Skip to main content

Blog number 1831. ಅನಿವಾಸಿ ಭಾರತೀಯ ಜನಪ್ರಿಯ ಹವ್ಯಕ ಕನ್ನಡಿಗ ಶಾಂತಾರಾಮ ಹೆಗಡೆ ಕಟ್ಟಿ ದಂಪತಿಗಳು ನನ್ನ ಅತಿಥಿ.

https://youtu.be/dM17nk5Q1Bs?feature=shared

#ಶಾಂತಾರಾಮ_ಹೆಗಡೆಕಟ್ಟೆ_ಗೊತ್ತಿಲ್ಲದವರು_ಅಪರೂಪ.

#ಅನಿವಾಸಿ_ಭಾರತೀಯರಾದ_ಇವರು_ನೇರ_ನಡೆ_ನುಡಿಯವರು

#ನಿಷ್ಟೂರವಾದಿ_ಲೋಕವಿರೋದಿ_ಎಂಬಂತೆ_ಇವರಿಗೆ_ವಿರೋದಿಗಳು_ಹೆಚ್ಚು.

#ಇವರ_ಹವ್ಯಕ_ಸಮಾಜದಲ್ಲಿ_ಇಂಜಿನಿಯರಿಂಗ್_ವೈದ್ಯಕೀಯ_ಶಿಕ್ಷಣ_ಸಂಸ್ಥೆಗಳ_ಕನಸು_ಕಂಡವರು_ಇವರು.

#ಎಲ್ಲಾ_ಅನಿವಾಸಿ_ಭಾರತೀಯ_ಹವ್ಯಕರಂತೆ_ಇವರ_ಜಾತಿಯ_ಮಠಕ್ಕೆ_ಕೈತುಂಬಾ_ದೇಣಿಗೆ_ನೀಡಿದವರು

#ಮೊದ_ಮೊದಲು_ಮಠದ_ಸ್ವಾಮಿಗಳನ್ನು_ಸಮರ್ಥಿಸುತ್ತಾರೆ.

#ನಂತರ_ನ್ಯಾಯಾಲಯಕ್ಕೆ_ಸಲ್ಲಿಸಿದ_ಚಾರ್ಜ್_ಶೀಟ್_FSL_ವರದಿ_ಇವರ_ನಿಲುವು_ಬದಲಿಸುತ್ತದೆ.

#ಈ_ಬಗ್ಗೆ_ಸಾಮಾಜಿಕ_ಜಾಲತಾಣದಲ್ಲಿ_ಬರೆದಾಗ_ಇವರನ್ನು_ಅವ್ಯಾಚ್ಯ_ಶಬ್ದಗಳಿಂದ_ನಿಂದಿಸುತ್ತಾರೆ
#ಅದರಿಂದ_ಇವರು_ಅವರ_ವಿರುದ್ದ_ಸಿಡಿದೇಳುತ್ತಾರೆ.
 
#ಹವ್ಯಕ_ಬ್ರಾಹ್ಮಣರಲ್ಲಿ_ಇವರ_ಹೆಸರು_ಎಲ್ಲರಿಗೂ_ಗೊತ್ತು.

#ಕಳೆದ_ಶುಕ್ರವಾರ_ಶಾಂತರಾಮ_ಹೆಗಡೆಕಟ್ಟೆ_ದಂಪತಿಗಳು_ನನ್ನ_ಅತಿಥಿಗಳು.

#ಇವರಿಗೆ_ನಾನು_ಕೆಲ_ಪ್ರಶ್ನೆ_ಕೇಳಿದ್ದೆ_ಅದಕ್ಕೆ_ಅವರ_ಉತ್ತರದ_ವಿಡಿಯೋದ_ಮೊದಲ_ಭಾಗ_ಇಲ್ಲಿದೆ.

    ಅನಿವಾಸಿ ಭಾರತೀಯರಾದ ಉತ್ತರ ಕನ್ನಡ ಜಿಲ್ಲೆಯ ಕುಮುಟಾ ಸಮೀಪದ ಹೆಗಡೆಯ ಶಾಂತಾರಾಮ ಹೆಗಡೆಕಟ್ಟೆ ನನ್ನ ಪೇಸ್ ಬುಕ್ ಗೆಳೆಯರು.
  ಮೊನ್ನೆ ಶುಕ್ರವಾರ (17- ನವೆಂಬರ್ -2023) ಶಾಂತರಾಮ ಹೆಗಡೆ ಕಟ್ಟೆ ದಂಪತಿಗಳು ಬೆಂಗಳೂರಿಂದ ಹೊನ್ನಾವರದಲ್ಲಿ ಭಾನುವಾರ ನಡೆಯಲಿದ್ದ ಸಂಬಂದಿಗಳ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಪ್ರಯಾಣಿಸುವಾಗ ನಮ್ಮಲ್ಲಿ ಕಾಫಿ ಬ್ರೇಕ್ ತೆಗೆದುಕೊಂಡು ನನ್ನ ಕಛೇರಿಗೆ ಆಗಮಿಸಿದ್ದರು.
   ನನ್ನ ಟೇಬಲ್ ಮೇಲಿದ್ದ ನಮ್ಮ ಊರಿನಲ್ಲಿರುವ ಕೆಳದಿ ರಾಜ ವೆಂಕಟಪ್ಪ ನಾಯಕರು ತಮ್ಮ ರಾಣಿ ಚಂಪಕಾಳ ಸ್ಮರಣಾರ್ಥ ನಾಲ್ಕು ನೂರು ವರ್ಷದ ಹಿಂದೆ ನಿರ್ಮಿಸಿರುವ ಸ್ಮಾರಕ  #ಚಂಪಕ_ಸರಸ್ಸು ಪೋಟೋ ನೋಡಿ ಅವರ ಶ್ರೀಮತಿ ಈ ಸ್ಮಾರಕ ನೋಡುವ ಆಸಕ್ತಿ ವ್ಯಕ್ತ ಪಡಿಸಿದರು ಕಾರಣ ಅವರು ಈ ಸ್ಮಾರಕ ಆದರಿಸಿದ ಕಾದಂಬರಿ ಓದಿದ್ದರಂತೆ!..ನಂತರ ಅವರ ಪತಿ ಶಾಂತರಾಮರು ಆ ಕಾದಂಬರಿಯ ಬರೆದದ್ದು ನಾನೇ ಅಂತ ಅವರಿಗೆ ತಿಳಿಸಿದಾಗ ಅವರಿಗೆ ಆಶ್ಚರ್ಯ.
   ನಾವಿಬ್ಬರೂ ಪರಸ್ಪರ ಬೇಟಿ ಆಗ ಬೇಕೆಂದು ಕೆಲ ವರ್ಷದಿಂದ ಬಯಸಿದ್ದೆವು ಆದರೆ ಅದಕ್ಕೆ ಕಾಲ ಕೂಡಿ ಬಂದಿದ್ದು ಈ ದಿನ .
   ಶಾಂತರಾಮ ಹೆಗಡೆ ಕಟ್ಟೆ ಕೋಶ ಓದಿದ್ದಾರೆ ಹಾಗೆಯೇ ದೇಶ ತಿರುಗಿದ್ದಾರೆ, ಇಬ್ಬರು ಮಕ್ಕಳು ಲಂಡನ್ ವಾಸಿಗಳಾಗಿದ್ದಾರೆ.
    ಶಾಂತ ಸ್ವಭಾವದವರು, ಮಾತಿನಲ್ಲಿ ಹಾಸ್ಯ ಚಟಾಕಿ ಹಾರಿಸುತ್ತಾ ತಮ್ಮ ವಿಚಾರವನ್ನ ತರ್ಕಬದ್ದವಾಗಿ ಮಂಡಿಸುತ್ತಾರೆ.
