Skip to main content

Blog number 1759. ಈಸೂರು ಸ್ವಾತಂತ್ರ್ಯದ 81 ನೇ ದಿನಾಚರಣೆ 25 -ಸೆಪ್ಟೆಂಬರ್-2023.

#ನಾಳೆ_ಈಸೂರಿನ_ಸ್ವಾತಂತ್ರ್ಯೋತ್ಸವದ_81ನೇ_ದಿನಾಚಾರಣೆ.

#ಶಿಕಾರಿಪುರ_ಸಮೀಪದ_ಈಸೂರು

#ಇಲ್ಲಿನ_ವೀರಭದ್ರೇಶ್ವರ_ದೇವಾಲಯದಲ್ಲಿ_1942ರಲ್ಲಿ_ಸೆಪ್ಟೆಂಬರ್_25ರಂದು_ದೇಶದ_ದ್ವಜಾರೋಹಣ.

#ದೇಶದ_ಮೊದಲ_ಸ್ವಾತಂತ್ರ್ಯ_ಘೋಷಿಸಿದ_ಸರಕಾರ_ಗ್ರಾಮ_ಈಸೂರು 

#ಮರುದಿನ_ಈ_ಧ್ವಜ_ತೆಗೆಯಲು_ಬಂದ_ಬ್ರಿಟೀಷ್_ಸರ್ಕಾರದ_ಪೋಲಿಸ್_ಅಧಿಕಾರಿ_ಅಮಾಲ್ದಾರರು_ಜನಾಕ್ರೋಶಕ್ಕೆ_ಬಲಿ

#ನಂತರ_ಐದುಸಾವಿರ_ಬ್ರಿಟೀಷ್_ಸೇನಾ_ತುಕಡಿ_ನಡೆಸಿದ್ದು_ಅಕ್ಷರಶಃ_ಹತ್ಯಾಕಾಂಡ

#ಐದು_ಜನರಿಗೆ_ಗಲ್ಲು_40_ಜನರಿಗೆ_ಜೀವಾವಾದಿ_ನೂರಾರು_ಸಂಸಾರಗಳು_ಊರು_ತೊರೆದರು.

