Skip to main content

Blog number 1841. ಶರಾವತಿ ನದಿ ದಂಡೆಯ ನತದೃಷ್ಟರ ಸಂಕಷ್ಟಗಳು ರಾಜಕೀಯ ಪಕ್ಷಗಳು ಚುನಾವಣೆಯ ದಾಳವಾಗಿ ಬಳಸುತ್ತಿದೆ.

#ಶರಾವತಿ_ಮುಳುಗಡೆ_ಸಂತ್ರಸ್ಥರ_ಪರವಾಗಿ_ಆಯನೂರಿಂದ_ಶಿವಮೊಗ್ಗದವರೆಗೆ
#ಕಾಂಗ್ರೇಸ್_ಪಕ್ಷ_ನಡೆಸಿದ_ಜನಾಕ್ರೋಶ_ಯಾತ್ರೆಗೆ_ಒಂದು_ವಷ೯

#ಕಳೆದ_ವಷ೯_28_ನವೆಂಬರ್_2022ರಂದು_ನಡೆದಿತ್ತು.

#ಅವತ್ತು_ಈ_ಯಾತ್ರೆಯಲ್ಲಿ_ಭಾಗವಹಿಸಿದ್ದ_ವಿರೋದ_ಪಕ್ಷದ_ನಾಯಕ_ಸಿದ್ಧರಾಮಯ್ಯನವರು_ಡಿಕೆಶಿ,

#ಇವತ್ತು_ಮುಖ್ಯಮಂತ್ರಿ_ಉಪಮುಖ್ಯಮಂತ್ರಿ

#ಶರಾವತಿ_ನದಿ_ದಂಡೆಯ_ನತದೃಷ್ಟ_ಸಂತ್ರಸ್ಥರು.

#ಪ್ರದಾನಿ_ನೆಹರೂಗೆ_ಮನವಿ_ನೀಡಿದಾಗ_ನೆಹರೂ_ವರ್ತನೆ.

#ಸಂಸದರಾಗಿದ್ದ_ಕೆಜಿ_ಒಡೆಯರ್_ನೇತೃತ್ವದಲ್ಲಿ_ಶರಾವತಿ_ಮುಳುಗಡೆ_ರೈತರ_ನಿಯೋಗ.

#ಅವೈಜ್ಞಾನಿಕ_ಪರಿಹಾರ_ಪುನರ್_ವಸತಿ_ಯೋಜನೆ

#ಆರ್ಥಿಕ_ಸಾಮಾಜಿಕವಾಗಿ_ಮೂರು_ತಲೆಮಾರು_ಕಷ್ಟದಲ್ಲಿ_ಕಳೆದಿದೆ.

#ಮುಳುಗಡೆ_ರೈತರ_ಕುಟುಂಬಕ್ಕೆ_ಒಂದು_ಉದ್ಯೋಗದ_ಭರವಸೆ_ಈಡೇರಲಿಲ್ಲ.

#ಸಾಗರದ_ಸಂಜಯ್_ಪಾಲಿಟೆಕ್ನಿಕ್_ಪಕ್ಕದ_ಶರಾವತಿ_ಸಂತ್ರಸ್ಥರ_ನೂರಾರು_ನಿವೇಶನ_ಯಾರ_ಪಾಲಾಯಿತು?

#ಚುನಾವಣೆಗಳು_ಬಂದಾಗ_ಮಾತ್ರ_ಮುನ್ನಲೆಗೆ_ಬರುವ_ಸಂತ್ರಸ್ಥರ_ಬವಣೆಗಳು.

