Skip to main content

Blog number 1822. ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನ ಆಗಿದ್ದ ರವಿ ಬೆಳೆಗೆರೆ ನಮ್ಮನ್ನಗಲಿ ಮೂರು ವರ್ಷ ಆಯಿತು ಅವರಂತಹ ಇನ್ನೊಬ್ಬ ಪತ್ರಕರ್ತ ಹುಟ್ಟಿ ಬರಲಿಲ್ಲ ಮತ್ತು ಹಾಯ್ ಬೆಂಗಳೂರ್ ಅಂತ ಪತ್ರಿಕೆಯೂ ಇನ್ನೊಂದು ಬರಲಿಲ್ಲ.

#ಮತ್ತೆ_ಮತ್ತೆ_ನೆನಪಾಗುವ_ರವಿಬೆಳೆಗೆರೆ.

#ಕನ್ನಡ_ಪತ್ರಿಕೋದ್ಯಮದಲ್ಲಿ_ಸಂಚಲನ_ಮೂಡಿಸಿದ್ದ.

#ನ್ಯಾಯದ_ಪರವಾಗಿದ್ದ_ಭ್ರಷ್ಟಾಚಾರಿಗಳಿಗೆ_ಸಿಂಹಸ್ವಪ್ನವಾಗಿದ್ದ.

#ರವಿಬೆಳೆಗೆರೆ_ಮತ್ತು_ಹಾಯ್_ಬೆಂಗಳೂರು_ವಾರಪತ್ರಿಕೆ

#ಇವತ್ತು_ಅವರ_ಮೂರನೆ_ಸಂಸ್ಮರಣ_ದಿನ

#ಜನವರಿ_21_2020ರಲ್ಲಿ_ಆನಂದಪುರಂನ_ನಮ್ಮ_ಸಂಸ್ಥೆಯಲ್ಲಿ_ಕೊನೆಯ_ಬೇಟಿ.

#ಹಾಯ್_ಬೆಂಗಳೂರಿನಂತ_ಪತ್ರಿಕೆ

#ರವಿಬೆಳೆಗೆರೆಯಂತ_ಬರಹಗಾರ_ಮತ್ತೊಮ್ಮೆ_ಹುಟ್ಟಿ_ಬರಲು_ಸಾಧ್ಯವಾ?

