Skip to main content

Blog number 1843. ಶಿವಮೊಗ್ಗದ ಮಾಜಿ ಸಂಸದರಾಗಿದ್ದ ಕೆ.ಜಿ. ಶಿವಪ್ಪರ ಪುತ್ರ ಪ್ರಶಾಂತ್ ಮತ್ತು ನನ್ನ ಮೊದಲ ಬೇಟಿ.

#ನಿನ್ನೆ_ನನ್ನ_ಅತಿಥಿ_ಮಾಜಿ_ಸಂಸದ_ಕೆಜಿ_ಶಿವಪ್ಪರ_ಪುತ್ರ_ಪ್ರಶಾಂತ್ 

#ಮಾಜಿ_ಮುಖ್ಯಮಂತ್ರಿ_ಬಂಗಾರಪ್ಪ_ಚಿತ್ರ_ನಟ_ರಾಜಕುಮಾರರ_ಸಂಬಂದಿ

#ನಮ್ಮ_ಆನಂದಪುರಂನಲ್ಲಿ_ಇವರ_ನವಚೇತನಾ_ವೇದಿಕೆ_ಮಂಗಳೂರಿನ_ಕೆ_ಎಸ್_ಹೆಗ್ಗಡೆ_ಆಸ್ಪತ್ರೆ_ಸಹಯೋಗದ_ಆರೋಗ್ಯ_ಶಿಭಿರ

#ರಾಜಕಾರಣದಲ್ಲಿ_ಇವರಿಗೆ_ಇರುವ_ಆಸಕ್ತಿ_ಮುಂದಿನ_ತಲೆಮಾರಿನ_ರಾಜಕಾರಣಕ್ಕೆ_ದಾರಿ.