   1939 ರಲ್ಲಿ ಶರಾವತಿ ವಿದ್ಯುತ್ ಯೋಜನೆಗಾಗಿ ಸಾಗರ ತಾಲ್ಲೂಕಿನ ಕರೂರು - ಬಾರಂಗಿ ಹೋಬಳಿಯ ಮಡೆನೂರು ಹಿರೇಬಾಸ್ಕರ ಡ್ಯಾಂ ನಂತರ ಇಲ್ಲಿ೦ದ 20 ಕಿ ಮಿ ಜೋಗ್ ಸಮೀಪದ ಲಿಂಗನಮಕ್ಕಿಯಲ್ಲಿ 1964ರಲ್ಲಿ ನಿರ್ಮಿಸಿದ ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಯಲ್ಲಿ ಮುಳುಗಡೆ ಆದ ಜನವಸತಿ ಕೇಂದ್ರಗಳು ಮತ್ತು ಪಲವತ್ತಾದ ಜಮೀನು ಅಡಿಕೆ ತೋಟಗಳು ಅಪಾರ.
   ಮೊದಲ ಮುಳುಗಡೆ ಮಡೆನೂರು ತನಕ ಹೊಸನಗರ ತಾಲ್ಲೂಕ್ ಭೂ ಪ್ರದೇಶವೂ ಸೇರಿ ಆದಾಗಲೇ ಅಲ್ಲಿನ ಸಂತ್ರಸ್ಥರ ಪುನರ್ ವಸತಿ ವ್ಯವಸ್ಥಿತವಾಗಿ ಆಗಿರಲೇ ಇಲ್ಲ, ಆಗ ಬ್ರಿಟೀಶ್ ನಿಯಂತ್ರಣದ ಮೈಸೂರು ಆಡಳಿತವಾಗಿತ್ತು ಬ್ರಿಟೀಶರಿಗೆ ಭಾರತೀಯ ಸಂತ್ರಸ್ಥರ ಪುನರ್ವಸತಿಗೆ ಅಂತಹ ಕಾಳಜಿ ಇರಲಿಲ್ಲ ಎಂಬುದು ವಾಸ್ತವ ಸತ್ಯ.
  ಆದರೆ 1964ರಲ್ಲಿ ಹಿರೇಬಾಸ್ಕರ ಡ್ಯಾಂ ನ್ನೆ ಮುಳುಗಿಸಿ ಮಡೆನೂರುನಿಂದ 20 ಕಿ.ಮಿ.ದೂರದ ಲಿಂಗನಮಕ್ಕಿ ಡ್ಯಾಂ ನಿಮಿ೯ಸಿದಾಗ ಎರಡನೆ ಸಾರಿ ಮುಳುಗಡೆ ಆದವರ ಸಂಖ್ಯೆ ಅಸಂಖ್ಯ ಹಾಗಂತ 1964 ರಲ್ಲಿ ಸ್ವಾತಂತ್ರ್ಯ ಭಾರತದ ಆಡಳಿತವಿತ್ತು 3ನೇ ಚುನಾವಣೆಯೂ ಆಗಿತ್ತು ಆದರೆ ಸಂತ್ರಸ್ಥರ ಪುನರ್ವಸತಿ ಮಾತ್ರ ಬ್ರಿಟೀಷ್ ಆಡಳಿತಕ್ಕೆ ಬಿನ್ನವಾಗದಿದ್ದದ್ದು ಮಾತ್ರ ಬೇಸರದ ಸಂಗತಿ.
  ಆಗ ಶಿವಮೊಗ್ಗ ಜಿಲ್ಲೆಯ ಮೊದಲ ಸಂಸದರಾಗಿ ಪುನರಾಯ್ಕೆ ಆಗಿದ್ದ ಪ್ರದಾನಿ ನೆಹರೂರವರೊಂದಿಗೆ ನಿಕಟ ಸಂಬಂದ ಹೊಂದಿದ್ದ ಸಾಗರ ತಾಲ್ಲೂಕಿನ ಕಾಗೋಡಿನ ಕೆ.ಜೆ. ಒಡೆಯರ್ (1952 ರಿಂದ 1962ರವರೆಗೆ ಎರೆಡು ಅವದಿ ಶಿವಮೊಗ್ಗ ಸಂಸದರು ) ನೇತೃತ್ವದಲ್ಲಿ ಶರಾವತಿ ಮುಳುಗಡೆ ಪ್ರದೇಶದ ರೈತರ ನಿಯೋಗ ಒಂದು ದೆಹಲಿಯ ಪ್ರದಾನಿಯವರನ್ನು ಅವರ ಬೆಳಗಿನ ಸಮಯದಲ್ಲಿ ಬೇಟಿ ಮಾಡಿ ಮನವಿ ನೀಡಿತ್ತು.