#ಖ್ಯಾತ_ರಂಗಕರ್ಮಿ_ಡಾಕ್ಟರ್_ಸಾಸ್ವೇಹಳ್ಳಿ_ಸತೀಶ್_ನಾಟಕ_ಬರೆದು_ಪ್ರದರ್ಶಿಸಿದ್ದಾರೆ.
    ಡಾಕ್ಟರ್ ಸಾಸ್ವೇಹಳ್ಳಿ ಸತೀಶ್ ನಾಡಿನ ಇತಿಹಾಸದ ಮೇಲೆ ಬೆಳಕು ಚೆಲ್ಲಿ ಅದನ್ನು ರಂಗದ ಮೂಲಕ ಮುಂದಿನ ತಲೆಮಾರಿಗೆ ತಿಳಿಸುವ ಕೆಲಸ ಸಮರ್ಪಕವಾಗಿ ಮಾಡುತ್ತಾ ಬಂದಿದ್ದಾರೆ ಇತ್ತೀಚೆಗೆ ಇವರು ಈಸೂರು ಹೋರಾಟವನ್ನು ರಂಗ ಪ್ರಯೋಗ ಮಾಡಿ ಯಶಸ್ವಿ ಆಗಿದ್ದಾರೆ.
  ಈಸೂರು ಹೋರಾಟವಾದ "ಏಸೂರು ಕೊಟ್ಟರೂ.. ಈಸೂರು ಕೊಡೆವು" ನಾಟಕ ಇವರು ಬರೆದು ಪ್ರಕಟಿಸಿದ್ದಾರೆ ಅಷ್ಟೇ ಅಲ್ಲ ಈ ಕಾಯ೯ಕ್ರಮದಲ್ಲಿ ಈಸೂರು ಸ್ವಾತಂತ್ರ್ಯ ಹೋರಾಟದ ನೇತಾರ ಸಾಹುಕಾರ್ ಬಸವಣ್ಯಪ್ಪರ ಮೊಮ್ಮಗಳು ಕವಿತಾ ಮತ್ತು ಚಿಂದಿ ಹುಚ್ರಾಯಪ್ಪರ ಮೊಮ್ಮಗಳು ಕಸ್ತೂರಿ ಅವರನ್ನು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಆಹ್ವಾನಿಸಿ ಅವರಿಗೆ ನಾಟಕದ ಪ್ರತಿ ನೀಡುವ ಕೆಲಸ ಮಾಡಿದ್ದಾರೆ.
   ಈಸೂರಿನ ಹೋರಾಟ ಮತ್ತು ಹೋರಾಟದ ವಂಶಸ್ಥರನ್ನು ಜನ ಮಾನಸದಲ್ಲಿ ಚಿರಸ್ಥಾಯಿಗೊಳಿಸುವ ಡಾಕ್ಟರ್ ಸಾಸ್ವೆಹಳ್ಳಿ ಸತೀಶರ ಮಹತ್ಕಾಯ೯ ಸ್ತುತ್ಯಾರ್ಹ ಮತ್ತು ವೈಯಕ್ತಿಕವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
    1995ರಲ್ಲಿ ನಾನು ಈಸೂರಿನ ಸ್ವಾತಂತ್ರ್ಯ ಹೋರಾಟದ ಆರು ಪುಟಗಳ ಕೈಪಿಡಿ ಮಾಡಿ ಜಿಲ್ಲೆಯ ಶಾಲೆಗಳಿಗೆ ಉಚಿತವಾಗಿ ಹಂಚಿದ್ದೆ ಮತ್ತು ಶಾಲಾ ವಿಶೇಷ ಕಾರ್ಯಕ್ರಮದಲ್ಲಿ ಇದನ್ನು ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಓದಿಸಿ ಮನನ ಮಾಡಲು ವಿನಂತಿಸಿದ್ದೆ ಒಂದೆರೆಡು ವರ್ಷ ಕೆಲ ಪ್ರಗತಿ ಪರ ಶಿಕ್ಷಕರು ಇದನ್ನು ಪಾಲಿಸಿದ್ದರು.
    ಆಗಿನ ಶಿವಮೊಗ್ಗ ಜಿಲ್ಲಾ ಪಂಚಾಯತ್ ನಲ್ಲಿ ಸುವರ್ಣ ಸ್ವಾತಂತ್ರೋತ್ಸವದ ಅಂಗವಾಗಿ ಆಗಸ್ಟ್ 14 ರ ಮಧ್ಯರಾತ್ರಿ ಜಿಲ್ಲಾ ಪಂಚಾಯತ್ ಸಭೆ ನಡೆಸಿದಾಗ ಈ ಈಸೂರು ಸ್ವಾತಂತ್ರ್ಯ ಹೋರಾಟದ ಕೈಪಿಡಿ ಅವತ್ತಿನ ಸಭೆಯಲ್ಲಿ ಭಾಗವಹಿಸಿದ ಎಲ್ಲಾ ಜಿಲ್ಲಾ ಪಂಚಾಯತ್ ಸದಸ್ಯರಿಗೆ ಮತ್ತು ಸಿಬ್ಬಂದಿ ವರ್ಗಕ್ಕೆ ನೀಡಿದ್ದೆ.