    ಎಲ್ಲಾ ಅನಿವಾಸಿ ಭಾರತೀಯರಂತೆ ಇವರೂ ತಮ್ಮ ಹವ್ಯಕ ಜಾತಿಯ ಅಭಿವೃದ್ದಿಗಾಗಿ, ಇಲ್ಲಿನ ಆರ್ಥಿಕವಾಗಿ ದುರ್ಬಲವಾಗಿ ಇರುವ ಇವರ ಜಾತಿಯ ಪ್ರತಿಭಾವಂತ ಮಕ್ಕಳಿಗಾಗಿ ಇವರ ಜಾತಿಯ ರಾಮಚಂದ್ರಪುರ ಮಠದಿಂದ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳು ನಿರ್ಮಾಣವಾಗುವ ಕನಸು ಕಂಡವರು.
   ಈ ಮಠದ ಅನೇಕ ಕಾರ್ಯಕ್ರಮಗಳಿಗೆ ಪ್ರಾರಂಭದಲ್ಲಿ ದೇಣಿಗೆ ನೀಡಿದವರು, ನಂತರ ಅಪಾದನೆಗಳು ಈ ಮಠದ ಸ್ವಾಮಿಗಳ ಮೇಲೆ ಬಂದಾಗ ಇದು ಸುಳ್ಳು ಎ೦ದು ಸ್ವಾಮಿಗಳ ಸಮರ್ಥಿಸಿ ಕೊಳ್ಳುತ್ತಾರೆ ನಂತರ ನ್ಯಾಯಾಲಯದಲ್ಲಿ ಸಲ್ಲಿಕೆ ಆದ ಚಾರ್ಜ್ ಶೀಟ್, FSL ವರದಿಗಳನ್ನು ನೋಡಿದ ನಂತರ ಇವರು ಭ್ರಮನಿರಸರಾಗಿ ಬದಲಾಗುತ್ತಾರೆ.
    ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಈ ಅನಾಚಾರಕ್ಕೆ ವಿರೋದ ವ್ಯಕ್ತಪಡಿಸಿ ಬರೆಯುತ್ತಾರೆ, ಸತ್ಯದ ಪರವಾಗಿ ಇವರು ಚರ್ಚೆ ಮಾಡಿದರೆ ಅನೇಕರು ಇವರನ್ನು ಅವ್ಯಾಚ್ಯವಾಗಿ ನಿಂದಿಸುತ್ತಾರೆ ಆಗ ಇವರಿಗೆ ಅನ್ನಿಸುವುದು ತಮ್ಮ ಕುಲಬಾಂಧವರ ಈ ಕೆಲಸ ಸರಿಯಲ್ಲ, ತಪ್ಪು ಮಾಡಿದವರ ಸಮರ್ಥನೆಗಿಂತ  ತಪ್ಪು ಮಾಡುವುದು ತಡೆಯದಿದ್ದರೆ ತಮ್ಮ ಸಮಾಜ ಎಷ್ಟೇ ಬುದ್ದಿವಂತರಾದರೂ ಸಮಾಜದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ತೀರ್ಮಾನಿಸುತ್ತಾರೆ.