   ಈ ಸಂದರ್ಭದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರ ಅಹವಾಲು ಸಂಸದ ಕೆ.ಜಿ. ಒಡೆಯರ್ ರಿಂದ ತಿಳಿದ ಪ್ರದಾನಿ ನೆಹರೂ ತಾವು ಓದುತ್ತಿದ್ದ ವೃತ್ತ ಪತ್ರಿಕೆಯ ತುದಿ ಹರಿದು ತಾವು ಕುಡಿಯುತ್ತಿದ್ದ ಕಾಫಿ ಕಪ್ಪಿಗೆ ಅದ್ದಿದ್ದರಂತೆ.... ಅಂದರೆ ದೇಶ ವಿಶಾಲವಿದೆ ಶರಾವತಿ ನದಿಯಿಂದ ನಿಮ್ಮ ಜಮೀನು ಮುಳುಗಡೆ ಆದರೇನು ನಷ್ಟವಿಲ್ಲ ಎಂಬ ಸಂಕೇತ ಆಗಿತ್ತು ಎಂಬುದು ನೆಹರೂರವರ ಈ ವರ್ತನೆಯನ್ನು ಅರ್ಥೈಸಬಹುದಾದರೂ, ದೇಶದ ಪ್ರಧಾನಿ ಈ ಮುಳುಗಡೆಯಿಂದ ತನ್ನ ಪ್ರಜೆಗಳ ಜೀವನದ ತ್ಯಾಗದ ಬಗ್ಗೆ ಅನುಕಂಪವಿರಲಿ ಅವರಿಗೆ ಪುನರ್ವಸತಿಯ ಭರವಸೆಯೂ ನೀಡಲಿಲ್ಲ ಎಂಬ ವಿಷಾದ ಭಾವನೆ ನಿಯೋಗ ವ್ಯಕ್ತ ಪಡಿಸಿತ್ತಂತೆ.
    ಮುಳುಗಡೆ ಆದ ರೈತರ ಜಮೀನು ಮನೆ ಇದ್ದವರಿಗೆ ಮಾತ್ರ ಪರಿಹಾರ ನೀಡಲಾಯಿತು ಅವರಿಗೆಲ್ಲ ಭದ್ರಾವತಿ, ತರಿಕೆರೆ,ಗಾಜನೂರು ಭಾಗದಲ್ಲಿ ಜಮೀನು ಕೂಡ ಮ೦ಜೂರು ಮಾಡಿದರು ಆದರೆ ಬಹುತೇಕ ಮುಳುಗಡೆ ಕುಟುಂಬ ಪರಿಹಾರದ ಹಣ ಮತ್ತು ತಮ್ಮ ದುಡಿಮೆಯ ಹಣದಲ್ಲಿ ಜಮೀನು ಖರೀದಿಸಿ ಅಲ್ಲಿ ನೆಲೆನಿಂತು ನಂತರ ತಮಗೆ ಪರಿಹಾರವಾಗಿ ನೀಡಿದ ಜಮೀನುಗಳಿಗೆ ಹೋದರೆ ಆ ಭೂಮಿಗಳು ಯಾರದೋ ಪಾಲಾಗಿತ್ತು, ತೋಳು ಬಲ ಮತ್ತು ಪ್ರಭಾವ ಇದ್ದವರಿಗೆ ಮಾತ್ರ ಆ ಜಮೀನು ದೊರೆಯಿತು.
   ಈ ಮಧ್ಯೆ ಸರಕಾರ ಮುಳುಗಡೆ ಸಂತ್ರಸ್ಥರ ಕುಟುಂಬದಲ್ಲಿ ಒಬ್ಬರಿಗೆ ಜೋಗದ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಅಥವ ಕರ್ನಾಟಕ ವಿದ್ಯುತ್ ಬೋರ್ಡ್ ನಲ್ಲಿ ಉದ್ಯೋಗ ನೀಡುವ ಭರವಸೆಯೂ ಹುಸಿಯಾಯಿತು.