     ನಿನ್ನೆ ಸಂಜೆ ಪ್ರಶಾಂತ್ ಹೊಸಕೊಪ್ಪದ ರಮೇಶ್, ತಳಗೇರಿಯ ವಿಶ್ವನಾಥ ಮತ್ತು ಘಂಟಿನಕೊಪ್ಪದ ನನ್ನ ಮಿತ್ರ ಗಜೇಂದ್ರ ಜೊತೆ ನನ್ನ ಕಛೇರಿಗೆ ಬಂದಿದ್ದರು ಇದು ನನ್ನ ಅವರ ಪ್ರಥಮ ಭೇಟಿ.
   ಇವರ ತಂದೆ 1992ರಲ್ಲಿ ಶಿವಮೊಗ್ಗ ಲೋಕ ಸಭಾ ಚುನಾವಣೆಯ ಅಭ್ಯರ್ಥಿ ಆದಾಗ ಮೊದಲ ಚುನಾವಣಾ ಪ್ರಚಾರ ಸಭೆಯ ಉದ್ಘಾಟನೆ ಜ್ಯೂವಲ್ ರಾಕ್ ಹೋಟೆಲ್ ಸಮೀಪದ ಶಿವಮೊಗ್ಗದ ದುರ್ಗಿಗುಡಿಯ ಸರ್ಕಾರಿ ಶಾಲೆ ಮತ್ತು ದೇವಸ್ಥಾನದ ಆವರಣದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೇಸ್ ಹಮ್ಮಿ ಕೊಂಡಿತ್ತು ಆ ಸಭೆಯಲ್ಲಿ ಪ್ರಸ್ತಾವಿಕ ಭಾಷಣ ನನ್ನದು ಆಗ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು ನನ್ನ ಮಿತ್ರ ಮತ್ತು ಆಗಿನ ಮುಖ್ಯ ಮಂತ್ರಿ ಬಂಗಾರಪ್ಪರ ಕಟ್ಟಾ ಶಿಷ್ಯ ಮಲ್ಲಿಕಾರ್ಜುನ್ ರಾವ್.
  ಈ ಚುನಾವಣೆಯ ಪ್ರಚಾರಕ್ಕೆ ರಾಜೀವ್ ಗಾಂಧಿ ಬಂದಿದ್ದರು ಆಗ ಇವರ ಎದರು ಪರಾಭವಗೊಂಡವರು ಬಿಜೆಪಿಯ ಅಭ್ಯರ್ಥಿ ಯಡ್ಯೂರಪ್ಪನವರು. 
 ಕೆ.ಜಿ. ಶಿವಪ್ಪರ ಕೊನೆಯ ಬೇಟಿ ಸೊರಬದ ದಂಡಾವತಿ ಆಣೆಕಟ್ಟು ವಿರೋದಿ ಹೋರಾಟದ ಸತ್ಯಾಗ್ರಹ ಸ್ಥಳಕ್ಕೆ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪ, ಮಾಜಿ ಶಾಸಕರಾದ ಸ್ವಾಮಿ ರಾವ್, ತೀನಾ ಶ್ರೀನಿವಾಸ್ ಮತ್ತು ಸಾಗರದ ಪತ್ರಕರ್ತ ಮಿತ್ರರ ಜೊತೆ ಹೋಗುವಾಗ ದೂಗೂರಿನಲ್ಲಿರುವ ದಲಿತ ಹೋರಾಟಗಾರ ಪರಮೇಶ್ ಮನೆಯಲ್ಲಿ ಎಲ್ಲರೂ ಚಹಾ ಸ್ವೀಕಾರ ಮಾಡಿದ್ದು.
   ಮುಖ್ಯಮಂತ್ರಿ ಬಂಗಾರಪ್ಪರ ಪತ್ನಿ, ಇವರ ತಂದೆ ಸಂಸದ ಕೆ.ಜಿ. ಶಿವಪ್ಪರ ಪತ್ನಿ, ಶಾಸಕ ಜಿ.ಡಿ.ನಾರಾಯಣಪ್ಪರ ಪತ್ನಿ ಮತ್ತು ರಾಘವೇಂದ್ರ ರಾಜಕುಮಾರ್‌ ಪತ್ನಿಯ ತಾಯಿ ಸಿದ್ದಾಪುರದವರು ಅಕ್ಕ ತಂಗಿಯರು, ಈಗಿನ ಸಿರ್ಸಿ ವಿದಾನ ಸಭಾ ಸದಸ್ಯ ಬೀಮಣ್ಣ ಈ ಸಹೋದರಿಯರ ಸಹೋದರ ಇವರಿಗೆ ಮಾವ, ಬಂಗಾರಪ್ಪರ ಪುತ್ರಿ ಡಾ.