  ಈ ಚರಿತ್ರಾರ್ಹ ಸದಾ ಸ್ಮರಣೆ ಮಾಡುವಂತ ಜಿಲ್ಲಾ ಪಂಚಾಯತ್ ಮದ್ಯರಾತ್ರಿಯ ಸಭೆಯಲ್ಲಿ ನನಗೆ ಈಸೂರು ಸ್ವಾತಂತ್ರ್ಯ ಹೋರಾಟ ಸ್ಮರಿಸುವ ಮಾತನಾಡುವ ಅವಕಾಶ ಲಭಿಸಿತ್ತು ಮತ್ತು ಶಿವಮೊಗ್ಗ ಜಿಲ್ಲಾ ಪಂಚಾಯತ್ ಈಸೂರಿನಲ್ಲಿ ಸ್ಮಾರಕ ಭವನ ನಿರ್ಮಿಸಿತ್ತು.
    ಶಿವಮೊಗ್ಗ ಜಿಲ್ಲೆಯ ಸ್ವಾತಂತ್ರ್ಯ ಹೋರಾಟವಾದ "ಏಸೂರು ಕೊಟ್ಟರು ಈಸೂರು ಕೊಡೆವು" ಎಂಬ ಜನಪ್ರಿಯ ಘೋಷಣೆಯೊಂದಿಗೆ 25 - ಸೆಪ್ಟೆಂಬರ್ -1942 ರಲ್ಲಿ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ವೀರ ಸ್ವಾತಂತ್ರ್ಯ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರ ನೇತೃದಲ್ಲಿ ಊರಿನ ವೀರಭದ್ರೇಶ್ವರ ದೇವಾಲಯದಲ್ಲಿ ದೇಶದ ಭಾವುಟ ಹಾರಿಸಿ ಈಸೂರು ಸ್ವಾತಂತ್ರ್ಯವಾಯಿತೆಂದು ಘೋಷಿಸುತ್ತಾರೆ.
  ಮಹಾತ್ಮಾ ಗಾಂಧೀಜಿ ಅವರ ಪ್ರೇರಣೆಯಿಂದ 1942 ರಲ್ಲಿ ಪ್ರಾರಂಭವಾದ ಕ್ವಿಟ್ ಇಂಡಿಯಾ ಚಳುವಳಿ ಈಸೂರು ಹೋರಾಟಕ್ಕೆ ಕಾರಣವಾಯಿತು.
   ಬ್ರಿಟಿಷ್ ಸರ್ಕಾರದ ಅಮಾಲ್ದಾರ್ ಚೆನ್ನಕೃಷ್ಣಪ್ಪ ಮತ್ತು ಪೋಲಿಸ್ ಅಧಿಕಾರಿ ಕೆಂಚೆಗೌಡ ತಮ್ಮ ಸಿಬ್ಬಂದಿಗಳ ಜೊತೆ ಈಸೂರಿನ ವೀರಭದ್ರೇಶ್ವರ ದೇವಾಲಯ ಪ್ರವೇಶಿಸಿ ದಪ೯ದಿಂದ ದೇಶದ ಬಾವುಟ ತೆಗೆಯಲು ಪ್ರಯತ್ನಿಸಿದ್ದರಿಂದ  ನಡೆದ ಘರ್ಷಣೆಯಲ್ಲಿ ಇವರಿಬ್ಬರು ಜೀವ ಕಳೆದುಕೊಳ್ಳುತ್ತಾರೆ.
   ಮರುದಿನ ಸುಮಾರು ಐದು ಸಾವಿರ ಯೋದರ ಬ್ರಿಟೀಶ್ ಸೈನ್ಯ ಸಂಪೂರ್ಣ ಈಸೂರು ಗ್ರಾಮ ಮುತ್ತಿಗೆ ಹಾಕಿ ಎಲ್ಲಾ ರೀತಿಯ ಅನಾಚಾರ ನಡೆಸುತ್ತದೆ ಈ ಹೋರಾಟದ ವೀರ ಸ್ವಾತಂತ್ರ್ಯ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರ ಮನೆ ಬೆಳೆ ಎಲ್ಲಾ ಬ್ರಿಟೀಶರು ಸುಟ್ಟು ಬೂದಿ ಮಾಡುತ್ತಾರೆ.
  ಸಾಹುಕಾರ್ ಬಸವಣ್ಯಪ್ಪನವರು ತಮ್ಮ ಅಜ್ಞಾತವಾಸದಲ್ಲೇ ಜೀವ ತ್ಯಾಗ ಮಾಡುತ್ತಾರೆ ಈ ಬಗ್ಗೆ 1997 ರಲ್ಲಿ ಆನಂದಪುರಂಗೆ ಆಗಮಿಸಿದ್ದ ಸುಭಾಷ್ ಚಂದ್ರ ಬೋಸರ ಅನುಯಾಯಿ INA ರಾಮರಾವ್ ನೇತೃತ್ವದ ಸುವರ್ಣ ಸ್ವಾತಂತ್ರ್ಯ ಜೋತಿ ಸ್ವಾಗತ ಕಾರ್ಯಕ್ರಮದಲ್ಲಿ ನಮ್ಮ ಆನಂದಪುರಂನ ಸ್ವಾತಂತ್ರ್ಯ ಹೋರಾಟಗಾರರಾದ ಜನ ಪ್ರೀತಿಯಿಂದ ಕರೆಯುತ್ತಿದ್ದ  ಟೈಲರ್ ರಾಮಣ್ಣ (ರಾಮರಾವ್) ಈಸೂರು ಹೋರಾಟದ ನೇತಾರರನ್ನು ಆನಂದಪುರಂನ ಇನಾಂದಾರ ಕುಟುಂಬದ ಬದರಿನಾರಾಯಣ ಅಯ್ಯಂಗಾರ್ (ನಂತರ ಮಂತ್ರಿ ಸಂಸದರಾಗುತ್ತಾರೆ) ಸೂಚನೆ ಮೇಲೆ ಅವರಿಗೆ ಆಶ್ರಯ ನೀಡಿ ತೀರ್ಥಹಳ್ಳಿಯ ರಹಸ್ಯ ಸ್ಥಾನಕ್ಕೆ ತಲುಪಿಸಿದ್ದಾಗಿ ಈ ರಹಸ್ಯ ಇಷ್ಟು ವರ್ಷ ಎಲ್ಲೂ ಬಹಿರಂಗ ಪಡಿಸಿರಲಿಲ್ಲ ಕಾರಣ ಈ ವಿಚಾರ ಬ್ರಿಟಿಷ್ ಸರ್ಕಾರಕ್ಕೆ ಗೊತ್ತಾಗಿದ್ದರೆ ನೇಣು ಕಂಬಕ್ಕೇರಿಸದೆ ಬಿಡುತ್ತಿರಲಿಲ್ಲ ಎಂದು ಆನಂದಪುರ೦ ಬಸ್ ನಿಲ್ದಾಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ INA ರಾಮರಾವ್ ಎದುರು ಬಹಿರಂಗ ಮಾಡಿದ್ದರು.
  ಈ ಕಾರ್ಯಕ್ರಮದ ಚಿತ್ರ ಮತ್ತು ಸ್ವಾತಂತ್ರ್ಯ ಹೋರಾಟಗಾರ ಆನಂದಪುರಂ ರಾಮ ರಾವ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ ನೋಡಿ
https://arunprasadhombuja.blogspot.com/2021/06/39.html.
   ಇದಕ್ಕೆ ಕಾರಣ ಈಸೂರು ಹೋರಾಟ ಶ್ಲಾಘಿಸಿ ನೇತಾಜಿ ಸುಭಾಷ್ ಚಂದ್ರ ಬೋಸರು ಬರ್ಲಿನ್ ನಿಂದ (ರಷ್ಯಾ) ರೇಡಿಯೋದಲ್ಲಿ ಭಾಷಣ ಮಾಡಿದ್ದರಂತೆ.
   ಆನಂದಪುರಂನ ಬದರಿನಾರಾಯಣ ಅಯ್ಯಂಗಾರರೂ ಸ್ವಾತಂತ್ರ್ಯ ಹೋರಾಟಗಾರರು ಮತ್ತು ವಕೀಲರೂ ಆಗಿದ್ದವರು ಅದೇ ರೀತಿ ತೀರ್ಥಹಳ್ಳಿಯ ಕಡಿದಾಳು ಮಂಜಪ್ಪನವರು ಸ್ವಾತಂತ್ರ್ಯ ಹೋರಾಟಗಾರರು ವಕೀಲರು ಆಗಿದ್ದರು ಮತ್ತು ಕಡಿದಾಳು ಮಂಜಪ್ಪನವರು ಬದರಿನಾರಾಯಣ ಅಯ್ಯಂಗಾರರ ತಂದೆ ರಾಮಕೃಷ್ಣ ಅಯ್ಯಂಗಾರರ ಕಾನೂನು ಸಲಹೆಗಾರರೂ ಆಗಿದ್ದರು ಆದ್ದರಿಂದ ಈಸೂರು ಹೋರಾಟದ ವೀರ ಸೇನಾನಿ ಸಾಹುಕಾರ್ ಬಸವಣ್ಯಪ್ಪನವರು ಮಲೆನಾಡಿನ ತೀರ್ಥಹಳ್ಳಿಯ ರಹಸ್ಯ ಜಾಗದಲ್ಲಿ ಆಶ್ರಯ ಪಡೆದರು ಎ೦ಬ ವಿಚಾರ ಸರಿ ಇರಬಹುದು ಆದರೆ ಇದು ಬ್ರಿಟೀಷ್ ಸರ್ಕಾರಕ್ಕೆ ಗೊತ್ತಾಗಿದ್ದರೆ ಮಾತ್ರ ಸಹಾಯ ಮಾಡಿದ ಎಲ್ಲರಿಗೂ ಘನ ಘೋರ ಶಿಕ್ಷೆ ಮಾತ್ರ ತಪ್ಪುತ್ತಿರಲಿಲ್ಲ.
   ನಾಳೆ (25- ಸೆಪ್ಟೆಂಬರ್ ) ಈಸೂರು ಸ್ವಾತಂತ್ರ್ಯ ಹೋರಾಟದ 81ನೇ ದಿನಾಚಾರಣೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