   ಇದು ಭೂ ದಾಖಲೆ ಇದ್ದ ರೈತರ ಕುಟುಂಬದ್ದಾದರೆ ಈ ರೈತ ಪರಿವಾರದ ಕೃಷಿಗೆ ಪೂರಕವಾಗಿದ್ದ ಕೃಷಿ ಕಾರ್ಮಿಕರು, ಕೃಷಿ ಉಪಕರಣ ತಯಾರಿಸುವ ಕುಶಲ ಕರ್ಮಿಗಳು ಯಾವುದೇ ದಾಖಲೆ ಹೊಂದಿರದ ಮನೆ- ಜಮೀನು -ಜಾನುವಾರುಗಳನ್ನು ಹೊಂದಿದ್ದರಿಂದ ಅವರು ಮುಳುಗಡೆ ಸಂತ್ರಸ್ಥರೆಂದು ಸರ್ಕಾರ ಪರಿಗಣಿಸಲೇ ಇಲ್ಲ.
  ಇವರ ಸಂಖ್ಯೆ ಭೂಮಾಲಿಕರಿಗಿಂತ ಕೆಲವು ಪಟ್ಟು ಜಾಸ್ತಿ ಇತ್ತು ಈ ಬಡವರ್ಗ ಬದುಕಿಗಾಗಿ ಎಲ್ಲೆಲ್ಲೋ ವಲಸೆ ಹೋಯಿತು.
   ಈ ಪ್ರದೇಶದಲ್ಲಿದ್ದ ಹೆಚ್ಚಿನ ಸಂಖ್ಯೆಯ ದೀವರೇ ಮನೆ- ಜಮೀನು ಮುಳುಗಿದರೂ ಪರಿಹಾರ ಇಲ್ಲದೆ ಪುನರ್ವಸತಿ ಇಲ್ಲದೆ ಅತಂತ್ರರಾದವರು.
    ಇವರು 10 ನೇ ಶತಮಾನದಲ್ಲಿ ಈ ಪ್ರದೇಶ ಆಳಿದ ಅನೇಕ ಪಾಳೆಗಾರರ, ತುಂಡು ರಾಜರ ವಂಶಸ್ಥರಾಗಿದ್ದವರು ಮತ್ತು ಅವರ ಸೈನಿಕರಾಗಿದ್ದವರು.
  ಮುಳುಗಡೆಯ ನೀರು ಏರಲು ಪ್ರಾರಂಭವಾದಾಗ ಸರ್ಕಾರ ಲಾರಿಗಳಲ್ಲಿ ಶಿವಮೊಗ್ಗ ತಾಲ್ಲೂಕಿನ ಚೋರಡಿ ಸಮೀಪದ ಚೋಡನಹಳ್ಳ, ಬ್ಯಾಡನಹಳ್ಳ,ಪುರದಾಳು, ತಮಡಿಹಳ್ಳಿ ಮು೦ತಾದ ಕಡೆ ರಾತ್ರೋ ರಾತ್ರಿ ಶರಾವತಿ ಮುಳುಗಡೆ ಸಂತ್ರಸ್ಥರಾದ ಆದರೆ ಭೂದಾಖಲೆ ಇಲ್ಲದ ಬಡ ಕುಟುಂಬಗಳನ್ನು ಬಲತ್ಕಾರವಾಗಿ ತಂದು ದಟ್ಟ ಅರಣ್ಯದಲ್ಲಿ ಬಿಟ್ಟು ಹೋದರು ಮತ್ತು ಕೆಲವರು ತಮ್ಮ ಸಾಕುಪ್ರಾಣಿ ಜಾನುವಾರು ತಂದರು, ಕೆಲವರು ತರಲಿಲ್ಲ, ಕೆಲ ಕಡೆ ಸರ್ಕಾರ ಬುಲ್ಡೋಜರ್ ನಿಂದ ಸ್ವಲ್ಪ ಜಾಗ ಸಮತಟ್ಟು ಮಾಡಿಕೊಟ್ಟು ಕೈ ತೊಳೆದುಕೊಂಡಿತು.
