೆ ಬೆಲೆ ಅಂದರೆ ಅದು ಕಲಬೆರಕೆಯೇ ಆಗಿರುತ್ತದೆ.
   ಈಗ ಭಾರತೀಯ ಅಡುಗೆಯಲ್ಲಿ ಅವಿಭಾಜ್ಯ ಅಂಗವಾದ ಅರಿಶಿಣ ಪುಡಿ ಕೂಡ ಕಲಬೆರಕೆ ಅಂತ ಬಹಳ ಜನರಿಗೆ ಅರಿವಿಲ್ಲ.
   ಅರಿಶಿಣ ಪುಡಿ ಭಾರತೀಯರಿಗೆ ಪುರಾಣ ಕಾಲದಿಂದ ಹರಿದ್ರಾ ಎಂಬ ಹೆಸರಲ್ಲಿ ಆರೋಗ್ಯಕ್ಕಾಗಿ, ರುಚಿಗಾಗಿ, ಸುವಾಸನೆಯಾಗಿ ಬಳಕೆಯಲ್ಲಿದೆ.
  ಇದು ಹೃದಯ ಸಂಬಂದಿಕಾಯಿಲೆಗಳಿಗೆ, ಕ್ಯಾನ್ಸರ್, ಆಲ್ಜಿಮರ್ ಕಾಯಿಲೆಗಳಿಗೆ ರಾಮಬಾಣ ಕಾರಣ ಇದರಲ್ಲಿರುವ ಕುರ್ಕುಮಿನ್ ಎಂಬ ರಾಸಾಯನಿಕ ದೇಹದಲ್ಲಿ ಆಂಟಿ ಇನ್ ಪ್ಲೇಮಟರಿ ಗುಣಗಳನ್ನು ಹೆಚ್ಚಿಸುವುದರಿಂದ ಹಲವಾರು ರೋಗಳಿಗೆ ಇದು ಶಮನಕಾರಿ ಆಗಿ ಕೆಲಸ ಮಾಡುತ್ತದೆ.
  ಅರಿಶಿಣ ತುಪ್ಪ ಬೆಲ್ಲದ ಮಿಶ್ರಣದ ಅರಿಶಿಣದ ಗೋಲ್ಡನ್ ಮಿಲ್ಕ್ ಇವತ್ತು ವಿಶ್ವದಾದ್ಯಂತ ಪ್ರಸಿದ್ದಿ ಪಡೆದಿದೆ.
  ಅರಿಶಿಣದಲ್ಲಿ ತಮಿಳುನಾಡಿನಲ್ಲಿ ಪ್ರಸಿಧ್ಧಿ ಪಡೆದ ಮದ್ರಾಸ್ ಅರಿಶಿಣ ಮತ್ತು ಕೇರಳದಲ್ಲಿ ಬೆಳೆದು ಮಾರಾಟ ಆಗುವ ಅಲೆಪ್ಪಿ ಅರಿಶಿಣ ಮಾರುಕಟ್ಟೆಯಲ್ಲಿ ಪ್ರಸಿದ್ಧಿ ಪಡೆದಿದೆ.
  ಅರಿಶಿಣಕ್ಕಿರುವ ಬೇಡಿಕೆಯಿಂದ ಕಲಬೆರಕೆ ಮಾಡಿ ಅರಿಶಿಣ ಮಾರಾಟ ಮಾಡುವ ಮಧ್ಯವರ್ತಿ ಸಂಸ್ಥೆಗಳು ಈಗ ಎಲ್ಲಾ ಕಡೆ ಇದೆ.