ರಾಜಕುಮಾರ್ ಪುತ್ರ ಚಿತ್ರನಟ ಶಿವರಾಜ ಕುಮಾರ್ ಪತ್ನಿ, ಇನ್ನೊಬ್ಬ ಪುತ್ರಿ ಪ್ರಜಾವಾಣಿ ಸಂಪಾದಕರ ಪತ್ನಿ, ಪ್ರಶಾಂತರ ಸಹೋದರಿ ಕಾರ್ಕಳದ ಮಾಜಿ ಮಂತ್ರಿ ಹಾಲಿ ಶಾಸಕ ಸುನೀಲ್ ಕುಮಾರ್ ಪತ್ನಿ, ಜಿಲ್ಲಾ ಮಂತ್ರಿ ಮದುಬಂಗಾರಪ್ಪ, ಮಾಜಿ ಮಂತ್ರಿ ಕುಮಾರ್ ಬಂಗಾರಪ್ಪ ಇವರ ತಾಯಿಯ ಸ್ವಂತ ಅಕ್ಕನ ಮಕ್ಕಳು.
  ಇಂತಹ ರಾಜ್ಯದ ಪ್ರಭಾವಿ ರಾಜಕಾರಣದ ಕಾಂಗ್ರೇಸ್ ಮತ್ತು ಬಿಜೇಪಿ ಪಕ್ಷಗಳ ಪ್ರಭಾವಿ ರಾಜಕಾರಣಿಗಳ ಸಂಬಂದಿ ಮತ್ತು ರಾಜ್ಯದ ಸೆಲೆಬ್ರಿಟಿಗಳಾದ ಡಾಕ್ಟರ್ ರಾಜ್ ಕುಟುಂಬದ ಸಂಬಂದ ಇರುವ ಸ್ವತಃ ಇವರ ತಂದೆ ಒಂದು ಅವಧಿಯ ಸಂಸದರಾಗಿರುವುದು ಬಾವ ಕಾರ್ಕಳದ ಸುನೀಲ್ ಕುಮಾರ್ ಬಿಜೆಪಿಯಲ್ಲಿರುವುದು ಯುವಕ ಪ್ರಶಾಂತ್ ಸಾಗರದ ರಾಜಕಾರಣದಲ್ಲಿ ಮುಂದೆ ಬರಲು ಟ್ರಂಪ್ ಕಾರ್ಡ್ ಆಗಿರುವುದು ಸುಳ್ಳಲ್ಲ.
    ಪ್ರಶಾಂತರ ನವಚೇತನಾ ವೇದಿಕೆ ಮತ್ತು ಮಂಗಳೂರಿನ ಕೆ.ಎಸ್.ಹೆಗ್ಗಡೆ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಡಿಸೆಂಬರ್ 3 ರಂದು ಆನಂದಪುರ೦ನಲ್ಲಿ ಆರೋಗ್ಯ ತಪಾಸಣೆ ಶಿಭಿರ ಹಮ್ಮಿಕೊಂಡಿದ್ದಾರೆ.
   ಅವರು ಈ ಹಿಂದೆ ಉದ್ಯೋಗ ಮೇಳ ನಡೆಸಿದ್ದು ಕೇಳಿದ್ದೆ ಈ ರೀತಿ ಜನರ ತಲುಪುವ ಇವರ ಕಾರ್ಯ ಪ್ರಶಂಸನೀಯವಾಗಿದೆ, ಪೆಟ್ರೋಲ್ ಬಂಕ್ - ಜಲ್ಲಿ ಕ್ರಷರ್ - ಅಡಿಕೆ ಕೃಷಿ- ಹಿಂದೆ ಶಿವಮೊಗ್ಗದಲ್ಲಿ ಕಾರ್ ಶೋರೂಂ ಕೂಡ ತೆರೆದಿದ್ದರು.
   ನಿನ್ನೆ ಇವರ ಜೊತೆ ಮಾತಾಡಿದಾಗ ಅನ್ನಿಸಿದ್ದು ಪ್ರಶಾಂತ್ ಗೆ ಇರುವ  ಪ್ರಪಂಚ ಜ್ಞಾನ, ಸಾಮಾನ್ಯ ಪ್ರಜ್ಞೆ, ಜನ ಸಾಮಾನ್ಯರ ಜೊತೆ ಬೆರೆಯುವ ಪರಿ ಮುಂದಿನ ತಲೆಮಾರಿನ ಜಿಲ್ಲಾ ರಾಜಕಾರಣದಲ್ಲಿ ಇವರದ್ದೊಂದು ಚಾಪು ಮೂಡಿಸಲಿದೆ ಅನ್ನಿಸಿತು.
  ಇವರು ಮತ್ತು ಇವರ ಗೆಳೆಯರಿಗೆ ತಂಪು ಕೋಕಂ ಪಾನಿಯ ಮತ್ತು ನನ್ನ ಎರೆಡು ಪುಸ್ತಕ ನೀಡಿ ಅವರ ಜನಪರ ಸೇವೆ ಮುಂದುವರಿಯಲಿ ಎಂದು ಹಾರೈಸಿ ಬೀಳ್ಕೊಟ್ಟೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...