   ಈ ರೀತಿ ಸಾಗರ - ಹೊಸನಗರದ ಕೆಲ ಪ್ರದೇಶಗಳಲ್ಲಿ ನೆಲೆನಿಂತ ಕೆಲವು ಶರಾವತಿ ಸಂತ್ರಸ್ಥರ ಕುಟುಂಬಕ್ಕೆ ಅವರು ನೆಲೆಸಿದ ಜಮೀನು ಅರಣ್ಯ ಪ್ರದೇಶದ ಹೊರಗಿನ ಭೂಮಿ ಆದ್ದರಿಂದ 1993 ರಲ್ಲಿ ಬಗರ್ ಹುಕುಂ ಹಕ್ಕು ಪತ್ರ ದೊರೆತು ಭೂಮಿ ಹಕ್ಕು ದೊರೆತಿದೆ.
  ಆದರೆ ಅರಣ್ಯ ಭೂಮಿಯಲ್ಲಿ ನೆಲೆಸಿ ಕೃಷಿ ಮಾಡುತ್ತಿರುವ ಶಿವಮೊಗ್ಗ ತಾಲ್ಲೂಕಿನ ಬ್ಯಾಡನಳ್ಳ-ಚೋಡನಳ್ಳ-ಸಿರಿಗೆರೆ - ಪುರದಾಳು ಮುಂತಾದ ಊರುಗಳ ರೈತರಿಗೆ ಭೂಮಂಜೂರು ಮಾಡಲು ಕಾನೂನು ಅಡ್ಡಿ ಆಯಿತು.
  1939 ರ ಹಿರೇ ಭಾಸ್ಕರ ಡ್ಯಾಂ ಮುಳುಗಡೆ ಮತ್ತು 1964ರ ಲಿಂಗನಮಕ್ಕಿ ಮುಳುಗಡೆಯ ಅನೇಕ ಸಂತ್ರಸ್ಥರು ಈಗಾಗಲೇ ಮೂರು ತಲೆಮಾರು ಈ ಪ್ರದೇಶಗಳಲ್ಲಿ ಕಳೆದಿದ್ದಾರೆ ಇತ್ತೀಚೆಗೆ ಇವರಿಗೆ ರಸ್ತೆ - ಶಾಲೆ - ವಿದ್ಯುತ್ -ಬಾವಿ ದೊರೆತಿದೆ ಆದರೆ ಇವರಿಗೆ ಭೂಮಿ ಹಕ್ಕು ಸಿಕ್ಕಿಲ್ಲ ಇದರ ಮಧ್ಯ ವನ್ಯಜೀವಿ ಅಭಯಾರಣ್ಯದ ಪ್ರದೇಶಕ್ಕೆ ಇವರ ಜಮೀನು ಮನೆಗಳು ಸೇರಿದ್ದರಿಂದ ಸರಕಾರ ಇವರನ್ನು ಸ್ಥಳಾಂತರಿಸುವ ಪ್ಯಾಕೇಜ್ ಘೋಷಿಸಿದೆ.
   ಭೂಮಿ ಹಕ್ಕು ಇಲ್ಲವಾದ್ದರಿಂದ ಇವರಿಗಿ ಬ್ಯಾಂಕ್ ಸಾಲ ಸೌಲಭ್ಯವೂ ಇಲ್ಲವಾಗಿದೆ.
   ರಿಪ್ಪನ್ ಪೇಟೆ ಸಮೀಪದ ಅರಸಾಳು ಅರಣ್ಯದ ಪ್ರದೇಶದಲ್ಲಿ 70 ರ ದಶಕದಲ್ಲಿ ಹೊಸನಗರದ ಸ್ವಾಮಿ ರಾವ್ ನೇತೃತ್ವದಲ್ಲಿ ಮುಳುಗಡೆ ರೈತರು ಗಂದದ ಮರ ಕಿತ್ತು ಭೂಮಿಗಾಗಿ ಪ್ರತಿಭಟಿಸಿ ಜೈಲು ಸೇರಿದ್ದರು ಈ ಹೋರಾಟ ಗಂದದ ಕಾನಿನ ಹೋರಾಟ ಅಂತ ಅನೇಕ ವರ್ಷ ಜನರ ನೆನಪಲ್ಲಿತ್ತು.
   ಕೆ .ಜಿ. ಒಡೆಯರ್ ನಂತರ ಅನೇಕರು ಶಿವಮೊಗ್ಗ ಜಿಲ್ಲೆಯ ಸಂಸದರಾದರು ಜೆ.ಹೆಚ್.ಪಟೇಲರು, ಎಸ್.ಟಿ.ಖಾದ್ರಿ, ಕೆ.ಜಿ. ಶಿವಪ್ಪ, ಅಯನೂರು ಮಂಜುನಾಥ್, ಬಂಗಾರಪ್ಪ, ಯಡೂರಪ್ಪ, ರಾಘವೇಂದ್ರ ಸಂಸದರಾದರು.