  ಹಾಯ್ ಬೆಂಗಳೂರ್ ಗೆ ಕಾಯುವವರೆಷ್ಟು ಮಂದಿ, ಓದಿ ಮುಷ್ಟಿ ಕಟ್ಟಿ "ವಾವ್ ರವಿಬೆಳೆಗೆರೆ " ಅನ್ನುವವರು, ಅಂಕಣ ಓದಿ ಕಣ್ಣೀರಾಗುವವರು, ಈ ಪತ್ರಿಕೆ ಅಂದರೆ ಬೆಚ್ಚಿ ಬೀಳುವವರು... ಹಾಯ್ ಬೆಂಗಳೂರ್ ಸೃಷ್ಟಿಸಿದ ಸಂಚಲನ ಇದರ ಸಂಪಾದಕರಾದ ರವಿಬೆಳೆಗೆರೆ ಎರಡು ದಶಕ ಕರ್ನಾಟಕ ರಾಜ್ಯದಲ್ಲಿ ಗಳಿಸಿದ ಕೀರ್ತಿ ಪತಾಕೆಗಳು ಈ ಹಿಂದೆ ಮತ್ತು ಮುಂದೆ ಬೇರಾವ ಪತ್ರಿಕೆ ಅಥವ ಬರಹಗಾರನೂ ಸೃಷ್ಟಿಯಾಗಿ ಬರಲು ಸಾಧ್ಯವೇ ಇಲ್ಲ ಅನ್ನಿಸುತ್ತದೆ.
   ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ನನ್ನನ್ನು ಮುಖಪುಟದಲ್ಲಿ ಪ್ರಕಟಿಸಿ ನನ್ನ ಹೋರಾಟಕ್ಕೆ ಬೆಂಬಲಿಸಿದ್ದರು, ಪಕ್ಷೇತರನಾಗಿ 1999 ರಲ್ಲಿ ಸಾಗರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ದಿಸಿದ್ದೆ ಕಾಂಗ್ರೇಸ್ ಕಾಗೋಡು ತಿಮ್ಮಪ್ಪ ಮತ್ತು ಬಿಜೆಪಿ ಎಲ್.ಟಿ.ತಿಮ್ಮಪ್ಪ ಹೆಗ್ಗಡೆ ವಿರುದ್ದ ಆಗ ಅವರು ಹಾಯ್ ಬೆಂಗಳೂರ್ ಮುಖ ಪುಟದಲ್ಲಿ ನೀಡಿದ ಹೆಡ್ಡಿಂಗ್ #ಎರೆಡು_ತಿಮ್ಸ್_ಮಧ್ಯ_ಒಬ್ಬ_ಆರುಣಪ್ರಸಾದ್.
 ನನ್ನ ಮತ್ತು ಅವರ ಕೊನೆಯ ಬೇಟಿ ಅವರು ಮತ್ತು ಹಾಯ್ ಬೆಂಗಳೂರು ವರದಿಗಾರ ಶೃಂಗೇಶ್ ಸಾಗರದ ನ್ಯಾಯಾಲಯದಲ್ಲಿನ ಕೇಸಿಗೆ ಬಂದಾಗ ನಮ್ಮ ಲಾಡ್ಜ್ ನಲ್ಲಿ ಇಡ್ಲಿ- ವಡೆ - ಕಾಫಿ ಕುಡಿದು, ನನ್ನ ಗೆಳೆಯರು ಸಿಬ್ಬಂದಿಗಳ ಜೊತೆ ಮಾತಾಡಿ, ತಮಾಷೆ ಮಾಡಿ, ಪೋಟೋ ತೆಗೆಸಿ ಕೊಂಡಿದ್ದು 21- ಜನವರಿ - 2020 ರಂದು. ಇದೇ ವಷ೯ 13 - ನವೆಂಬರ್ -2020ರ ಬೆಳಗಿನ ಜಾವ ಅವರಿಲ್ಲ ಎಂಬ ಸುದ್ದಿ.
   ಪತ್ರಿಕೋದ್ಯಮದಲ್ಲಿ ಸಂಚಲನ ಮೂಡಿಸಿದ್ದ, ನ್ಯಾಯದ ಪರವಾಗಿದ್ದ, ಭ್ರಷ್ಟಾಚಾರಿಗಳಿಗೆ ಸಿಂಹ ಸ್ವಪ್ನ ಆಗಿದ್ದ ರವಿ ಬೆಳೆಗೆರೆ ಮರೆಯಲು ಸಾಧ್ಯವೇ ಇಲ್ಲ, ಇವತ್ತು ಅವರ ಮೂರನೆ ಸಂಸ್ಮರಣಾ ದಿನ.