   ಈ ಹೋರಾಟದಲ್ಲಿರುವ ಸಮಾನ ಮನಸ್ಕರ ಜೊತೆ ಕೈ ಜೋಡಿಸುತ್ತಾರೆ, ಇವರ ಪ್ರಖರ ವಾಗ್ಜರಿಯಿಂದ ಶತ್ರುಗಳ ಪಾಳೆಯದಲ್ಲಿ ಅಷ್ಟೇ ವಿರೋದ ಕಟ್ಟಿಕೊಳ್ಳುತ್ತಾರೆ, ನ್ಯಾಯದ ಪರವಾಗಿ ಇರುವವರು ಧೈರ್ಯವಾಗಿ ಎದುರು ಬರಲು ಸಾಧ್ಯವಿಲ್ಲ ಆದ್ದರಿಂದ ಅವರೆಲ್ಲ ಶಾಂತರಾಮ ಹೆಗಡೆ ಕಟ್ಟೆಯವರ ಅಭಿಮಾನಿಗಳಾಗಿದ್ದಾರೆ ಹೀಗಾಗಿ ಶಾಂತರಾಮ ಹೆಗಡೆ ಕಟ್ಟೆ ಅವರು ಹವ್ಯಕ ಬ್ರಾಹ್ಮಣರಲ್ಲಿ ಗೊತ್ತಿಲ್ಲ ಎನ್ನುವವರು ಯಾರೂ ಇಲ್ಲ.
   ತಾವೆಲ್ಲ ವಿದ್ಯಾವಂತರಾಗಿ, ವಿದೇಶಗಳಲ್ಲಿ ದುಡಿದು ತಮ್ಮ ಸ್ವಂತ ಜಾತಿಯಲ್ಲಿ ನಡೆಯುವ ಅನಾಚಾರ ವಿರೋದಿಸದಿದ್ದರೆ ತಾವೂ ಈ ಅಪರಾದಗಳನ್ನು ಬೆಂಬಲಿಸಿದಂತೆ ಆಗುತ್ತದೆ ಆದ್ದರಿಂದ ನಾನು ವಿರೋದಿಸುತ್ತೇನೆ, ಈ ಹೋರಾಟ ನನಗೆ ನೆಮ್ಮದಿ ತಂದಿದೆ ಎನ್ನುತ್ತಾರೆ.
   ಇವರು ಮತ್ತು ಜಿಗಳೆಮನೆ ಗಣಪತಿ ಭಟ್ಟರು ಅಡ್ಮಿನ್ ಆಗಿರುವ ಸತ್ಯ ಶೋದ ಮಂಡಳಿ ಗ್ರೂಪಿನಲ್ಲೂ ನಾನು ಸೇರಿದ್ದರಿಂದ ಅಲ್ಲಿಯೂ ಇವರೆಲ್ಲರ ಚರ್ಚೆಯನ್ನು ನೋಡುತ್ತಿರುತ್ತೇನೆ.
   ಶಾಂತಾರಾಮ ಹೆಗಡೆ ಕಟ್ಟೆ ಮತ್ತು ಚಿಂತಕ ಅರವಿಂದ ಚೊಕ್ಕಾಡಿ ಅವರ ಚರ್ಚೆ - ಜಗಳಗಳು, ಕೆಲವೊಮ್ಮೆಮೋದಿ ಮತ್ತು ಬಿಜೆಪಿ ಪರವಾಗಿ ಇವರ ಪೋಸ್ಟ್ ಗಳು, ರಾಹುಲ್ ಗಾಂಧಿ ಹಾಗೂ ರಾಮಚಂದ್ರಪುರ ಮಠದ ಸ್ವಾಮಿಗಳ ವಿರುದ್ದವಾಗಿರುವ ಪೋಸ್ಟ್ ಗಳು ಕುತೂಹಲಕಾರಿಯಾಗಿರುತ್ತದೆ ಈ ಬಗ್ಗೆ ನಾನು ಕೇಳಿದ ಪ್ರಶ್ನೆಗಳಿಗೆ ಶಾಂತಾರಾಮರು ನೀಡಿದ ಉತ್ತರಗಳು ಮೂರು ಭಾಗಗಳಾಗಿ ವಿಡಿಯೋ ಮಾಡಿದ್ದು ಅದರ ಮೊದಲ ಭಾಗ ಇಲ್ಲಿದೆ.
  ನನ್ನ ಸಣ್ಣ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ ಪುಸ್ತಕ ದಂಪತಿಗಳಿಗೆ ನೀಡಿ ಅವರನ್ನು ಬಿಳ್ಕೊಟ್ಟೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