  ಶಿವಮೊಗ್ಗ ಜಿಲ್ಲೆಯ ಕಡಿದಾಳು ಮಂಜಪ್ಪ, ಜೆ.ಹೆಚ್.ಪಟೇಲರು, ಬಂಗಾರಪ್ಪ, ಯಡೂರಪ್ಪ ಮುಖ್ಯಮಂತ್ರಿಗಳಾಗಿದ್ದರು.
   ಬಹುಸಂಖ್ಯಾತ ಮುಳುಗಡೆ ಸಂತ್ರಸ್ಥರಾದ ದೀವರ ಜನಾಂಗದ ಮೂಕಪ್ಪ , ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಸ್ವಾಮಿ ರಾವ್, ಜೆ.ಡಿ.ನಾರಾಯಣಪ್ಪ, ಬಿ. ದರ್ಮಪ್ಪ, ಗೋಪಾಲಕೃಷ್ಣ ಬೇಳೂರು, ಮದು ಬಂಗಾರಪ್ಪ, ಕುಮಾರ್ ಬಂಗಾರಪ್ಪ, ಹರತಾಳು ಹಾಲಪ್ಪ ಕೂಡ ವಿದಾನ ಸಭಾ ಸದಸ್ಯರು ಮ೦ತ್ರಿಗಳೂ ಆಗಿದ್ದರು.
  ಮುಳುಗಡೆಯ ಸಂಕಷ್ಟದ ಕಾದಂಬರಿಗಳು, ಸಿನಿಮಾ ಕೂಡ ಬಂದಿದೆ.
  ಆದರೂ ಈ ಸಮಸ್ಯೆ ಪರಿಹಾರ ಏಕೆ ಆಗಲಿಲ್ಲ? ಎ೦ಬ ಪ್ರಶ್ನೆ  (27- ನವೆಂಬರ್ -2022) ತೀರ್ಥಹಳ್ಳಿಗೆ ಬೇಟಿ ನೀಡಿ ಹೊಸನಗರದ ಮಾಜಿ ಶಾಸಕ ಸ್ವಾಮಿರಾವ್ ನೇತೃತ್ವದ ಮುಳುಗಡೆ ಸಂತ್ರಸ್ಥರಿಂದ ಅರ್ಜಿ ಸ್ವೀಕರಿಸಿದಾಗ ರಾಜ್ಯದ ಮುಖ್ಯಮಂತ್ರಿ ಬೊಮ್ಮಾಯಿ ಪ್ರಶ್ನಿಸಿದ್ದಾರೆ ಇದು ಸತ್ಯ ಕೂಡ.
   ಹಾಗೆಯೇ ಅವರಾರು ಮಾಡಲಿಲ್ಲ ಈಗ ಆಯ್ಕೆ ಆದ ನಿಮ್ಮ ಸಕಾ೯ರ ಕೂಡಲೇ ಬಗೆಹರಿಸಿ ಎಂದು ಕಾಂಗ್ರೇಸ್ ಪಕ್ಷ ಜನಾಕ್ರೋಶ ಎಂಬ ಪಾದಯಾತ್ರೆ ಅಯನೂರಿನಿಂದ ಶಿವಮೊಗ್ಗದವರೆಗೆ ಹಮ್ಮಿಕೊಂಡಿತ್ತು ಅವತ್ತುವಿರೋದ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಾತಾಡಿದ್ದರು.
  ಮುಳುಗಡೆ ರೈತರ ಸಮಸ್ಯೆ ಬಹುತೇಕ ಈಗಿನ ರಾಜಕಾರಣಿಗಳಿಗೆ ಸರಿಯಾಗಿ ಗೊತ್ತೇ ಇಲ್ಲ, ಚುನಾವಣಾ ಸಂದಭ೯ದಲ್ಲಿ ಮುನ್ನಲೆಗೆ ಬರುವ ಈ ವಿಷಯ ನಂತರ ಪುನಃ ಸುದ್ದಿ ಆಗುವುದು ಮುಂದಿನ ಚುನಾವಣೆಯಲ್ಲೇ.