    ಅವತ್ತು13 - ನವೆಂಬರ್ 2020ರ ಮಧ್ಯರಾತ್ರಿ.... ಪ್ರಜಾವಾಣಿ ವಿಭಾಗೀಯ ಪ್ರಸರಾಣಾಧಿಕಾರಿ ಸಂಗಣ್ಣ ಪ್ರಕಾಶ್ ವಾಟ್ಸ್ ಪ್ ನಲ್ಲಿ ರವಿ ಬೆಳೆಗೆರೆ ಅಸ್ತಂಗತ ಅಂತ ಸುದ್ದಿ ಕಳಿಸಿದ್ದು ನೋಡಿ ನನ್ನ ಮನಸ್ಸು ಸೂತಕದ ಮನೆ ಅಂತಾಯಿತು.
 ಮೊದಲು ಪ್ರಕಟವಾದ ಹಾಯ್ ಬೆಂಗಳೂರ್ ನ ಮೊದಲ ಪ್ರತಿಯಿಂದ ಶುರುವಾಗಿ ಸಾವಿರದ ಇನ್ನೂರು ದಾಟಿದ ಪ್ರತಿ ಪತ್ರಿಕೆ, ಅವರು ಬರೆದ ಅನುವಾದಿಸಿದ ಎಲ್ಲಾ ಪುಸ್ತಕ ಓದಿದ್ದೇನೆ.
  ನನ್ನ ಜೀವನದ ಎಲ್ಲಾ ಏಳು ಬೀಳಿನಲ್ಲಿ ರವಿ ಬೆಳೆಗೆರೆಯ ಬರಹಗಳು, ಅವರ ಜೀವನದ ಅನುಭವ ನನಗೆ ವಿಪರೀತ ಪ್ರಭಾವ ಉಂಟು ಮಾಡಿತ್ತು.
  ಇವರ ನನ್ನ ಮೊದಲ ಬೇಟಿ ಹೇಗಾಯಿತೆ೦ದರೆ ಶಿವಮೊಗ್ಗ ಜಿಲ್ಲಾ ಪಂಚಾಯತ್ ಕೋಟ್ಯಾಂತರ ರೂಪಾಯಿ ಹಣ ಕಳಪೆ ಔಷದಿ ಖರೀದಿಸಿ ಲಕ್ಷಾಂತರ ರೂಪಾಯಿ ಹೊಡೆದು ತಿಂದ ಕಥೆ ಅವತ್ತಿನ ಜಿಲ್ಲಾ ಸಜ೯ನ್ ರಹಸ್ಯವಾಗಿ ತಿಳಿಸಿದ್ದನ್ನ, ಜಿಲ್ಲಾ ಪಂಚಾಯತ್ ಸಭೆಯಲ್ಲಿ ಮಂಡಿಸಿ ತನಿಖೆಗೆ ಒತ್ತಾಯಿಸಿದ್ದರಿಂದ ಅವತ್ತು ರಾತ್ರಿಯೇ ಈ ಔಷದಿ ಗೋದಾಮ ವಿದ್ಯುತ್ ಅವಘಡದಿಂದ ಸುಟ್ಟು ಹೋಯಿತೆಂದು ಮಾಡಿ ಇದನ್ನು ಪ್ರತಿಭಟಿಸಿದ ನನ್ನ ಮೇಲೆ ಸುಳ್ಳು ಕೇಸ್ ಮಾಡಿ ಜೈಲಿಗೆ ಕಳಿಸಿದ ಪ್ರಕರಣದಲ್ಲಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು,ಅಧಿಕಾರ ಹೊಂದಿದ್ದ ಎಲ್ಲಾ ರಾಜಕಾರಣಿಗಳು ಪಾಲುದಾರರಾಗಿದ್ದಾಗ ನಾನು ಒಬ್ಬಂಟಿ ಆಗಿದ್ದೆ.
    ಆ ಸಂದಭ೯ದಲ್ಲಿ ಹಾಯ್ ಬೆಂಗಳೂರು ನನ್ನ ಪರವಾಗಿ ಪ್ರಕಟಿಸಿದ ವರದಿ ನನಗೆ ನನ್ನ ಹೋರಾಟದ ನೈತಿಕತೆಗೆ ಹೆಚ್ಚಿನ ಬಲ ಮತ್ತು ಆತ್ಮವಿಶ್ವಾಸ ಉಂಟು ಮಾಡಿತ್ತು.
  ಇದಕ್ಕಾಗಿ ಧನ್ಯವಾದ ಹೇಳಲು ರವಿ ಬೆಳೆಗೆರೆಗೆ ಪೋನ್ ಮಾಡಿದಾಗ "ಸ್ವತಃ ನೀವು ಬೆಂಗಳೂರಿನ ನನ್ನ ಆಪೀಸಿಗೆ ಬಂದು ಧನ್ಯವಾದ ಹೇಳಿ "  ಅಂದಿದ್ದರು.