  ಸೀಮೆಸುಣ್ಣದ ಪುಡಿ ಮತ್ತು ಸಿಂಥೆಟಿಕ್ ಕಲರ್ ಡೈ ಹಳದಿ ಆಸಿಡ್ ಆಗಿರುವ ಮೆಟಾನಿಲ್ ಯೆಲ್ಲೊ ಬಳಕೆ ಜಾಸ್ತಿ ಆಗಿದೆ ಇದು ನಿಜ ಅರಿಶಿಣದಲ್ಲ ಅರಿಶಿಣದ ಬಣ್ಣದ ವಿಷ ಆದರೆ ಬಳಕೆದಾರನಿಗೆ ಆಯ್ಕೆ ಇಲ್ಲ ಅವನು ಅನಿವಾರ್ಯವಾಗಿ ಇದನ್ನು ಖರೀದಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
  ಕಲಬೆರಕೆ ಅರಿಶಿಣ ಮತ್ತು ಪರಿಶುದ್ಧ ಅರಿಶಿಣದ ಸುಲಭ ಪರೀಕ್ಷೆ ಮನೆಯಲ್ಲೇ ಮಾಡಬಹುದು ಒಂದು ಲೋಟ ನೀರಿಗೆ ಒಂದು ಟೀ ಚಮಚ ಅರಿಶಿಣ ಪುಡಿ ಹಾಕಿ 10 ರಿಂದ 15 ನಿಮಿಷ ಬಿಡಿ ನಂತರ ನೋಡಿದಾಗ ಅರಿಶಿಣ ಪುಡಿ ಗ್ಲಾಸಿನ ಕೆಳಗೆ ಸಂಗ್ರಹವಾಗಿದ್ದರೆ ಲೋಟದ ನೀರು ಶುದ್ಧವಾಗಿ ಉಳಿದರೆ ಅದು ಪರಿಶುದ್ಧ ಅರಿಶಿಣ, ಕಲಬೆರಕೆ ಅರಿಶಿಣವಾದರೆ ಲೋಟದ ನೀರು ಹಳದಿ ಬಣ್ಣವಾಗಿ ಪುಡಿ ತಳದಲ್ಲಿ ಶೇಖರವಾಗದಿದ್ದರೆ ಅದು ಕಲಬೆರಕೆ ಅರಿಶಿಣ
  ನಾನು ನಮ್ಮ ಹೋಟೆಲ್ ಉದ್ಯಮದಲ್ಲಿ ಪರಿಶುದ್ಧವಾದ ಎಲ್ಲಾ ರೀತಿಯ ಮಸಾಲೆ ಪದಾರ್ಥ ಪರೀಕ್ಷಿಸಿ ಸಂಗ್ರಹಿಸಿ ಬಳಸುತ್ತೇನೆ ಇದೇ ರೀತಿ ಎಲ್ಲಾ ಹೋಟೆಲ್ ಮಾಲಿಕರು, ಅಡುಗೆ ಭಟ್ಟರು ಕಲಬೆರಕೆ ಆಹಾರ ಉತ್ಪನ್ನಗಳನ್ನು ಬಳಸಬಾರದಾಗಿ ವಿನಂತಿಸುತ್ತೇನೆ.
   ಯಾರಿಗಾದರೂ ಈ ಪರಿಶುದ್ಧ ಅರಿಶಿಣ ಪುಡಿ ಬೇಕಾಗಿದ್ದರೆ ನನ್ನ 9449253788 ಗೆ ನಿಮ್ಮ ವಿಳಾಸ ವಾಟ್ಸಪ್ ಮಾಡಿ ಪರಿಶುದ್ಧ ಅರಿಶಿಣದ ಪುಡಿ ಬೆಲೆ ಮತ್ತು ಅದರ ಅಂಚೆ ವೆಚ್ಚ ಪಾವತಿಸಿದರೆ ಅವರ ವಿಳಾಸಕ್ಕೆ ತಲುಪಿಸ ಬಹುದು ಮಾರುಕಟ್ಟೆಯಲ್ಲಿ ದೊರೆಯುವ ಅರಿಶಿಣ ಪುಡಿಗಿಂತ ಕೊಂಚ ಬೆಲೆ ಜಾಸ್ತಿ ಮತ್ತು ಇದು ಪರಿಶುದ್ಧ ಅರಿಶಿಣ ಪುಡಿ ಆಗಿರುವುದರಿಂದ ನೀವು ಬೇಡಿಕೆ ನೀಡಿದ ದಿನ ಅವತ್ತಿನ ಬೆಲೆಯಲ್ಲಿ ಕಳಿಸಲಾಗುವುದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...