    ಸಾಗರದ ಇಕ್ಕೇರಿ ರಸ್ತೆಯ ಕಾಗೋಡು ತಿಮ್ಮಪ್ಪನವರ ಸಂಜಯ್ ಪಾಲಿಟೆಕ್ನಿಕ್ ಪಕ್ಕದಲ್ಲಿ ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಸಕಾ೯ರ 1970 ರಲ್ಲಿ ನೂರಾರು ನಿವೇಶನಗಳ ದೊಡ್ಡ ಲೇಔಟ್ ನಿರ್ಮಿಸಿ ಶರಾವತಿ ಮುಳುಗಡೆ ಸಂತ್ರಸ್ಥರಿಗಾಗಿ ಮೀಸಲಿಟ್ಟ ನಿವೇಶನಗಳು ಎಂಬ ಬೋರ್ಡ್ ಹಾಕಿತ್ತು 1985ರ ತನಕ ಈ ಬೋರ್ಡ್ ಇತ್ತು ಆದರೆ ಇತ್ತೀಚೆಗೆ ಇಡೀ ಲೇಔಟ್ ಬೇರಾರೋ ಪ್ರಭಾವಿಗಳಿಗೆ ಪರಭಾರೆ ಆಗಿದೆ, ಇದೇ ರೀತಿ ಶರಾವತಿ ಸಂತ್ರಸ್ಥರಿಗೆ ಮಂಜುರಾದ ಸಾವಿರಾರು ಎಕರೆ ಕೃಷಿ  ಜಮೀನು ಭದ್ರಾವತಿ - ತರಿಕೆರೆ ಭಾಗದಲ್ಲಿ ಕೂಡ ಯಾರದ್ದೊ ಪಾಲಾಗಿದೆ.
    ಆಯನೂರಿನಿಂದ ಶಿವಮೊಗ್ಗದವರೆಗೆ ಜನಾಕ್ರೋಶ ಪಾದಯಾತ್ರೆ ನಡೆಸಿದ ಕಾಂಗ್ರೇಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರದ್ದಲ್ಲದೆ, ಈ ಯಾತ್ರೆಯಲ್ಲಿ ಪಾಲ್ಗೊಂಡು ಶರಾವತಿ ಮುಳುಗಡೆ ಸಂತ್ರಸ್ತರ ಪರವಾಗಿ ಬೆಂಬಲದ ಭರವಸೆಯ ಮಾತಾಡಿದ್ದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಗಿದ್ದಾರೆ.
   ದೀವರ ಜನಾಂಗದವರೇ ಆದ ಮದುಬಂಗಾರಪ್ಪ ಜಿಲ್ಲಾ ಉಸ್ತುವಾರಿ ಮಂತ್ರಿ ಮತ್ತು ಬೇಳೂರು ಗೋಪಾಲಕೃಷ್ಣ ಶಾಸಕರಾಗಿದ್ದಾರೆ.
  ಸಕಾ೯ರ ಬಂದು ಆರು ತಿಂಗಳಾಗುತ್ತಿದೆ ಸದ್ಯದಲ್ಲಿ ಸರ್ಕಾರ ಮಾಡಬೇಕಾದದ್ದು ಶರಾವತಿ ಮುಳುಗಡೆ ಸಂತ್ರಸ್ಥರ ಮನೆ-ಭೂಮಿ ಹಕ್ಕು ಪತ್ರ ತಕ್ಷಣ ಆಯಾ ಕುಟುಂಬದ ಕೈಗೆ ನೀಡುವ ಕೆಲಸ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