    ಹಾಗಾಗಿ ಬೆಂಗಳೂರಿನ ಅವರ ಕಛೇರಿಗೆ ಹೋಗಿ ಬೇಟಿ ಮಾಡಿದ್ದೆ " ಏನ್ರಿ ಒಂದು ಒಳ್ಳೇ ಪೋಟೋ ಕೊಡೋಕೆ ಆಗಿಲ್ಲೇನ್ರಿ? ಕ್ರಿಮಿನಲ್ ಗಳೇ ಸೂಟು ಬೂಟು ಕೂಲಿಂಗ್ ಗ್ಲಾಸ್ ಹಾಕಿ ಪತ್ರಿಕೆಗೆ ಪೋಟೊ ಕೊಡುತ್ತಾರೆ" ...ಅಂತ ತಮಾಷೆ ಮಾಡಿದ್ದರು ಇದಕ್ಕೆ ಕಾರಣ ನನ್ನ ಬಗ್ಗೆ ವರದಿ ಮಾಡಿದ ಶೃಂಗೇಶರಿಗೆ ಅವತ್ತು ನನ್ನ ಪರಿಚಯ ಇರಲಿಲ್ಲ ಮತ್ತು ಸರಿಯಾದ ಪೋಟೊ ಅವರಿಗೆ ಸಿಕ್ಕಿರಲಿಲ್ಲ.
   ನಂತರ ನನ್ನ ಬಗ್ಗೆ ಅನೇಕ ಲೇಖನಗಳು ಹಾಯ್ ಬೆಂಗಳೂರಿನಲ್ಲಿ ಬಂದಿದೆ, ಬಹಿರಂಗ ಸಭೆಯಲ್ಲಿ ರವಿ ಬೆಳೆಗೆರೆ ನನ್ನ ಬಗ್ಗೆ ಮಾತಾಡಿದ್ದು ಎಲ್ಲಾ ಈಗ ನೆನಪು.
 ನಮ್ಮ ಮಲ್ಲಿಕಾ ವೆಜ್ ನ ಇಡ್ಲಿ ವಡಾ ಸಾಂಬಾರು ಮತ್ತು ಕೊಥಾಸ್ ಪಿಲ್ಟರ್ ಕಾಫಿ ಅವರಿಗೆ ತುಂಬಾ ಇಷ್ಟ,ಹಾಗೆಯೇ ನಮ್ಮ ಚಂಪಕಾ ಪ್ಯಾರಾಡೈಸ್ ನ ಮಡಿಕೆ ದಮ್ ಬಿರಿಯಾನಿಗೆ ಅವರು ಪಿದಾ ಆಗಿದ್ದರು ಅವರು ಅದನ್ನು ಪೇಸ್ ಬುಕ್ ನಲ್ಲೂ ಬರೆದಿದ್ದರು.
   ಅವರ ನನ್ನ ಕೊನೆಯ ಭೇಟಿ ಲಾಕ್ ಡೌನ್ ಗೆ ಕೆಲ ದಿನ ಮೊದಲು 21- ಜನವರಿ -2020ರಂದು ಈ ಮಾಗ೯ದಲ್ಲಿ ಬಂದಾಗ ಶೃಂಗೇಶ್ ಬೆಳಗಿನ ಉಪಹಾರಕ್ಕೆ ನಮ್ಮಲ್ಲಿ ಕರೆತಂದಿದ್ದರು ಇಂತಹ ಇಡ್ಲಿ ಸಾಂಬಾರು ಚಟ್ನಿ ಸ್ಟಾರ್ ಹೋಟಲ್ ಲ್ಲಿ ಸಿಗೋದಿಲ್ಲ ಅಂದಿದ್ದರು.
 ನನ್ನ ಗೆಳೆಯರು ಮತ್ತು ನನ್ನ ಸಿಬ್ಬಂದಿಗಳ ಜೊತೆ ಪೋಟೊ ತೆಗೆಸಿಕೊಂಡರು ಅವರನ್ನ ನನ್ನ ಗೆಳೆಯರು ಅವರ ಕ್ರೈಂಡೈರಿ ಬಗ್ಗೆ ನೆನಪಿಸಿದಾಗ ಅವರು ಆ ಬಗ್ಗೆ ಮಾತಾಡಿದ ವಿಡಿಯೋ ಮಾಡಿದ್ದೆ.
  ಅವತ್ತು ಅವರಿಗಾಗಿ 2 ಬಿರಿಯಾನಿ ಅವರ ಡ್ರೈವರ್ ಗೆ ಒ0ದು ಮೊಟ್ಟೆ ಬಿರಿಯಾನಿ ಕೇಳಿದ್ದರು ಅದನ್ನು ಸಾಗರಕ್ಕೆ ಅವರ ಕೋಟ್೯ ಕಲಾಪ ಮುಗಿಸುವ ಮೊದಲೇ ಅವರಿಗೆ ತಲುಪಿಸಿದ್ದೆ ಅಲ್ಲಿಂದ ಅವರು ಜೋಯಿಡಾ ಹೋದರು.    
     ಮುಂದಿನ ಸಾರಿ ಪುನಃ ಬರುವುದಾಗಿ ಹೋದವರು ರಾತ್ರಿ ಇಹಲೋಕ ತ್ಯಜಿಸಿ ಬಾರದ ಲೋಕಕ್ಕೆ ಹೋಗಿದ್ದು ವಿಷಾದನೀಯ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